Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಡ್ಲೆ ಹಾಕಿ ಮಾಡುವ ಕಣಲೆ ಸಾರಿನ ರೆಸಿಪಿ
ಕಳಲೆ ಅಥವಾ ಕಣಲೆ ಎಂದು ಕರೆಯಲ್ಪಡುವ ಬಿದಿರಿನ ಮೊಳಕೆ ಅಥವಾ ಎಳೆ ಬಿದಿರು ಆನೆಗೂ ಪ್ರಿಯವಾದ ಆಹಾರ, ಮನುಷ್ಯನಿಗೂ ಪ್ರಿಯವಾದ ಆಹಾರ. ಈ ಕಳಲ ಅಥವಾ ಕಣಲೆ ಮಳೆಗಾಲದಲ್ಲಿ ಹೆಚ್ಚಾಗಿ ಸಿಗುತ್ತದ. ಇದನ್ನು ತಿನ್ನಲು ತುಂಬಾನೇ ರುಚಿ, ಕೆಲವರು ಇದರಿಂದ ಉಪ್ಪಿನಕಾಯಿ ಕೂಡ ಮಾಡಿಡುತ್ತಾರೆ. ಬೆಂಗಳೂರಿನವರಿಗೆ ಈ ಕಣಲೆ ಸಿಗುವುದು ಅಪರೂಪ, ಕೆಲವೊಂದು ಶಾಪ್ಗಳಲ್ಲಿ ಸಿಕ್ಕರೆ ಸಿಗಬಹುದು, ಆದರೆ ಮಲೆನಾಡಿನ ಕಡೆ, ಕೊಡಗಿನ ಕಡೆ ಮಳೆಗಾಲದ ಪ್ರಮುಖ ಆಹಾರ.

ಮಳೆಗಾಲದಲ್ಲಿ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಹಾಗಾಗಿ ಮಳೆಗಾಲದಲ್ಲಿ ಇದನ್ನು ಮಾಡಿ ಸವಿಯಲಾಗುವುದು. ನಾವಿಲ್ಲಿ ಕಣಲೆ ಹಾಗೂ ಕಡ್ಲೆ ಹಾಕಿ ಮಾಡಿದ ಸಾರಿನ ರೆಸಿಪಿ ನೀಡಿದ್ದೇವೆ.
ಕಣಲೆ ತಂದ ತಕ್ಷಣ ಕತ್ತರಿಸಿ ತಿನ್ನುವಂತಿಲ್ಲ: ಕಣಲೆ ತಂದು ಅದನ್ನು ಚಿಕ್ಕದಾಗಿ ಕತ್ತರಿಸಿ 3-4 ದಿನ ನೀರಿನಲ್ಲಿ ಹಾಕಿಡುತ್ತಾರೆ, ಪ್ರತಿದಿನ ಇದರ ನೀರು ಬದಲಾಯಿಸಬೇಕು, ಅಲ್ಲದೆ ಣಲೆ ನೆನೆ ಹಾಕಿದ್ದ ನೀರನ್ನು ತುಂಬಾನೇ ದೂರ ಬಿಸಾಡಬೇಕು, ಹಸು, ನಾಯಿ ಆ ನೀರು ಕುಡಿದರೆ ಸತ್ತೇ ಹೋಗುತ್ತದೆ ಹಾಗಾಗಿ ಜಾಗ್ರತೆವಹಿಸಿ. 3-4 ದಿನ ನೀರಿನಲ್ಲಿ ಹಾಕಿ ಬೇಯಿಸಿ ತಿಂದರೆ ಹೆದರ ಬೇಕಾಗಿಲ್ಲ, ಆರೋಗ್ಯಕ್ಕೆ ಯಾವ ತೊಂದರೆಯೂ ಆಗಲ್ಲ.
ಬೇಕಾಗುವ ಸಾಮಗ್ರಿ
ಕಣಲೆ
ಒಂದು ಮುಷ್ಠಿಯಷ್ಟು
ಕಡಲೆ 1 ಕಪ್( 8 ಗಂಟೆ ನೀರಿನಲ್ಲಿ ನೆನೆ ಹಾಕಿದ್ದು)
1 ಕಪ್ ತೆಂಗಿನ ತುರಿ
2 ಹಸಿ ಮೆಣಸು
1 ಈರುಳ್ಳಿ
2 ಟೊಮೆಟೊ
ಖಾರಡಿ 1/2 ಚ ಚಮಚ
ಕೊತ್ತಂಬರಿ ಪುಡಿ 1 ಚಮಚ
1/2 ಚಮಚ ಗರಂ ಮಸಾಲ
1/2 ಚಮಚ ಅರಶಿಣ ಪುಡಿ
ಉಪ್ಪು 1 ಚಮಚ
ಮಾಡುವ ವಿಧಾನ
- ಕಣಲೆ ಅಥವಾ ಕಳಲೆ, ಕಡಲೆ, ಹಸಿ ಮೆಣಸು,ಟೊಮೆಟೊ, ಈರುಳ್ಳಿ, ಹಸಿ ಮೆಣಸು, ಟೊಮೆಟೊ ಹಾಕಿ 2 ಕಪ್ ನೀರು ಹಾಕಿ, ಉಪ್ಪು ಸೇರಿಸಿ 3 ವಿಶಲ್ ಬರುವವರೆಗೆ ಬೇಯಿಸಿ.
- ಇದೇ ಸಮಯದಲ್ಲಿ ತೆಂಗಿನಕಾಯಿ ತುರಿದು ಬಾಣಲೆಗೆ ಹಾಕಿ 1 ಚಮಚ ಎಣ್ಣೆ ಹಾಕಿ ಸಾಧಾರಣ ಉರಿಯಲ್ಲಿ ಹುರಿಯಿರಿ, ತೆಂಗಿನ ತುರಿ ಕೆಂಪು ಬಣ್ಣಕ್ಕೆ ಬರುವವಷ್ಟು ಹೊತ್ತು ಹುರಿಯಿರಿ, ನಮತರ ಖಾರದ ಪುಡಿ, ಗಂ ಸಾಲಪುಡಿ (ಇದರ ಬದಲಿಗೆ ಚಕ್ಕೆ, ಲವಂಗ ಹಾಕಬಹುದು), ಕೊತ್ತಂಬರಿ ಪುಡಿ ಸೇರಿಸಿ ಹುರಿಯಿರಿ.
- ತೆಂಗಿನ ತುರಿ ಕಂದು ಬಣ್ಣಕ್ಕೆ ಬಂದಾಗ ಉರಿಯಿಂದ ತೆಗೆಯಿರಿ, ನಂತರ ಗ್ರೈಂಡ್ ಮಾಡಿ
ಈಗ ಸಾರು ಪಾತ್ರೆ ಬಿಸಿ ಮಾಡಿ ಎಣ್ಣೆ ಹಾಕಿ, ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಕರಿಬೇವಿನ ಎಲೆ ಹಾಕಿ ನಂತರ ಬೇಯಿಸಿದ ಸಾಮಗ್ರಿ ಹಾಕಿ, ಮಸಾಲೆ ಸೇರಿಸಿ ಕುದಿಸಿ, ಉಪ್ಪು ಸರಿಯಾಗಿದೆಯೇ ನೋಡಿ ಉರಿಯಿಂದ ಇಳಿಸಿ, ಇಷ್ಟು ಮಾಡಿದರೆ ಸವಿರುಚಿಯ ಕಳೆಲೆ ಸಾರು ರೆಡಿ, ಇದನ್ನು ರೊಟ್ಟಿ, ಚಪಾತಿ, ಬಿಸಿ ಅನ್ನದ ಜೊತೆ ಸವಿಯಲು ತುಂಬಾನೇ ಚೆನ್ನಾಗಿರುತ್ತದೆ.



Click it and Unblock the Notifications