Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉಪ್ಪಿಟ್ಟು ಅಂದ್ರೆ ಮೂಗು ಮುರಿಯಬೇಡಿ..! ಈ ರುಚಿಯ ಉಪ್ಪಿಟ್ಟು ಟ್ರೈ ಮಾಡಿ.!
ನೀವು ಬೆಳಗ್ಗೆಯ ತಿಂಡಿಗೆ ವಿಶೇಷವಾಗಿ ಏನಾದರು ಮಾಡುವ ಆಲೋಚನೆ ಇಟ್ಟುಕೊಂಡಿದ್ದೀರಾ? ನಿತ್ಯ ಮಾಡಿದ್ದೆ ತಿಂಡಿ ಮಾಡಿ ಅದೇ ರುಚಿ ನಿಮಗೂ ಬೇಸರ ತರಿಸಿರುತ್ತದೆ. ವಿಶೇಷವಾಗಿ ಮಾಡಲು ಸಮಯ ಹೆಚ್ಚು ಹಿಡಿಯುತ್ತೆ ಅನ್ನೋದು ನಿಮ್ಮ ಅನಿಸಿಕೆ ಆಗಿರಬಹುದು. ಇನ್ನು ಬೆಳಗ್ಗೆಯ ತಿಂಡಿಗೆ ಉಪ್ಪಿಟ್ಟು ಅಂದರೆ ಹಲವರು ಮೂಗು ಮುರಿಯುತ್ತಾರೆ. ಉಪ್ಪಿಟ್ಟು ಬೆಳಗ್ಗೆ ತಿಂದರೆ ಸಂಜೆಯ ವರೆಗೂ ದಿನ ಹಾಳಾಗುತ್ತದೆ ಎಂಬುದು ಹಲವರ ವಾದ.
ಉಪ್ಪಿಟ್ಟು ಅತಿ ಬೇಗನೇ, ರುಚಿಯಾಗಿ ಮತ್ತು ಪುಷ್ಟಿಕರವಾಗಿ ಮಾಡಬಹುದಾದ ತಿಂಡಿಯಾಗಿರುವುದು. ವಾರಕ್ಕೆ ಹಲವು ಬಾರಿ ತಿಂದೂ ತಿಂದೂ ಬೇಸರವಾಗಿರುವ ಒಂದೇ ಕಾರಣ ಬಿಟ್ಟರೆ ಉಪ್ಪಿಟ್ಟನ್ನು ನಿರಾಕರಿಸಲು ಬೇರಾವುದೇ ಕಾರಣವಿಲ್ಲ. ಆದರೆ ಇದಕ್ಕೊಂದು ಸುಲಭ ಪರಿಹಾರವಿದೆ. ಅದೆಂದರೆ ಉಪ್ಪಿಟ್ಟಿನಲ್ಲಿ ಕೊಂಚ ಬದಲಾವಣೆ ಮಾಡಿ ಬೇರೆ ಬೇರೆ ರುಚಿಗಳನ್ನು ಸೇರಿಸುವುದು.

ತರಕಾರಿ ಮಿಶ್ರಿತ ರವಾ ಉಪ್ಪಿಟ್ಟು ದಕ್ಷಿಣ ಭಾರತೀಯರ ಸಾಂಪ್ರದಾಯಿಕ ಉಪಹಾರಗಳಲ್ಲಿ ಒಂದು. ಇದನ್ನು ಉಪ್ಮಾ, ಖಾರಾ ಬಾತ್ ಎಂದು ಕರೆಯುತ್ತಾರೆ. ಇದನ್ನು ಸವಿಯುವಾಗ ಕೇಸರಿ ಬಾತ್ ಅನ್ನು ಜೊತೆಗೆ ಸೇಸೇರಿಸುವುದು ಒಂದು ಸುಂದರವಾದ ಸಂಯೋಜನೆ ಎನ್ನಬಹುದು. ಇದರ ತಯಾರಿಯಲ್ಲಿ ಬಳಸುವ ಕ್ಯಾರೆಟ್, ಕ್ಯಾಪ್ಸಿಕಮ್, ಬಟಾಣಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಇದರ ರುಚಿಯನ್ನು ಹೆಚ್ಚಿಸುತ್ತವೆ.
ಆದ್ರೆ ನಾವಿಂದು ಅವರೇಕಾಳು ಹಾಕಿ ಮಾಡುವ ಮಸಾಲೆ ಉಪ್ಪಿಟ್ಟಿನ ಬಗ್ಗೆ ತಿಳಿದುಕೊಳ್ಳೋಣ. ಅವರೇ ಕಾಳು ಉಪ್ಪಿಟ್ಟು ಬೇರೆಲ್ಲಾ ಉಪ್ಪಿಟ್ಟಿಗಿಂತ ಹುಡಿಹುಡಿಯಾಗಿ ರುಚಿ ರುಚಿಯಾಗಿ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಹಾಗಾದ್ರೆ ಈ ಅವರೇ ಕಾಳು ಉಪ್ಪಿಟ್ಟು ಮಾಡುವುದು ಹೇಗೆ? ಇದನ್ನು ಮಾಡಲು ಬೇಕಾಗುವ ಪದಾರ್ಥಗಳೇನು? ಅವರೆಕಾಳು ಉಪ್ಪಿಟ್ಟಿನ ಪಾಕವಿಧಾನವೇನು ಎಂಬುದನ್ನು ನಾವಿಂದು ನೋಡೋಣ.
ಅವರೆಕಾಳು ಉಪ್ಪಿಟ್ಟ ಮಾಡಲು ಬೇಕಾಗುವ ಪದಾರ್ಥಗಳು
- ರವಾ -1 ಗ್ಲಾಸ್
- ಲಿಮಾ ಬೀನ್ಸ್ - 1 ಕಪ್
- ಈರುಳ್ಳಿ - 2
- ಟೊಮೇಟೊ - 1
- ಕ್ಯಾರೆಟ್ - 1
- ಶುಂಠಿ -1/2 ಇಂಚು
- ಬೆಳ್ಳುಳ್ಳಿ - 2
- ಹಸಿರು ಮೆಣಸಿನಕಾಯಿ - 4
- ಪುದೀನ ಎಲೆಗಳು - 2 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 2 tbs
- ತೆಂಗಿನಕಾಯಿ
- ಜೀರಿಗೆ - 1/4 ಟೀಸ್ಪೂನ್
- ಸಾಸಿವೆ - 1/4 ಟೀಸ್ಪೂನ್
- ಗರಂ ಮಸಾಲಾ ಪುಡಿ - 1/4 ಟೀಸ್ಪೂನ್
- ಪಲಾವ್ ಎಲೆಗಳು - 2
- ಏಲಕ್ಕಿ-2
- ಲವಂಗ-4
- ದಾಲ್ಚಿನ್ನಿ - 2 ಪೀಸ್
- ಕರಿಬೇವಿನ ಎಲೆಗಳು
- ಸೋಂಕಾಳು
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಅವರೆಕಾಳು ಉಪ್ಪಿಟ್ಟ ಮಾಡುವ ವಿಧಾನ
ಒಂದು ಲೋಟದಲ್ಲಿ ಉಪ್ಪಿಟ್ಟು ರವೆ ತೆಗೆದುಕೊಂಡು ಅದನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. 5 ನಿಮಿಷ ಹುರಿದರೆ ಸಾಕು. ಇನ್ನೊಂದು ಕಡೆ ಶುಂಠಿ, ಏಲಕ್ಕಿ, ಮೆಣಸಿನ ಕಾಯಿ, ಬೆಳ್ಳುಳ್ಳಿ, ಪುದೀನ, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿಯನ್ನು ಮಿಕ್ಸಿ ಜಾರ್ಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ.
ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾವಿವೆ, ಜೀರಿಗೆ, ಪಲಾವ್, ಎಲೆ, ಚಕ್ರಮೊಗ್ಗು ಹಾಗೂ ಎಲ್ಲ ಮಸಾಲೆ ವಸ್ತು ಹಾಕಿ ಫ್ರೈ ಮಾಡಿ. ಬಳಿಕ ಇದಕ್ಕೆ ಈರುಳ್ಳಿ, ಕ್ಯಾರೆಟ್ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ. ಬಳಿಕ ಹಸಿ ಅವರೆಕಾಳು, ಉಪ್ಪು ಹಾಕಿ ಪ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿದ ಬಳಿಕ ರುಬ್ಬಿಕೊಂಡ ಮಸಾಲೆ ಹಾಕಿ 3 ನಿಮಿಷ ಫ್ರೈ ಮಾಡಿ.
ಇದಾದ ಮೇಲೆ ಟೊಮೆಟೋ, ಗರಂ ಮಸಾಲಾ ಹಾಕಿ ಫ್ರೈ ಮಾಡಿಕೊಳ್ಳಿ. ಈಗ ರವೆ ತೆಗೆದುಕೊಂಡ ಕಪ್ನಲ್ಲಿಯೇ 2ರಷ್ಟು ನೀರು ಹಾಕಿಕೊಳ್ಳಿ. ಈ ನೀರು ಚೆನ್ನಾಗಿ ಕುದಿಯಲು ಬಿಡಿ. ಬಳಿಕ ಇದಕ್ಕೆ ಹುರಿದಿಟ್ಟುಕೊಂಡ ರವೆಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. 2 ನಿಮಿಷ ಮಿಕ್ಸ್ ಮಾಡಿ ಬಳಿಕ ಮುಚ್ಚಳ ಮುಚ್ಚಿ ಬಿಡಿ. ಮಧ್ಯದಲ್ಲಿ ಆಗಾಗ ಮಿಕ್ಸ್ ಮಾಡುತ್ತಾ ಇರಿ. ಇಷ್ಟಾದರೆ ನಿಮ್ಮ ಮುಂದೆ ಮಸಾಲ ಉಪ್ಪಿಟ್ಟು ಸವಿಯಲು ರೆಡಿಯಾಗುತ್ತದೆ.



Click it and Unblock the Notifications