Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಲ್ಲಿ ನೀರು ತರಿಸುವ ಆಲೂ ಮಂಚೂರಿ ಮಾಡಿ.! ಮಳೆಗಾಲಕ್ಕೆ ಇದು ಸೂಪರ್ ಟೇಸ್ಟ್!
ಮಳೆಗಾಲದ ಈ ದಿನಗಳಲ್ಲಿ ರುಚಿ ರುಚಿಯಾಗಿ ಬಾಯಿಯಲ್ಲಿ ನೀರು ತರಿಸುಂತಹ ಖಾದ್ಯಗಳ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹೀಗಾಗಿಯೇ ಸಂಜೆ ಸಮಯದಲ್ಲಿ ಫಾಸ್ಟ್ ಫುಡ್ ಅಂಗಡಿಗಳು ಜನರಿಂದ ತುಂಬಿರುತ್ತವೆ. ಅದರಲ್ಲೂ ಮಳೆಯ ಸಮಯದಲ್ಲಿ ಪಾನಿಪೂರಿ, ಬಿಸಿ ಬಿಸಿ ಬೋಂಡಾ ಬಜ್ಜಿ, ಗೋಬಿ ಮಂಚೂರಿ, ಮಸಾಲ ಪೂರಿ, ಪಾವ್ ಬಾಜಿ ಹೀಗೆ ಹತ್ತಾರು ಬಗೆಯ ರುಚಿ ರುಚಿಯ ಖಾದ್ಯಗಳ ಸವಿಯಲು ಮುಂದಾಗುವುದು ನೋಡಬಹುದು. ಹಾಗೆ ನಾವು ಕೂಡ ಮನೆಯಲ್ಲಿ ಹಲವು ರೀತಿಯ ಖಾದ್ಯಗಳ ಮಾಡಿ ಸವಿದಿರುತ್ತೇವೆ.
ಇನ್ನು ವಿಶೇಷ ಖಾದ್ಯಗಳ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುವ ಕೆಲಸ, ಅದ್ರಲ್ಲೂ ನಾವಿಂದು ಆಲೂಗಡ್ಡೆಯಿಂದ ಮಾಡಲಾಗುವ ಮಂಚೂರಿಯನ್ ಕುರಿತಾಗಿ ತಿಳಿದುಕೊಳ್ಳೋಣ. ಆಲೂ ಮಂಚೂರಿಯನ್ ಒಮ್ಮೆ ಸವಿದರೆ ಮತ್ತೆ ಮತ್ತೆ ಮಾಡಿ ಸವಿಯಲು ಮುಂದಾಗುತ್ತೀರಿ. ಸಾಮಾನ್ಯ ಗೋಬಿಗಿಂತಲೂ ರುಚಿಕರವಾದ ಈ ಸ್ನ್ಯಾಕ್ಸ್ ಮಾಡೋದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.

ಆಲೂಗಡ್ಡೆಯಿಂದ ಮಾಡುವ ಈ ಮಂಚೂರಿಯನ್ ಬಾಯಲ್ಲಿ ನೀರು ತರಿಸಲಿದೆ. ಹಾಗೆ ಮಕ್ಕಳಿಗೆ ಇದು ಬಹಳ ಇಷ್ಟವಾಗುತ್ತೆ. ಹಾಗಾದ್ರೆ ಈ ಮಂಚೂರಿಯನ್ ಮಾಡುವುದು ಹೇಗೆ?, ಆಲೂ ಮಂಚೂರಿಯನ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಲೂಗಡ್ಡೆ ಮಂಚೂರಿಯನ್ ಮಾಡಲು ಬೇಕಾಗುವ ವಸ್ತುಗಳು
- ಆಲೂಗಡ್ಡೆ
- ಈರುಳ್ಳಿ
- ಶುಂಠಿ
- ಹಸಿ ಮೆಣಸು
- ಬೆಳ್ಳುಳ್ಳಿ
- ಸೋಯಾ ಸಾಸ್
- ಚಿಲ್ಲಿ ಸಾಸ್
- ವಿನಿಗರ್
- ಖಾರದ ಪುಡಿ
- ಮೈದಾ ಹಿಟ್ಟು
- ಅಕ್ಕಿ ಹಿಟ್ಟು
- ಉಪ್ಪು
- ಕ್ಯಾಪ್ಸಿಕಂ
- ಕಾರ್ನ್ ಫ್ಲೋರ್
ಆಲೂಗಡ್ಡೆ ಮಂಚೂರಿಯನ್ ಮಾಡುವುದು ಹೇಗೆ?
ಮೊದಲು ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದು ನೀರಿನಲ್ಲಿ ತೊಳೆದು ಕೊಬ್ಬರಿ ತುರಿಯಂತೆ ತುರಿದು ಇಟ್ಟುಕೊಳ್ಳಿ. ನಂತರ ಈ ತುರಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ತೊಳೆದುಕೊಳ್ಳಬೇಕು. 3 ಬಾರಿ ಆದರು ಇದನ್ನು ತೊಳೆದು ಇಟ್ಟುಕೊಳ್ಳಿ. ನಂತರ ನೀರಿನಿಂದ ಹಿಂಡಿಕೊಂಡು ಆಲೂ ತುರಿಯನ್ನು ಮತ್ತೊಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ನಂತರ ಇದಕ್ಕೆ ಖಾರದ ಪುಡಿ ಹಾಕಿ, 3 ಚಮಚ ಅಕ್ಕಿ ಹಿಟ್ಟು ಹಾಗೂ ಮೈದಾ ಹಿಟ್ಟು ಸಹ ಹಾಕಿಕೊಳ್ಳಿ.
ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದು ಕೈಯಲ್ಲಿ ಅಂಟಾಗಿ ಹಾಗೆ ಉಂಡೆ ಕಟ್ಟಲು ಬರುವಂತೆ ಮಾಡಬೇಕು. ಉಂಡೆ ಕಟ್ಟಲು ಬಾರದೆ ಇದ್ದರೆ ಮತ್ತೆ ಅಕ್ಕಿ ಹಿಟ್ಟು ಮೈದಾ ಹಿಟ್ಟು ಹಾಕಿಕೊಂಡು ಮತ್ತೆ ಚೆನ್ನಾಗಿ ಹಿಟ್ಟು ಹದ ಮಾಡಿಕೊಳ್ಳಿ. ಈಗ ಹಿಟ್ಟನ್ನು ಉಂಡೆ ಕಟ್ಟಿಕೊಳ್ಳಿ.
ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಉಂಡೆ ಕಟ್ಟಿಕೊಂಡ ಈ ಆಲೂಗಡ್ಡೆ ಹಿಟ್ಟನ್ನು ಹಾಕಿಕೊಂಡು ಕರಿದುಕೊಳ್ಳಬೇಕು. ಈ ಉಂಡೆಗಳು ಚೆನ್ನಾಗಿ ಫ್ರೈ ಆಗಬೇಕು. ಹೀಗೆ ಫ್ರೈ ಮಾಡಿಕೊಂಡ ಬಳಿಕ ತೆಗೆದು ಎಣ್ಣೆ ಇಳಿಯಲು ಜರಡಿಯಲ್ಲಿ ಹಾಕಿ ಇಟ್ಟುಕೊಳ್ಳಿ, ಇದು ಗರಿ ಗರಿಯಾಗಿ ಬರಬೇಕು.
ಈಗ ಮತ್ತೊಂದು ಬಾಣಲೆಗೆ ಎಣ್ಣೆ ಹಾಕಿ ಬಳಿಕ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಕ್ಯಾಪ್ಸಿಕಂ ಫ್ರೈ ಮಾಡಿಕೊಂಡು ರೆಡ್ ಚಿಲ್ಲಿ, ಸೋಯಾ ಸಾಸ್, ಟೊಮೆಟೋ ಸಾಸ್, ವಿನೆಗರ್ ಹಾಕಿಕೊಂಡು ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
ನಂತರ ಸ್ವಲ್ಪ ನೀರು ಸಹ ಹಾಕಿ ಕುದಿಬರಲು ಬಿಡಿ. ಈಗ ಒಂದು ಬೌಲ್ಗೆ ಕಾರ್ನ್ ಫ್ಲೋರ್ ನೀರು ಹಾಕಿ ಗಂಟು ಇಲ್ಲದಂತೆ ಮಿಕ್ಸ್ ಮಾಡಿ ಬಾಣಲೆಗೆ ಹಾಕಿ. ಈಗ ಫ್ರೈ ಮಾಡಿಕೊಂಡಿರುವ ಆಲೂಗಡ್ಡೆಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಕರಿಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಆಲೂ ಮಂಚೂರಿಯನ್ ರೆಡಿಯಾಗುತ್ತದೆ.



Click it and Unblock the Notifications