Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡೀ ದೇಹವನ್ನು ಕೂಲ್ ಮಾಡಿ, ಪಾದದ ಉರಿ ಕಡಿಮೆ ಮಾಡುವ ಜ್ಯೂಸ್ ಇದು! ಮನೆಯಲ್ಲೇ ಮಾಡಿ!
ಬೇಸಿಗೆಯ ಈ ಸಮಯದಲ್ಲಿ ನಿಮ್ಮ ದೇಹವು ಸಮತೋಲನ ಕಾಪಾಡಿಕೊಳ್ಳುವುದು ಬಹಳ ಉತ್ತಮ. ಅದ್ರಲ್ಲೂ ನಿಮ್ಮ ದೇಹದ ಉಷ್ಣಾಂಶವನ್ನು ಒಂದೇ ರೀತಿ ಕಾಪಾಡಿಕೊಳ್ಳಬೇಕಾಗುತ್ತದೆ. ಈ ಬೇಸಿಗೆಯ ಸಮಯದಲ್ಲಿ ಹಲವರಿಗೆ ಬಿಸಿಲಿನ ಕಾರಣಕ್ಕೆ ಒಂದಿಷ್ಟು ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಅದ್ರಲ್ಲೂ ನಿಮಗೆ ಪಾದ, ಹಸ್ತವು ಉರಿಯಾಗುವುದು ಸಹ ದೊಡ್ಡ ಸಮಸ್ಯೆ ಆಗಿರಬಹುದು.
ರಾತ್ರಿ ಮಲಗಿದ ಸಮಯದಲ್ಲಿ ಪಾದ ಉರಿಬರುವ ಕಾರಣ ಹಲವರಿಗೆ ನಿದ್ರೆ ಮಾಡುವುದು ಕಷ್ಟವಾಗುತ್ತೆ. ಹಾಗೆ ದಿನದ ಕೆಲಸಗಳ ಮಾಡುವಾಗಲು ಪಾದ ಉರಿ ಹಾಗೆ ಹಸ್ತ ಉರಿ ಬರುವ ಕಾರಣದಿಂದ ಕಿರಿಕಿರಿ ಅನುಭವಿಸಬೇಕಾಗುತ್ತೆ. ಅದ್ರಲ್ಲೂ ಬಿಸಿಲಿನಲ್ಲಿ ಇಲ್ಲವೆ ಹೊರಗೆ ಓಡಾಟದ ಮೂಲಕ ಅವರಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಇಂತಹ ಸಮಯದಲ್ಲಿ ಅವರು ಕೈಗಳಿಗೆ ಅಥವಾ ಪಾದಗಳಿವೆ ನೀರು ಹಾಕಿಕೊಳ್ಳುವುದು, ಐಸ್ ವಾಟರ್ನಿಂದ ತೊಳೆಯುವುದು, ಕೆಲವು ಕ್ರೀಮ್ ಹಚ್ಚಿಕೊಳ್ಳುವುದು ನೋಡಬಹುದು. ಇದೆಲ್ಲವೂ ತಾತ್ಕಾಲಿಕ ಪರಿಹಾರವಾಗಿರಬಹುದು. ಆದ್ರೆ ನಾವಿಂದು ಪಾದ ಉರಿ ಸೇರಿ ದೇಹದ ಉಷ್ಣಾಂಶವು ತಂಪಾಗಿಡಲು ಯಾವ ರೀತಿಯ ಜ್ಯೂಸ್ ಅನ್ನು ಮಾಡಿ ಕುಡಿಯಬೇಕು? ಇದಕ್ಕೆ ಸುಲಭದ ಪರಿಹಾರವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ದೇಹದ ಉಷ್ಣಾಂಶ ಸಮತೋಲನದಲ್ಲಿರುವ ಹಾಗೆ ನಿಮ್ಮ ತಂಪಾಗಿಡುವ ಈ ಜ್ಯೂಸ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಮಾಹಿತಿ ನಾವಿಲ್ಲಿ ನೋಡೋಣ.
ದೇಹ ತಂಪಾಗಿಡುವ ಈ ಜ್ಯೂಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಸೋಂಪುಕಾಳು
- ಕಲ್ಲು ಸಕ್ಕರೆ
- ಬಾದಾಮಿ ಕಾಳು
ದೇಹ ತಂಪಾಗಿಡುವ ಈ ಜ್ಯೂಸ್ ಮಾಡುವ ವಿಧಾನವೇನು?
ಮೊದಲು ಮುಕ್ಕಾಲು ಕಪ್ ಸೋಂಪು ಕಾಳನ್ನು ಒಂದು ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಗರಿ ಗರಿ ಆಗುವ ಅವಶ್ಯಕತೆ ಇಲ್ಲ. ಸ್ವಲ್ಪ ಬಿಸಿಯಾದರೂ ಸಾಕು. ನಂತರ ಇದನ್ನು ಒಂದು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ಈಗ ಅದೇ ಪಾತ್ರೆಗೆ ಬಾದಾಮಿ ಕಾಳುಗಳನ್ನು ಸಹ ಹಾಕಿಕೊಂಡು ಹುರಿದುಕೊಳ್ಳಬೇಕು. ನಂತರ ತೆಗೆದಿಟ್ಟುಕೊಳ್ಳಿ.
ಈಗ ಕಲ್ಲು ಸಕ್ಕರೆಯನ್ನ ಕುಟ್ಟಿ ಸ್ವಲ್ಪ ಪುಡಿ ಮಾಡಿಟ್ಟುಕೊಳ್ಳಿ. ಇನ್ನೊಂದು ಕಡೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿದುಕೊಂಡಿದ್ದ ಎರಡು ಪದಾರ್ಥಗಳನ್ನು ಹಾಕಿ, ಹಾಗೆ ಇದಕ್ಕೆ ಕಲ್ಲು ಸಕ್ಕರೆ ಸಹ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಪುಡಿಯನ್ನು ತಣ್ಣಗಾಗಲು ಒಂದು ಪ್ಲೇಟ್ಗೆ ಹಾಕಿಟ್ಟುಕೊಳ್ಳಿ.
ಈಗ ಈ ಪುಡಿಗೆ ಚಿಟಿಕೆ ಅರಶಿಣ ಹಾಕಿ ಮಿಶ್ರಣ ಮಾಡಿ. ನಂತರ ಒಂದು ಲೋಟದಲ್ಲಿ ನೀರು ತೆಗೆದುಕೊಂಡು ಅದಕ್ಕೆ ತಯಾರಿಸಿಕೊಂಡ ಈ ಪುಡಿಯನ್ನು ಹಾಕಿ ಮಿಕ್ಸ್ ಮಾಡಬೇಕು. ನಂತರ ಇದನ್ನು ಕುಡಿಯಬೇಕು. ಬಿಸಿ ನೀರಿಗೆ ಹಾಕಿ ಕುಡಿಯಬೇಡಿ ಹಾಗೆ ಬಹಳ ತಂಪಿರುವ ನೀರಿನಲ್ಲೂ ಕುಡಿಯಬೇಡಿ. ಸಾಮಾನ್ಯ ನೀರಿನಲ್ಲಿ ಇದನ್ನು ಕುಡಿದುನೋಡಿ. ಇದಕ್ಕೆ ಒಂದು ನಿಂಬೆ ಹಣ್ಣಿನ ರಸ ಸಹ ಸೇರಿಸಬಹುದು, ಇದು ಸಪ್ಪೆ ಎನಿಸಿದರೆ ಬೆಲ್ಲ ಕೂಡ ಸೇರಿಸಿ ಸವಿಯಬಹುದು.
ನೀವು ಕೂಡ ಮನೆಯಲ್ಲಿ ಈ ರೀತಿ ಜ್ಯೂಸ್ ಒಮ್ಮೆ ಮಾಡಿ ಸವಿದು ನೋಡಿ. ದೇಹದ ತಂಪಾಗುವುದಲ್ಲದೆ, ಪಾದ, ಹಸ್ತದ ಉರಿ ಕಡಿಮೆಯಾಗುತ್ತದೆ. ಇದನ್ನು ಯಾವ ಸಮಯದಲ್ಲಿ ಬೇಕಾದರು ಕುಡಿಬಹುದು. ಸಂಜೆಯ ಸಮಯ ಅಥವಾ ಬೆಳಗ್ಗೆ ಉತ್ತಮವಾಗಿರಲಿದೆ. ಒಮ್ಮೆ ಇದರ ಪುಡಿ ಮಾಡಿಕೊಂಡಿದ್ದರೆ ನಿಮಗೆ ಯಾವಾಗ ಬೇಕೋ ಆವಾಗ ಸುಲಭವಾಗಿ ಜ್ಯೂಸ್ ತಯಾರಿಸಿ ಕುಡಿಯಬಹುದು.



Click it and Unblock the Notifications