Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಮಳವಳ್ಳಿ ಅವರೆಕಾಳು, ಭಿಲಾಯ್ ಉಪ್ಪಿಟ್ಟು

ಬೇಕಾಗುವ ಪದಾರ್ಥಗಳೆಂದರೆ ಒಂದು ಲೋಟ ಯಾವುದಾದರು ಅಕ್ಕಿ. ಒಂದು ಲೋಟ ಅವರೆಕಾಳು. ಯಥಾಪ್ರಕಾರ ಒಗ್ಗರಣೆ ಸಾಮಾನುಗಳು. ಕೊತ್ತಂಬರಿ ಮತ್ತು ಹಸಿ ತೆಂಗಿನಕಾಯಿ ತುರಿ. ಚೂರು ಇಂಗು. ಈ ಉಪ್ಪಿಟ್ಟನ್ನು ಪ್ರೆಷರ್ ಕುಕ್ಕರಿನಲ್ಲೇ ಮಾಡಬೇಕು.
ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿಯಬೇಕು. ಅಕ್ಕಿಯ ಬಿಳುಪು ಮಾಯವಾಗಿ ಕಂದು ಬಣ್ಣಕ್ಕೆ ಹೊರಳುವವರೆಗೆ ಹುರಿಯಬೇಕು. ಹುರಿದ ನಂತರ ಅದನ್ನು ಆರಲು ಬಿಟ್ಟು ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ರುಬ್ಬಬೇಕು. ಅಕ್ಕಿ ಸಣ್ಣಸಣ್ಣ ಚೂರುಗಳಾಗುವಷ್ಟು, ಅಂದರೆ ದಪ್ಪ ರವೆ ಗಾತ್ರಕ್ಕೆ ರುಬ್ಬಿದರೆ ಸಾಕು. ಇನ್ನೊಂದು ಕಡೆ ಅವರೆಕಾಳನ್ನು ಬರೀ ನೀರಿನಲ್ಲಿ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಂಡಿರಬೇಕು. ಅವರೆ ಬೇಗ ಬೇಯುವುದಿಲ್ಲವಾದ್ದರಿಂದ ಐದಾರು ವಿಷಲ್ ಬರುವವರೆಗೂ ಸ್ಟೌವ್ ಮೇಲೆ ಕುಕ್ಕರ್ ಇಟ್ಟಿರಬೇಕು.
ಇನ್ನೊಂದು ಕುಕ್ಕರಿನಲ್ಲಿ ಸ್ವಲ್ಪ ಎಣ್ಣೆ ಸ್ವಲ್ಪ ತುಪ್ಪ ಹಾಕಿರಿ. ಅದು ಬಿಸಿಯಾದ ನಂತರ ಅದಕ್ಕೆ ಜೀರಿಗೆ, ಕರಿಬೇವು, ಸಾಸಿವೆ, ಹಸಿಮೆಣಸಿನಕಾಯಿ, ಇಂಗು ಬೆರೆಸಿ ಒಗ್ಗರಣೆ ತಯಾರಿಸಿಕೊಳ್ಳಿರಿ. ಇದಕ್ಕೆ ಬೇಯಿಸಿದ ಅವರೆಕಾಳು ಮತ್ತು ಅದರಲ್ಲಿರುವ ಬಿಸಿ ನೀರನ್ನು ಸುರಿಯಿರಿ. ಅವರೆಕಾಳು ಉಪ್ಪಿಟ್ಟಿಗೆ ನೀರಿನ ಪ್ರಮಾಣ ಒಂದಕ್ಕೆ ಮೂರರಷ್ಟು ಇರಬೇಕು. ಅಂದರೆ, ಒಂದು ಲೋಟ ಅಕ್ಕಿ ರವೆಗೆ ಮೂರು ಲೋಟ ನೀರು.
ಕುದಿಯುತ್ತಿರುವ ಅವರೆಕಾಳು ಒಗ್ಗರಣೆ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿದ ನಂತರ ಮಾಡಿಟ್ಟುಕೊಂಡ ರವೆ ಹಾಕಿ ಚೆನ್ನಾಗಿ ಕದಡಿರಿ. ಉಪ್ಪಿಟ್ಟು ಗಂಟಾಗದಂತೆ ಎಚ್ಚರವಹಿಸಿ. ರವೆ ಕೂಡಿಕೊಂಡು ಉಪ್ಪಿಟ್ಟಿನ ಹದಕ್ಕೆ ಬರುವವರೆಗೆ ನಿರಂತರವಾಗಿ ಸೌಟಿನಿಂದ ಕಲಕುತ್ತಿರಬೇಕು. ಆನಂತರ ಕುಕ್ಕರಿನ ಮುಚ್ಚಳ ಮುಚ್ಚಿ ಮತ್ತೆ ಸ್ವಲ್ಪ ಹೊತ್ತು ಬೇಯಲು ಬಿಡಿ. ಮುಖ್ಯವಾದ ವಿಚಾರವೆಂದರೆ ಕುಕ್ಕರಿನ ವೈಟ್ ಇಡಬಾರದು.
ಐದಾರು ನಿಮಿಷ ಹಬೆಯಲ್ಲಿ ಬೆಂದ ನಂತರ ಅಕ್ಕಿರವೆ ಉಪ್ಪಿಟ್ಟು ಮೃದುವಾಗುತ್ತದೆ. ಈಗ ಕುಕ್ಕರನ್ನು ಕೆಳಗಿಳಿಸಿ ಮುಚ್ಚಳ ತೆಗೆದು ಅದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಕಲಸಿರಿ. ಇದು ತುಂಬಾ ರುಚಿಕಟ್ಟಾಗಿರುತ್ತದೆ. ಇತರ ಉಪ್ಪಿಟ್ಟುಗಳಂತೆ ಇದೂ ಇರುತ್ತದೆ ಎಂದು ನಿಮಗೆ ಅನಿಸಿದರೂ ಸಹ ಇದರ ವಿಶೇಷ ಏನಪ್ಪಾ ಅಂದರೆ ಅಕ್ಕಿ ರವೆ ಮತ್ತು ಅವರೆಕಾಳು ಚೆನ್ನಾಗಿ ಬೆಂದು ಪರಸ್ಪರ ಉಪ್ಪಿಟ್ಟಿನಲ್ಲಿ ಬೆರೆತುಕೊಂಡಿರಬೇಕು.



Click it and Unblock the Notifications