Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ಮಳವಳ್ಳಿ ಅವರೆಕಾಳು, ಭಿಲಾಯ್ ಉಪ್ಪಿಟ್ಟು

ಬೇಕಾಗುವ ಪದಾರ್ಥಗಳೆಂದರೆ ಒಂದು ಲೋಟ ಯಾವುದಾದರು ಅಕ್ಕಿ. ಒಂದು ಲೋಟ ಅವರೆಕಾಳು. ಯಥಾಪ್ರಕಾರ ಒಗ್ಗರಣೆ ಸಾಮಾನುಗಳು. ಕೊತ್ತಂಬರಿ ಮತ್ತು ಹಸಿ ತೆಂಗಿನಕಾಯಿ ತುರಿ. ಚೂರು ಇಂಗು. ಈ ಉಪ್ಪಿಟ್ಟನ್ನು ಪ್ರೆಷರ್ ಕುಕ್ಕರಿನಲ್ಲೇ ಮಾಡಬೇಕು.
ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿಯಬೇಕು. ಅಕ್ಕಿಯ ಬಿಳುಪು ಮಾಯವಾಗಿ ಕಂದು ಬಣ್ಣಕ್ಕೆ ಹೊರಳುವವರೆಗೆ ಹುರಿಯಬೇಕು. ಹುರಿದ ನಂತರ ಅದನ್ನು ಆರಲು ಬಿಟ್ಟು ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ರುಬ್ಬಬೇಕು. ಅಕ್ಕಿ ಸಣ್ಣಸಣ್ಣ ಚೂರುಗಳಾಗುವಷ್ಟು, ಅಂದರೆ ದಪ್ಪ ರವೆ ಗಾತ್ರಕ್ಕೆ ರುಬ್ಬಿದರೆ ಸಾಕು. ಇನ್ನೊಂದು ಕಡೆ ಅವರೆಕಾಳನ್ನು ಬರೀ ನೀರಿನಲ್ಲಿ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಂಡಿರಬೇಕು. ಅವರೆ ಬೇಗ ಬೇಯುವುದಿಲ್ಲವಾದ್ದರಿಂದ ಐದಾರು ವಿಷಲ್ ಬರುವವರೆಗೂ ಸ್ಟೌವ್ ಮೇಲೆ ಕುಕ್ಕರ್ ಇಟ್ಟಿರಬೇಕು.
ಇನ್ನೊಂದು ಕುಕ್ಕರಿನಲ್ಲಿ ಸ್ವಲ್ಪ ಎಣ್ಣೆ ಸ್ವಲ್ಪ ತುಪ್ಪ ಹಾಕಿರಿ. ಅದು ಬಿಸಿಯಾದ ನಂತರ ಅದಕ್ಕೆ ಜೀರಿಗೆ, ಕರಿಬೇವು, ಸಾಸಿವೆ, ಹಸಿಮೆಣಸಿನಕಾಯಿ, ಇಂಗು ಬೆರೆಸಿ ಒಗ್ಗರಣೆ ತಯಾರಿಸಿಕೊಳ್ಳಿರಿ. ಇದಕ್ಕೆ ಬೇಯಿಸಿದ ಅವರೆಕಾಳು ಮತ್ತು ಅದರಲ್ಲಿರುವ ಬಿಸಿ ನೀರನ್ನು ಸುರಿಯಿರಿ. ಅವರೆಕಾಳು ಉಪ್ಪಿಟ್ಟಿಗೆ ನೀರಿನ ಪ್ರಮಾಣ ಒಂದಕ್ಕೆ ಮೂರರಷ್ಟು ಇರಬೇಕು. ಅಂದರೆ, ಒಂದು ಲೋಟ ಅಕ್ಕಿ ರವೆಗೆ ಮೂರು ಲೋಟ ನೀರು.
ಕುದಿಯುತ್ತಿರುವ ಅವರೆಕಾಳು ಒಗ್ಗರಣೆ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿದ ನಂತರ ಮಾಡಿಟ್ಟುಕೊಂಡ ರವೆ ಹಾಕಿ ಚೆನ್ನಾಗಿ ಕದಡಿರಿ. ಉಪ್ಪಿಟ್ಟು ಗಂಟಾಗದಂತೆ ಎಚ್ಚರವಹಿಸಿ. ರವೆ ಕೂಡಿಕೊಂಡು ಉಪ್ಪಿಟ್ಟಿನ ಹದಕ್ಕೆ ಬರುವವರೆಗೆ ನಿರಂತರವಾಗಿ ಸೌಟಿನಿಂದ ಕಲಕುತ್ತಿರಬೇಕು. ಆನಂತರ ಕುಕ್ಕರಿನ ಮುಚ್ಚಳ ಮುಚ್ಚಿ ಮತ್ತೆ ಸ್ವಲ್ಪ ಹೊತ್ತು ಬೇಯಲು ಬಿಡಿ. ಮುಖ್ಯವಾದ ವಿಚಾರವೆಂದರೆ ಕುಕ್ಕರಿನ ವೈಟ್ ಇಡಬಾರದು.
ಐದಾರು ನಿಮಿಷ ಹಬೆಯಲ್ಲಿ ಬೆಂದ ನಂತರ ಅಕ್ಕಿರವೆ ಉಪ್ಪಿಟ್ಟು ಮೃದುವಾಗುತ್ತದೆ. ಈಗ ಕುಕ್ಕರನ್ನು ಕೆಳಗಿಳಿಸಿ ಮುಚ್ಚಳ ತೆಗೆದು ಅದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಕಲಸಿರಿ. ಇದು ತುಂಬಾ ರುಚಿಕಟ್ಟಾಗಿರುತ್ತದೆ. ಇತರ ಉಪ್ಪಿಟ್ಟುಗಳಂತೆ ಇದೂ ಇರುತ್ತದೆ ಎಂದು ನಿಮಗೆ ಅನಿಸಿದರೂ ಸಹ ಇದರ ವಿಶೇಷ ಏನಪ್ಪಾ ಅಂದರೆ ಅಕ್ಕಿ ರವೆ ಮತ್ತು ಅವರೆಕಾಳು ಚೆನ್ನಾಗಿ ಬೆಂದು ಪರಸ್ಪರ ಉಪ್ಪಿಟ್ಟಿನಲ್ಲಿ ಬೆರೆತುಕೊಂಡಿರಬೇಕು.



Click it and Unblock the Notifications