Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಮಳವಳ್ಳಿ ಅವರೆಕಾಳು, ಭಿಲಾಯ್ ಉಪ್ಪಿಟ್ಟು

ಬೇಕಾಗುವ ಪದಾರ್ಥಗಳೆಂದರೆ ಒಂದು ಲೋಟ ಯಾವುದಾದರು ಅಕ್ಕಿ. ಒಂದು ಲೋಟ ಅವರೆಕಾಳು. ಯಥಾಪ್ರಕಾರ ಒಗ್ಗರಣೆ ಸಾಮಾನುಗಳು. ಕೊತ್ತಂಬರಿ ಮತ್ತು ಹಸಿ ತೆಂಗಿನಕಾಯಿ ತುರಿ. ಚೂರು ಇಂಗು. ಈ ಉಪ್ಪಿಟ್ಟನ್ನು ಪ್ರೆಷರ್ ಕುಕ್ಕರಿನಲ್ಲೇ ಮಾಡಬೇಕು.
ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿಯಬೇಕು. ಅಕ್ಕಿಯ ಬಿಳುಪು ಮಾಯವಾಗಿ ಕಂದು ಬಣ್ಣಕ್ಕೆ ಹೊರಳುವವರೆಗೆ ಹುರಿಯಬೇಕು. ಹುರಿದ ನಂತರ ಅದನ್ನು ಆರಲು ಬಿಟ್ಟು ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ರುಬ್ಬಬೇಕು. ಅಕ್ಕಿ ಸಣ್ಣಸಣ್ಣ ಚೂರುಗಳಾಗುವಷ್ಟು, ಅಂದರೆ ದಪ್ಪ ರವೆ ಗಾತ್ರಕ್ಕೆ ರುಬ್ಬಿದರೆ ಸಾಕು. ಇನ್ನೊಂದು ಕಡೆ ಅವರೆಕಾಳನ್ನು ಬರೀ ನೀರಿನಲ್ಲಿ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಂಡಿರಬೇಕು. ಅವರೆ ಬೇಗ ಬೇಯುವುದಿಲ್ಲವಾದ್ದರಿಂದ ಐದಾರು ವಿಷಲ್ ಬರುವವರೆಗೂ ಸ್ಟೌವ್ ಮೇಲೆ ಕುಕ್ಕರ್ ಇಟ್ಟಿರಬೇಕು.
ಇನ್ನೊಂದು ಕುಕ್ಕರಿನಲ್ಲಿ ಸ್ವಲ್ಪ ಎಣ್ಣೆ ಸ್ವಲ್ಪ ತುಪ್ಪ ಹಾಕಿರಿ. ಅದು ಬಿಸಿಯಾದ ನಂತರ ಅದಕ್ಕೆ ಜೀರಿಗೆ, ಕರಿಬೇವು, ಸಾಸಿವೆ, ಹಸಿಮೆಣಸಿನಕಾಯಿ, ಇಂಗು ಬೆರೆಸಿ ಒಗ್ಗರಣೆ ತಯಾರಿಸಿಕೊಳ್ಳಿರಿ. ಇದಕ್ಕೆ ಬೇಯಿಸಿದ ಅವರೆಕಾಳು ಮತ್ತು ಅದರಲ್ಲಿರುವ ಬಿಸಿ ನೀರನ್ನು ಸುರಿಯಿರಿ. ಅವರೆಕಾಳು ಉಪ್ಪಿಟ್ಟಿಗೆ ನೀರಿನ ಪ್ರಮಾಣ ಒಂದಕ್ಕೆ ಮೂರರಷ್ಟು ಇರಬೇಕು. ಅಂದರೆ, ಒಂದು ಲೋಟ ಅಕ್ಕಿ ರವೆಗೆ ಮೂರು ಲೋಟ ನೀರು.
ಕುದಿಯುತ್ತಿರುವ ಅವರೆಕಾಳು ಒಗ್ಗರಣೆ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿದ ನಂತರ ಮಾಡಿಟ್ಟುಕೊಂಡ ರವೆ ಹಾಕಿ ಚೆನ್ನಾಗಿ ಕದಡಿರಿ. ಉಪ್ಪಿಟ್ಟು ಗಂಟಾಗದಂತೆ ಎಚ್ಚರವಹಿಸಿ. ರವೆ ಕೂಡಿಕೊಂಡು ಉಪ್ಪಿಟ್ಟಿನ ಹದಕ್ಕೆ ಬರುವವರೆಗೆ ನಿರಂತರವಾಗಿ ಸೌಟಿನಿಂದ ಕಲಕುತ್ತಿರಬೇಕು. ಆನಂತರ ಕುಕ್ಕರಿನ ಮುಚ್ಚಳ ಮುಚ್ಚಿ ಮತ್ತೆ ಸ್ವಲ್ಪ ಹೊತ್ತು ಬೇಯಲು ಬಿಡಿ. ಮುಖ್ಯವಾದ ವಿಚಾರವೆಂದರೆ ಕುಕ್ಕರಿನ ವೈಟ್ ಇಡಬಾರದು.
ಐದಾರು ನಿಮಿಷ ಹಬೆಯಲ್ಲಿ ಬೆಂದ ನಂತರ ಅಕ್ಕಿರವೆ ಉಪ್ಪಿಟ್ಟು ಮೃದುವಾಗುತ್ತದೆ. ಈಗ ಕುಕ್ಕರನ್ನು ಕೆಳಗಿಳಿಸಿ ಮುಚ್ಚಳ ತೆಗೆದು ಅದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಕಲಸಿರಿ. ಇದು ತುಂಬಾ ರುಚಿಕಟ್ಟಾಗಿರುತ್ತದೆ. ಇತರ ಉಪ್ಪಿಟ್ಟುಗಳಂತೆ ಇದೂ ಇರುತ್ತದೆ ಎಂದು ನಿಮಗೆ ಅನಿಸಿದರೂ ಸಹ ಇದರ ವಿಶೇಷ ಏನಪ್ಪಾ ಅಂದರೆ ಅಕ್ಕಿ ರವೆ ಮತ್ತು ಅವರೆಕಾಳು ಚೆನ್ನಾಗಿ ಬೆಂದು ಪರಸ್ಪರ ಉಪ್ಪಿಟ್ಟಿನಲ್ಲಿ ಬೆರೆತುಕೊಂಡಿರಬೇಕು.



Click it and Unblock the Notifications