Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಬಗೆಬಗೆಯ ತರಕಾರಿಗಳ ಸಿಪ್ಪೆ ಚಟ್ನಿ

* ತೇಜಸ್ವಿನಿ ಹೆಗಡೆ, ಬೆಂಗಳೂರು
ಕಸದಿಂದ ರಸತೆಗೆವಂತೆ ವಿವಿಧ ತರಕಾರಿಗಳ ಸಿಪ್ಪೆಯಿಂದಲೂ ಸ್ವಾದಿಷ್ಟವಾದ ಚಟ್ನಿಯನ್ನು ತಯಾರಿಸಬಹುದು. ಅದೆಷ್ಟೋ ತರಕಾರಿಗಳ ಸಿಪ್ಪೆಯನ್ನು ನಾವು ತ್ಯಾಜ್ಯವಸ್ತುವೆಂದು ಕಸದ ಡಬ್ಬಿಗೆ ಬಿಸಾಕುವುದು ಸಹಜವಾಗಿಬಿಟ್ಟಿದೆ. ಆದರೆ ನಿಜವಾದ ಸತ್ವವಿರುವುದೇ ಸಿಪ್ಪೆಯೊಳಗೆ. ಬೀಟ್ರೂಟ್, ಹೀರೇಕಾಯಿ, ಮಂಗಳೂರು ಸವತೇಕಾಯಿ(ಉತ್ತರ ಕನ್ನಡದ ಕಡೆ ಇದನ್ನು ಮೊಗೆಕಾಯಿ ಎನ್ನುತ್ತೇವೆ), ಕುಂಬಳಕಾಯಿ ತರಕಾರಿಗಳ ಸಿಪ್ಪೆಯಿಂದ ತಯಾರಿಸಿದ ಚಟ್ನಿ ಬಲು ರುಚಿಕರ. ಹಾಗೂ ಆರೋಗ್ಯಕರ ಕೂಡ. ಈ ತರಕಾರಿಗಳು ಬೇರೆ ಬೇರೆಯಾಗಿದ್ದರೂ ಅವುಗಳ ಸಿಪ್ಪೆಯಿಂದ ಚಟ್ನಿಯನ್ನು ತಯಾರಿಸುವ ವಿಧಾನ ಮಾತ್ರ ಒಂದೇ.
ಮೇಲಿನ ತರಕಾರಿಗಳ ಸಿಪ್ಪೆಯ ಉಪಯೋಗದಿಂದ ತರಕಾರಿಗಳ ಉಳಿತಾಯದ ಜೊತೆಗೆ ಪೌಷ್ಟಿಕತೆಯನ್ನೂ ಪಡೆದಂತೆ ಆಗುವುದು. ತರಕಾರಿಗಳ ಬೆಲೆ ಗಗನಕ್ಕೇರಿದಾಗಲೂ ಈ ಅಡುಗೆ ಬಹೋಪಯೋಗಿ. ಸಿಪ್ಪೆಯನ್ನು ಚೆನ್ನಾಗಿ ತೊಳೆದು ಫ್ರಿಜ್ನಲ್ಲಿಟ್ಟು ಒಂದು ದಿನ ಬಿಟ್ಟೂ ಚಟ್ನಿಯನ್ನು ತಯಾರಿಸಬಹುದಾಗಿದೆ. ಹಾಗಾಗಿ ಇನ್ನು ಮುಂದೆ ಸಿಪ್ಪೆಗಳನ್ನು ತಿಪ್ಪೆಗೆಸೆಯದಿರಿ. ಒಮ್ಮೆ ಚಟ್ನಿಯನ್ನು ತಯಾರಿಸಿ ನೋಡಿ. 'ಬಲು ರುಚಿಕರ ಈ ಚಟ್ನಿ, ತೇಜಸ್ವಿನಿ ಬರೆದಿದ್ದು ಒಳ್ಳೆಯದಾಯಿತು' ಎಂದು ನೀವೇ ಹೇಳುವಿರಿ !
ಇಲ್ಲಿ ನಾನು ಬೀಟ್ರೂಟ್ ಸಿಪ್ಪೆಯಿಂದ ಚಟ್ನಿಯನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದೇನೆ. ಇದೇ ವಿಧಾನವನ್ನು ಅನುಸರಿಸಿ ನೀವು ಹೀರೇಕಾಯಿ, ಕುಂಬಳಕಾಯಿ, ಮಂಗಳೂರು ಸವತೆಕಾಯಿ ತರಕಾರಿಗಳ ಸಿಪ್ಪೆಯ ಚಟ್ನಿಯನ್ನೂ ತಯಾರಿಸಿರಿ.
ಬೀಟ್ರೂಟ್ ಚಟ್ನಿಗೆ ಬೇಕಾಗುವ ಸಾಮಗ್ರಿಗಳು:
* ಬೀಟ್ರೂಟ್ ಸಿಪ್ಪೆ : ಮೂರುಗಡ್ಡೆಯ ಸಿಪ್ಪೆ (ಪ್ರಮಾಣಕ್ಕನುಗುಣವಾಗಿ)
* ಕೆಂಪು ಮೆಣಸು : 4(ಖಾರಕ್ಕೆ ತಕ್ಕಂತೆ)
* ಹುಣಸೇ ಹಣ್ಣು : ಸಣ್ಣ ಚೂರು
* ಉದ್ದಿನ ಬೇಳೆ : 1/2 ಚಮಚ
* ಕೊತ್ತಂಬರಿ : 1/2 ಚಮಚ
* ಇಂಗು : ಕಡಲೇಕಾಳಿನಷ್ಟು
* ಎಣ್ಣೆ : 1 ಚಮಚ
* ತೆಂಗಿನಕಾಯಿ ತುರಿ : 1/4 ಭಾಗ
* ಉಪ್ಪು : ರುಚಿಗೆ ತಕ್ಕಷ್ಟು
* ಬೆಲ್ಲ : ರುಚಿಗೆ ತಕ್ಕಷ್ಟು (ಸಿಹಿ ಇಷ್ಟಪಡದವರಿಗೆ ಬೇಡ)
ಮಾಡುವ ವಿಧಾನ
* ಮೊದಲಿಗೆ ಬೀಟ್ರೂಟ್ ಸಿಪ್ಪೆಯನ್ನು ಚೆನ್ನಾಗಿ ತೊಳೆದು, ಕಡ್ಡಿಮೆಣಸು, ಉಪ್ಪು, ಹುಳಿ ಹಾಗೂ ಬೆಲ್ಲವನ್ನು ಹಾಕಿ ಚೆನ್ನಾಗಿ ಬೇಯಿಸಿ ತಣಿಸಿಟ್ಟುಕೊಳ್ಳಬೇಕು.
* ಕೊತ್ತುಂಬರಿ, ಉದ್ದಿನಬೇಳೆ ಹಾಗೂ ಇಂಗನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿಯಬೇಕು.
*ತೆಂಗಿನಕಾಯಿಯ ತುರಿಗೆ ಹುರಿದಿಟ್ಟ ಮಿಶ್ರಣ ಹಾಗೂ ಚೆನ್ನಾಗಿ ಆರಿರುವ ಬೇಯಿಸಿದ ಸಿಪ್ಪೆಯನ್ನೂ ಹಾಕಿ ನುಣ್ಣಗೆ ರುಬ್ಬಬೇಕು.
ಈಗ ರುಚಿಕರ ಹಾಗೂ ಸತ್ವಯುತ ಚಟ್ನಿ ಬಿಸಿ ಅನ್ನಕ್ಕೆ, ಚಪಾತಿಗೆ ಹಾಗೂ ದೋಸೆಗೆ ಹಾಕಿಕೊಂಡು ತಿನ್ನಲು ತಯಾರು.



Click it and Unblock the Notifications