Latest Updates
-
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು!
ಬಗೆಬಗೆಯ ತರಕಾರಿಗಳ ಸಿಪ್ಪೆ ಚಟ್ನಿ

* ತೇಜಸ್ವಿನಿ ಹೆಗಡೆ, ಬೆಂಗಳೂರು
ಕಸದಿಂದ ರಸತೆಗೆವಂತೆ ವಿವಿಧ ತರಕಾರಿಗಳ ಸಿಪ್ಪೆಯಿಂದಲೂ ಸ್ವಾದಿಷ್ಟವಾದ ಚಟ್ನಿಯನ್ನು ತಯಾರಿಸಬಹುದು. ಅದೆಷ್ಟೋ ತರಕಾರಿಗಳ ಸಿಪ್ಪೆಯನ್ನು ನಾವು ತ್ಯಾಜ್ಯವಸ್ತುವೆಂದು ಕಸದ ಡಬ್ಬಿಗೆ ಬಿಸಾಕುವುದು ಸಹಜವಾಗಿಬಿಟ್ಟಿದೆ. ಆದರೆ ನಿಜವಾದ ಸತ್ವವಿರುವುದೇ ಸಿಪ್ಪೆಯೊಳಗೆ. ಬೀಟ್ರೂಟ್, ಹೀರೇಕಾಯಿ, ಮಂಗಳೂರು ಸವತೇಕಾಯಿ(ಉತ್ತರ ಕನ್ನಡದ ಕಡೆ ಇದನ್ನು ಮೊಗೆಕಾಯಿ ಎನ್ನುತ್ತೇವೆ), ಕುಂಬಳಕಾಯಿ ತರಕಾರಿಗಳ ಸಿಪ್ಪೆಯಿಂದ ತಯಾರಿಸಿದ ಚಟ್ನಿ ಬಲು ರುಚಿಕರ. ಹಾಗೂ ಆರೋಗ್ಯಕರ ಕೂಡ. ಈ ತರಕಾರಿಗಳು ಬೇರೆ ಬೇರೆಯಾಗಿದ್ದರೂ ಅವುಗಳ ಸಿಪ್ಪೆಯಿಂದ ಚಟ್ನಿಯನ್ನು ತಯಾರಿಸುವ ವಿಧಾನ ಮಾತ್ರ ಒಂದೇ.
ಮೇಲಿನ ತರಕಾರಿಗಳ ಸಿಪ್ಪೆಯ ಉಪಯೋಗದಿಂದ ತರಕಾರಿಗಳ ಉಳಿತಾಯದ ಜೊತೆಗೆ ಪೌಷ್ಟಿಕತೆಯನ್ನೂ ಪಡೆದಂತೆ ಆಗುವುದು. ತರಕಾರಿಗಳ ಬೆಲೆ ಗಗನಕ್ಕೇರಿದಾಗಲೂ ಈ ಅಡುಗೆ ಬಹೋಪಯೋಗಿ. ಸಿಪ್ಪೆಯನ್ನು ಚೆನ್ನಾಗಿ ತೊಳೆದು ಫ್ರಿಜ್ನಲ್ಲಿಟ್ಟು ಒಂದು ದಿನ ಬಿಟ್ಟೂ ಚಟ್ನಿಯನ್ನು ತಯಾರಿಸಬಹುದಾಗಿದೆ. ಹಾಗಾಗಿ ಇನ್ನು ಮುಂದೆ ಸಿಪ್ಪೆಗಳನ್ನು ತಿಪ್ಪೆಗೆಸೆಯದಿರಿ. ಒಮ್ಮೆ ಚಟ್ನಿಯನ್ನು ತಯಾರಿಸಿ ನೋಡಿ. 'ಬಲು ರುಚಿಕರ ಈ ಚಟ್ನಿ, ತೇಜಸ್ವಿನಿ ಬರೆದಿದ್ದು ಒಳ್ಳೆಯದಾಯಿತು' ಎಂದು ನೀವೇ ಹೇಳುವಿರಿ !
ಇಲ್ಲಿ ನಾನು ಬೀಟ್ರೂಟ್ ಸಿಪ್ಪೆಯಿಂದ ಚಟ್ನಿಯನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದೇನೆ. ಇದೇ ವಿಧಾನವನ್ನು ಅನುಸರಿಸಿ ನೀವು ಹೀರೇಕಾಯಿ, ಕುಂಬಳಕಾಯಿ, ಮಂಗಳೂರು ಸವತೆಕಾಯಿ ತರಕಾರಿಗಳ ಸಿಪ್ಪೆಯ ಚಟ್ನಿಯನ್ನೂ ತಯಾರಿಸಿರಿ.
ಬೀಟ್ರೂಟ್ ಚಟ್ನಿಗೆ ಬೇಕಾಗುವ ಸಾಮಗ್ರಿಗಳು:
* ಬೀಟ್ರೂಟ್ ಸಿಪ್ಪೆ : ಮೂರುಗಡ್ಡೆಯ ಸಿಪ್ಪೆ (ಪ್ರಮಾಣಕ್ಕನುಗುಣವಾಗಿ)
* ಕೆಂಪು ಮೆಣಸು : 4(ಖಾರಕ್ಕೆ ತಕ್ಕಂತೆ)
* ಹುಣಸೇ ಹಣ್ಣು : ಸಣ್ಣ ಚೂರು
* ಉದ್ದಿನ ಬೇಳೆ : 1/2 ಚಮಚ
* ಕೊತ್ತಂಬರಿ : 1/2 ಚಮಚ
* ಇಂಗು : ಕಡಲೇಕಾಳಿನಷ್ಟು
* ಎಣ್ಣೆ : 1 ಚಮಚ
* ತೆಂಗಿನಕಾಯಿ ತುರಿ : 1/4 ಭಾಗ
* ಉಪ್ಪು : ರುಚಿಗೆ ತಕ್ಕಷ್ಟು
* ಬೆಲ್ಲ : ರುಚಿಗೆ ತಕ್ಕಷ್ಟು (ಸಿಹಿ ಇಷ್ಟಪಡದವರಿಗೆ ಬೇಡ)
ಮಾಡುವ ವಿಧಾನ
* ಮೊದಲಿಗೆ ಬೀಟ್ರೂಟ್ ಸಿಪ್ಪೆಯನ್ನು ಚೆನ್ನಾಗಿ ತೊಳೆದು, ಕಡ್ಡಿಮೆಣಸು, ಉಪ್ಪು, ಹುಳಿ ಹಾಗೂ ಬೆಲ್ಲವನ್ನು ಹಾಕಿ ಚೆನ್ನಾಗಿ ಬೇಯಿಸಿ ತಣಿಸಿಟ್ಟುಕೊಳ್ಳಬೇಕು.
* ಕೊತ್ತುಂಬರಿ, ಉದ್ದಿನಬೇಳೆ ಹಾಗೂ ಇಂಗನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿಯಬೇಕು.
*ತೆಂಗಿನಕಾಯಿಯ ತುರಿಗೆ ಹುರಿದಿಟ್ಟ ಮಿಶ್ರಣ ಹಾಗೂ ಚೆನ್ನಾಗಿ ಆರಿರುವ ಬೇಯಿಸಿದ ಸಿಪ್ಪೆಯನ್ನೂ ಹಾಕಿ ನುಣ್ಣಗೆ ರುಬ್ಬಬೇಕು.
ಈಗ ರುಚಿಕರ ಹಾಗೂ ಸತ್ವಯುತ ಚಟ್ನಿ ಬಿಸಿ ಅನ್ನಕ್ಕೆ, ಚಪಾತಿಗೆ ಹಾಗೂ ದೋಸೆಗೆ ಹಾಕಿಕೊಂಡು ತಿನ್ನಲು ತಯಾರು.



Click it and Unblock the Notifications