Latest Updates
-
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ?
ಬಗೆಬಗೆಯ ತರಕಾರಿಗಳ ಸಿಪ್ಪೆ ಚಟ್ನಿ

* ತೇಜಸ್ವಿನಿ ಹೆಗಡೆ, ಬೆಂಗಳೂರು
ಕಸದಿಂದ ರಸತೆಗೆವಂತೆ ವಿವಿಧ ತರಕಾರಿಗಳ ಸಿಪ್ಪೆಯಿಂದಲೂ ಸ್ವಾದಿಷ್ಟವಾದ ಚಟ್ನಿಯನ್ನು ತಯಾರಿಸಬಹುದು. ಅದೆಷ್ಟೋ ತರಕಾರಿಗಳ ಸಿಪ್ಪೆಯನ್ನು ನಾವು ತ್ಯಾಜ್ಯವಸ್ತುವೆಂದು ಕಸದ ಡಬ್ಬಿಗೆ ಬಿಸಾಕುವುದು ಸಹಜವಾಗಿಬಿಟ್ಟಿದೆ. ಆದರೆ ನಿಜವಾದ ಸತ್ವವಿರುವುದೇ ಸಿಪ್ಪೆಯೊಳಗೆ. ಬೀಟ್ರೂಟ್, ಹೀರೇಕಾಯಿ, ಮಂಗಳೂರು ಸವತೇಕಾಯಿ(ಉತ್ತರ ಕನ್ನಡದ ಕಡೆ ಇದನ್ನು ಮೊಗೆಕಾಯಿ ಎನ್ನುತ್ತೇವೆ), ಕುಂಬಳಕಾಯಿ ತರಕಾರಿಗಳ ಸಿಪ್ಪೆಯಿಂದ ತಯಾರಿಸಿದ ಚಟ್ನಿ ಬಲು ರುಚಿಕರ. ಹಾಗೂ ಆರೋಗ್ಯಕರ ಕೂಡ. ಈ ತರಕಾರಿಗಳು ಬೇರೆ ಬೇರೆಯಾಗಿದ್ದರೂ ಅವುಗಳ ಸಿಪ್ಪೆಯಿಂದ ಚಟ್ನಿಯನ್ನು ತಯಾರಿಸುವ ವಿಧಾನ ಮಾತ್ರ ಒಂದೇ.
ಮೇಲಿನ ತರಕಾರಿಗಳ ಸಿಪ್ಪೆಯ ಉಪಯೋಗದಿಂದ ತರಕಾರಿಗಳ ಉಳಿತಾಯದ ಜೊತೆಗೆ ಪೌಷ್ಟಿಕತೆಯನ್ನೂ ಪಡೆದಂತೆ ಆಗುವುದು. ತರಕಾರಿಗಳ ಬೆಲೆ ಗಗನಕ್ಕೇರಿದಾಗಲೂ ಈ ಅಡುಗೆ ಬಹೋಪಯೋಗಿ. ಸಿಪ್ಪೆಯನ್ನು ಚೆನ್ನಾಗಿ ತೊಳೆದು ಫ್ರಿಜ್ನಲ್ಲಿಟ್ಟು ಒಂದು ದಿನ ಬಿಟ್ಟೂ ಚಟ್ನಿಯನ್ನು ತಯಾರಿಸಬಹುದಾಗಿದೆ. ಹಾಗಾಗಿ ಇನ್ನು ಮುಂದೆ ಸಿಪ್ಪೆಗಳನ್ನು ತಿಪ್ಪೆಗೆಸೆಯದಿರಿ. ಒಮ್ಮೆ ಚಟ್ನಿಯನ್ನು ತಯಾರಿಸಿ ನೋಡಿ. 'ಬಲು ರುಚಿಕರ ಈ ಚಟ್ನಿ, ತೇಜಸ್ವಿನಿ ಬರೆದಿದ್ದು ಒಳ್ಳೆಯದಾಯಿತು' ಎಂದು ನೀವೇ ಹೇಳುವಿರಿ !
ಇಲ್ಲಿ ನಾನು ಬೀಟ್ರೂಟ್ ಸಿಪ್ಪೆಯಿಂದ ಚಟ್ನಿಯನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದೇನೆ. ಇದೇ ವಿಧಾನವನ್ನು ಅನುಸರಿಸಿ ನೀವು ಹೀರೇಕಾಯಿ, ಕುಂಬಳಕಾಯಿ, ಮಂಗಳೂರು ಸವತೆಕಾಯಿ ತರಕಾರಿಗಳ ಸಿಪ್ಪೆಯ ಚಟ್ನಿಯನ್ನೂ ತಯಾರಿಸಿರಿ.
ಬೀಟ್ರೂಟ್ ಚಟ್ನಿಗೆ ಬೇಕಾಗುವ ಸಾಮಗ್ರಿಗಳು:
* ಬೀಟ್ರೂಟ್ ಸಿಪ್ಪೆ : ಮೂರುಗಡ್ಡೆಯ ಸಿಪ್ಪೆ (ಪ್ರಮಾಣಕ್ಕನುಗುಣವಾಗಿ)
* ಕೆಂಪು ಮೆಣಸು : 4(ಖಾರಕ್ಕೆ ತಕ್ಕಂತೆ)
* ಹುಣಸೇ ಹಣ್ಣು : ಸಣ್ಣ ಚೂರು
* ಉದ್ದಿನ ಬೇಳೆ : 1/2 ಚಮಚ
* ಕೊತ್ತಂಬರಿ : 1/2 ಚಮಚ
* ಇಂಗು : ಕಡಲೇಕಾಳಿನಷ್ಟು
* ಎಣ್ಣೆ : 1 ಚಮಚ
* ತೆಂಗಿನಕಾಯಿ ತುರಿ : 1/4 ಭಾಗ
* ಉಪ್ಪು : ರುಚಿಗೆ ತಕ್ಕಷ್ಟು
* ಬೆಲ್ಲ : ರುಚಿಗೆ ತಕ್ಕಷ್ಟು (ಸಿಹಿ ಇಷ್ಟಪಡದವರಿಗೆ ಬೇಡ)
ಮಾಡುವ ವಿಧಾನ
* ಮೊದಲಿಗೆ ಬೀಟ್ರೂಟ್ ಸಿಪ್ಪೆಯನ್ನು ಚೆನ್ನಾಗಿ ತೊಳೆದು, ಕಡ್ಡಿಮೆಣಸು, ಉಪ್ಪು, ಹುಳಿ ಹಾಗೂ ಬೆಲ್ಲವನ್ನು ಹಾಕಿ ಚೆನ್ನಾಗಿ ಬೇಯಿಸಿ ತಣಿಸಿಟ್ಟುಕೊಳ್ಳಬೇಕು.
* ಕೊತ್ತುಂಬರಿ, ಉದ್ದಿನಬೇಳೆ ಹಾಗೂ ಇಂಗನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿಯಬೇಕು.
*ತೆಂಗಿನಕಾಯಿಯ ತುರಿಗೆ ಹುರಿದಿಟ್ಟ ಮಿಶ್ರಣ ಹಾಗೂ ಚೆನ್ನಾಗಿ ಆರಿರುವ ಬೇಯಿಸಿದ ಸಿಪ್ಪೆಯನ್ನೂ ಹಾಕಿ ನುಣ್ಣಗೆ ರುಬ್ಬಬೇಕು.
ಈಗ ರುಚಿಕರ ಹಾಗೂ ಸತ್ವಯುತ ಚಟ್ನಿ ಬಿಸಿ ಅನ್ನಕ್ಕೆ, ಚಪಾತಿಗೆ ಹಾಗೂ ದೋಸೆಗೆ ಹಾಕಿಕೊಂಡು ತಿನ್ನಲು ತಯಾರು.



Click it and Unblock the Notifications