Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಸಾಯಂಕಾಲದ ತಿಂಡಿ : ಗೊಜ್ಜವಲಕ್ಕಿ

ಒಂದು ಪಾವು ದಪ್ಪ ಅವಲಕ್ಕಿ
ಒಂದು ನೆಲ್ಲಿಕಾಯಿಯಷ್ಟು ಹುಣಸೇ ಹಣ್ಣು
ಒಂದು ಟೀ ಸ್ಪೂನ್ ಉಪ್ಪು
ಒಂದು ಟೀ ಸ್ಪೂನ್ ಮೆಣಸಿನ ಪುಡಿ
ಒಂದು ಬೊಗಸೆಯಷ್ಟು ತೆಂಗಿನ ಕಾಯಿ ತುರಿ
ನಿಂಬೆ ಹಣ್ಣಿನಷ್ಟು ಬೆಲ್ಲ
ಒಂದೆರಡು ಒಣ ಮೆಣಸಿನಕಾಯಿ, 2 ಚಿಟಕಿ ಸಾಸಿವೆ, 2 ಚಮಚ ಕಡಲೇಬೇಳೆ, ಒಂದು ಚಮಚ ಉದ್ದಿನ ಬೇಳೆ, 4 ಚಮಚ ಎಣ್ಣೆ - ಇವಿಷ್ಟೂ ಒಗ್ಗರಣೆಗೆ.
ಮಾಡುವ ವಿಧಾನ:
ದಪ್ಪ ಅವಲಕ್ಕಿಯನ್ನು ಕುಟ್ಟಿ ರವೆಯಂತೆ ಮಾಡಿಟ್ಟುಕೊಳ್ಳಬೇಕು. ಹುಣಸೇ ಹಣ್ಣನ್ನು ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿ, ಹುಣಸೇ ನೀರನ್ನು ಮಾತ್ರ ತೆಗೆದಿಟ್ಟುಕೊಳ್ಳಿ. ಈ ಹುಳಿ ನೀರಿಗೆ ಬೆಲ್ಲ, ಉಪ್ಪು, ಮೆಣಸಿನ ಪುಡಿ ಹಾಕಿ ಬೆರೆಸಿ. ಅವಲಕ್ಕಿ ರವೆ ಮತ್ತು ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ. ಇದು ಇಡ್ಲಿ ಹಿಟ್ಟಿನಷ್ಟು ದಪ್ಪಗಾಗಬೇಕು. ಅಗತ್ಯವಿದ್ದರೆ ಒಂದಿಷ್ಟು ನೀರು ಸೇರಿಸಿಕೊಳ್ಳಬಹುದು. ಈ ಮಿಶ್ರಣವನ್ನು 15 ನಿಮಿಷ ಹಾಗೇ ಇಟ್ಟಿರಿ. ನಂತರ ತೆಂಗಿನ ಕಾಯಿ ತುರಿ ಬೆರೆಸಿ.
ಬಾಣಲೆಯಾಂದರಲ್ಲಿ ಕರಿಬೇವು ಒಗ್ಗರಣೆ ಇಟ್ಟು , ಸಾಸಿವೆ ಸಿಡಿಯುತ್ತಲೇ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಗುಚಿ. ಬಿಸಿ ಬಿಸಿಯಾಗಿದ್ದಾಗ ತಿನ್ನಲು ತುಂಬಾ ರುಚಿ.



Click it and Unblock the Notifications











