Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಸಾಯಂಕಾಲದ ತಿಂಡಿ : ಗೊಜ್ಜವಲಕ್ಕಿ

ಒಂದು ಪಾವು ದಪ್ಪ ಅವಲಕ್ಕಿ
ಒಂದು ನೆಲ್ಲಿಕಾಯಿಯಷ್ಟು ಹುಣಸೇ ಹಣ್ಣು
ಒಂದು ಟೀ ಸ್ಪೂನ್ ಉಪ್ಪು
ಒಂದು ಟೀ ಸ್ಪೂನ್ ಮೆಣಸಿನ ಪುಡಿ
ಒಂದು ಬೊಗಸೆಯಷ್ಟು ತೆಂಗಿನ ಕಾಯಿ ತುರಿ
ನಿಂಬೆ ಹಣ್ಣಿನಷ್ಟು ಬೆಲ್ಲ
ಒಂದೆರಡು ಒಣ ಮೆಣಸಿನಕಾಯಿ, 2 ಚಿಟಕಿ ಸಾಸಿವೆ, 2 ಚಮಚ ಕಡಲೇಬೇಳೆ, ಒಂದು ಚಮಚ ಉದ್ದಿನ ಬೇಳೆ, 4 ಚಮಚ ಎಣ್ಣೆ - ಇವಿಷ್ಟೂ ಒಗ್ಗರಣೆಗೆ.
ಮಾಡುವ ವಿಧಾನ:
ದಪ್ಪ ಅವಲಕ್ಕಿಯನ್ನು ಕುಟ್ಟಿ ರವೆಯಂತೆ ಮಾಡಿಟ್ಟುಕೊಳ್ಳಬೇಕು. ಹುಣಸೇ ಹಣ್ಣನ್ನು ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿ, ಹುಣಸೇ ನೀರನ್ನು ಮಾತ್ರ ತೆಗೆದಿಟ್ಟುಕೊಳ್ಳಿ. ಈ ಹುಳಿ ನೀರಿಗೆ ಬೆಲ್ಲ, ಉಪ್ಪು, ಮೆಣಸಿನ ಪುಡಿ ಹಾಕಿ ಬೆರೆಸಿ. ಅವಲಕ್ಕಿ ರವೆ ಮತ್ತು ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ. ಇದು ಇಡ್ಲಿ ಹಿಟ್ಟಿನಷ್ಟು ದಪ್ಪಗಾಗಬೇಕು. ಅಗತ್ಯವಿದ್ದರೆ ಒಂದಿಷ್ಟು ನೀರು ಸೇರಿಸಿಕೊಳ್ಳಬಹುದು. ಈ ಮಿಶ್ರಣವನ್ನು 15 ನಿಮಿಷ ಹಾಗೇ ಇಟ್ಟಿರಿ. ನಂತರ ತೆಂಗಿನ ಕಾಯಿ ತುರಿ ಬೆರೆಸಿ.
ಬಾಣಲೆಯಾಂದರಲ್ಲಿ ಕರಿಬೇವು ಒಗ್ಗರಣೆ ಇಟ್ಟು , ಸಾಸಿವೆ ಸಿಡಿಯುತ್ತಲೇ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಗುಚಿ. ಬಿಸಿ ಬಿಸಿಯಾಗಿದ್ದಾಗ ತಿನ್ನಲು ತುಂಬಾ ರುಚಿ.



Click it and Unblock the Notifications
