ಶಬರಿಮಲೆಯಲ್ಲಿ ದೊರೆಯುವ ಅರವಣ ಪಾಯಸವನ್ನು ನಾವೂ ತಯಾರಿಸಬಹುದೇ?

Posted By:

ಸ್ವಾಮಿಯೇ ಶರಣಂ ಅಯ್ಯಪ್ಪ.... ಶಬರಿಮಲೆಗೆ ಹೋಗಿ ಬರುವವರು ಅಲ್ಲಿಯ ಪ್ರಸಾದವನ್ನು ತರುತ್ತಾರೆ, ಬೆಲ್ಲದಿಂದ ಮಾಡುವ ಆ ಪಾಯಸದ ರುಚಿ ಅದ್ಭುತವಾಗಿರುತ್ತದೆ, ಒಂದು ಚಮಚ ಪಾಯಸ ತಿಂದರೆ ಸಾಕು ಒಂದು ಬೌಲ್‌ ಪಾಯಸ ಕುಡಿದ ತೃಪ್ತಿ ಸಿಗುವುದು. ಈಗ ಮಲೆಗೆ ಮಾಲೆ ಹಾಕಿದ ಸ್ವಾಮಿಗಳು ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದಾರೆ, ಹೀಗೆ ತೆರಳುವಾಗ ಒಂದಿಷ್ಟು ಜನರಿಗೆ ಅನ್ನದಾನ ಮಾಡಿ ಹೋಗುತ್ತಾರೆ, ಅಯ್ಯಪ್ಪಸ್ವಾಮಿ ಪೂಜೆಯಲ್ಲಿ ಅರವಣ ಪಾಯಸದಷ್ಟೇ ರುಚಿಯಾದ ಪಾಯಸ ಮಾಡಬಯಸುವುದಾದರೆ ಇಲ್ಲಿದೆ ರೆಸಿಪಿ:

Ayyappaswami Aravana Payasa

ಬೇಕಾಗುವ ಸಾಮಗ್ರಿ
1/4 ಕಪ್ ಮಟ್ಟಾ ರೈಸ್‌
1/4 ಕಪ್ ತುಪ್ಪ
3/4 ಕಪ್ ಓಲೆ ಬೆಲ್ಲ
2 ಕಪ್‌ ನೀರು
1.5 ಕಪ್ ತುಪ್ಪ
2 ಚಮಚ ತೆಂಗಿನಕಾಯಿ ಚೂರುಗಳು
1/4 ಚಮಚ ಶುಂಠಿ ಪುಡಿ
3-4 ಏಲಕ್ಕಿ

ಮಾಡುವ ವಿಧಾನ
* ದಪ್ಪ ತಳವಿರುವ ತಾಮ್ರದ ಕಡಾಯಿಯನ್ನು ಬಿಸಿ ಮಾಡಿ, ಮೀಡಿಯಂ ಉರಿಯಲ್ಲಿಟ್ಟು 1/4 ಕಪ್ ತುಪ್ಪ ಹಾಕಿ.
* ಈಗ ತೆಂಗಿನಕಾಯಿ ಹಾಕಿ ಅದರ ಬಣ್ಣ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ
* ನಂತರ ಫ್ರೈ ಮಾಡಿದ ತೆಂಗಿನಕಾಯಿಯನ್ನು ಸೌಟ್‌ನಿಂದ ತೆಗೆದು ಒಂದು ತಟ್ಟೆಯಲ್ಲಿ ಇಡಿ.
* ನಂತರ ಅದೇ ತುಪ್ಪದಲ್ಲಿ ಮಟ್ಟಾ ರೈಸ್‌ ಹಾಕಿ 5 ನಿಮಿಷ ಫ್ರೈ ಮಾಡಿ.
* ನಂತರ 2 ಕಪ್‌ ನೀರು ಹಾಕಿ ಪಾತ್ರೆಯ ಬಾಯಿಯನ್ನು ಮುಚ್ಚಳದಿಂದ ಮುಚ್ಚಿ ಬೇಯಿಸಿ.
* ನಂತರ ಬೆಲ್ಲವನ್ನು ತುರಿದು ಸೇರಿಸಿ.
* 3-4 ಏಲಕ್ಕಿಯನ್ನು ಕೈಯಿಂದಲೇ ಹಿಸುಕಿ ಹಾಕಿ, ಶುಂಠಿ ಪುಡಿ ಸೇರಿಸಿ.
* ಅಕ್ಕಿ ಬೆಂದ ರೀತಿಯಲ್ಲಿ ಅನಿಸಿದಾಗ ಉರಿ ಆಫ್‌ ಮಾಡಿ.
* ನಂತರ ಫ್ರೈ ಮಾಡಿದ ತೆಂಗಿನಕಾಯಿ ಪೀಸ್ ಹಾಕಿ.
ತಯಾರಿಸಿದ ಪಾಯಸವನ್ನು ದೇವರಿಗೆ ನೈವೇದ್ಯ ಅರ್ಪಿಸಿ.

ಮಟ್ಟಾ ರೈಸ್‌ ಬಿಟ್ಟು ಯಾವ ಅಕ್ಕಿ ಬಳಸಬಹುದು?
* ಕೆಂಪು ಕುಚಲಕ್ಕಿ ಬಳಸಬಹುದು, ಆದರೆ ಬೆಂದಾಗ ಸ್ವಲ್ಪ ಗಟ್ಟಿಯಾಗಿರಬೇಕು
* ಪಾಯಸ ಮಾಡುವ ಮುನ್ನ ಅಕ್ಕಿಯನ್ನು ಚೆನ್ನಾಗಿ ಫ್ರೈ ಮಾಡಬೇಕು.
* ಈ ಪಾಯಸ ಮಾಡುವಾಗ ಹಾಲು ಬಳಸುವುದಿಲ್ಲ.
* ಈ ಪಾಯಸ ಮಾಡಲು ನೀವು ಓಲೆ ಬೆಲ್ಲವನ್ನೇ ಬಳಸಬೇಕು.
* ಒಣ ಶುಂಠಿ ಪುಡಿ ಬಳಸಲೇಬೇಕು.
* ಈ ಪಾಯಸವನ್ನು ನೀವು ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟರೆ ತುಂಬಾ ಸಮಯ ಬಳಸಬಹುದು, ಫ್ರಿಡ್ಜ್‌ನಲ್ಲಿ ಇಡಬೇಡಿ.

[ of 5 - Users]
Story first published: Monday, January 8, 2024, 14:37 [IST]
X
Desktop Bottom Promotion