ರಾಮಮಂದಿರ ಉದ್ಘಾಟನೆ ದಿನ ಮನೆಯಲ್ಲಿ ರಾಮನ ಪೂಜಿಸಿ ನೈವೇದ್ಯ ಅರ್ಪಿಸಲು 3 ರೆಸಿಪಿ

Posted By:

ಜನವರಿ 22ಕ್ಕೆ ರಾಮ ಮಂದಿರ ಉದ್ಘಾಟನೆ. ಈ ದಿನದಂದು ಎಲ್ಲಾ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಗುವುದು, ಹಿಂದೂಗಳ ಮನೆ-ಮನೆಗಳಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಲಾಗುವುದು, ಶ್ರೀರಾಮನಿಗೆ ಪೂಜೆ ಸಲ್ಲಿಸುವಾಗ ನೈವೇದ್ಯವಾಗಿ ಇವುಗಳನ್ನು ಅರ್ಪಿಸಬಹುದು.

Naivedya Recipe

ರೆಸಿಪಿ 1
ಅಕ್ಕಿಪಾಯಸ
ಬಾಸುಮತಿ ಅಕ್ಕಿ 1/2ಕಪ್
ಬಾದಾಮಿ 6-8
ಪಿಸ್ತಾ 6-8
ಒಣದ್ರಾಕ್ಷಿ 8-10
ಹಾಲು 1 ಲೀಟರ್
ಸಕ್ಕರೆ 3/4 ಕಪ್
ಏಲಕ್ಕಿ 3-4
ಸ್ವಲ್ಪ ಕೇಸರಿ

ವಿಧಾನ
ಅಕ್ಕಿಯನ್ನು ತೊಳೆದು 15 ನಿಮಿಷ ನೆನೆಹಾಕಿ, ನಂತರ ಅದರ ನಿರನ್ನು ಸೋಸಿ,ನೀರಿನಂಶ ಸಂಪೂರ್ಣ ಹೋಗಿರಬೇಕು, ತರಿತರಿಯಾಗಿ ರುಬ್ಬಿ.
* ಬಾದಾಮಿ, ಪಿಸ್ತವನ್ನು ಚಿಕ್ಕದಾಗಿ ಕತ್ತರಿಸಿ
* ನಂತರ ದಪ್ಪ ತಳವಿರುವ ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ
* ಅದಕ್ಕೆ ಅಕ್ಕಿಪುಡಿ, ಸಕ್ಕರೆ ಸೇರಿಸಿ, ಏಲಕ್ಕಿ ಗುದ್ದಿ ಹಾಕಿ, ನಂತರ ಬೆಂದ ಮೇಲೆ ಪಿಸ್ತಾ, ಬಾದಾಮಿಯಿಂದ ಅಲಂಕರಿಸಿ.

ರೆಸಿಪಿ 2
ಬೇಕಾಗುವ ಸಾಮಗ್ರಿ
1/2 ಕಪ್‌ ಹೆಸರು ಬೇಳೆ
1 ಹಸಿ ಮೆಣಸಿನಕಾಯಿ
1 ಚಮಚ ಸೌತೆ
1 ಚಮಚ ತೆಂಗಿನತುರಿ
2 ಚಮಚ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
1 ಚಮಚ ನಿಂಬೆರಸ

ಮಾಡುವ ವಿಧಾನ
ಹೆಸರುಬೇಳೆಯನ್ನು ಒಂದು ಗಂಟೆ ಕಾಲ ನೆನೆ ಹಾಕಿ, ನಂತರ ಅದರ ನೀರನ್ನು ಚೆನ್ನಾಗಿ ಸೋಸಿ, ನಂತರ ಉಳಿದೆಲ್ಲಾ ಸಾಮಗ್ರಿ ಸೇರಿಸಿ ಮಿಕ್ಸ್ ಮಾಡಿ, ನಂತರ 1 ಚಮಚ ನಿಂಬೆರಸ ಹಾಕಿ ಮಿಕ್ಸ್ ಮಾಡಿ ಶ್ರೀರಾಮನಿಗೆ ನೈವೇದ್ಯವನ್ನಾಗಿ ಅರ್ಪಿಸಿ.

ರೆಸಿಪಿ 3
ಕಡ್ಲೆ ಕಾಳು ಉಸಳಿ
ಇದನ್ನು ಕೂಡ ನೈವೇದ್ಯವನ್ನಾಗಿ ಇಡಲಾಗುವುದು.
ಬೇಕಾಗುವ ಸಾಮಗ್ರಿ
1/4 ಕೆಜಿ ಕಡ್ಲೆಕಾಳು (ರಾತ್ರಿಯೇ ನೆನೆಹಾಕಿ), ಬೇಯಿಸಿ
ಕೊತ್ತಂಬರಿಸೊಪ್ಪು 1-2 ಚಮಚ
ಎಣ್ಣೆ 1 ಚಮಚ
ಹಸಿ ಮೆಣಸು 2-3 ಚಮಚ
ಸ್ವಲ್ಪ ಶುಂಠಿ ಪುಡಿ
ಜೀರಿಗೆ ಪುಡಿ1/2 ಚಮಚ
ಅರಿಶಿಣ ಪುಡಿ 1/4 ಚಮಚ
ಕೊತ್ತಂಬರಿ ಪುಡಿ 1 ಚಮಚ
ಮ್ಯಾಂಗೋ ಪುಡಿ 1/4 ಚಮಚ
ಗರಂ ಮಸಾಲ 1/4 ಚಮಚ
ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ
* ಮೊಡಲು ಕಡ್ಲೆಗೆ ರುಚಿಗೆ ತಕ್ಕ ಉಪ್ಪು ಸೇರಿಸಿ ಬೇಯಿಸಿ
* ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಅದಕ್ಕೆ ಜೀರಿಗೆ ಹಾಕಿ, ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಬೇಯಿಸಿದ ಕಡ್ಲೆ, ನಂತರ ಇತರ ಉಳಿದ ಸಾಮಗ್ರಿ ಹಾಕಿ ಒಂದು 5 ನಿಮಿಷ ಫ್ರೈ ಮಾಡಿ, ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ, ನಂತರ ಇದನ್ನು ಪೂಜೆಗೆ ಬಂದವರಿಗೆ ಪ್ರಸಾದವನ್ನಾಗಿ ಮಾಡಬಹುದು.

[ of 5 - Users]
Story first published: Tuesday, January 9, 2024, 14:44 [IST]
X
Desktop Bottom Promotion