Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಗಾಂಧಿ ಜಯಂತಿ 2020: ನೋಟುಗಳಲ್ಲಿರುವ ಗಾಂಧೀಜಿಯ ರೇಖಾಚಿತ್ರದ ಹಿಂದಿನ ರಹಸ್ಯ
ಭಾರತದ ನೋಟುಗಳು ಯಾವುದೇ ಇರಲಿ, ಎಷ್ಟೇ ಹಳೆಯದಿರಲಿ ಅಥವಾ ಹೊಸ ನೋಟುಗಳಾಗಲಿ, ಐದು ರೂಗಿಂತ ದೊಡ್ಡ ಬೆಲೆಯ ನೋಟುಗಳಲ್ಲಿ ಗಾಂಧೀಜಿಯವರ ರೇಖಾಚಿತ್ರ ಮಾತ್ರ ಇದ್ದೇ ಇರುತ್ತದೆ. ಏಕೆಂದು ಗೊತ್ತೇ? ನೋಟುಗಳನ್ನು ವಿನ್ಯಾಸಗೊಳಿಸಿ ಮುದ್ರಿಸುವ ಅಧಿಕಾರವಿರುವ ಏಕೈಕ ಸಂಸ್ಥೆಯಾದ ಆರ್ ಬಿ ಐ (The Reserve Bank of India (RBI)ಗೂ ಈ ನೋಟುಗಳನ್ನು ವಿನ್ಯಾಸಗೊಳಿಸಲು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಲ್ಲದೇ ಗಾಂಧೀಜಿಯವರ ಚಿತ್ರವನ್ನು ಅಳವಡಿಸಿಕೊಳ್ಳಲು ಒಂದು ಇತಿಹಾಸವೇ ಇದೆ.
2020 ಅಕ್ಟೋಬರ್ 2ರಂದು ದೇಶಾದ್ಯಂತ ಅಹಿಂಸಾ ತತ್ವ ಪ್ರತಿಪಾದಕ ಗಾಂಧೀಜಿ ಅವರ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ಭಾರತದ ನೋಟುಗಳಲ್ಲಿ ಗಾಂಧಿ ರೇಖಾಚಿತ್ರವನ್ನು ಏಕೆ ಅಳವಡಿಸಲಾಗಿದೆ, ಇದರ ಹಿನ್ನೆಲೆ ಏನು ತಿಳಿಯೋಣ ಬನ್ನಿ.
ಅಷ್ಟಕ್ಕೂ ಗಾಂಧೀಜಿಯವರ ಈ ರೇಖಾಚಿತ್ರ ಅವರ ಭಾವಚಿತ್ರಕ್ಕೆ ಅಷ್ಟೊಂದು ಕರಾರುವಕ್ಕಾಗುವಂತೆ ಹೇಗೆ ಚಿತ್ರಿಸಲಾಗಿದೆ? ಈ ಚಿತ್ರದ ಮೂಲ ಚಿತ್ರ ಯಾವುದು? ಇದುವರೆಗೆ ನಾವೆಲ್ಲಾ ಪ್ರತಿದಿನವೂ ನೋಡುತ್ತಾ ಬಂದಿದ್ದರೂ ಈ ಬಗ್ಗೆ ಗಮನಿಸದೇ ಇರುವ ಕೆಲವು ಮಾಹಿತಿಗಳನ್ನು ಈಗ ನೋಡೋಣ...

ಇದರ ಮೂಲಚಿತ್ರ..
ಇವರ ಕಪ್ಪು ಬಿಳುಪು ಭಾವಚಿತ್ರವನ್ನು 1946 ಅಲ್ಲಿ ಅನಾಮಧೇಯ ಛಾಯಾಗ್ರಾಹಕರೊಬ್ಬರು ಸೆರೆಹಿಡಿದಿದ್ದರು. ಈ ವರ್ಷದಲ್ಲಿ ಅಂದಿನ ಬ್ರಿಟಿಷ್ ಆಡಳಿತದ ಭಾರತೀಯ ರಾಜ್ಯದ ಕಾರ್ಯದರ್ಶಿಗಳಾದ (the Secretary of State for India) ಲಾರ್ಡ್ ಪೆಥ್ವಿಕ್-ಲಾರೆನ್ಸ್ ರನ್ನು ಗಾಂಧೀಜಿಯವರು ಕಲ್ಕತ್ತ (ಇಂದಿನ ಕೋಲ್ಕಾತಾ) ನಗರದ ವೈಸರಾಯ್ ಭವನದಲ್ಲಿ ಭೇಟಿಯಾಗಿದ್ದರು. ಈ ಭೇಟಿಯ ಸಂದರ್ಭದಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಾಯ್ತು...

ಈ ಚಿತ್ರದ ಬಗ್ಗೆ ಇನ್ನಷ್ಟು
1946ರಲ್ಲಿ ಗಾಂಧೀಜಿಯವರು ಭೇಟಿ ನೀಡಿದ್ದ ಈ ಭವನ ಈಗ ರಾಷ್ಟಪತಿ ಭವನವೆಂದು ಕರೆಯಲ್ಪಡುತ್ತದೆ. ಈ ಭವನದಲ್ಲಿ ತೆಗೆದ ಚಿತ್ರವನ್ನು ಸ್ವತಂತ್ರ ಭಾರತದ ಎಲ್ಲಾ ಪ್ರಮುಖ ನೋಟುಗಳಲ್ಲಿ ಅಳವಡಿಸಿಕೊಳ್ಳಲಾಯ್ತು.

ವಾಸ್ತವವಾಗಿ ಇದು ಕನ್ನಡಿ ಪ್ರತಿಬಿಂಬ
ನೋಟುಗಳ ಮೇಲೆ ಮುದ್ರಿಸಿದ ಬಳಿಕ ನಾವು ನೋಡುವ ಗಾಂಧೀಜಿಯವರ ಎಡಬದಿಗೆ ತಿರುಗಿದಂತೆ ಕಾಣುವ ಭಾವಚಿತ್ರ ವಾಸ್ತವವಾಗಿ ಕನ್ನಡಿ ಬಿಂಬವಾಗಿದೆ.(ಅಂದರೆ ಬಲಬದಿಗೆ ತಿರುಗಿರುವ). 1987ರಲ್ಲಿ ಹೊಸ ಐನೂರರ ನೋಟುಗಳನ್ನು ಮುದ್ರಿಸುವಾಗ ನೋಟುಗಳ ಒಳಭಾಗದಲ್ಲಿರುವ ನೀರಿನ ಮುದ್ರೆ (ಅಥವಾ ಬೆಳಕಿಗೆ ಹಿಡಿದಾಗ ಮಾತ್ರ ಕಾಣುವ ವಾಟರ್ ಮಾರ್ಕ್) ಕಾಣುವಂತೆ ಮೊದಲ ಬಾರಿ ಅಳವಡಿಸಲಾಯ್ತು.

1996ರಲ್ಲಿ ಹೊಸವಿನ್ಯಾಸಗಳಲ್ಲಿ ಗಾಂಧೀಜಿಯವರ ಚಿತ್ರ ಹೊಂದಿದ ನೋಟುಗಳು
1996ರಲ್ಲಿ ಎಲ್ಲಾ ನೋಟುಗಳ ವಿನ್ಯಾಸವನ್ನು ಬದಲಿಸಿದಾಗ ಪ್ರತಿ ನೋಟಿನಲ್ಲಿಯೂ ಗಾಂಧೀಜಿಯವರ ಈ ಚಿತ್ರವನ್ನು ಅಳವಡಿಸಿಕೊಳ್ಳಲಾಯ್ತು. ಇದಕ್ಕೂ ಮುನ್ನ ಎಲ್ಲಾ ನೋಟುಗಳಲ್ಲಿ ಅಶೋಕ ಸ್ತಂಭದ ಚಿತ್ರವನ್ನು ಪ್ರಮುಖವಾಗಿ ಕಾಣುವಂತೆ ಮುದ್ರಿಸಲಾಗುತ್ತಿತ್ತು.

1996ರಲ್ಲಿ ಹೊಸವಿನ್ಯಾಸಗಳಲ್ಲಿ ಗಾಂಧೀಜಿಯವರ ಚಿತ್ರ ಹೊಂದಿದ ನೋಟುಗಳು
ಈ ವರ್ಷ ಆರ್. ಬಿ.ಐ ಕೈಗೊಂಡ ಪ್ರಮುಖ ನಿರ್ಧಾರದಲ್ಲಿ ಗಾಂಧೀಜಿಯವರ ಚಿತ್ರದ ರೇಖಾಚಿತ್ರವನ್ನು ಐದು ರೂಪಾಯಿಂದ ಪ್ರಾರಂಭಿಸಿ ಎಲ್ಲಾ ದೊಡ್ಡ ನೋಟುಗಳಲ್ಲಿ ಅಳವಡಿಸುವುದೂ ಒಂದಾಗಿತ್ತು. ಅಂದಿನಿಂದ ಇದುವರೆಗೆ ಎಲ್ಲಾ ನೋಟುಗಳಲ್ಲಿ ಗಾಂಧೀಜಿಯವರ ಚಿತ್ರ ಕಡ್ಡಾಯವಾಗಿ ಮುದ್ರಿಸಲಾಗುತ್ತದೆ. ಹಿಂಭಾಗದಲ್ಲಿ ಐತಿಹಾಸಿಕ ಪ್ರಸಂಗವನ್ನು ಪ್ರತಿನಿಧಿಸುವ ಚಿತ್ರವನ್ನು ಆಯ್ಕೆ ಮಾಡಲಾಗುತ್ತದೆ.



Click it and Unblock the Notifications











