Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಗಡಿಯಾರ ನಿಂತರೆ ಅಶುಭ! ಕೂಡಲೇ ಚಲಿಸುವಂತೆ ಮಾಡಿ...
ಗಡಿಯಾರ ನಿಂತರೆ ಅಶುಭ, ತಕ್ಷಣ ಇದನ್ನು ಚಲಿಸುವಂತೆ ಮಾಡಿ ಎಂದು ಹಿರಿಯರು ಕಿರಿಯರಿಗೆ ದುಂಬಾಲು ಬೀಳುತ್ತಾರೆ. ಹೀಗೆ ದುಂಬಲು ಬೀಳಲು ಕೆಲವು ವೈಜ್ಞಾನಿಕ ಕಾರಣಗಳಿದ್ದರೆ ಕೆಲವು ನಂಬಿಕೆ ಮತ್ತು ಮಿಥ್ಯೆಗಳಾಗಿವೆ.
ಸಂಪೂರ್ಣವಾಗಿ ನಿಂತ ಗಡಿಯಾರವೂ ದಿನಕ್ಕೆರಡು ಬಾರಿ ಸರಿಯಾದ ಸಮಯ ಸೂಚಿಸುತ್ತದೆ ಎಂದು ಸುಭಾಷಿತವೊಂದು ತಿಳಿಸುತ್ತದೆ. ಅಂದರೆ ಈ ಭೂಮಿಯಲ್ಲಿರುವ ಯಾವುದೇ ವಸ್ತು ನಿರುಪಯುಕ್ತವಲ್ಲ. ಆದರೂ ಗಡಿಯಾರ ನಿಂತರೆ ಇದನ್ನು ಅಪಶಕುನ ಎಂದು ಭಾವಿಸುವ ಜನರಿದ್ದಾರೆ.
ಗಡಿಯಾರ ನಿಂತರೆ ಅಶುಭ, ತಕ್ಷಣ ಇದನ್ನು ಚಲಿಸುವಂತೆ ಮಾಡಿ ಎಂದು ಹಿರಿಯರು ಕಿರಿಯರಿಗೆ ದಂಬಾಲು ಬೀಳುತ್ತಾರೆ. ಹೀಗೆ ದಂಬಾಲು ಬೀಳಲು ಕೆಲವು ವೈಜ್ಞಾನಿಕ ಕಾರಣಗಳಿದ್ದರೆ ಕೆಲವು ನಂಬಿಕೆ ಮತ್ತು ಮಿಥ್ಯೆಗಳಾಗಿವೆ. ಗೋಡೆಗಡಿಯಾರವನ್ನು ತೂಗು ಹಾಕುವಾಗ ವಾಸ್ತುಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಿ!
ಅದರಲ್ಲೂ ವಿಶೇಷವಾಗಿ ಮನೆಯ ಪ್ರಧಾನ ಸ್ಥಳದಲ್ಲಿರುವ ಗಡಿಯಾರ ನಿಂತರೆ ಅತೀವ ಕಳವಳ ವ್ಯಕ್ತಪಡಿಸಲಾಗುತ್ತದೆ. ಬನ್ನಿ, ಈ ಪರಿಯ ಮಿಥ್ಯೆ ಅಥವಾ ನಂಬಿಕೆಗಳ ಬಗ್ಗೆ ಕೆಲವು ಮಾಹಿತಿಗಳನ್ನು ಈಗ ನೋಡೋಣ...

ನಂಬಿಕೆ #1
ಹಲವು ಅಧಿಮನಃಶಾಸ್ತ್ರಜ್ಞ ಹಾಗೂ ಇತರ ಆಸಕ್ತರ ಸಂಶೋಧನೆಯ ಪರಿಣಾಮದಿಂದ ಜಗತ್ತಿನ ಹೆಚ್ಚಿನ ಕಡೆ ನಿಂತ ಗಡಿಯಾರ ದುರಾದೃಷ್ಟ ಮತ್ತು ದುರ್ದೆಸೆಯ ಸಂಕೇತವಾಗಿದೆ.

ನಂಬಿಕೆ #2
ಇನ್ನೊಂದು ನಂಬಿಕೆಯ ಪ್ರಕಾರ ಗಡಿಯಾರವನ್ನು ತಯಾರಿಸಿದ ವ್ಯಕ್ತಿ ಈ ಗಡಿಯಾರದ ಸೂಕ್ಷ್ಮ ಭಾಗಗಳನ್ನು ಜೋಡಿಸಿ ಈ ಗಡಿಯಾರ ನಡೆಯುವಂತೆ ಮಾಡಲು ತನ್ನ ಆತ್ಮದ ಒಂದು ಭಾಗವನ್ನೂ ಉಪಯೋಗಿಸಿರುತ್ತಾನೆ. ಯಾವಾಗ ಈ ಗಡಿಯಾರ ನಿಂತು ಹೋಯಿತೋ, ಆಗ ಆ ವ್ಯಕ್ತಿಯ ಆತ್ಮವೂ ನಿಂತು ಹೋದಂತೆ ಎಂದು ಭಾವಿಸಲಾಗುತ್ತದೆ.

ನಂಬಿಕೆ #3
ಹಿಂದಿನ ದಿನಗಳಲ್ಲಿ ನಿಂತ ಗಡಿಯಾರವನ್ನು ತಕ್ಷಣ ನಡೆಯುವಂತೆ ಮಾಡದೇ ಇದ್ದರೆ ಇದರ ಪರಿಣಾಮದಿಂದ ಮನೆಯಲ್ಲಿ ಸಾವು ಸಂಭವಿಸುತ್ತದೆ ಹಾಗೂ ಮನೆಯಲ್ಲಿ ದುರಾದೃಷ್ಟ ತುಂಬಿಕೊಳ್ಳುತ್ತದೆ. ಈ ನಂಬಿಕೆಯನ್ನು ಹಲವು ಚಲನಚಿತ್ರಗಳಲ್ಲಿ ಸಾಂಕೇತಿಕವಾಗಿಯೂ ತಿಳಿಸಲಾಗುತ್ತದೆ.

ನಂಬಿಕೆ #4
ಎಷ್ಟೋ ಕಾಲದವರೆಗೆ ಹೊಡೆದುಕೊಳ್ಳದೇ ಇದ್ದ ಗಡಿಯಾರವೊಂದು ಹಠಾತ್ತಾಗಿ ಹೊಡೆದುಕೊಳ್ಳಲು ಪ್ರಾರಂಭವಾದರೆ ಮನೆಯಲ್ಲಿ ಸಾವು ಸಂಭವಿಸುವುದು ನಿಕಟವಾಗಿದೆ ಎಂಬ ಸೂಚನೆಯಾಗಿದೆ.

ನಂಬಿಕೆ #5
ಹೆಚ್ಚು ಹೊತ್ತು ನಿಂತಿರುವ ಗಡಿಯಾರ ಮನೆಗೆ ದುರಾದೃಷ್ಟ ತರುತ್ತದೆ ಎಂದು ಈಗಾಗಲೇ ಅರಿತಿದ್ದೇವೆ. ಆದ್ದರಿಂದಲೇ ಇದನ್ನು ತಕ್ಷಣ ಚಾಲನೆಗೆ ಒಳಪಡಿಸಬೇಕು ಎಂದು ಹಿರಿಯರು ಚಡಪಡಿಸುತ್ತಾರೆ. ವಾಸ್ತವವಾಗಿ ಮನೆಯ ಗಡಿಯಾರ ನಿಂತುಹೋಗಿದ್ದರೆ ಮನೆಗೆ ಬರುವ ಅತಿಥಿಗಳು ಇದನ್ನು ಗಮನಿಸಿ ಮನೆಯವರ ಬಗ್ಗೆ ಅಪಾರ್ಥ ಕಲ್ಪಿಸಿಕೊಳ್ಳಬಹುದು.

ನಂಬಿಕೆ #5
ಮನೆಯವರು ಸೋಮಾರಿಗಳೂ, ಒಂದು ಗಡಿಯಾರಕ್ಕೆ ಚಾವಿ ಕೊಡುವುದು ಅಥವಾ ಬ್ಯಾಟರಿಯನ್ನು ಬದಲಿಸಲೂ ಅಸ್ಥೆ ತೋರದವರು ಎಂಬ ಭಾವನೆ ಮೂಡಿಸಿಕೊಳ್ಳುತ್ತಾರೆ. ತಮ್ಮ ಮನೆಯ ಬಗ್ಗೆ ಈ ಭಾವನೆ ಮೂಡಬಾರದೆಂಬುದೇ ಹಿರಿಯರ ಕಳಕಳಿಯಾಗಿದೆ.



Click it and Unblock the Notifications











