Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಯಾವುದೇ ಕಾರಣಕ್ಕೂ ಈ 5 ಜನರನ್ನು ನಿದ್ದೆಯಿಂದ ಎದ್ದೇಳಿಸಲು ಹೋಗಬೇಡಿ ; ಚಾಣಕ್ಯ
ನಿದ್ದೆ ಅನ್ನೋದು ಮನುಷ್ಯನಿಗೆ ತುಂಬಾನೇ ಮುಖ್ಯ. ಆರೋಗ್ಯ ಚೆನ್ನಾಗಿರಲು ಕೂಡ ನಿದ್ದೆ ತುಂಬಾನೇ ಮುಖ್ಯವಾಗುತ್ತದೆ. ಗಾಢ ನಿದ್ರೆಯಲ್ಲಿರಬೇಕಾದರೆ ಯಾರಾದರೂ ತೊಂದರೆ ಮಾಡಿದರೆ ಕೆಟ್ಟ ಕೋಪ ಬರುತ್ತದೆ. ಅಷ್ಟೇ ಯಾಕೆ ಪುರಾಣಗಳಲ್ಲೂ ನಿದ್ದೆಯ ಬಗ್ಗೆ ಉಲ್ಲೇಖವಾಗಿದೆ.

ನೀವು ಯಾರನ್ನೂ ಬೇಕಾದರೂ ನಿದ್ದೆಯಿಂದ ಎಬ್ಬಿಸಿ ತೊಂದರೆ ಇಲ್ಲ ಆದ್ರೆ ಈ 5 ಜನರ ಸಹವಾಸಕ್ಕೆ ಹೋಗಲೇಬೇಡಿ ಎಂದು ಚಾಣಕ್ಯ ಹೇಳಿದ್ದಾರೆ. ಹಾಗಾದ್ರೆ ಚಾಣಕ್ಯ ಹೇಳುತ್ತಿರುವ ಆ 5 ಜನ ಯಾರು? ಆ 5 ಜನರ ನಿದ್ದೆಗೆ ತೊಂದರೆ ಆದರೆ ಅಪಾಯ ಎದುರಾಗಲಿದ್ಯಾ? ಹೇಳ್ತೀವಿ.

1. ರಾಜ
ಚಾಣಕ್ಯನ ಪ್ರಕಾರ ರಾಜನನ್ನು ನಿದ್ದೆಯಿಂದ ಎಬ್ಬಿಸಲು ಹೋಗಬೇಡಿ ಯಾಕಂದ್ರೆ ಇದರಿಂದ ನೀವು ಆತನ ಕೋಪಕ್ಕೆ ಗುರಿಯಾಗಬಹುದು. ಈಗಿನ ಕಾಲದಲ್ಲಿ ರಾಜ ಇಲ್ಲದಿರೋದರಿಂದ ಮಂತ್ರಿ ಅಥವಾ ಅಧಿಕಾರಿಗಳನ್ನ ರಾಜನ ಸ್ಥಾನದಲ್ಲಿ ಪರಿಗಣಿಸಬಹುದು. ನಮಗಿಂತ ಉನ್ನತ ಸ್ಥಾನದಲ್ಲಿರುವವರನ್ನು ನಿದ್ದೆಯಿಂದ ಎಬ್ಬಿಸಿ ಅವರಿಗೆ ತೊಂದರೆ ಮಾಡೋದಕ್ಕೆ ಹೋಗಬೇಡಿ. ಇದರಿಂದ ಅವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

2. ಸಿಂಹ
ಸಿಂಹ ಕಾಡಿನ ರಾಜ ಹಾಗೂ ಇದೊಂದು ವ್ಯಾಘ್ರ ಪ್ರಾಣಿ ಎಂಬುದು ಎಲ್ಲರಿಗೂ ಗೊತ್ತು. ಚಾಣಕ್ಯನ ಪ್ರಕಾರ ಸಿಂಹವನ್ನು ನಿದ್ದೆಯಿಂದ ಎಬ್ಬಿಸುವುದು ಮಹಾ ಅಪಾಯ. ಇದು ನಿಮ್ಮ ಪ್ರಾಣಕ್ಕೆ ಕುತ್ತು ತರಬಹುದು. ಅಪ್ಪಿ ತಪ್ಪಿಯೂ ಸಿಂಹದ ತಂಟೆಗೆ ಹೋಗಲೇಬೇಡಿ. ಸಿಂಹದ ಹತ್ತಿರ ಹೋಗೋದಕ್ಕೂ ಭಯ ಪಡುತ್ತೇವೆ ಅಂತದ್ರಲ್ಲಿ ಅದನ್ನು ನಿದ್ದೆಯಿಂದ ಎಬ್ಬಿಸಲು ಹೋದರೆ ನಮ್ಮ ಕತೆ ಮುಗಿಯಿತು ಎಂದರ್ಥ.

3. ಮಾಂಸಹಾರಿ ಪ್ರಾಣಿಗಳು
ಮಾಂಸಹಾರಿ ಪ್ರಾಣಿಗಳ ತಂಟೆಗೆ ಹೋಗಬೇಡಿ ಅಂತಾರೆ ಚಾಣಕ್ಯ. ಹೊಟ್ಟೆತುಂಬಾ ತಿಂದು ಗಾಢ ನಿದ್ದೆಯಲ್ಲಿರುವ ಪ್ರಾಣಿಗಳನ್ನು ನಿದ್ದೆಯಿಂದ ಎಬ್ಬಿಸಲು ಹೋದರೆ ಸುಮ್ನೆ ಬಿಡ್ತಾವಾ? ಅಟ್ಟಾಡಿಸಿಕೊಂಡು ಬಂದು ನಮ್ಮ ಪ್ರಾಣಕ್ಕೆ ಆಪತ್ತು ತರಬಹುದು. ಅಷ್ಟೇ ಯಾಕೆ ನಾವು ನಮ್ಮ ಮನೆಯಲ್ಲೇ ಸಾಕಿದ ನಾಯಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ ಊಟ ಹಾಗೂ ನಿದ್ದೆಯ ಸಮಯದಲ್ಲಿ ಅದಕ್ಕೆ ತೊಂದರೆ ಮಾಡಿದ್ರೆ ಮಾಲೀಕ ಅನ್ನೋದನ್ನು ನೋಡದೇನೆ ಬೊಗಳೋದಕ್ಕೆ ಶುರು ಮಾಡುತ್ತದೆ.

4. ಮೂರ್ಖ
ಮೂರ್ಖನನ್ನು ನಿದ್ದೆಯಿಂದ ಎಬ್ಬಿಸಿಲು ಹೋದರೆ ತೊಂದರೆಯನ್ನು ನೀವೆ ನಿಮ್ಮ ಕೈಯಾರೆ ಆಹ್ವಾನಿಸಿದಂತೆ ಎಂದು ಚಾಣಕ್ಯ ಹೇಳಿದ್ದಾರೆ. ಮೂರ್ಖನಿಗೆ ನೀವು ಯಾವುದಾದರೂ ಒಂದು ವಿಷಯವನ್ನು ಮನ ಮುಟ್ಟುವಂತೆ ಹೇಳಿದರೆ ಅದು ವ್ಯರ್ಥವೇ ಸರಿ. ಯಾಕೆಂದರೆ ಆತ ಅರ್ಥ ಆದಂತೆ ನಟಿಸಬೇಕು ಅಷ್ಟೇ, ಅದನ್ನು ಬಿಟ್ಟು ಅವನ ತಲೆಗೆ ಏನು ಹೋಗೋದೇ ಇಲ್ಲ. ಅದೇನೋ ಗಾದೆಯಿದ್ಯಲ್ಲ ಕೋಣನ ಮುಂದೆ ಕಿನ್ನರಿ ಬಾರಿಸೋದು ಅಂತ ಹಾಗೆಯೇ ಆಗುತ್ತೆ.

5. ಮಗು
ಚಾಣಕ್ಯನ ಪ್ರಕಾರ ಮಗುವನ್ನು ನಿದ್ದೆಯಿಂದ ಎಬ್ಬಿಸುವುದು ಆಪತ್ತು. ನಿಮ್ಮ ಮನೆಯಲ್ಲಿ ಮಕ್ಕಳಿದ್ರೆ ನಿಮಗೆ ಚೆನ್ನಾಗಿ ಗೊತ್ತಿರುತ್ತೆ. ಮಕ್ಕಳು ಎಚ್ಚರವಿದ್ದಾಗ ನಮಗೆ ಯಾವ ರೀತಿ ತೊಂದರೆ ನೀಡ್ತಾರೆ ಅಂತ ಮಗು ಒಮ್ಮೆ ಮಲಗಿದ್ರೆ ಸಾಕು ಅಂತ ಎಲ್ಲರೂ ಕಾಯ್ತಿರ್ತಾರೆ. ಅಪ್ಪಿ ತಪ್ಪಿ ಏನಾದ್ರು ಮಲಗಿದ ಮಗುವನ್ನು ಎಬ್ಬಿಸಿದ್ರೆ ನಮ್ಮ ಕತೆ ಮುಗಿತು. ಸರಿಯಾಗಿ ನಿದ್ದೆ ಬಾರದೇ ಹೋದರೆ ಮಕ್ಕಳು ಸಿಕ್ಕಾಪಟ್ಟೆ ಆಳುತ್ತಾರೆ. ನಂತರ ಇಡೀ ದಿನ ಅವರನ್ನು ಸಮಾಧಾನ ಮಾಡೋದರಲ್ಲೇ ನಮ್ಮ ಸಮಯ ಕಳೆದು ಹೋಗುತ್ತದೆ.
ಜೀವನದಲ್ಲಿ ಪ್ರತಿಯೊಂದು ಹೆಜ್ಜೆ ಇಡಬೇಕಾದರೂ ಅಲ್ಲಿ ಮುಂದಾಲೋಚನೆ ಎನ್ನುವುದು ತುಂಬಾನೇ ಮುಖ್ಯವಾಗುತ್ತದೆ. ಏನೇ ಕೆಲಸ ಮಡಬೇಕಾದರೂ ಅಲ್ಲಿ ಮುಂದಾಲೋಚನೆ ಬಹಳ ಮುಖ್ಯ. ಇಲ್ಲವಾದರೆ ಆಪತ್ತು ಎದುರಾಗೋದು ಖಂಡಿತ.



Click it and Unblock the Notifications
