Just In
- 20 min ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 1 hr ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 3 hrs ago ವೃಷಭ ರಾಶಿಗೆ ಗುರು ಸಂಚಾರ: 10ನೇ ಮನೆಯಲ್ಲಿ ಗುರು ಸಿಂಹ ರಾಶಿಯವರು ಆಸ್ತಿ ಖರೀದಿಸಬಹುದು
- 4 hrs ago ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
Don't Miss
- News ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದ ಬಿಜೆಪಿ ಶಾಸಕ
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Movies Puttakkana Makkalu:ಸ್ನೇಹಾ ಕೈ ಸೇರಿಯೇ ಬಿಡ್ತು ವಿಚ್ಛೇದನದ ಪೇಪರ್; ಮುಂದೇನು?
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಪವನ್ನು ನಿಯಂತ್ರಿಸಲು 4 ಮಂತ್ರ
ಕೋಪ ಮಾಡಿಕೊಳ್ಳಬಾರದು ಎಂದು ಅಂದುಕೊಂಡಿರುತ್ತೇವೆ. ಆದರೂ ಚಿಕ್ಕ ವಿಷಯಕ್ಕೆ ಕೂಡ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಕೋಪದಿಂದ ಅಪಾಯವಾಗುವುದು ಹೆಚ್ಚು. ಆದ್ದರಿಂದ ಕೋಪ ಬಂದಾಗ ನಿಯಂತ್ರಣ ಮಾಡಿಕೊಳ್ಳುವುದು ಒಳ್ಳೆಯದು.
ಈ ಕೆಳಗಿನ ಕೆಲ ಸಲಹೆಗಳು ಕೋಪವನ್ನು ನಿಯಂತ್ರಿಸಲು ಸಹಾಯಮಾಡುತ್ತದೆ.
1. ಯೋಚನೆ: ತುಂಬಾ ಕೋಪ ಬಂದರೆ ಕೋಪಕ್ಕೆ ಕಾರಣವಾದ ವಿಷಯವನ್ನು ಯೋಚಿಸಬಾರದು. ಅದರ ಬಗ್ಗೆ ಯೋಚಿಸಿದಷ್ಟು ಕೋಪ ಹೆಚ್ಚಾಗುವುದು ಅಲ್ಲದೆ ಕಡಿಮೆಯಾಗುವುದಿಲ್ಲ. ಕೋಪದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಕೋಪ ಸ್ವಲ್ಪ ತಣಿದ ಮೇಲೆ ನಂತರ ಯೋಚಿಸಿ ನಿಮ್ಮ ನಿರ್ಧಾರ, ಇಷ್ಟ-ಕಷ್ಟಗಳ ಬಗ್ಗೆ ಹೇಳುವುದು ಒಳ್ಳೆಯದು.
2. ಉಸಿರಾಟ: ತುಂಬಾ ಕೋಪ ಬಂದು ಅದನ್ನು ನಿಯಂತ್ರಿಸಲು ಸಾಧ್ಯನೆ ಇಲ್ಲ ಎಂದು ಅನಿಸಿದರೆ ಈ ರೀತಿ ಮಾಡಿ. ಈ ಸಲಹೆ ನಿಮಗೆ ಸಿಲ್ಲಿ ಅನಿಸಿದರೂ ಕೋಪ ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ಎಲ್ಲಾ ಯೋಚನೆ ಬಿಟ್ಟು ನಿಮ್ಮ ಉಸಿರಾಟದ ಕಡೆ ಗಮನ ಕೊಡಿ. ಈ ರೀತಿ ಎರಡು ನಿಮಿಷ ಮಾಡಿದರೆ ಸಾಕು ಕೋಪ ತನ್ನಿಂದ ತಾನೆ ಕಡಿಮೆಯಾಗುತ್ತದೆ.
3. ನಿರ್ಧಾರ: ಕೋಪ ತಣ್ಣಗಾದ ಮೇಲೆ ಸರಿ-ತಪ್ಪುಗಳ ಬಗ್ಗೆ ಯೊಚಿಸಿ. ಅಗ ತಪ್ಪು ಅನಿಸಿದ್ದನ್ನು ಹೇಳಿಬಿಡಿ. ಸಾಕಷ್ಟು ಬಾರಿ ನಮ್ಮ ತಪ್ಪು ನಮಗೆ ಗೊತ್ತಾಗುವುದಿಲ್ಲ.
4. ಕ್ಷಮೆ: ಒಂದು ವೇಳೆ ನಿಮ್ಮ ಕಡೆಯಿಂದ ತಪ್ಪು ಇದೆ ಎಂದು ಮನವರಿಕೆಯಾದರೆ ಕ್ಷಮೆ ಕೇಳಲು ಹಿಂಜರಿಕೆ ಬೇಡ. ಈ ರೀತಿಯ ವ್ಯಕ್ತಿತ್ವ ಬೆಳೆಸಿಕೊಂಡರೆ ನಿಮಗೆ ಲಾಭ ಹೊರತು ನಷ್ಟವೇನು ಉಂಟಾಗುವುದಿಲ್ಲ.