ಜ್ಞಾನೋದಯದ ಬದಲಿಗೆ ಕುದುರೆಯನ್ನೇಕೆ ಹುಡುಕುತ್ತಿಲ್ಲ?

Kannada Zen story
ಒಬ್ಬ ಯಾತ್ರಿಯು ತನ್ನ ಕುದುರೆಯ ಮೇಲೇರಿ ಜ್ಞಾನೋದಯಕ್ಕಾಗಿ ಹೊರಟನು. ಜ್ಞಾನೋದಯ ಎಲ್ಲಿ ಸಿಗುತ್ತದೆ ಎಂದು ತಿಳಿಯಲು ತುಂಬಾ ಪರಿಶ್ರಮ ಪಟ್ಟನು. ತನಗೆ ಮಾರ್ಗದರ್ಶನ ಮಾಡುವಂತಹ ಜ್ಞಾನಿಗಾಗಿ ಪರ್ವತಗಳನ್ನು ದಾಟಿ, ವೇಗವಾಗಿ ಹರಿಯುವ ನದಿಯನ್ನೆಲ್ಲಾ ತಡಕಾಡಿದನು. ತಿಂಗಳುಗಳ ಕಾಲದ ಪರಿಶ್ರಮದ ನಂತರ ಒಂದು ಗುಹೆಯ ಬಳಿ ಶಿಕ್ಷಕನೋರ್ವನನ್ನು ಕಂಡನು.

ಯಾತ್ರಿಯು ತನ್ನ ಪ್ರಶ್ನೆಯನ್ನು ಗುರುಗಳ ಮುಂದೆ ಪ್ರಸ್ತುತ ಪಡಿಸಿದನು. ಗುರುಗಳು ಅದನ್ನು ಕೇಳುತ್ತಿದ್ದರು, ಆದರೆ ಒಂದು ಪದವನ್ನೂ ನುಡಿಯಲಿಲ್ಲ. ಗಂಟೆಗಳು ಉರುಳಿದವು ನಿರೀಕ್ಷಕನು ತಾಳ್ಮೆಯಿಂದ ಕಾಯುತ್ತಿದ್ದನು.ಯಾತ್ರಿಯು ಇಷ್ಟು ದೂರ ಸವಾರಿ ಮಾಡಿಕೊಂಡು ಬಂದಿದ್ದ ಕುದುರೆಯನ್ನು ನೋಡಲು ಗುರುಗಳು ಅದರತ್ತ ತಿರುಗಿದರು.

ಅಂತಿಮವಾಗಿ ಮೌನ ಮುರಿದ ಗುರುಗಳು, ಜ್ಞಾನೋದಯದ ಬದಲಿಗೆ ಕುದುರೆಯನ್ನೇಕೆ ಹುಡುಕುತ್ತಿಲ್ಲ ಎಂದು ಯಾತ್ರಿಯನ್ನು ಕೇಳಿದರು. ತನ್ನಲ್ಲಿ ಆಗಲೇ ಕುದುರೆ ಇದೆಯಲ್ಲಾ ಎಂದು ಯಾತ್ರಿ ಉತ್ತರಿಸಿದನು. ಗುರುಗಳು ಮುಗುಳ್ನಕ್ಕು ಗುಹೆಯ ಒಳಗೆ ಹೋದರು. "ನೀವು ಏಕೆ ಕುದುರೆ ಹುಡುಕುತ್ತಿಲ್ಲ? ಏಕೆ ನೀವು ಬುದ್ಧನ ಬಗ್ಗೆ ಮಾತ್ರ ಚಿಂತಿಸುತ್ತಿರುವಿರಿ" ಎಂದು ಕೇಳಿದರು.

ಆ ಮನುಷ್ಯ,ಈಗ ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿದ್ದ "ಏನು ಅಸಂಬದ್ಧವಾಗಿ ಮಾತನಾಡುತ್ತಿರುವಿರಿ? ಈಗಾಗಲೇ ನನ್ನಲ್ಲಿ ಕುದುರೆ ಇದೆ. ನನಗೆ ಕುದುರೆ ಸಿಕ್ಕಿದೆ! ನಾನು ಮತ್ತೇಕೆ ಅದನ್ನು ಪಡೆಯಬೇಕು? ಎಂದು ಕೇಳಿದನು. ಪ್ರತಿಯಾಗಿ ಗುರುಗಳು ಮುಗುಳ್ನಕ್ಕು ಸಹಜವಾಗಿ ಗುಹೆಯ ಒಳಗೆ ಹೋದರು.

English summary

Kannada Zen story | Searching For God | Inspirational short stories | ಝೆನ್ ಕಥೆ : ನೀನು ಬುದ್ದನೇ?

A pilgrim on his horse made arduous attempts, crossing mountains and swift running rivers in search of a noted man of wisdom, seeking his guidance for enlightenment.
Story first published: Friday, June 29, 2012, 16:25 [IST]
X
Desktop Bottom Promotion