Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಹಿಂದೂ ಧರ್ಮ: ಪೂಜಾ ಗೃಹದಲ್ಲಿ 'ಅಗರಬತ್ತಿಯ' ಮಹತ್ವ
ಪೂಜೆ ಪುನಸ್ಕಾರಗಳ ಸಮಯದಲ್ಲಿ ದೇವರಿಗೆ ಅಲಂಕಾರ ಮಾಡುವುದರ ಜೊತೆಗೆ ಧೂಪ, ದೀಪ, ಆರತಿ ಅಂತೆಯೇ ಅಗರಬತ್ತಿಯನ್ನು (ಊದುಬತ್ತಿ) ಹಚ್ಚಿ ದೇವರಿಗೆ ಇಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಪುರಾತನ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿ ಇದು ಪ್ರಸಿದ್ಧವಾಗಿದೆ. ಆದರೆ ಅಗರಬತ್ತಿಯನ್ನು ಏಕೆ ದೇವರ ಮುಂದೆ ಹಚ್ಚಿಡಲಾಗುತ್ತದೆ ಎಂಬುದರ ಕುರಿತು ಧಾರ್ಮಿಕ ನಂಬಿಕೆ ಇದ್ದು ಇಂದಿನ ಲೇಖನದಲ್ಲಿ ಈ ಅಂಶದ ಮೇಲೆ ಬೆಳಕು ಚೆಲ್ಲೋಣ.

ಆಧ್ಯಾತ್ಮಿಕ ಕಾರಣ
ಊದುಬತ್ತಿ ಅಥವಾ ಅಗರಬತ್ತಿಯನ್ನು ದೇವರ ಮುಂದೆ ಉರಿಸುವುದರ ಹಿಂದೆ ಆಧ್ಯಾತ್ಮಿಕ ಕಾರಣವಿದೆ. ಗಾಳಿಯಲ್ಲಿ ಪ್ರಸಾರವಾಗುವ ಊದುಬತ್ತಿಯ ಪರಿಮಳವು ದೇವರನ್ನು ಹೋಗಿ ಸೇರುತ್ತದೆ ಎಂಬ ಕಾರಣ ಇದರ ಹಿಂದೆ ಅಡಗಿದೆ. ನಿಮ್ಮ ಆಲೋಚನೆಗಳನ್ನು ಇದು ಶುದ್ಧ ಮತ್ತು ಸುಂದರವಾಗಿಸುತ್ತದೆ ಎಂಬ ನಂಬಿಕೆ ಇದೆ.
ಗಾಳಿಯೊಂದಿಗೆ ಸುವಾಸಿತ ಪರಿಮಳವನ್ನು ಬೆರೆಸಿ ಊದುಬತ್ತಿ ತನ್ನನ್ನು ಸಂಪೂರ್ಣವಾಗಿ ಉರಿಸಿಕೊಳ್ಳುತ್ತದೆ, ಅಂತ್ಯದಲ್ಲಿ ಬೂದಿ ಮಾತ್ರ ಉಳಿಯುತ್ತದೆ. ಮಾನವತ್ವದ ಬೆಲೆ ಮತ್ತು ಗುಣಮಟ್ಟವನ್ನು ಇದು ಕೇಂದ್ರೀಕರಿಸುತ್ತಿದ್ದು ನಾವು ಹೇಗೆ ಇರಬೇಕು ಎಂಬುದನ್ನು ಸಾರುತ್ತದೆ. ಇತತರಿಗಾಗಿ ನಮ್ಮನ್ನು ನಾವು ಹೇಗೆ ತ್ಯಾಗ ಮಾಡಿಕೊಳ್ಳುವುದು ಎಂಬುದನ್ನು ಇದು ಸೂಚಿಸುತ್ತದೆ. ಇನ್ನೊಬ್ಬರ ಖುಷಿಗಾಗಿ, ನಿಮ್ಮದೇ ದುರಾಸೆಯನ್ನು ತ್ಯಜಿಸಿ ಫಲಾಫಲಗಳನ್ನು ಅಪೇಕ್ಷಿಸದೇ ಬಾಳುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಆದ್ದರಿಂದಾಗಿಯೇ ಪೂಜೆ ಮತ್ತು ಇತರ ದೈವತಾ ಕಾರ್ಯಗಳಲ್ಲಿ ಅಗರಬತ್ತಿಯನ್ನು ನಾವು ಉರಿಸುತ್ತೇವೆ.
ವೈಜ್ಞಾನಿಕ ಕಾರಣ
ಹಲವಾರು ಕಾಯಿಲೆಗಳಿಗೆ ಔಷಧವಾಗಿ ಊದುಬತ್ತಿಯನ್ನು ಬಳಸಲಾಗುತ್ತದೆ. ಊದುಬತ್ತಿಯನ್ನು ಉರಿಸಿದಾಗ ಇದರ ಪರಿಮಳವು ಗಾಳಿಯಲ್ಲಿ ಬೆರೆತು ನಿಮ್ಮ ಮನಸ್ಸನ್ನು ಉಲ್ಲಾಸಿತವಾಗಿಸುತ್ತದೆ. ನೀವು ಧಾರ್ಮಿಕ ಆಚರಣೆಗಳಿಗೆ ಕುಳಿತುಕೊಂಡಾಗ ನಿಮ್ಮನ್ನು ಮಾನಸಿಕವಾಗಿ ಸಿದ್ಧಪಡಿಸಿ ತೊಂದರೆಗಳನ್ನು ನೀಗಿಸುತ್ತದೆ.
ನಿಮ್ಮ ಮನಸ್ಸು ಮತ್ತು ಆತ್ಮವನ್ನು ಬಳಸಿಕೊಂಡು ದೇವರನ್ನು ಪ್ರಾರ್ಥಿಸಲು ಇದು ಸಹಕಾರಿಯಾಗಿದೆ. ನಿಮ್ಮ ಒತ್ತಡ ಮತ್ತು ಖಿನ್ನತೆಯನ್ನು ದೂರಮಾಡುವ ಮಾಧ್ಯಮ ಕ್ರಿಯೆಯಾಗಿ ಇದು ಕೆಲಸ ಮಾಡುತ್ತದೆ. ಸುಗಂಧವನ್ನು ಬೀರುವ 'ಅಗರಬತ್ತಿ' ಹಿಂದೆ ಅಡಗಿರುವ ಕರಾಳ ಸತ್ಯ
ಸುವಾಸನೆಯನ್ನು ಬೀರುತ್ತದೆ
ಊದುಬುತ್ತಿಯ ಸುವಾಸನೆಯು ಸುತ್ತಲಿನ ಕೆಟ್ಟ ವಾಸನೆಯನ್ನು ದೂರಮಾಡುತ್ತದೆ. ಹಿಂದೂ ಧರ್ಮದಲ್ಲಿ ದೇವತಾ ಕಾರ್ಯಗಳನ್ನು ಮಾಡುವಾಗ ಕೆಟ್ಟವಾಸನೆಗಳನ್ನು ನಿವಾರಿಸಿ ಸುವಾಸನೆಯನ್ನು ಬೀರುತ್ತದೆ. ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳಿಗೆ ಸಂಬಂಧವನ್ನು ಪಡೆದುಕೊಂಡಿರುವ ಅಗರಬತ್ತಿಯು ನೈಸರ್ಗಿಕ ಕ್ರಿಮಿ ನಾಶಕವಾಗಿ ಕೂಡ ಕೆಲಸ ಮಾಡುತ್ತದೆ.
ಇತರ ಕಾರಣಗಳು
ಊದುಬತ್ತಿಯು ಹಿಂದೂ ಧರ್ಮದ ಆಚರಣೆಗಳ ಒಂದು ಭಾಗವಾಗಿ ಮಾತ್ರ ಕಾರ್ಯನಿರ್ವಹಿಸುವುದಿಲ್ಲ. ಈಜಿಪ್ಟ್, ಚೀನಾ, ಟಿಬೇಟಿಯನ್ ಸಂಸ್ಕೃತಿಗಳಲ್ಲಿ ಹಲವಾರು ಶತಮಾನಗಳಿಂದ ಇದನ್ನು ಬಳಸಿಕೊಳ್ಳಲಾಗುತ್ತಿದೆ.
ಇವರುಗಳು ತಮ್ಮ ಧಾರ್ಮಿಕ ಕೆಲಸಗಳಲ್ಲೂ ಇದನ್ನು ಬಳಸಿಕೊಳ್ಳುವುದಲ್ಲದೆ ಆರ್ಮೊಥೆರಪಿಗೂ ಉಪಯೋಗಿಸುತ್ತಾರೆ. ಮುಂದಿನ ಬಾರಿ ಊದುಬತ್ತಿಯನ್ನು ಉರಿಸುವಾಗ ಇದು ಹಲವಾರು ವಿಧಾನದಲ್ಲಿ ಬಳಕೆಯಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.



Click it and Unblock the Notifications

