Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಝೆನ್ ಕಥೆ : ಮಹಾನುಭಾವ, ಇದೇ ಅಹಂಕಾರ!

ಎಷ್ಟೇ ಯಶಸ್ಸು, ಕೀರ್ತಿ ಲಭಿಸಿದ್ದರೂ ಪ್ರಧಾನಿ ಆಗಾಗ ತನಗೆ ಆಪ್ತರಾದ ಝೆನ್ ಗುರುಗಳ ಬಳಿ ಅಧ್ಯಯನಕ್ಕೆಂದು ಬರುತ್ತಿದ್ದ. ಆಡಳಿತಕ್ಕೆ ಸಂಬಂಧಿಸಿದಂತೆ ರಾಜ್ಯದ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಆಗಾಗ ಝೆನ್ ಗುರುಗಳ ಬಳಿ ಉಪದೇಶ ಯಾಚಿಸುತ್ತಿದ್ದ. ಅವರಿಬ್ಬರ ನಡುವೆ ಯಾವುದೇ ಹಮ್ಮಿಬಿಮ್ಮುಗಳಿರಲಿಲ್ಲ. ಗುರು ಮತ್ತು ಶಿಷ್ಯ ಸಂಬಂಧದ ಹೊರತಾಗಿ ಅವರಿಬ್ಬರ ನಡುವೆ ಯಾವುದೇ ವ್ಯಾವಹಾರಿಕ ಸಂಬಂಧವಿರಲಿಲ್ಲ.
ಒಂದು ದಿನ ಅವನ ಸಾಮಾನ್ಯ ಭೇಟಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯು ಝೆನ್ ಗುರುವನ್ನು ಕೇಳಿದ, "ಗುರುಗಳೆ, ಬುದ್ಧ ತತ್ವದ ಪ್ರಕಾರ ಅಹಂಕಾರ ಎಂದರೆ ಏನು?" ಗುರುವಿನ ಮುಖ ಕೆಂಪಾಯಿತು, ಸಿಟ್ಟಿನಿಂದ ಪ್ರಧಾನಿಯನ್ನು ಅವಮಾನಿಸುವ ರೀತಿಯಲ್ಲಿ "ಇದೆಂಥಾ ಮೂರ್ಖ ಪ್ರಶ್ನೆ?" ಎಂದು ಏರು ದನಿಯಲ್ಲಿ ಮರು ಪ್ರಶ್ನೆ ಹಾಕಿದರು.
ಇಂಥ ಪ್ರತಿಕ್ರಿಯೆಯನ್ನು ಪ್ರಧಾನಿ ನಿರೀಕ್ಷಿಸಿರಲಿಲ್ಲ. ಈ ಅನಿರೀಕ್ಷಿತ ಪ್ರಶ್ನೆಯು ಪ್ರಧಾನಿಗೆ ಆಶ್ಚರ್ಯವನ್ನು ತಂದಿತಲ್ಲದೆ, ಸಿಟ್ಟು ಮತ್ತು ಅವಮಾನದಿಂದ ಕುದಿಯಲು ಪ್ರಾರಂಭಿಸಿದ. ಮುಖ ವಿವರ್ಣವಾಯಿತು. ಆಗ ಶಾಂತತೆಯಿಂದ ಝೆನ್ ಗುರು ನಗುತ್ತಾ ಹೇಳಿದ, "ಮಹಾನುಭಾವ, ಇದೇ ಅಹಂಕಾರ!"



Click it and Unblock the Notifications