Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಝೆನ್ ಕಥೆ : ಮಹಾನುಭಾವ, ಇದೇ ಅಹಂಕಾರ!

ಎಷ್ಟೇ ಯಶಸ್ಸು, ಕೀರ್ತಿ ಲಭಿಸಿದ್ದರೂ ಪ್ರಧಾನಿ ಆಗಾಗ ತನಗೆ ಆಪ್ತರಾದ ಝೆನ್ ಗುರುಗಳ ಬಳಿ ಅಧ್ಯಯನಕ್ಕೆಂದು ಬರುತ್ತಿದ್ದ. ಆಡಳಿತಕ್ಕೆ ಸಂಬಂಧಿಸಿದಂತೆ ರಾಜ್ಯದ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಆಗಾಗ ಝೆನ್ ಗುರುಗಳ ಬಳಿ ಉಪದೇಶ ಯಾಚಿಸುತ್ತಿದ್ದ. ಅವರಿಬ್ಬರ ನಡುವೆ ಯಾವುದೇ ಹಮ್ಮಿಬಿಮ್ಮುಗಳಿರಲಿಲ್ಲ. ಗುರು ಮತ್ತು ಶಿಷ್ಯ ಸಂಬಂಧದ ಹೊರತಾಗಿ ಅವರಿಬ್ಬರ ನಡುವೆ ಯಾವುದೇ ವ್ಯಾವಹಾರಿಕ ಸಂಬಂಧವಿರಲಿಲ್ಲ.
ಒಂದು ದಿನ ಅವನ ಸಾಮಾನ್ಯ ಭೇಟಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯು ಝೆನ್ ಗುರುವನ್ನು ಕೇಳಿದ, "ಗುರುಗಳೆ, ಬುದ್ಧ ತತ್ವದ ಪ್ರಕಾರ ಅಹಂಕಾರ ಎಂದರೆ ಏನು?" ಗುರುವಿನ ಮುಖ ಕೆಂಪಾಯಿತು, ಸಿಟ್ಟಿನಿಂದ ಪ್ರಧಾನಿಯನ್ನು ಅವಮಾನಿಸುವ ರೀತಿಯಲ್ಲಿ "ಇದೆಂಥಾ ಮೂರ್ಖ ಪ್ರಶ್ನೆ?" ಎಂದು ಏರು ದನಿಯಲ್ಲಿ ಮರು ಪ್ರಶ್ನೆ ಹಾಕಿದರು.
ಇಂಥ ಪ್ರತಿಕ್ರಿಯೆಯನ್ನು ಪ್ರಧಾನಿ ನಿರೀಕ್ಷಿಸಿರಲಿಲ್ಲ. ಈ ಅನಿರೀಕ್ಷಿತ ಪ್ರಶ್ನೆಯು ಪ್ರಧಾನಿಗೆ ಆಶ್ಚರ್ಯವನ್ನು ತಂದಿತಲ್ಲದೆ, ಸಿಟ್ಟು ಮತ್ತು ಅವಮಾನದಿಂದ ಕುದಿಯಲು ಪ್ರಾರಂಭಿಸಿದ. ಮುಖ ವಿವರ್ಣವಾಯಿತು. ಆಗ ಶಾಂತತೆಯಿಂದ ಝೆನ್ ಗುರು ನಗುತ್ತಾ ಹೇಳಿದ, "ಮಹಾನುಭಾವ, ಇದೇ ಅಹಂಕಾರ!"



Click it and Unblock the Notifications
