Latest Updates
-
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ!
ಝೆನ್ ಕಥೆ : ಮಹಾನುಭಾವ, ಇದೇ ಅಹಂಕಾರ!

ಎಷ್ಟೇ ಯಶಸ್ಸು, ಕೀರ್ತಿ ಲಭಿಸಿದ್ದರೂ ಪ್ರಧಾನಿ ಆಗಾಗ ತನಗೆ ಆಪ್ತರಾದ ಝೆನ್ ಗುರುಗಳ ಬಳಿ ಅಧ್ಯಯನಕ್ಕೆಂದು ಬರುತ್ತಿದ್ದ. ಆಡಳಿತಕ್ಕೆ ಸಂಬಂಧಿಸಿದಂತೆ ರಾಜ್ಯದ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಆಗಾಗ ಝೆನ್ ಗುರುಗಳ ಬಳಿ ಉಪದೇಶ ಯಾಚಿಸುತ್ತಿದ್ದ. ಅವರಿಬ್ಬರ ನಡುವೆ ಯಾವುದೇ ಹಮ್ಮಿಬಿಮ್ಮುಗಳಿರಲಿಲ್ಲ. ಗುರು ಮತ್ತು ಶಿಷ್ಯ ಸಂಬಂಧದ ಹೊರತಾಗಿ ಅವರಿಬ್ಬರ ನಡುವೆ ಯಾವುದೇ ವ್ಯಾವಹಾರಿಕ ಸಂಬಂಧವಿರಲಿಲ್ಲ.
ಒಂದು ದಿನ ಅವನ ಸಾಮಾನ್ಯ ಭೇಟಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯು ಝೆನ್ ಗುರುವನ್ನು ಕೇಳಿದ, "ಗುರುಗಳೆ, ಬುದ್ಧ ತತ್ವದ ಪ್ರಕಾರ ಅಹಂಕಾರ ಎಂದರೆ ಏನು?" ಗುರುವಿನ ಮುಖ ಕೆಂಪಾಯಿತು, ಸಿಟ್ಟಿನಿಂದ ಪ್ರಧಾನಿಯನ್ನು ಅವಮಾನಿಸುವ ರೀತಿಯಲ್ಲಿ "ಇದೆಂಥಾ ಮೂರ್ಖ ಪ್ರಶ್ನೆ?" ಎಂದು ಏರು ದನಿಯಲ್ಲಿ ಮರು ಪ್ರಶ್ನೆ ಹಾಕಿದರು.
ಇಂಥ ಪ್ರತಿಕ್ರಿಯೆಯನ್ನು ಪ್ರಧಾನಿ ನಿರೀಕ್ಷಿಸಿರಲಿಲ್ಲ. ಈ ಅನಿರೀಕ್ಷಿತ ಪ್ರಶ್ನೆಯು ಪ್ರಧಾನಿಗೆ ಆಶ್ಚರ್ಯವನ್ನು ತಂದಿತಲ್ಲದೆ, ಸಿಟ್ಟು ಮತ್ತು ಅವಮಾನದಿಂದ ಕುದಿಯಲು ಪ್ರಾರಂಭಿಸಿದ. ಮುಖ ವಿವರ್ಣವಾಯಿತು. ಆಗ ಶಾಂತತೆಯಿಂದ ಝೆನ್ ಗುರು ನಗುತ್ತಾ ಹೇಳಿದ, "ಮಹಾನುಭಾವ, ಇದೇ ಅಹಂಕಾರ!"



Click it and Unblock the Notifications