Just In
Don't Miss
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Movies ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಗಳವಾರ ಹೀಗೆ ಮಾಡುವುದರಿಂದ, ಎಲ್ಲಾ ಕಾರ್ಯ ಶುಭವಾಗುತ್ತದೆ!
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಘಳಿಗೆ ಮತ್ತು ದಿನವೂ ತುಂಬಾ ಮಹತ್ವದ್ದಾಗಿರುತ್ತದೆ. ವಾರದ ಏಳು ದಿನಗಳಿಗೂ ಅದರದ್ದೇ ಆಗಿರುವಂತಹ ಮಹತ್ವವಿರುತ್ತದೆ. ಆಯಾಯ ದಿನಗಳ ಮಹತ್ವವನ್ನು ತಿಳಿದುಕೊಂಡು ಅದಕ್ಕೆ ಅನುಸಾರವಾಗಿ ನಡೆದುಕೊಂಡು ಹೋದರೆ ಖಂಡಿತವಾಗಿಯೂ ಯಶಸ್ಸು ಸಿಗುವುದು. ಹಿಂದೂ ಧರ್ಮದಲ್ಲಿ ಮಂಗಳವಾರಕ್ಕೆ ಅದರದ್ದೇ ಆಗಿರುವಂತಹ ಮಹತ್ವವಿದೆ. ಮಂಗಳವಾರವನ್ನು ತುಂಬಾ ಶುಭವೆಂದು ಪರಿಗಣಿಸಲಾಗಿದೆ.
ಮಂಗಳವಾರ ಕೂದಲು ಕತ್ತರಿಸುವುದು ಅಪಶಕುನವೇ?
ಈ ದಿನದಂದು ಹಿಂದೂಗಳು ಗಣೇಶ, ದುರ್ಗಾ, ಕಾಳಿ ಮತ್ತು ಹನುಮಂತನನ್ನು ಪೂಜಿಸುತ್ತಾರೆ. ಕೆಲವರು ದೇವಸ್ಥಾನಗಳಿಗೆ ಹೋದರೆ ಇನ್ನು ಕೆಲವರು ಇಡೀ ದಿನ ಉಪವಾಸವಿರುತ್ತಾರೆ. ಮಂಗಳವಾರವನ್ನು ಮಂಗಳ ಗ್ರಹದ ದಿನವೆಂದು ಪರಿಗಣಿಸಲಾಗಿದೆ. ಆತ ತುಂಬಾ ಸಮಸ್ಯೆಗಳನ್ನು ಉಂಟು ಮಾಡುವವ ಎಂದು ಪರಿಗಣಿಸಲಾಗಿದೆ. ಉಪವಾಸವಿದ್ದರೆ ಆತನಿಂದ ಆಗುವಂತಹ ಹಾನಿಯನ್ನು ತಪ್ಪಿಸಬಹುದು ಎನ್ನಲಾಗಿದೆ. ಮಂಗಳವಾರದ ಮಹತ್ವವೇನು ಮತ್ತು ಅದೃಷ್ಟಕ್ಕಾಗಿ ಜನರು ಏನು ಮಾಡಬೇಕು ಎಂದು ತಿಳಿಯಲು ಮುಂದೆ ಓದುತ್ತಾ ಸಾಗಿ...
ಈ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ!
ಮಂಗಳವಾರ ಕೆಂಪು ಬಣ್ಣಕ್ಕೆ ಸೀಮಿತವಾಗಿದೆ. ಈ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸುವ ವ್ಯಕ್ತಿಗಳು ಒಳ್ಳೆಯ ಅದೃಷ್ಟವನ್ನು ಪಡೆಯುತ್ತಾರೆ.
ಹನುಮಂತ, ಕಾರ್ತಿಕೇಯ, ದುರ್ಗೆಯ ಪೂಜೆ ಮಾಡಿ
ಹನುಮಂತ, ಕಾರ್ತಿಕೇಯ, ದುರ್ಗಾ ಅಥವಾ ಕಾಳಿಯನ್ನು ಒಲೈಸಿಕೊಳ್ಳಲು ಹೆಚ್ಚಿನವರು ಮಂಗಳವಾರದಂದು ಉಪವಾಸ ಮಾಡುತ್ತಾರೆ. ಗಂಡು ಮಗು ಬೇಕೆಂದು ಬಯಸುವ ದಂಪತಿ ಈ ದಿನ ಉಪವಾಸ ಮಾಡಲೇಬೇಕು. ಇಂದು ಉಪವಾಸ ಮಾಡುವುದರಿಂದ ಮಂಗಳ ಗ್ರಹದಿಂದ ಆಗುವಂತಹ ದುಷ್ಪರಿಣಾಮವನ್ನು ತಡೆಯಬಹುದು.
ಒಂದು ಹೊತ್ತಿನ ಊಟ ಮಾತ್ರ ಮಾಡಿ...
ಮಂಗಳವಾರದಂದು ಉಪವಾಸ ವ್ರತ ಮಾಡುವಂತಹವರು ಕೇವಲ ಒಂದು ಹೊತ್ತಿನ ಊಟ ಮಾತ್ರ ಮಾಡಬೇಕು. ಸಂಪೂರ್ಣ ದಿನ ಉಪವಾಸವಿರಬೇಕು. ಗೋಧಿ ಮತ್ತು ಬೆಲ್ಲದಿಂದ ಮಾಡಿದಂತಹ ಫಲಾಹಾರವನ್ನು ಒಂದು ಹೊತ್ತು ಸೇವಿಸಬೇಕು. ಹೆಚ್ಚಿನವರು ಯಾವುದೇ ಅಡೆತಡೆಯಿಲ್ಲದೆ 21 ದಿನಗಳ ಕಾಲ ಉಪವಾಸ ಆಚರಿಸುತ್ತಾರೆ.
ಹನುಮಂತನನ್ನು ಪ್ರಾರ್ಥಿಸಿ
ಮಂಗಳವಾರದಂದು ಹನುಮಂತನಿಗೆ ಭಕ್ತರು ಕೆಂಪು ಹೂವನ್ನು ಸಮರ್ಪಿಸುತ್ತಾರೆ. ಮಂಗಳ ಗ್ರಹದಿಂದ ಉಂಟಾಗುವಂತಹ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಲು ಶಕ್ತಿ ಕೊಡು ಎಂದು ಹನುಮಂತನಲ್ಲಿ ಭಕ್ತರ ಪ್ರಾರ್ಥನೆಯಾಗಿದೆ.
ಇಂದಿಗೂ ಹನುಮಂತನ ಆದರ್ಶ ಗುಣಗಳು ಇಡೀ ಜಗತ್ತಿಗೇ ಮಾದರಿ...
ಉಪವಾಸ ಮಾಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ
ಕೆಲವರು ಮಂಗಳವಾರದಂದು ಕೇವಲ ಸಸ್ಯಾಹಾರ ಮಾತ್ರ ಸೇವಿಸುತ್ತಾರೆ. ಈ ದಿನ ಅವರು ಉಪವಾಸ ಮಾಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಮದುವೆಗೆ ಕೇವಲ ಸೂರ್ಯನ ತಿಂಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಅಧಿಕ ಮಾಸ,ಕ್ಷಯ ಮಾಸ ಮತ್ತು ಚತುರ್ಮಾಸದಂದು ಮದುವೆ ಮಾಡಲಾಗುವುದಿಲ್ಲ. ಚತುರ್ಮಾಸದಲ್ಲಿ ಬರುವಂತಹ ಪಿತೃ ಪಕ್ಷ ಅಥವಾ ಮಹಾಲಯ ಶ್ರಾದ್ಧದಲ್ಲಿ ಶುಭ ಕಾರ್ಯಗಳು ನಡೆಯುವುದಿಲ್ಲ.
ಮದುವೆ ಕಾರ್ಯಕ್ರಮಗಳಿಗೆ ಮಂಗಳವಾರ ಒಳ್ಳೆಯ ದಿನವಲ್ಲ
ಮದುವೆಗೆ ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಶುಭವೆಂದು ಪರಿಗಣಿಸಲಾಗಿದೆ. ಮದುವೆಗೆ ಮಂಗಳವಾರ ಒಳ್ಳೆಯ ದಿನವಲ್ಲ.