For Quick Alerts
ALLOW NOTIFICATIONS  
For Daily Alerts

ಮಂಗಳವಾರ ಹೀಗೆ ಮಾಡುವುದರಿಂದ, ಎಲ್ಲಾ ಕಾರ್ಯ ಶುಭವಾಗುತ್ತದೆ!

By Hemanth
|
Tuesday Do These Things On Tuesday To Be Lucky | BoldSky Kannada

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಘಳಿಗೆ ಮತ್ತು ದಿನವೂ ತುಂಬಾ ಮಹತ್ವದ್ದಾಗಿರುತ್ತದೆ. ವಾರದ ಏಳು ದಿನಗಳಿಗೂ ಅದರದ್ದೇ ಆಗಿರುವಂತಹ ಮಹತ್ವವಿರುತ್ತದೆ. ಆಯಾಯ ದಿನಗಳ ಮಹತ್ವವನ್ನು ತಿಳಿದುಕೊಂಡು ಅದಕ್ಕೆ ಅನುಸಾರವಾಗಿ ನಡೆದುಕೊಂಡು ಹೋದರೆ ಖಂಡಿತವಾಗಿಯೂ ಯಶಸ್ಸು ಸಿಗುವುದು. ಹಿಂದೂ ಧರ್ಮದಲ್ಲಿ ಮಂಗಳವಾರಕ್ಕೆ ಅದರದ್ದೇ ಆಗಿರುವಂತಹ ಮಹತ್ವವಿದೆ. ಮಂಗಳವಾರವನ್ನು ತುಂಬಾ ಶುಭವೆಂದು ಪರಿಗಣಿಸಲಾಗಿದೆ.

ಮಂಗಳವಾರ ಕೂದಲು ಕತ್ತರಿಸುವುದು ಅಪಶಕುನವೇ?

ಈ ದಿನದಂದು ಹಿಂದೂಗಳು ಗಣೇಶ, ದುರ್ಗಾ, ಕಾಳಿ ಮತ್ತು ಹನುಮಂತನನ್ನು ಪೂಜಿಸುತ್ತಾರೆ. ಕೆಲವರು ದೇವಸ್ಥಾನಗಳಿಗೆ ಹೋದರೆ ಇನ್ನು ಕೆಲವರು ಇಡೀ ದಿನ ಉಪವಾಸವಿರುತ್ತಾರೆ. ಮಂಗಳವಾರವನ್ನು ಮಂಗಳ ಗ್ರಹದ ದಿನವೆಂದು ಪರಿಗಣಿಸಲಾಗಿದೆ. ಆತ ತುಂಬಾ ಸಮಸ್ಯೆಗಳನ್ನು ಉಂಟು ಮಾಡುವವ ಎಂದು ಪರಿಗಣಿಸಲಾಗಿದೆ. ಉಪವಾಸವಿದ್ದರೆ ಆತನಿಂದ ಆಗುವಂತಹ ಹಾನಿಯನ್ನು ತಪ್ಪಿಸಬಹುದು ಎನ್ನಲಾಗಿದೆ. ಮಂಗಳವಾರದ ಮಹತ್ವವೇನು ಮತ್ತು ಅದೃಷ್ಟಕ್ಕಾಗಿ ಜನರು ಏನು ಮಾಡಬೇಕು ಎಂದು ತಿಳಿಯಲು ಮುಂದೆ ಓದುತ್ತಾ ಸಾಗಿ...

ಈ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ!

ಈ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ!

ಮಂಗಳವಾರ ಕೆಂಪು ಬಣ್ಣಕ್ಕೆ ಸೀಮಿತವಾಗಿದೆ. ಈ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸುವ ವ್ಯಕ್ತಿಗಳು ಒಳ್ಳೆಯ ಅದೃಷ್ಟವನ್ನು ಪಡೆಯುತ್ತಾರೆ.

ಹನುಮಂತ, ಕಾರ್ತಿಕೇಯ, ದುರ್ಗೆಯ ಪೂಜೆ ಮಾಡಿ

ಹನುಮಂತ, ಕಾರ್ತಿಕೇಯ, ದುರ್ಗೆಯ ಪೂಜೆ ಮಾಡಿ

ಹನುಮಂತ, ಕಾರ್ತಿಕೇಯ, ದುರ್ಗಾ ಅಥವಾ ಕಾಳಿಯನ್ನು ಒಲೈಸಿಕೊಳ್ಳಲು ಹೆಚ್ಚಿನವರು ಮಂಗಳವಾರದಂದು ಉಪವಾಸ ಮಾಡುತ್ತಾರೆ. ಗಂಡು ಮಗು ಬೇಕೆಂದು ಬಯಸುವ ದಂಪತಿ ಈ ದಿನ ಉಪವಾಸ ಮಾಡಲೇಬೇಕು. ಇಂದು ಉಪವಾಸ ಮಾಡುವುದರಿಂದ ಮಂಗಳ ಗ್ರಹದಿಂದ ಆಗುವಂತಹ ದುಷ್ಪರಿಣಾಮವನ್ನು ತಡೆಯಬಹುದು.

ಒಂದು ಹೊತ್ತಿನ ಊಟ ಮಾತ್ರ ಮಾಡಿ...

ಒಂದು ಹೊತ್ತಿನ ಊಟ ಮಾತ್ರ ಮಾಡಿ...

ಮಂಗಳವಾರದಂದು ಉಪವಾಸ ವ್ರತ ಮಾಡುವಂತಹವರು ಕೇವಲ ಒಂದು ಹೊತ್ತಿನ ಊಟ ಮಾತ್ರ ಮಾಡಬೇಕು. ಸಂಪೂರ್ಣ ದಿನ ಉಪವಾಸವಿರಬೇಕು. ಗೋಧಿ ಮತ್ತು ಬೆಲ್ಲದಿಂದ ಮಾಡಿದಂತಹ ಫಲಾಹಾರವನ್ನು ಒಂದು ಹೊತ್ತು ಸೇವಿಸಬೇಕು. ಹೆಚ್ಚಿನವರು ಯಾವುದೇ ಅಡೆತಡೆಯಿಲ್ಲದೆ 21 ದಿನಗಳ ಕಾಲ ಉಪವಾಸ ಆಚರಿಸುತ್ತಾರೆ.

ಹನುಮಂತನನ್ನು ಪ್ರಾರ್ಥಿಸಿ

ಹನುಮಂತನನ್ನು ಪ್ರಾರ್ಥಿಸಿ

ಮಂಗಳವಾರದಂದು ಹನುಮಂತನಿಗೆ ಭಕ್ತರು ಕೆಂಪು ಹೂವನ್ನು ಸಮರ್ಪಿಸುತ್ತಾರೆ. ಮಂಗಳ ಗ್ರಹದಿಂದ ಉಂಟಾಗುವಂತಹ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಲು ಶಕ್ತಿ ಕೊಡು ಎಂದು ಹನುಮಂತನಲ್ಲಿ ಭಕ್ತರ ಪ್ರಾರ್ಥನೆಯಾಗಿದೆ.

ಇಂದಿಗೂ ಹನುಮಂತನ ಆದರ್ಶ ಗುಣಗಳು ಇಡೀ ಜಗತ್ತಿಗೇ ಮಾದರಿ...

ಉಪವಾಸ ಮಾಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ

ಉಪವಾಸ ಮಾಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ

ಕೆಲವರು ಮಂಗಳವಾರದಂದು ಕೇವಲ ಸಸ್ಯಾಹಾರ ಮಾತ್ರ ಸೇವಿಸುತ್ತಾರೆ. ಈ ದಿನ ಅವರು ಉಪವಾಸ ಮಾಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಮದುವೆಗೆ ಕೇವಲ ಸೂರ್ಯನ ತಿಂಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಅಧಿಕ ಮಾಸ,ಕ್ಷಯ ಮಾಸ ಮತ್ತು ಚತುರ್ಮಾಸದಂದು ಮದುವೆ ಮಾಡಲಾಗುವುದಿಲ್ಲ. ಚತುರ್ಮಾಸದಲ್ಲಿ ಬರುವಂತಹ ಪಿತೃ ಪಕ್ಷ ಅಥವಾ ಮಹಾಲಯ ಶ್ರಾದ್ಧದಲ್ಲಿ ಶುಭ ಕಾರ್ಯಗಳು ನಡೆಯುವುದಿಲ್ಲ.

ಮದುವೆ ಕಾರ್ಯಕ್ರಮಗಳಿಗೆ ಮಂಗಳವಾರ ಒಳ್ಳೆಯ ದಿನವಲ್ಲ

ಮದುವೆ ಕಾರ್ಯಕ್ರಮಗಳಿಗೆ ಮಂಗಳವಾರ ಒಳ್ಳೆಯ ದಿನವಲ್ಲ

ಮದುವೆಗೆ ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಶುಭವೆಂದು ಪರಿಗಣಿಸಲಾಗಿದೆ. ಮದುವೆಗೆ ಮಂಗಳವಾರ ಒಳ್ಳೆಯ ದಿನವಲ್ಲ.

ಮದುವೆ ವಿಳಂಬವಾಗುತ್ತಿದೆಯೇ? ಇಲ್ಲಿದೆ ಪರಿಹಾರ ಓದಿ....

English summary

Things every Hindu should do on Tuesday

Those people who fast avoid taking food containing salt at night. Tuesday or Mangalwar takes its name from the God Mangal or Mars who rules the day and is considered to be a trouble maker, and the fast is to ward off the harmful effects. Click on this slide show to know why this day is so important and what should people do today for good luck….
X
Desktop Bottom Promotion