Latest Updates
-
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ!
'ದುಷ್ಟ ಶಕ್ತಿ'ಯಿಂದ ರಕ್ಷಣೆ ನೀಡುವ ದಾರಗಳಿವು! ಕೈಗೆ ಕಟ್ಟಿ ನೋಡಿ
ಹಿಂದೂ ಧರ್ಮದಲ್ಲಿ ಅನೇಕ ಶಾಸ್ತ್ರ-ಸಂಪ್ರದಾಯಗಳಿವೆ. ಪ್ರತಿಯೊಂದು ತನ್ನದೇ ಆದ ಪವಿತ್ರ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಅದರಲ್ಲಿ ಮೌಲಿ ಧರಿಸುವುದು ಒಂದು. ಅನೇಕರು ಮಣಿಕಟ್ಟಿನ ಮೇಲೆ ಕೆಂಪು, ಹಳದಿ, ಕಪ್ಪು ಮತ್ತು ಕಿತ್ತಳೆ ಬಣ್ಣದ ದಾರವನ್ನು ಕಟ್ಟಿಕೊಂಡಿರುವುದನ್ನು ಕಂಡಿರುತ್ತೇವೆ. ಈ ಪವಿತ್ರ ದಾರವನ್ನು ಕಲಾವ ಅಥವಾ ಮೌಲಿ ಎಂದು ಕರೆಯುತ್ತಾರೆ.
ಇದರ ಮಹತ್ವ ಅಪಾರವಾದದ್ದು. ಇವುಗಳನ್ನು ಕಟ್ಟಿಕೊಳ್ಳುವುದರಿಂದ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಲಕ್ಷ್ಮಿ, ಪಾರ್ವತಿ, ಸರಸ್ವತಿಯರ ಆಶೀರ್ವಾದಗಳು ಆಕರ್ಷಿತವಾಗುತ್ತವೆ ಎನ್ನಲಾಗುತ್ತದೆ. ಇದನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಉಂಟಾಗುವ ಉಪಯೋಗ ಹಾಗೂ ಮಹತ್ವದ ಬಗೆಗಿನ ಕಿರು ಪರಿಚಯ ಇಲ್ಲಿದೆ ನೋಡಿ....

ಪುರಾಣ ಕಥೆಗಳ ಪ್ರಕಾರ...
ವಿಷ್ಣುವಿನ ಅವತಾರ ಎನಿಸಿಕೊಂಡ ವಾಮನನು ಬಲಿ ರಾಜನ ಕೈಗೆ (ಮಣಿಕಟ್ಟಿನ ಮೇಲೆ) ಈ ದಾರವನ್ನು ಕಟ್ಟಿದ್ದನು ಎನ್ನಲಾಗುತ್ತದೆ.

ಹಳದಿ ಮತ್ತು ಕೆಂಪು ದಾರ ಮಂಗಳಕರ
ಪುರಾತನ ಕಾಲದಿಂದಲೂ ಮಂಗಳಕರ ಎನ್ನುವ ಹಳದಿ ಮತ್ತು ಕೆಂಪು ದಾರವನ್ನು ಕಟ್ಟಿಕೊಳ್ಳುವ ಸಂಪ್ರದಾಯ ಅಸ್ತಿತ್ವಕ್ಕೆ ಬಂದಿತ್ತು ಎನ್ನಲಾಗುತ್ತದೆ.

ಶತ್ರುಗಳ ಕಾಟ ತಪ್ಪಿಸುತ್ತದೆ...
ಕೆಂಪು ದಾರವನ್ನು ಕಾಳವೆ ಎಂದು ಕರೆಯುತ್ತಾರೆ. ಈ ಬಣ್ಣ ದೀರ್ಘ ಜೀವನ, ಜೀವಂತಿಕೆ ಮತ್ತು ಶತ್ರುಗಳ ವಿರುದ್ಧ ಸಂರಕ್ಷಿಸುತ್ತದೆ.

ಈ ದಾರ ಕಟ್ಟುವ ವಿಧಾನ...
ಈ ದಾರವನ್ನು ಪುರುಷರು ಮತ್ತು ಅವಿವಾಹಿತ ಮಹಿಳೆಯರ ಬಲಗೈ ಮಣಿಕಟ್ಟಿನ ಮೇಲೆ ಕಟ್ಟುತ್ತಾರೆ. ವಿವಾಹಿತ ಮಹಿಳೆಯರಾಗಿದ್ದರೆ ಎಡಗೈ ಮಣಿಕಟ್ಟಿನ ಮೇಲೆ ಕಟ್ಟಬೇಕು..

ಕಿತ್ತಳೆ, ಹಳದಿ, ಕೆಂಪು ಬಣ್ಣಗಳ ದಾರ
ಕಿತ್ತಳೆ, ಹಳದಿ, ಕೆಂಪು ಬಣ್ಣಗಳ ದಾರವನ್ನು ಹಿಂದೂ ಧರ್ಮದಲ್ಲಿ ಮಂಗಳಕರ ಎಂದು ಪರಿಗಣಿಸುತ್ತಾರೆ. ಅಲ್ಲದೆ ಇವು ಗುರು, ಮಂಗಳ ಮತ್ತು ಸೂರ್ಯನಿಗೆ ಹೆಚ್ಚು ಪ್ರಾಶಸ್ತ್ಯವಾದವು ಎನ್ನಲಾಗುತ್ತದೆ.



Click it and Unblock the Notifications