Just In
Don't Miss
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದಾದ ಮೇಲೊಂದು ಕಷ್ಟಗಳು ಬರುತ್ತಿದೆಯೇ? ಹಾಗಾದರೆ ಹೀಗೆ ಮಾಡಿ...
ನಾವು ಹುಟ್ಟಿದ ಘಳಿಗೆಯಿಂದಲೇ ನಮ್ಮ ಅದೃಷ್ಟ ನಿರ್ಧಾರವಾಗುತ್ತದೆ. ಹಾಗಂತ ಹುಟ್ಟಿದ ಸಮಯವನ್ನು ಬದಲಾಯಿಸಲಾಗುವುದಿಲ್ಲ. ನಾವು ಹೇಗೆ ಜೀವನವನ್ನು ಎದುರಿಸಬೇಕು ಎನ್ನುವುದನ್ನು ಶನಿದೇವರು ಕಲಿಸುತ್ತಾನೆ. ಜೀವನದಲ್ಲಿ ಯಾರು ಹೆಚ್ಚು ಶ್ರಮಪಡುತ್ತಾರೆ? ಯಾರಿಗೆ ಸಹಾನುಭೂತಿಯ ಗುಣವಿದೆ? ಅಂತಹವರನ್ನು ದೇವರು ಪ್ರೀತಿಸುತ್ತಾನೆ ಎನ್ನುವ ನಂಬಿಕೆಯಿದೆ. ಅಲ್ಲದೆ ಜೀವಿತಾವಧಿಯಲ್ಲಿ ತಿಳಿಯದೇ ಅಥವಾ ತಿಳುವಳಿಕೆ ಇಲ್ಲದೆ ಮಾಡಿರುವ ಕೆಲಸಗಳಿಗೆ ಕ್ಷಮಿಸುತ್ತಾನೆ.
'ಸಾಡೇ ಸಾತಿ' ಇದು ಶನಿ ದೇವನ ಇನ್ನೊಂದು ಅಗ್ನಿ ಪರೀಕ್ಷೆ!
ಮಾಡಿದ ತಪ್ಪುಗಳಿಗೆ ಶನಿದೇವರಲ್ಲಿ ಕ್ಷಮೆಯಾಚಿಸಲು ಶನಿವಾರ ಸೂಕ್ತ ಕಾಲ. ಶನಿ ದೇವರ ಪ್ರೀತಿಗೆ ಒಳಗಾದರೆ ಉತ್ತಮ ಭವಿಷ್ಯ ನಮ್ಮದಾಗುತ್ತದೆ. ಶನಿದೇವನನ್ನು ಸಂತೋಷಗೊಳಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು. ಆಗ ಸಮಸ್ಯೆಗಳು ಮಂಜಿನಂತೆ ಕರಗುತ್ತವೆ ಎಂದು ಜ್ಯೋತಿಷ್ಯ ಹೇಳುತ್ತದೆ. ಹಾಗಾದರೆ ಆ ಕೆಲವು ಕ್ರಮಗಳು ಯಾವುದೆಂದು ತಿಳಿಯಲು ಮುಂದೆ ಓದಿ....
ಮೊಸರನ್ನ ದಾನ ಮಾಡಿ...
ಶನಿವಾರದಂದು ಶನಿ ದೇವಾಲಯಕ್ಕೆ ಅಥವಾ ಬಡವರಿಗೆ ನೀವೇ ತಯಾರಿಸಿರುವ ಮೊಸರನ್ನವನ್ನು ದಾನ ಮಾಡಿ....
ಕರಿ ಎಳ್ಳು...
ಕಪ್ಪು ಬಟ್ಟೆಯೊಂದರಲ್ಲಿ ಸ್ವಲ್ಪ ಕರಿ ಎಳ್ಳನ್ನು ಕಟ್ಟಿ, ಎಳ್ಳೆಣ್ಣೆಯಲ್ಲಿ ಅದ್ದಿ. ಅದನ್ನು ಸಮೀಪದ ಶನಿ ದೇವಾಲಯದಲ್ಲಿ ದೀಪದಂತೆ ಬೆಳಗಿಸಿ.
ಶನಿದೇವನ ಇಷ್ಟದ ಬಣ್ಣ ಕಪ್ಪು...
ಶನಿದೇವನ ಇಷ್ಟದ ಬಣ್ಣವೆಂದರೆ ಕಪ್ಪು. ಆದ್ದರಿಂದ ಶನಿವಾರದಂದು ಕಪ್ಪುಬಟ್ಟೆಯನ್ನು ತೊಡುವ ಮೂಲಕ ಶನಿದೇವನನ್ನು ಒಲಿಸಿಕೊಳ್ಳಲು ಸುಲಭವಾಗುವುದು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಜೊತೆಗೇ, ಶನಿವಾರದಂದು ಚರ್ಮದ ಅಥವಾ ಕಪ್ಪು ಬಣ್ಣದ ಯಾವುದೇ ವಸ್ತುಗಳನ್ನು ಖರೀದಿಸದಿರುವುದು ಉತ್ತಮ.
ಅಂಗವಿಕಲರಿಗೆ ಸಹಾಯ ಮಾಡಿ...
ಕುಷ್ಠರೋಗಿಗಳಿಗೆ ಅಥವಾ ಅಂಗವಿಕಲರಿಗೆ ಯಾವುದೇ ರೀತಿಯಲ್ಲಾದರೂ ಆರ್ಥಿಕ ಸಹಾಯ ಮಾಡಿ.
ಶನಿವಾರ ಯಾವುದೇ ಅಡುಗೆ ಎಣ್ಣೆಯನ್ನು ಖರೀದಿಸಬೇಡಿ
ಶನಿವಾರ ಯಾವುದೇ ಲೋಹ ಮತ್ತು ಅಡುಗೆ ಎಣ್ಣೆಯನ್ನು ಖರೀದಿಸದಿರಿ.
ಕಾಗೆಗೆ ಅನ್ನ ಹಾಕಿ
ಪ್ರತಿದಿನ ಕಾಗೆಗೆ ಅನ್ನ ಹಾಕಿ. ಕಾಗೆಯನ್ನು ಶನಿದೇವ ಎಂದು ಪರಿಗಣಿಸಲಾಗುತ್ತದೆ.
ಶನಿ ಮ೦ತ್ರ ಪಠಿಸಿ
"ನೀಲಾ೦ಜನ ಸ೦ಭಾಸ೦ ರವಿಪುತ್ರ೦ ಯಮಾಗ್ರಜ೦ ಛಾಯಾ ಮಾರ್ತ೦ಡ ಸ೦ಭೂತ೦ ತ೦ ನಮಾಮಯೇ ಶನೈಶ್ಚರ೦" ಈ ಮ೦ತ್ರವನ್ನು ಶನಿವಾರಗಳ೦ದು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಪಠಿಸಿರಿ. ಈ ಮ೦ತ್ರವನ್ನು ಕನಿಷ್ಟ ಪಕ್ಷ ನೂರಾ ಎ೦ಟು ಬಾರಿಯಾದರೂ ಪಠಿಸಲು ನೀವು ಪ್ರಯತ್ನವನ್ನು ಮಾಡಬೇಕು.
ಶನಿದೇವರಿಗೆ ಬಡವರೇ ಪ್ರಿಯರು
ಶನಿದೇವನಿಗೆ ಬಡವರು ಮತ್ತು ಬಲ್ಲಿದರು ಇಷ್ಟವಾಗಿದ್ದು ಅವರಿಗೆ ಹೆಚ್ಚಿನ ಸಹಾಯ ಮಾಡುತ್ತಾನೆಂದು ನಂಬಲಾಗಿದೆ. ಬಡವರಿಗೆ ನೆರವಾಗುವ ಮೂಲಕ ಶನಿದೇವನನ್ನು ಒಲಿಸಿಕೊಳ್ಳಬಹುದು ಮತ್ತು ಶನಿದೋಷದಿಂದ ಮುಕ್ತಿ ಹೊಂದಬಹುದು ಎಂದು ಭಾವಿಸುವ ಭಕ್ತರು ಬಡಬಗ್ಗರಿಗೆ ಅಗತ್ಯವಿವಸ್ತುಗಳನ್ನು ದಾನರೂಪದಲ್ಲಿ ನೀಡುವ ಮೂಲಕ ಶನಿಯ ಪ್ರಭಾವದಿಂದ ಹೊರಬರಲು ಯತ್ನಿಸುತ್ತಾರೆ. ಬಡವರಿಗೆ ಬಟ್ಟೆ ಅಥವಾ ಹಣವನ್ನು ಶನಿವಾರದಂದು ನೀಡಲಾಗುತ್ತದೆ. ಪರ್ಯಾಯವಾಗಿ ಬಡವರಿಗೆ ಕಪ್ಪು ಬಟ್ಟೆಯ ಚಿಕ್ಕ ತುಂಡನ್ನೂ ದಾನರೂಪದಲ್ಲಿ ಬಡಬಗ್ಗರಿಗೆ ನೀಡಬಹುದು.
ಹನುಮ೦ತನನ್ನು ಆರಾಧಿಸಿ
ಮ೦ಗಳವಾರ ಹಾಗೂ ಶನಿವಾರಗಳ೦ದು ಭಗವಾನ್ ಹನುಮ೦ತನನ್ನು ಆರಾಧಿಸುವುದರಿ೦ದ ಶನಿಯು ಶಾ೦ತನಾಗಲು ನೆರವಾಗುತ್ತದೆ. ಜೊತೆಗೆ, ಪ್ರತಿದಿನವೂ ಹನುಮಾನ್ ಚಾಲೀಸಾವನ್ನು ಪಠಿಸುವುದರಿ೦ದ ಶನಿದೇವನಿ೦ದ ಸ೦ಭವಿಸಬಹುದಾದ ವೈಪರೀತ್ಯಗಳು ಉಪಶಮನಗೊಳ್ಳಲು ನೆರವಾಗುತ್ತದೆ.
ಶನಿ ದೋಷವಿದ್ದಲ್ಲಿ, ಹನುಮಂತನನ್ನು ನೆನೆಯಿರಿ, ಸಂಕಷ್ಟ ಪರಿಹಾರವಾಗುವುದು