Latest Updates
-
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ!
ಧ್ಯಾನ ಮಾಡುವಾಗ ಬೆಕ್ಕನ್ನು ಕಟ್ಟಿಹಾಕಬೇಕಾ?

ಯಾವ ಕಾರಣಕ್ಕೆ ಅಂತಹ ಆಚರಣೆಗಳನ್ನು ಕಣ್ಮುಚ್ಚಿಕೊಂಡು ಆಚರಿಸಿಕೊಂಡು ಬರಲಾಗುತ್ತಿತ್ತು ಎಂದು ತಿಳಿಯುವ ಕುತೂಹಲ ಕೂಡ ಅನೇಕರಲ್ಲಿ ಇರುವುದಿಲ್ಲ. ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಅರಿಯುವ ತಾಳ್ಮೆಯೂ ಇರುವುದಿಲ್ಲ. ಕೆಲ ಆಚರಣೆಗಳು ಅರ್ಥಹೀನವಾಗಿದ್ದರೂ, ಅಜ್ಜ ನೆಟ್ಟ ಆಲದ ಮರಕ್ಕೆ ಜೋತುಬೀಳುವವರ ಸಂಖ್ಯೆಯೇನು ಕಡಿಮೆಯಿಲ್ಲ.
ಅರ್ಥವಿಲ್ಲದ ಆಚರಣೆಗಳನ್ನು ಇಂದಿನ ಆಧುನಿಕ ಯುಗದಲ್ಲಿ ಕೂಡ ಆಚರಿಸುವುದು ಎಷ್ಟು ಸರಿ? ಇಂಥವುಗಳನ್ನು ಹಿಂಬಾಲಿಸುವವರ ಮನೋಧರ್ಮವನ್ನು ಬದಲಾಯಿಸುವುದು ಹೇಗೆ? ಇದನ್ನೆಲ್ಲ ಚಿಂತಿಸುತ್ತಿರುವಾಗ ಚಿಂತನೆಗೆ ಹಚ್ಚುವ ಝೆನ್ ಕಥೆಯೊಂದು ನೆನಪಾಗುತ್ತದೆ.
ಒಂದಾನೊಂದು ಕಾಲದಲ್ಲಿ ಆಧ್ಯಾತ್ಮಿಕ ಗುರುವೊಬ್ಬರು ಗುರುಕುಲ ನಡೆಸುತ್ತಿದ್ದರು. ಒಂದು ದಿನ ಸಂಜೆ ಆಧ್ಯಾತ್ಮಿಕ ಗುರುವು ತನ್ನ ಶಿಷ್ಯರೊಂದಿಗೆ ಧ್ಯಾನವನ್ನು ಆರಂಭಿಸಿದರು. ಆಗ ಆ ಮಠದೊಳಗೆ ಇದ್ದ ತುಂಟ ಬೆಕ್ಕು ತುಂಬಾ ಶಬ್ಧ ಮಾಡುತ್ತಿತ್ತು. ಇದರಿಂದ ಅವರ ಧ್ಯಾನಕ್ಕೆ ಅಡಚಣೆ ಉಂಟಾಯಿತು.
ಇದರ ಬಗ್ಗೆ ಚಿಂತಿಸಿದ ಗುರುಗಳು ಸಂಜೆ ಅಭ್ಯಾಸದ ಸಮಯದಲ್ಲಿ ಆ ಬೆಕ್ಕನ್ನು ಕಟ್ಟಿ ಹಾಕುವಂತೆ ಆಜ್ಞೆ ಹೊರಡಿಸಿದರು. ಹಲವು ವರ್ಷಗಳ ನಂತರ ಆ ಗುರುಗಳು ನಿಧನ ಹೊಂದಿದರು. ಆದರೆ ಧ್ಯಾನದ ಸಮಯದಲ್ಲಿ ಆ ಬೆಕ್ಕನ್ನು ಕಟ್ಟಿ ಹಾಕುವುದು ಹಾಗೆಯೇ ಮುಂದುವರೆಯಿತು.
ಮತ್ತು ಅಂತಿಮವಾಗಿ ಒಂದು ದಿನ ಆ ಬೆಕ್ಕು ಸಹ ಒಂದು ದಿನ ಮರಣ ಹೊಂದಿತು. ಆದರೆ ಮಠದ ವಾಸಿಗಳು ಸುಮ್ಮನಾಗಲಿಲ್ಲ. ನಂತರ ಆ ಮಠಕ್ಕೆ ಮತ್ತೊಂದು ಬೆಕ್ಕನ್ನು ಕರೆತಂದರು. ಮತ್ತು ಅದನ್ನೂ ಹಿಂದೆ ಗುರುಗಳು ಕಟ್ಟುತ್ತಿದ್ದ ಹಾಗೆ ಕಟ್ಟಲು ಆರಂಭಿಸಿದರು.
ಶತ ಶತಮಾನಗಳು ಕಳೆದವು. ಆಧ್ಯಾತ್ಮ ಗುರುಗಳ ವಂಶಸ್ಥರು "ಧ್ಯಾನ ಮತ್ತು ಅಭ್ಯಾಸವನ್ನು ಮಾಡುವಾಗ ಬೆಕ್ಕನ್ನು ಕಟ್ಟಿಹಾಕಬೇಕು" ಎಂಬುದರ ಬಗ್ಗೆ ವಿದ್ವತ್ಪೂರ್ಣವಾದ, ಶ್ರೇಷ್ಠ ಗ್ರಂಥಗಳನ್ನು ಬರೆದರು.



Click it and Unblock the Notifications











