Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಧ್ಯಾನ ಮಾಡುವಾಗ ಬೆಕ್ಕನ್ನು ಕಟ್ಟಿಹಾಕಬೇಕಾ?

ಯಾವ ಕಾರಣಕ್ಕೆ ಅಂತಹ ಆಚರಣೆಗಳನ್ನು ಕಣ್ಮುಚ್ಚಿಕೊಂಡು ಆಚರಿಸಿಕೊಂಡು ಬರಲಾಗುತ್ತಿತ್ತು ಎಂದು ತಿಳಿಯುವ ಕುತೂಹಲ ಕೂಡ ಅನೇಕರಲ್ಲಿ ಇರುವುದಿಲ್ಲ. ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಅರಿಯುವ ತಾಳ್ಮೆಯೂ ಇರುವುದಿಲ್ಲ. ಕೆಲ ಆಚರಣೆಗಳು ಅರ್ಥಹೀನವಾಗಿದ್ದರೂ, ಅಜ್ಜ ನೆಟ್ಟ ಆಲದ ಮರಕ್ಕೆ ಜೋತುಬೀಳುವವರ ಸಂಖ್ಯೆಯೇನು ಕಡಿಮೆಯಿಲ್ಲ.
ಅರ್ಥವಿಲ್ಲದ ಆಚರಣೆಗಳನ್ನು ಇಂದಿನ ಆಧುನಿಕ ಯುಗದಲ್ಲಿ ಕೂಡ ಆಚರಿಸುವುದು ಎಷ್ಟು ಸರಿ? ಇಂಥವುಗಳನ್ನು ಹಿಂಬಾಲಿಸುವವರ ಮನೋಧರ್ಮವನ್ನು ಬದಲಾಯಿಸುವುದು ಹೇಗೆ? ಇದನ್ನೆಲ್ಲ ಚಿಂತಿಸುತ್ತಿರುವಾಗ ಚಿಂತನೆಗೆ ಹಚ್ಚುವ ಝೆನ್ ಕಥೆಯೊಂದು ನೆನಪಾಗುತ್ತದೆ.
ಒಂದಾನೊಂದು ಕಾಲದಲ್ಲಿ ಆಧ್ಯಾತ್ಮಿಕ ಗುರುವೊಬ್ಬರು ಗುರುಕುಲ ನಡೆಸುತ್ತಿದ್ದರು. ಒಂದು ದಿನ ಸಂಜೆ ಆಧ್ಯಾತ್ಮಿಕ ಗುರುವು ತನ್ನ ಶಿಷ್ಯರೊಂದಿಗೆ ಧ್ಯಾನವನ್ನು ಆರಂಭಿಸಿದರು. ಆಗ ಆ ಮಠದೊಳಗೆ ಇದ್ದ ತುಂಟ ಬೆಕ್ಕು ತುಂಬಾ ಶಬ್ಧ ಮಾಡುತ್ತಿತ್ತು. ಇದರಿಂದ ಅವರ ಧ್ಯಾನಕ್ಕೆ ಅಡಚಣೆ ಉಂಟಾಯಿತು.
ಇದರ ಬಗ್ಗೆ ಚಿಂತಿಸಿದ ಗುರುಗಳು ಸಂಜೆ ಅಭ್ಯಾಸದ ಸಮಯದಲ್ಲಿ ಆ ಬೆಕ್ಕನ್ನು ಕಟ್ಟಿ ಹಾಕುವಂತೆ ಆಜ್ಞೆ ಹೊರಡಿಸಿದರು. ಹಲವು ವರ್ಷಗಳ ನಂತರ ಆ ಗುರುಗಳು ನಿಧನ ಹೊಂದಿದರು. ಆದರೆ ಧ್ಯಾನದ ಸಮಯದಲ್ಲಿ ಆ ಬೆಕ್ಕನ್ನು ಕಟ್ಟಿ ಹಾಕುವುದು ಹಾಗೆಯೇ ಮುಂದುವರೆಯಿತು.
ಮತ್ತು ಅಂತಿಮವಾಗಿ ಒಂದು ದಿನ ಆ ಬೆಕ್ಕು ಸಹ ಒಂದು ದಿನ ಮರಣ ಹೊಂದಿತು. ಆದರೆ ಮಠದ ವಾಸಿಗಳು ಸುಮ್ಮನಾಗಲಿಲ್ಲ. ನಂತರ ಆ ಮಠಕ್ಕೆ ಮತ್ತೊಂದು ಬೆಕ್ಕನ್ನು ಕರೆತಂದರು. ಮತ್ತು ಅದನ್ನೂ ಹಿಂದೆ ಗುರುಗಳು ಕಟ್ಟುತ್ತಿದ್ದ ಹಾಗೆ ಕಟ್ಟಲು ಆರಂಭಿಸಿದರು.
ಶತ ಶತಮಾನಗಳು ಕಳೆದವು. ಆಧ್ಯಾತ್ಮ ಗುರುಗಳ ವಂಶಸ್ಥರು "ಧ್ಯಾನ ಮತ್ತು ಅಭ್ಯಾಸವನ್ನು ಮಾಡುವಾಗ ಬೆಕ್ಕನ್ನು ಕಟ್ಟಿಹಾಕಬೇಕು" ಎಂಬುದರ ಬಗ್ಗೆ ವಿದ್ವತ್ಪೂರ್ಣವಾದ, ಶ್ರೇಷ್ಠ ಗ್ರಂಥಗಳನ್ನು ಬರೆದರು.



Click it and Unblock the Notifications