Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ನಿರ್ಜಲ ಏಕಾದಶಿ 2021: ಶುಭ ಫಲ ದೊರೆಯಲು ಈ ದಿನ ಏನು ಮಾಡಬೇಕು, ಏನು ಮಾಡಬಾರದು?
ಹಿಂದೂ ಧರ್ಮದಲ್ಲಿ ನಿರ್ಜಲ ಏಕಾದಶಿಗೆ ತುಂಬಾನೇ ಮಹತ್ವವಿದೆ. ಉಳಿದ 23 ಏಕಾದಶಿಗಳ ಫಲ ಈ ಒಂದು ಏಕಾದಶಿ ಆಚರಣೆ ಮಾಡಿದರೆ ಸಿಗುವುದು ಎಂಬ ನಂಬಿಕೆ ಇದೆ.
ನಿರ್ಜಲ ಏಕಾದಶಿಯನ್ನು ಜ್ಯೇಷ್ಠ ಮಾಸದ ಶುಕ್ಲ ಪಕ್ಷದ 11ನೇ ದಿನದಂದು ಅಂದ್ರೆ ಜೂನ್ 21ರಂದು ಆಚರಿಸಲಾಗುವುದು. ಈ ಏಕಾದಶಿಯನ್ನು ಯಾರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೋ ಅವರು ಮಾಡಿರುವ ಪಾಪಗಳಿಂದ ಮುಕ್ತಿ ಪಡೆಯುತ್ತಾರೆ ಅಲ್ಲದೆ ಅವರ ಬದುಕಿನಲ್ಲಿ ಸಂತೋಷ, ಸಂಪತ್ತು ತುಂಬಿರುತ್ತದೆ ಎಂದು ಹೇಳಲಾಗುತ್ತದೆ.
ನಿರ್ಜಲ ಏಕಾದಶಿ ಆಚರಿಸಲು ಕೆಲವೊಂದು ನಿಯಮಗಳಿವೆ, ಅವುಗಳನ್ನು ಪಾಲಿಸಿದರಷ್ಟೇ ಇದರ ಫಲ ಸಿಗುವುದು. ಈ ದಿನ ಉತ್ತಮ ಫಲಕ್ಕಾಗಿ ಏನು ಮಾಡಬಾರದು, ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಶ್ರೀ ವಿಷ್ಣುವಿನ ಆರಾಧನೆಯಲ್ಲಿ ತುಳಸಿ ಇರಲಿ
ಏಕಾದಶಿ ಎಂಬುವುದು ವಿಷ್ಣುವಿಗೆ ಸಮರ್ಪಿತವಾದ ದಿನ. ವಿಷ್ಣುವಿಗೆ ಪ್ರಿಯವಾದವಳು ತುಳಸಿ. ಆದ್ದರಿಂದ ವಿಷ್ಣುವಿನ ಆರಾಧನೆಯಲ್ಲಿ ತುಳಸಿಗೆ ತುಂಬಾನೇ ಪ್ರಾಶಸ್ತ್ಯ ನೀಡಲಾಗಿದೆ. ಈ ದಿನ ವಿಷ್ಣು ಹಾಗೂ ಲಕ್ಷ್ಮೀಯನ್ನು ಆರಾಧಿಸುವಾಗ ತುಳಸಿ ಬಳಸಲು ಮರೆಯದಿರಿ.

ಉಪವಾಸ ಇರಬೇಕು
ಯಾರಿಗೆ ಇತರ ಏಕಾದಶಿ ಮಾಡಲು ಸಾಧ್ಯವಿಲ್ಲವೋ ಅವರು ನಿರ್ಜಲ ಏಕಾದಶಿ ಮಾಡಿದರೆ ಸಾಕು, ಅವುಗಳ ಪುಣ್ಯ ಎಲ್ಲಾ ಈ ಒಂದು ಏಕಾದಶಿ ಆಚರನೆಯಿಂದ ಸಿಗುವುದು. ಆದರೆ ಹೆಸರೇ ಸೂಚಿಸುವಂತೆ ಏಕಾದಶಿ ದಿನ ನೀರು ಕೂಡ ಮುಟ್ಟುವಂತಿಲ್ಲ. ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ಉಪವಾಸದ ಸಂಕಲ್ಪ ಕೈಗೊಳ್ಳಬೇಕು. ನಂತರ ಶ್ರೀವಿಷ್ಣುವಿನ ಪೂಜೆ ಮಾಡಬೇಕು.

ಭಗವಂತ ವಿಷ್ಣುವಿಗೆ ನೈವೇದ್ಯ ಅರ್ಪಿಸಿ
ಈ ದಿನ ಭಗವಾನ್ ವಿಷ್ಣುವಿಗೆ ನೈವೇದ್ಯ ಅರ್ಪಿಸಿ, ನೈವೇದ್ಯಕ್ಕೆ ಸಾತ್ವಿಕ ಆಹಾರವನ್ನು ಬಳಸಿ. ಸಿಹಿ, ಹಣ್ಣುಗಳನ್ನು ಅರ್ಪಿಸಿ. ಧಾರ್ಮಿಕ ನಂಬಿಕೆಗಳ ಪ್ರಕಾರ ಶ್ರೀ ವಿಷ್ಣುವಿಗೆ ನೈವೇದ್ಯ ಅರ್ಪಿಸುವಾಗ ತುಳಸಿಯನ್ನು ಇಟ್ಟು ಅರ್ಪಿಸಬೇಕು, ಇಲ್ಲದಿದ್ದರೆ ವಿಷ್ಣು ಆ ಆಹಾರಗಳನ್ನು ಸ್ವೀಕರಿಸುವುದಿಲ್ಲ.

ಅನ್ನ ತಿನ್ನಬೇಡಿ
ಉಪವಾಸ ಮಾಡುವವರು ಏನೂ ತಿನ್ನುವಂತಿಲ್ಲ, ಎಲ್ಲರಿಗೆ ಉಪವಾಸ ಮಾಡಲು ಸಾಧ್ಯವಾಗುವುದಿಲ್ಲ ಅಂಥವರು ಏಕಾದಶಿಯಂದು ಅಕ್ಕಿಯ ಯಾವುದೇ ಆಹಾರ ಸೇವಿಸಬಾರದು.

ಮಾಂಸ ಮತ್ತು ಮದ್ಯವನ್ನು ಸೇವಿಸಬೇಡಿ
ಏಕಾದಶಿ ದಿನವನ್ನು ವಿಷ್ಣುವಿನ ಆರಾಧನೆಗೆ ಸಮರ್ಪಿಸಲಾಗಿದೆ. ಈ ದಿನ ಮಾಂಸ ಮತ್ತು ಮದ್ಯ ಸೇವಿಸಬಾರದು. ನಿರ್ಜಲ ಏಕಾದಶಿ ದಿನದಂದು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ.

ಸ್ತ್ರೀ-ಪುರುಷ ಸೇರಬಾರದು
ಏಕಾದಶಿ ದಿನದಂದು ಮಿಲನ ಕ್ರಿಯೆ ನಡೆಸಬಾರದು. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ದೇವರ ಕೋರ್ತನೆ ಹಾಡಬೇಕು, ಶ್ರೀ ವಿಷ್ಣುವಿನ ಮಂತ್ರ ಪಠಿಸುತ್ತಾ ದಿನ ಕಳೆಯಬೇಕು. ಮನಸ್ಸಿನಲ್ಲಿ ಯಾವುದೇ ಕೆಡಕು ಬಯಸಬಾರದು.



Click it and Unblock the Notifications