ಕುದುರೆ ಓಡಿಹೋದರೇನು, ಮಗನ ಕಾಲು ಮುರಿದರೇನು

By Prasad

Zen story : Life without emotions
ಹಲವು ವರ್ಷಗಳಿಂದ ಕೃಷಿ ಕೆಲಸ ಮಾಡುತ್ತಿದ್ದ ಒಬ್ಬ ರೈತನ ಕತೆಯಿದು. ಒಂದು ದಿನ ಪ್ರೀತಿಯಿಂದ ಸಾಕಿದ ಅವನ ಕುದುರೆ ಇದ್ದಕ್ಕಿದ್ದಂತೆ ಓಡಿಹೋಯಿತು. ಈ ವಿಷಯವನ್ನು ತಿಳಿದ ನೆರೆಮನೆಯಾತ ಬಂದ. "ಎಂಥಾ ದುರಾದೃಷ್ಟ, ಕುದುರೆ ಓಡಿಹೋಗಬಾರದಿತ್ತು" ಎಂದು ಅನುಕಂಪ ವ್ಯಕ್ತಪಡಿಸಿದ. ರೈತ "ಇರಬಹುದು" ಎಂದು ಯಾವುದೇ ಭಾವನೆಯನ್ನು ಹೊರಗೆಡಹದೆ ಹೇಳಿದ.

ದುರಾದೃಷ್ಟ ಎಂದು ಹಳಿದಿದ್ದ ನೆರೆಮನೆಯಾತನಿಗೆ ಮರುದಿನ ಮತ್ತೊಂದು ಅಚ್ಚರಿ ಕಾದಿತ್ತು. ಮರುದಿನ ಬೆಳಗ್ಗೆ ಇನ್ನೂ ಮೂರು ಕುದುರೆಗಳ ಜೊತೆಗೆ ಓಡಿಹೋಗಿದ್ದ ರೈತನ ಕುದುರೆ ವಾಪಸ್‌ ಬಂತು. "ಎಂಥಾ ಅದ್ಭುತ" ಎಂದು ನೆರೆಮನೆಯಾತ ಮತ್ತೆ ಉದ್ಗರಿಸಿದ. "ಇರಬಹುದು" ಎಂದು ರೈತ ಅಷ್ಟೇ ನಿರ್ಭಾವುಕವಾಗಿ ಹೇಳಿದ.

ಮರುದಿನ ರೈತನ ಮಗ ಪಳಗಿಸದ ಕುದುರೆಯನ್ನು ಏರಿ, ಓಡಿಸಲು ಪ್ರಯತ್ನಿಸಿದ. ಆದರೆ ಕುದುರೆ ಇವನನ್ನು ದೂರ ಎಸೆಯಿತು ಮತ್ತು ಅವನ ಕೈ ಮುರಿದು ಹೋಯಿತು. ನೆರೆಮನೆಯಾತ ಮತ್ತೆ ಬಂದು ಅನುಕಂಪದಿಂದ "ಅಯ್ಯೋ ಹೀಗಾಗಬಾರದಿತ್ತು" ಅದೃಷ್ಟವನ್ನು ಹಳಿದ. "ಇರಬಹುದು" ಎಂದು ರೈತ ಮತ್ತೆ ಅದೇ ರೀತಿ ನಿರ್ಭಾವುಕವಾಗಿ ಹೇಳಿದ.

ತದನಂತರ ಮಿಲಿಟರಿ ಅಧಿಕಾರಿಗಳು ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲು ಬಂದರು. ಈತನ ಮಗನ ಕಾಲು ಮುರಿದಿರುವುದನ್ನು ನೋಡಿ ಅವರು ಮುಂದೆ ಹೋದರು. ಚಟಕ್ಕನೆ ಓಡಿ ಬಂದ ನೆರೆಮನೆಯಾತ, ಘಟನೆಗಳು ಹೇಗೆ ಒಳ್ಳೆಯದಾಗಿ ಪರಿವರ್ತನೆಯಾಗುತ್ತವೆ ನೋಡು, ಎಂದು ರೈತನಿಗೆ ಶುಭಾಶಯ ಹೇಳಿದ. "ಇರಬಹುದು" ಎಂದು ರೈತ ಪ್ರತಿಕ್ರಿಯಿಸಿದ. ನೆರೆಮನೆಯಾತ ಮತ್ತೆಂದೂ ರೈತನ ಬಳಿ ಸುಳಿಯಲಿಲ್ಲ.

English summary

Life without emotions | Kannada Zen story | Tao story | Inspirational short stories | ಝೆನ್ ಕಥೆ : ಕುದುರೆ ಓಡಿಹೋದರೇನು, ಮಗನ ಕಾಲು ಮುರಿದರೇನು

Kannada Zen story : This is a story of a old farmer whose horse runs away and comes back. The farmer leads life without any emotions, whether horse runs away or his son breaks his leg riding horse. For every question, his answer is 'so what'.
Story first published: Wednesday, June 20, 2012, 13:35 [IST]
X
Desktop Bottom Promotion