Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ಕುದುರೆ ಓಡಿಹೋದರೇನು, ಮಗನ ಕಾಲು ಮುರಿದರೇನು

ದುರಾದೃಷ್ಟ ಎಂದು ಹಳಿದಿದ್ದ ನೆರೆಮನೆಯಾತನಿಗೆ ಮರುದಿನ ಮತ್ತೊಂದು ಅಚ್ಚರಿ ಕಾದಿತ್ತು. ಮರುದಿನ ಬೆಳಗ್ಗೆ ಇನ್ನೂ ಮೂರು ಕುದುರೆಗಳ ಜೊತೆಗೆ ಓಡಿಹೋಗಿದ್ದ ರೈತನ ಕುದುರೆ ವಾಪಸ್ ಬಂತು. "ಎಂಥಾ ಅದ್ಭುತ" ಎಂದು ನೆರೆಮನೆಯಾತ ಮತ್ತೆ ಉದ್ಗರಿಸಿದ. "ಇರಬಹುದು" ಎಂದು ರೈತ ಅಷ್ಟೇ ನಿರ್ಭಾವುಕವಾಗಿ ಹೇಳಿದ.
ಮರುದಿನ ರೈತನ ಮಗ ಪಳಗಿಸದ ಕುದುರೆಯನ್ನು ಏರಿ, ಓಡಿಸಲು ಪ್ರಯತ್ನಿಸಿದ. ಆದರೆ ಕುದುರೆ ಇವನನ್ನು ದೂರ ಎಸೆಯಿತು ಮತ್ತು ಅವನ ಕೈ ಮುರಿದು ಹೋಯಿತು. ನೆರೆಮನೆಯಾತ ಮತ್ತೆ ಬಂದು ಅನುಕಂಪದಿಂದ "ಅಯ್ಯೋ ಹೀಗಾಗಬಾರದಿತ್ತು" ಅದೃಷ್ಟವನ್ನು ಹಳಿದ. "ಇರಬಹುದು" ಎಂದು ರೈತ ಮತ್ತೆ ಅದೇ ರೀತಿ ನಿರ್ಭಾವುಕವಾಗಿ ಹೇಳಿದ.
ತದನಂತರ ಮಿಲಿಟರಿ ಅಧಿಕಾರಿಗಳು ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲು ಬಂದರು. ಈತನ ಮಗನ ಕಾಲು ಮುರಿದಿರುವುದನ್ನು ನೋಡಿ ಅವರು ಮುಂದೆ ಹೋದರು. ಚಟಕ್ಕನೆ ಓಡಿ ಬಂದ ನೆರೆಮನೆಯಾತ, ಘಟನೆಗಳು ಹೇಗೆ ಒಳ್ಳೆಯದಾಗಿ ಪರಿವರ್ತನೆಯಾಗುತ್ತವೆ ನೋಡು, ಎಂದು ರೈತನಿಗೆ ಶುಭಾಶಯ ಹೇಳಿದ. "ಇರಬಹುದು" ಎಂದು ರೈತ ಪ್ರತಿಕ್ರಿಯಿಸಿದ. ನೆರೆಮನೆಯಾತ ಮತ್ತೆಂದೂ ರೈತನ ಬಳಿ ಸುಳಿಯಲಿಲ್ಲ.



Click it and Unblock the Notifications











