Just In
- 1 hr ago ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- 9 hrs ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
- 10 hrs ago ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- 11 hrs ago ದಿನ ಭವಿಷ್ಯ ಮಾರ್ಚ್ 28: ಗುರುವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- Sports IPL 2023: SRH ಅತ್ಯಧಿಕ ಐಪಿಎಲ್ ಮೊತ್ತ ಗಳಿಸಿದ ಹೊರತಾಗಿಯೂ RCBಯ ಈ ದಾಖಲೆ ಟಚ್ ಮಾಡಲಾಗಲಿಲ್ಲ
- News ದಳಪತಿಗಳ ಪಾಲಾಯ್ತು ಮಂಡ್ಯ: ಸುಮಲತಾ ಅವರ ಮೇಲೆ ನನಗೆ ಶತ್ರುತ್ವ ಇಲ್ಲ ಎಂದ ಹೆಚ್ ಡಿ ಕುಮಾರಸ್ವಾಮಿ
- Technology ಅಗ್ಗದ ಬೆಲೆಯಲ್ಲಿ 5G ಫೋನ್ ಬೇಕೆ?..ಹಾಗಿದ್ರೆ ಈ ಆಫರ್ ನಿಮಗೆ ಸೂಪರ್!
- Automobiles ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ: ಟಾಟಾ ಟಿಯಾಗೋ ಇವಿ EMI, ಆನ್ ರೋಡ್ ಬೆಲೆ ಎಷ್ಟು?
- Movies "ನೀನು ನನಗೆ ದೇವರು ಕೊಟ್ಟ ಮಗಳು" ಎಂದು ನಟಿ ಕೃತಿಕಾ ರವೀಂದ್ರ; ಇನ್ಸ್ಟಾಗ್ರಾಂ ಪೋಸ್ಟ್ ವೈರಲ್
- Finance ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲಾಟ್ಗಳಿಗೆ ಹೆಚ್ಚಿನ ಬೇಡಿಕೆ, ಅಂಕಿಅಂಶ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶುಕ್ರವಾರ ಹೀಗೆ ಪೂಜೆ ಮಾಡಿದರೆ ಸಂಪತ್ತಿನ ದೇವತೆ ಲಕ್ಷ್ಮಿ ಕಟಾಕ್ಷ ಸದಾ ನಿಮ್ಮ ಮೇಲಿರುತ್ತದೆ
ಸಂಪತ್ತು, ಐಶ್ವರ್ಯ, ಸಮೃದ್ಧಿಯ ಅಧಿದೇವತೆ ಲಕ್ಷ್ಮಿ ದೇವಿ. ಯಾರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ಇರುತ್ತದೆಯೋ ಅವರು ಸದಾ ನೆಮ್ಮದಿ, ಸಂತೋಷದಿಂದ ಇರುತ್ತದೆ. ಆದರೆ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುವುದು ಹೇಗೆ, ಅವಳ ಅನುಗ್ರಹ ಪಡೆಯುವುದು ಹೇಗೆ? ಇದಕ್ಕೆ ಕೆಲವು ಆಚಾರ, ಪದ್ಧತಿ, ಸಂಪ್ರದಾಯಗಳಿವೆ. ಇವುಗಳನ್ನು ಯಾರು ಶುದ್ಧ ಮನಸ್ಸಿನಿಂದ ಆಚರಿಸುತ್ತಾರೋ ಖಂಡಿತವಾಗಿಯೂ ಲಕ್ಷ್ಮಿ ದೇವಿ ಅವರನ್ನು ಕಾಪಾಡುತ್ತಾಳೆ.
ಅಂಥಾ ಮಹಾನ್ ದೇವಿಯನ್ನು ಶುಕ್ರವಾರ ಪೂಜಿಸುವುದು ಬಹಳ ಮಹತ್ವ ಪಡೆಯುತ್ತದೆ. ಲಕ್ಷ್ಮಿಯನ್ನು ಶುಕ್ರವಾರ ಏಕೆ ಪೂಜಿಸಬೇಕು, ಹೇಗೆ ಆರಾಧಿಸಬೇಕು, ಉಪವಾಸ ಆಚರಿಸುವ ವಿದಾನ ಹೇಗೆ ಮುಂದೆ ನೋಡೋಣ:
1. ಶುಕ್ರವಾರವೇ ಏಕೆ ಲಕ್ಷ್ಮಿ ಪೂಜೆ?
ಹಿಂದೂ ಪದ್ಧತಿ ಪ್ರಕಾರ, ಶುಕ್ರವಾರ ತಾಯಿ ಲಕ್ಷ್ಮಿಯ ದಿನ. ಈ ದಿನ ಲಕ್ಷ್ಮಿ ದೇವಿಯನ್ನು ಧಾರ್ಮಿಕ ವಿಧಿಗಳಿಂದ ಪೂಜಿಸಿದರೆ ದೇವಿಯ ಆಶೀರ್ವಾದ ಪಡೆಯಬಹುದು. ತಾಯಿ ಲಕ್ಷ್ಮಿಯ ಆಶೀರ್ವಾದ ಹೊಂದಿರುವ ವ್ಯಕ್ತಿಯ ಜೀವನದಲ್ಲಿ ಸಂಪತ್ತಿನ ಕೊರತೆ ಇರುವುದಿಲ್ಲ. ಇದಕ್ಕಾಗಿ ಪ್ರತಿ ಶುಕ್ರವಾರ ತಾಯಿ ಲಕ್ಷ್ಮಿಯನ್ನು ಬೆಳಗ್ಗೆಯೇ ಸ್ವಚ್ಛವಾಗಿ, ಶುದ್ಧ ಮನಸ್ಸಿನಿಂದ ಪೂಜಿಸಿದರೆ ಶುಭಫಲ ಸಿಗುತ್ತದೆ.
ಅಷ್ಟೇ ಅಲ್ಲದೆ, ಶುಕ್ರವಾರದಂದು ಉಪವಾಸಗಳನ್ನು ಆಚರಿಸುವುದು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಜೀವನದಲ್ಲಿ ಸಮೃದ್ಧಿಯನ್ನು ತರುವ ಅತ್ಯುತ್ತಮ ಮಾರ್ಗವಾಗಿದೆ.
2. ಲಕ್ಷ್ಮಿ ದೇವಿಗೆ ಉಪವಾಸ ಹೇಗೆ ಮಾಡಬೇಕು?
ದೇವಾನುದೇವತೆಗಳನ್ನು ಮೆಚ್ಚಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಲಕ್ಷ್ಮಿ ದೇವಿಯ ಕೃಪೆಗಾಗಿ ಶುಕ್ರವಾರ ಆಚರಿಸುವ ಪೂಜೆ ಬಹಳ ಮಹತ್ವದ್ದಾಗಿದೆ. ಆದರೆ ಉಪವಾಸವನ್ನು ಆಚರಿಸುವ ಮೊದಲು, ಉಪವಾಸಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಕಾರ್ಯವಿಧಾನದ ಬಗ್ಗೆ ನಿಮಗೆ ಪರಿಚಯವಿರಬೇಕು.
ಮೊದಲಿಗೆ, ನೀವು ದೇವಿಗೆ ಮೀಸಲಿಡಲಿರುವ ಶುಕ್ರವಾರದ ದಿನಗಳನ್ನು ಖಚತಪಡಿಸಿಕೊಳ್ಳಿ. ಒಮ್ಮೆ ನೀವು ಒಪ್ಪಿಗೆ ನೀಡಿದ ನಂತರ ಅದನ್ನು ತಪ್ಪಸಿಬೇಡಿ.
* ಉಪವಾಸದ ಅವಧಿಯಲ್ಲಿ ಸ್ನಾನ ಮಾಡುವುದಲ್ಲದೆ, ಜನರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಮತ್ತು ಯೋಚಿಸುವುದನ್ನು ತಡೆಯುವ ಮೂಲಕ ನಿಮ್ಮನ್ನು ಶುದ್ಧವಾಗಿಟ್ಟುಕೊಳ್ಳಲು ಪ್ರಯತ್ನಿಸಿ.
3. ಲಕ್ಷ್ಮಿ ದೇವಿ ಪೂಜೆ/ಆರಾಧನೆಯಿಂದ ಸಿಗುವ ಲಾಭಗಳೇನು?
* ನಿಮ್ಮ ಎಲ್ಲಾ ಆರ್ಥಿಕ ತೊಂದರೆಗಳನ್ನು ತೊಡೆದುಹಾಕಲು ಮತ್ತು ದೀರ್ಘಕಾಲ ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಬಯಸಿದರೆ, ಸಂಪತ್ತಿನ ದೇವತೆಯಾದ ಲಕ್ಷ್ಮಿಯನ್ನು ಮೆಚ್ಚಿಸಲು ಪೂಜೆ ಮಾಡಬೇಕು.
* ಅದೃಷ್ಟ, ಯೌವ್ವನ ಮತ್ತು ಸೌಂದರ್ಯದ ದೇವತೆಯು ಹಣದ ಸಂಬಂಧಿತ ತೊಂದರೆಗಳಿಂದ ನಿಮ್ಮನ್ನು ನಿವಾರಿಸಲು ಮಾತ್ರವಲ್ಲದೆ ಕುಟುಂಬದ ಸುಧಾರಣೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿದೆ.
* ಶುಕ್ರವಾರದಂದು ವೈಭವ ಲಕ್ಷ್ಮಿ ಉಪವಾಸವನ್ನು ಆಚರಿಸುವಲ್ಲಿ ಯಶಸ್ವಿಯಾಗುವ ಎಲ್ಲರಿಗೂ ಲಕ್ಷ್ಮಿ ಸಮೃದ್ಧಿ ಮತ್ತು ಭೌತಿಕ ನೆರವೇರಿಕೆಯ ಬಾಗಿಲು ತೆರೆಯುತ್ತದೆ ಎಂದು ನಂಬಲಾಗಿದೆ.
4. ಲಕ್ಷ್ಮಿ ಪೂಜೆಗೆ ಮಂಗಳಕರ ಸಮಯ ಯಾವುದು, ಶುದ್ಧತೆ ಏಕೆ ಮುಖ್ಯ?
ಲಕ್ಷ್ಮಿ ಪೂಜೆಯನ್ನು ನಡೆಸಲು ಅತ್ಯಂತ ಮಂಗಳಕರ ಸಮಯವೆಂದರೆ ಬೆಳಿಗ್ಗೆ. ಪೂಜೆಗೆ ಬೇಕಾದ ಎಲ್ಲವನ್ನೂ ಮುಂಚಿತವಾಗಿ ಖರೀದಿಸಿ. ಲಕ್ಷ್ಮಿ ದೇವಿಯು ಶುದ್ಧವಾದ ಮನೆಯಲ್ಲಿ ಮಾತ್ರ ನೆಲೆಸುತ್ತಾಳೆ ಎಂದು ನಂಬಲಾಗಿದೆ, ಆದ್ದರಿಂದ ಪೂಜೆಯ ಮೊದಲು ಮನೆಯನ್ನು ಸ್ವಚ್ಛಗೊಳಿಸಲು ಮರೆಯಬೇಡಿ. ಸ್ಥಳವನ್ನು ಸಂಪೂರ್ಣವಾಗಿ ಗುಡಿಸಿದ ನಂತರ ನಿಮ್ಮ ಪೂಜಾ ಸ್ಥಳದ ಬಳಿ ಸರಳವಾದ ರಂಗೋಲಿಯ ಹಾಕಿ. ಸ್ನಾನ ಮಾಡಿ ತಾಜಾ ಬಟ್ಟೆಗಳನ್ನು ಧರಿಸಿದ ನಂತರ, ಪೂಜೆಗೆ ಬೇಕಾದ ಎಲ್ಲವನ್ನೂ ಸಂಗ್ರಹಿಸಿ. ಎಲ್ಲಾ ಹಣ್ಣುಗಳು ಮತ್ತು ಪಾತ್ರೆಗಳನ್ನು ಬಳಕೆ ಮಾಡುವ ಮೊದಲು ಅವುಗಳನ್ನು ತೊಳೆಯಿರಿ.
5. ಲಕ್ಷ್ಮಿ ದೇವಿ ಪ್ರತಿಷ್ಠಾಪಿಸುವುದು ಹೇಗೆ?
* ಎತ್ತರದ ಮಣೆ ಮೇಲೆ ಲಕ್ಷ್ಮಿ ದೇವಿಯ ವಿಗ್ರಹ ಇರಿಸಿ.
* ಸುಂದರವಾದ ಬಟ್ಟೆ ಮತ್ತು ಆಭರಣಗಳಿಂದ ದೇವಿಯ ವಿಗ್ರಹವನ್ನು ಅಲಂಕರಿಸಿ.
* ವಿಗ್ರಹದ ಜೊತೆಗೆ ನೀರು ತುಂಬಿದ ಶಂಖವನ್ನು ಮಣೆ ಮೇಲೆ ಇರಿಸಿ.
* ಪೂಜೆಯ ತಯಾರಿ ಮುಗಿದ ನಂತರ, ಕಣ್ಣು ಮುಚ್ಚಿ ದೇವಿ ಸ್ತೋತ್ರ ಪಠಿಸಿ.
* ಮಂತ್ರಗಳನ್ನು ಪಠಿಸಿದ ನಂತರ ದೇವಿಗೆ ಪ್ರಸಾದ ಅರ್ಪಿಸಿ.
* ಆರತಿಯೊಂದಿಗೆ ಪೂಜೆ ಮುಗಿಸಿ. ಪೂಜೆ ಮುಗಿದ ನಂತರ ಪ್ರಸಾದವನ್ನು ಸ್ನೇಹಿತರು ಮತ್ತು ಸಂಬಂಧಿಕರಿಗೆ ವಿತರಿಸಿ.
6. ಲಕ್ಷ್ಮಿ ಆಶೀರ್ವಾದ ಪಡೆಯಲು ದೇವಿಗೆ ಇವುಗಳನ್ನು ಅರ್ಪಿಸಿ
ತಾಯಿ ಲಕ್ಷ್ಮಿಗೆ ಕೆಂಪು ಬಟ್ಟೆಗಳನ್ನು ಅರ್ಪಿಸಿ
ಶುಕ್ರವಾರ, ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ಪೂಜಾ ಸಾಮಾಗ್ರಿಗಳ ಜೊತೆಗೆ ಕೆಂಪು ಬಟ್ಟೆಗಳನ್ನು ಅರ್ಪಿಸಿ. ಇದು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ.
ತಾಯಿ ಲಕ್ಷ್ಮಿಗೆ ಕೆಂಪು ಹೂವನ್ನು ಅರ್ಪಿಸಿ
ಶುಕ್ರವಾರದಂದು, ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಕೆಂಪು ಹೂವುಗಳನ್ನು ತಪ್ಪದೆ ಅರ್ಪಿಸಿ. ಇದನ್ನು ಮಾಡುವುದರಿಂದ ತಾಯಿ ಸಂತೋಷ ಪಡುತ್ತಾರೆ. ಅವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ.
7. ಲಕ್ಷ್ಮಿ ಆಶೀರ್ವಾದ ಪಡೆಯಲು ದೇವಿಗೆ ಇವುಗಳನ್ನು ಅರ್ಪಿಸಿ
ಸಿಹಿ ಪ್ರಸಾದ
ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ದೇವಿಗೆ ಇಷ್ಟವಾದ ಸಿಹಿಖಾದ್ಯ ಮತ್ತು ಪಾಯಸವನ್ನು ಅರ್ಪಿಸಿ. ಇದನ್ನು ಮಾಡುವುದರಿಂದ ನೀವು ಮಂಗಳಕರ ಲಾಭಗಳನ್ನು ಪಡೆಯುತ್ತೀರಿ ಮತ್ತು ಸಂಪತ್ತು ಹೆಚ್ಚಾಗುತ್ತದೆ.
ವಿಷ್ಣು ದೇವರ ಪ್ರಾರ್ಥನೆ ಮಾಡಿ
ಸಂಪತ್ತಿನ ಲಾಭ ಪಡೆಯಲು ಶುಕ್ರವಾರದಂದು ವಿಷ್ಣುವನ್ನು ದೇವರನ್ನು ಆರಾಧಿಸಿ. ಭಗವಾನ್ ವಿಷ್ಣುವಿನ ಆರಾಧನೆಯಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ. ಇದರೊಂದಿಗೆ ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹ ನಿಮ್ಮ ಮೇಲಿರುತ್ತದೆ. ಆದ್ದರಿಂದ, ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು ಪ್ರತಿ ಶುಕ್ರವಾರ ಲಕ್ಷ್ಮಿ ದೇವಿ ಮತ್ತು ಭಗವಾನ್ ವಿಷ್ಣುವನ್ನು ಪೂಜಿಸಬೇಕು.