Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ದೀಪಾವಳಿಗೆ ಮನೆ ಅಲಂಕಾರಕ್ಕೆ ವಾಸ್ತು ಟಿಪ್ಸ್
ನಮ್ಮ ಜೀವನವೇ ನಂಬಿಕೆ ಮೇಲೆ ನಡೆಯುತ್ತಿದೆ. ನಾವೆಲ್ಲಾ ಆಚಾರಗಳನ್ನು ನಂಬುತ್ತೇವೆ, ಧರ್ಮದ ಆಚರಣೆಗಳನ್ನು ನಂಬಿ ನಡೆಸಿಕೊಂಡು ಬರುತ್ತೇವೆ, ಇಂದು ಯಾವುದ ೊಂದು ಸಮಸ್ಯೆಯಿದ್ದರೆ, ನಾಳೆ ಆ ಕಷ್ಟ ದೂರವಾಗಿ ಬದುಕು ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಲ್ಲಿ ಜೀವನವನ್ನು ನಡೆಸುತ್ತೇವೆ ಅಲ್ಲವೇ?
ನಮ್ಮಲ್ಲಿ ಹೆಚ್ಚಿನವರು ವಾಸ್ತು ಶಾಸ್ತ್ರವನ್ನು ನಂಬುತ್ತಾರೆ. ಮನೆ ಕಟ್ಟುವಾಗ ವಾಸ್ತು ಪ್ರಕಾರ ಮನೆ ಕಟ್ಟಿಸುತ್ತೇವೆ. ಮನೆ ಸಾಮಾನುಗಳನ್ನು ವಾಸ್ತು ಪ್ರಕಾರ ಇಡುತ್ತೇವೆ. ಈ ದೀಪಾವಳಿಯಲ್ಲಿ ಮನೆ ಅಲಂಕಾರ ಮಾಡುವಾಗ ನೀವು ವಾಸ್ತು ಶಾಸ್ತ್ರ ನಂಬುವುದಾದರೆ ಈ ಕೆಳಗಿನ ವಾಸ್ತು ಟಿಪ್ಸ್ ನಂತೆ ಮನೆಯನ್ನು ಅಲಂಕರಿಸಿ. ಈ ಟಿಪ್ಸ್ ನಿಮ್ಮ ಮನೆಗೆ ಸುಖ, ಸತೋಷ, ಸಮೃದ್ಧಿಯನ್ನು ತರುತ್ತದೆ.

ಮನೆ ಶುಚಿತ್ವ:
ಮನೆಯನ್ನು ಶುದ್ಧವಾಗಿಟ್ಟರೆ ಮಾತ್ರ ಲಕ್ಷ್ಮಿ ಒಲಿಯುತ್ತಾಳೆ. ಹೊಸ ವಸ್ತುಗಳನ್ನು ತಂದಿಡಲು ಜಾಗ ಮಾಡಿಡಬೇಕು. ದೀಪಾವಳಿ ಹಬ್ಬದ ಮಾರನೆಯ ದಿನ ಮನೆಯನ್ನು ಶುದ್ಧ ಮಾಡಲು ಮರೆಯಬಾರದು.

ವಸ್ತುಗಳನ್ನು ಬದಲಾಯಿಸಬೇಕು:
ವಾಸ್ತು ಪ್ರಕಾರ ಮನೆಯಲ್ಲಿ 27 ವಸ್ತುಗಳನ್ನು ಬದಲಾಯಿಸಿಟ್ಟರೆ ಶುಭ ಉಂಟಾಗುತ್ತದೆ ಎನ್ನಲಾಗುತ್ತದೆ. 27 ವಸ್ತುಗಳನ್ನು ಹೇಗಪ್ಪಾ ಬದಲಾಯಿಸಿವುದು ಎಂದು ಚಿಂತೆಯಾಗುತ್ತಿದೆಯೇ? ಸೋಫಾ ಇಟ್ಟ ಜಾಗವನ್ನು ಬದಲಾಯಿಸಿ, ಕುರ್ಚಿಗಳಿಟ್ಟ ಸ್ಥಳವನ್ನು ಬದಲಾಯಿಸಿ ಈ ರೀತಿ ಮಾಡಿದರೆ ಸುಲಭವಾಗಿ ವಸ್ತುಗಳನ್ನು ಬದಲಾಯಿಸಬಹುದು.

ಉಪ್ಪು ನೀರನ್ನು ಚಿಮುಕಿಸಿ:
ಉಪ್ಪು ನೀರನ್ನು ಮನೆಯೆಲ್ಲಾ ಚಿಮುಕಿಸಿದೆ ವಾಸ್ತು ಪ್ರಕಾರದ ಉಪ್ಪು ನೀರು ಮನೆಯಲ್ಲಿರುವ ದುಷ್ಟ ಶಕ್ತಿಗಳನ್ನು ನಾಶ ಪಡಿಸುತ್ತದೆ .

ಮನೆಯಲ್ಲಿ ಸಿಹಿ ಇರಬೇಕು:
ದೀಪಾವಳಿಯಲ್ಲಿ ಮನೆಯಲ್ಲಿ ಸಾಕಷ್ಟು ಸಿಹಿ ಪದಾರ್ಥಗಳ ಜೊತೆ ಸಕ್ಕರೆ ಅಥವಾ ಬೆಲ್ಲ ಇರಬೇಕು. ಆ ದಿನ ಸಕ್ಕರೆ ಕಡಿಮೆ ಇರಬಾರದು.

ಬಾಗಿಲು:
ಲಕ್ಷ್ಮಿಯು ಮುಂಬಾಗಿಲಿನಿಂದ ಒಳಕ್ಕೆ ಬರುತ್ತಾಳೆ, ಆದ್ದರಿಂದ ಬಾಗಿಲಿಗೆ ಅಡ್ಡವಾಗಿ ಏನೂ ಇಡಬಾರದು. ಬಾಗಿಲನ್ನು ತಳಿರು ತೋರಣಗಳಿಂದ ಅಲಂಕರಿಸಬೇಕು ಮನೆ ಮುಂದೆ ರಂಗೋಲಿ ಹಾಕಿರಬೇಕು ಹಾಗೂ ಬಾಗಿಲನ್ನು ಸಂಪೂರ್ಣವನ್ನು ತೆರೆದು ಇಡಬೇಕು.

ಮನೆಯ ಉತ್ತರ ಭಾಗದಲ್ಲಿ ದೇವರ ಮೂರ್ತಿ:
ಕುಬೇರನು ಉತ್ತರ ಭಾಗದಲ್ಲಿ ನೆಲೆಸುತ್ತಾನೆ. ಆದ್ದರಿಂದ ಲಕ್ಷ್ಮಿಯ ಮೂರ್ತಿಯನ್ನು ಮನೆಯ ಉತ್ತರ ಭಾಗದಲ್ಲಿ ಇಡಬೇಕು. ಲಕ್ಷ್ಮಿಯ ಬಲ ಭಾಗದಲ್ಲಿ ಗಣಪನ ಮೂರ್ತಿ ಹಾಗೂ ಎಡ ಭಾಗದಲ್ಲಿ ಸರಸ್ವತಿ ದೇವತೆಯ ಮೂರ್ತಿಯನ್ನು ಇಡಬೇಕು.

ಹರಿಯುವ ನೀರು:
ಹರಿಯುವ ನೀರು ಮನೆಗೆ ಸೌಭಾಗ್ಯವನ್ನು ತರುತ್ತದೆ. ಆದ್ದರಿಂದ ಮನೆಯಲ್ಲಿ ಉತ್ತರ-ಪೂರ್ವದ ಕಡೆಗೆ ಚಿಕ್ಕ ನೀರಿನ ಕಾರಂಜಿ ಅಥವಾ ನೀರು ಹರಿಯಲು ವ್ಯವಸ್ಥೆ ಮಾಡಬೇಕು.



Click it and Unblock the Notifications