Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ದೀಪಾವಳಿಗೆ ಮನೆ ಅಲಂಕಾರಕ್ಕೆ ವಾಸ್ತು ಟಿಪ್ಸ್
ನಮ್ಮ ಜೀವನವೇ ನಂಬಿಕೆ ಮೇಲೆ ನಡೆಯುತ್ತಿದೆ. ನಾವೆಲ್ಲಾ ಆಚಾರಗಳನ್ನು ನಂಬುತ್ತೇವೆ, ಧರ್ಮದ ಆಚರಣೆಗಳನ್ನು ನಂಬಿ ನಡೆಸಿಕೊಂಡು ಬರುತ್ತೇವೆ, ಇಂದು ಯಾವುದ ೊಂದು ಸಮಸ್ಯೆಯಿದ್ದರೆ, ನಾಳೆ ಆ ಕಷ್ಟ ದೂರವಾಗಿ ಬದುಕು ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಲ್ಲಿ ಜೀವನವನ್ನು ನಡೆಸುತ್ತೇವೆ ಅಲ್ಲವೇ?
ನಮ್ಮಲ್ಲಿ ಹೆಚ್ಚಿನವರು ವಾಸ್ತು ಶಾಸ್ತ್ರವನ್ನು ನಂಬುತ್ತಾರೆ. ಮನೆ ಕಟ್ಟುವಾಗ ವಾಸ್ತು ಪ್ರಕಾರ ಮನೆ ಕಟ್ಟಿಸುತ್ತೇವೆ. ಮನೆ ಸಾಮಾನುಗಳನ್ನು ವಾಸ್ತು ಪ್ರಕಾರ ಇಡುತ್ತೇವೆ. ಈ ದೀಪಾವಳಿಯಲ್ಲಿ ಮನೆ ಅಲಂಕಾರ ಮಾಡುವಾಗ ನೀವು ವಾಸ್ತು ಶಾಸ್ತ್ರ ನಂಬುವುದಾದರೆ ಈ ಕೆಳಗಿನ ವಾಸ್ತು ಟಿಪ್ಸ್ ನಂತೆ ಮನೆಯನ್ನು ಅಲಂಕರಿಸಿ. ಈ ಟಿಪ್ಸ್ ನಿಮ್ಮ ಮನೆಗೆ ಸುಖ, ಸತೋಷ, ಸಮೃದ್ಧಿಯನ್ನು ತರುತ್ತದೆ.

ಮನೆ ಶುಚಿತ್ವ:
ಮನೆಯನ್ನು ಶುದ್ಧವಾಗಿಟ್ಟರೆ ಮಾತ್ರ ಲಕ್ಷ್ಮಿ ಒಲಿಯುತ್ತಾಳೆ. ಹೊಸ ವಸ್ತುಗಳನ್ನು ತಂದಿಡಲು ಜಾಗ ಮಾಡಿಡಬೇಕು. ದೀಪಾವಳಿ ಹಬ್ಬದ ಮಾರನೆಯ ದಿನ ಮನೆಯನ್ನು ಶುದ್ಧ ಮಾಡಲು ಮರೆಯಬಾರದು.

ವಸ್ತುಗಳನ್ನು ಬದಲಾಯಿಸಬೇಕು:
ವಾಸ್ತು ಪ್ರಕಾರ ಮನೆಯಲ್ಲಿ 27 ವಸ್ತುಗಳನ್ನು ಬದಲಾಯಿಸಿಟ್ಟರೆ ಶುಭ ಉಂಟಾಗುತ್ತದೆ ಎನ್ನಲಾಗುತ್ತದೆ. 27 ವಸ್ತುಗಳನ್ನು ಹೇಗಪ್ಪಾ ಬದಲಾಯಿಸಿವುದು ಎಂದು ಚಿಂತೆಯಾಗುತ್ತಿದೆಯೇ? ಸೋಫಾ ಇಟ್ಟ ಜಾಗವನ್ನು ಬದಲಾಯಿಸಿ, ಕುರ್ಚಿಗಳಿಟ್ಟ ಸ್ಥಳವನ್ನು ಬದಲಾಯಿಸಿ ಈ ರೀತಿ ಮಾಡಿದರೆ ಸುಲಭವಾಗಿ ವಸ್ತುಗಳನ್ನು ಬದಲಾಯಿಸಬಹುದು.

ಉಪ್ಪು ನೀರನ್ನು ಚಿಮುಕಿಸಿ:
ಉಪ್ಪು ನೀರನ್ನು ಮನೆಯೆಲ್ಲಾ ಚಿಮುಕಿಸಿದೆ ವಾಸ್ತು ಪ್ರಕಾರದ ಉಪ್ಪು ನೀರು ಮನೆಯಲ್ಲಿರುವ ದುಷ್ಟ ಶಕ್ತಿಗಳನ್ನು ನಾಶ ಪಡಿಸುತ್ತದೆ .

ಮನೆಯಲ್ಲಿ ಸಿಹಿ ಇರಬೇಕು:
ದೀಪಾವಳಿಯಲ್ಲಿ ಮನೆಯಲ್ಲಿ ಸಾಕಷ್ಟು ಸಿಹಿ ಪದಾರ್ಥಗಳ ಜೊತೆ ಸಕ್ಕರೆ ಅಥವಾ ಬೆಲ್ಲ ಇರಬೇಕು. ಆ ದಿನ ಸಕ್ಕರೆ ಕಡಿಮೆ ಇರಬಾರದು.

ಬಾಗಿಲು:
ಲಕ್ಷ್ಮಿಯು ಮುಂಬಾಗಿಲಿನಿಂದ ಒಳಕ್ಕೆ ಬರುತ್ತಾಳೆ, ಆದ್ದರಿಂದ ಬಾಗಿಲಿಗೆ ಅಡ್ಡವಾಗಿ ಏನೂ ಇಡಬಾರದು. ಬಾಗಿಲನ್ನು ತಳಿರು ತೋರಣಗಳಿಂದ ಅಲಂಕರಿಸಬೇಕು ಮನೆ ಮುಂದೆ ರಂಗೋಲಿ ಹಾಕಿರಬೇಕು ಹಾಗೂ ಬಾಗಿಲನ್ನು ಸಂಪೂರ್ಣವನ್ನು ತೆರೆದು ಇಡಬೇಕು.

ಮನೆಯ ಉತ್ತರ ಭಾಗದಲ್ಲಿ ದೇವರ ಮೂರ್ತಿ:
ಕುಬೇರನು ಉತ್ತರ ಭಾಗದಲ್ಲಿ ನೆಲೆಸುತ್ತಾನೆ. ಆದ್ದರಿಂದ ಲಕ್ಷ್ಮಿಯ ಮೂರ್ತಿಯನ್ನು ಮನೆಯ ಉತ್ತರ ಭಾಗದಲ್ಲಿ ಇಡಬೇಕು. ಲಕ್ಷ್ಮಿಯ ಬಲ ಭಾಗದಲ್ಲಿ ಗಣಪನ ಮೂರ್ತಿ ಹಾಗೂ ಎಡ ಭಾಗದಲ್ಲಿ ಸರಸ್ವತಿ ದೇವತೆಯ ಮೂರ್ತಿಯನ್ನು ಇಡಬೇಕು.

ಹರಿಯುವ ನೀರು:
ಹರಿಯುವ ನೀರು ಮನೆಗೆ ಸೌಭಾಗ್ಯವನ್ನು ತರುತ್ತದೆ. ಆದ್ದರಿಂದ ಮನೆಯಲ್ಲಿ ಉತ್ತರ-ಪೂರ್ವದ ಕಡೆಗೆ ಚಿಕ್ಕ ನೀರಿನ ಕಾರಂಜಿ ಅಥವಾ ನೀರು ಹರಿಯಲು ವ್ಯವಸ್ಥೆ ಮಾಡಬೇಕು.



Click it and Unblock the Notifications