Just In
- 33 min ago 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- 1 hr ago ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- 2 hrs ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 4 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
Don't Miss
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Movies ತಾರಕ್ ಪೊನ್ನಪ್ಪ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯಿಂದ ಹೊರಬಂದಿದ್ದೇಕೆ?
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೀಪಾವಳಿಗೆ ಮನೆ ಅಲಂಕಾರಕ್ಕೆ ವಾಸ್ತು ಟಿಪ್ಸ್
ನಮ್ಮ ಜೀವನವೇ ನಂಬಿಕೆ ಮೇಲೆ ನಡೆಯುತ್ತಿದೆ. ನಾವೆಲ್ಲಾ ಆಚಾರಗಳನ್ನು ನಂಬುತ್ತೇವೆ, ಧರ್ಮದ ಆಚರಣೆಗಳನ್ನು ನಂಬಿ ನಡೆಸಿಕೊಂಡು ಬರುತ್ತೇವೆ, ಇಂದು ಯಾವುದ ೊಂದು ಸಮಸ್ಯೆಯಿದ್ದರೆ, ನಾಳೆ ಆ ಕಷ್ಟ ದೂರವಾಗಿ ಬದುಕು ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಲ್ಲಿ ಜೀವನವನ್ನು ನಡೆಸುತ್ತೇವೆ ಅಲ್ಲವೇ?
ನಮ್ಮಲ್ಲಿ ಹೆಚ್ಚಿನವರು ವಾಸ್ತು ಶಾಸ್ತ್ರವನ್ನು ನಂಬುತ್ತಾರೆ. ಮನೆ ಕಟ್ಟುವಾಗ ವಾಸ್ತು ಪ್ರಕಾರ ಮನೆ ಕಟ್ಟಿಸುತ್ತೇವೆ. ಮನೆ ಸಾಮಾನುಗಳನ್ನು ವಾಸ್ತು ಪ್ರಕಾರ ಇಡುತ್ತೇವೆ. ಈ ದೀಪಾವಳಿಯಲ್ಲಿ ಮನೆ ಅಲಂಕಾರ ಮಾಡುವಾಗ ನೀವು ವಾಸ್ತು ಶಾಸ್ತ್ರ ನಂಬುವುದಾದರೆ ಈ ಕೆಳಗಿನ ವಾಸ್ತು ಟಿಪ್ಸ್ ನಂತೆ ಮನೆಯನ್ನು ಅಲಂಕರಿಸಿ. ಈ ಟಿಪ್ಸ್ ನಿಮ್ಮ ಮನೆಗೆ ಸುಖ, ಸತೋಷ, ಸಮೃದ್ಧಿಯನ್ನು ತರುತ್ತದೆ.
ಮನೆ ಶುಚಿತ್ವ:
ಮನೆಯನ್ನು ಶುದ್ಧವಾಗಿಟ್ಟರೆ ಮಾತ್ರ ಲಕ್ಷ್ಮಿ ಒಲಿಯುತ್ತಾಳೆ. ಹೊಸ ವಸ್ತುಗಳನ್ನು ತಂದಿಡಲು ಜಾಗ ಮಾಡಿಡಬೇಕು. ದೀಪಾವಳಿ ಹಬ್ಬದ ಮಾರನೆಯ ದಿನ ಮನೆಯನ್ನು ಶುದ್ಧ ಮಾಡಲು ಮರೆಯಬಾರದು.
ವಸ್ತುಗಳನ್ನು ಬದಲಾಯಿಸಬೇಕು:
ವಾಸ್ತು ಪ್ರಕಾರ ಮನೆಯಲ್ಲಿ 27 ವಸ್ತುಗಳನ್ನು ಬದಲಾಯಿಸಿಟ್ಟರೆ ಶುಭ ಉಂಟಾಗುತ್ತದೆ ಎನ್ನಲಾಗುತ್ತದೆ. 27 ವಸ್ತುಗಳನ್ನು ಹೇಗಪ್ಪಾ ಬದಲಾಯಿಸಿವುದು ಎಂದು ಚಿಂತೆಯಾಗುತ್ತಿದೆಯೇ? ಸೋಫಾ ಇಟ್ಟ ಜಾಗವನ್ನು ಬದಲಾಯಿಸಿ, ಕುರ್ಚಿಗಳಿಟ್ಟ ಸ್ಥಳವನ್ನು ಬದಲಾಯಿಸಿ ಈ ರೀತಿ ಮಾಡಿದರೆ ಸುಲಭವಾಗಿ ವಸ್ತುಗಳನ್ನು ಬದಲಾಯಿಸಬಹುದು.
ಉಪ್ಪು ನೀರನ್ನು ಚಿಮುಕಿಸಿ:
ಉಪ್ಪು ನೀರನ್ನು ಮನೆಯೆಲ್ಲಾ ಚಿಮುಕಿಸಿದೆ ವಾಸ್ತು ಪ್ರಕಾರದ ಉಪ್ಪು ನೀರು ಮನೆಯಲ್ಲಿರುವ ದುಷ್ಟ ಶಕ್ತಿಗಳನ್ನು ನಾಶ ಪಡಿಸುತ್ತದೆ .
ಮನೆಯಲ್ಲಿ ಸಿಹಿ ಇರಬೇಕು:
ದೀಪಾವಳಿಯಲ್ಲಿ ಮನೆಯಲ್ಲಿ ಸಾಕಷ್ಟು ಸಿಹಿ ಪದಾರ್ಥಗಳ ಜೊತೆ ಸಕ್ಕರೆ ಅಥವಾ ಬೆಲ್ಲ ಇರಬೇಕು. ಆ ದಿನ ಸಕ್ಕರೆ ಕಡಿಮೆ ಇರಬಾರದು.
ಬಾಗಿಲು:
ಲಕ್ಷ್ಮಿಯು ಮುಂಬಾಗಿಲಿನಿಂದ ಒಳಕ್ಕೆ ಬರುತ್ತಾಳೆ, ಆದ್ದರಿಂದ ಬಾಗಿಲಿಗೆ ಅಡ್ಡವಾಗಿ ಏನೂ ಇಡಬಾರದು. ಬಾಗಿಲನ್ನು ತಳಿರು ತೋರಣಗಳಿಂದ ಅಲಂಕರಿಸಬೇಕು ಮನೆ ಮುಂದೆ ರಂಗೋಲಿ ಹಾಕಿರಬೇಕು ಹಾಗೂ ಬಾಗಿಲನ್ನು ಸಂಪೂರ್ಣವನ್ನು ತೆರೆದು ಇಡಬೇಕು.
ಮನೆಯ ಉತ್ತರ ಭಾಗದಲ್ಲಿ ದೇವರ ಮೂರ್ತಿ:
ಕುಬೇರನು ಉತ್ತರ ಭಾಗದಲ್ಲಿ ನೆಲೆಸುತ್ತಾನೆ. ಆದ್ದರಿಂದ ಲಕ್ಷ್ಮಿಯ ಮೂರ್ತಿಯನ್ನು ಮನೆಯ ಉತ್ತರ ಭಾಗದಲ್ಲಿ ಇಡಬೇಕು. ಲಕ್ಷ್ಮಿಯ ಬಲ ಭಾಗದಲ್ಲಿ ಗಣಪನ ಮೂರ್ತಿ ಹಾಗೂ ಎಡ ಭಾಗದಲ್ಲಿ ಸರಸ್ವತಿ ದೇವತೆಯ ಮೂರ್ತಿಯನ್ನು ಇಡಬೇಕು.
ಹರಿಯುವ ನೀರು:
ಹರಿಯುವ ನೀರು ಮನೆಗೆ ಸೌಭಾಗ್ಯವನ್ನು ತರುತ್ತದೆ. ಆದ್ದರಿಂದ ಮನೆಯಲ್ಲಿ ಉತ್ತರ-ಪೂರ್ವದ ಕಡೆಗೆ ಚಿಕ್ಕ ನೀರಿನ ಕಾರಂಜಿ ಅಥವಾ ನೀರು ಹರಿಯಲು ವ್ಯವಸ್ಥೆ ಮಾಡಬೇಕು.