Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ದೀಪಾವಳಿಗೆ ಮನೆ ಅಲಂಕಾರಕ್ಕೆ ವಾಸ್ತು ಟಿಪ್ಸ್
ನಮ್ಮ ಜೀವನವೇ ನಂಬಿಕೆ ಮೇಲೆ ನಡೆಯುತ್ತಿದೆ. ನಾವೆಲ್ಲಾ ಆಚಾರಗಳನ್ನು ನಂಬುತ್ತೇವೆ, ಧರ್ಮದ ಆಚರಣೆಗಳನ್ನು ನಂಬಿ ನಡೆಸಿಕೊಂಡು ಬರುತ್ತೇವೆ, ಇಂದು ಯಾವುದ ೊಂದು ಸಮಸ್ಯೆಯಿದ್ದರೆ, ನಾಳೆ ಆ ಕಷ್ಟ ದೂರವಾಗಿ ಬದುಕು ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಲ್ಲಿ ಜೀವನವನ್ನು ನಡೆಸುತ್ತೇವೆ ಅಲ್ಲವೇ?
ನಮ್ಮಲ್ಲಿ ಹೆಚ್ಚಿನವರು ವಾಸ್ತು ಶಾಸ್ತ್ರವನ್ನು ನಂಬುತ್ತಾರೆ. ಮನೆ ಕಟ್ಟುವಾಗ ವಾಸ್ತು ಪ್ರಕಾರ ಮನೆ ಕಟ್ಟಿಸುತ್ತೇವೆ. ಮನೆ ಸಾಮಾನುಗಳನ್ನು ವಾಸ್ತು ಪ್ರಕಾರ ಇಡುತ್ತೇವೆ. ಈ ದೀಪಾವಳಿಯಲ್ಲಿ ಮನೆ ಅಲಂಕಾರ ಮಾಡುವಾಗ ನೀವು ವಾಸ್ತು ಶಾಸ್ತ್ರ ನಂಬುವುದಾದರೆ ಈ ಕೆಳಗಿನ ವಾಸ್ತು ಟಿಪ್ಸ್ ನಂತೆ ಮನೆಯನ್ನು ಅಲಂಕರಿಸಿ. ಈ ಟಿಪ್ಸ್ ನಿಮ್ಮ ಮನೆಗೆ ಸುಖ, ಸತೋಷ, ಸಮೃದ್ಧಿಯನ್ನು ತರುತ್ತದೆ.

ಮನೆ ಶುಚಿತ್ವ:
ಮನೆಯನ್ನು ಶುದ್ಧವಾಗಿಟ್ಟರೆ ಮಾತ್ರ ಲಕ್ಷ್ಮಿ ಒಲಿಯುತ್ತಾಳೆ. ಹೊಸ ವಸ್ತುಗಳನ್ನು ತಂದಿಡಲು ಜಾಗ ಮಾಡಿಡಬೇಕು. ದೀಪಾವಳಿ ಹಬ್ಬದ ಮಾರನೆಯ ದಿನ ಮನೆಯನ್ನು ಶುದ್ಧ ಮಾಡಲು ಮರೆಯಬಾರದು.

ವಸ್ತುಗಳನ್ನು ಬದಲಾಯಿಸಬೇಕು:
ವಾಸ್ತು ಪ್ರಕಾರ ಮನೆಯಲ್ಲಿ 27 ವಸ್ತುಗಳನ್ನು ಬದಲಾಯಿಸಿಟ್ಟರೆ ಶುಭ ಉಂಟಾಗುತ್ತದೆ ಎನ್ನಲಾಗುತ್ತದೆ. 27 ವಸ್ತುಗಳನ್ನು ಹೇಗಪ್ಪಾ ಬದಲಾಯಿಸಿವುದು ಎಂದು ಚಿಂತೆಯಾಗುತ್ತಿದೆಯೇ? ಸೋಫಾ ಇಟ್ಟ ಜಾಗವನ್ನು ಬದಲಾಯಿಸಿ, ಕುರ್ಚಿಗಳಿಟ್ಟ ಸ್ಥಳವನ್ನು ಬದಲಾಯಿಸಿ ಈ ರೀತಿ ಮಾಡಿದರೆ ಸುಲಭವಾಗಿ ವಸ್ತುಗಳನ್ನು ಬದಲಾಯಿಸಬಹುದು.

ಉಪ್ಪು ನೀರನ್ನು ಚಿಮುಕಿಸಿ:
ಉಪ್ಪು ನೀರನ್ನು ಮನೆಯೆಲ್ಲಾ ಚಿಮುಕಿಸಿದೆ ವಾಸ್ತು ಪ್ರಕಾರದ ಉಪ್ಪು ನೀರು ಮನೆಯಲ್ಲಿರುವ ದುಷ್ಟ ಶಕ್ತಿಗಳನ್ನು ನಾಶ ಪಡಿಸುತ್ತದೆ .

ಮನೆಯಲ್ಲಿ ಸಿಹಿ ಇರಬೇಕು:
ದೀಪಾವಳಿಯಲ್ಲಿ ಮನೆಯಲ್ಲಿ ಸಾಕಷ್ಟು ಸಿಹಿ ಪದಾರ್ಥಗಳ ಜೊತೆ ಸಕ್ಕರೆ ಅಥವಾ ಬೆಲ್ಲ ಇರಬೇಕು. ಆ ದಿನ ಸಕ್ಕರೆ ಕಡಿಮೆ ಇರಬಾರದು.

ಬಾಗಿಲು:
ಲಕ್ಷ್ಮಿಯು ಮುಂಬಾಗಿಲಿನಿಂದ ಒಳಕ್ಕೆ ಬರುತ್ತಾಳೆ, ಆದ್ದರಿಂದ ಬಾಗಿಲಿಗೆ ಅಡ್ಡವಾಗಿ ಏನೂ ಇಡಬಾರದು. ಬಾಗಿಲನ್ನು ತಳಿರು ತೋರಣಗಳಿಂದ ಅಲಂಕರಿಸಬೇಕು ಮನೆ ಮುಂದೆ ರಂಗೋಲಿ ಹಾಕಿರಬೇಕು ಹಾಗೂ ಬಾಗಿಲನ್ನು ಸಂಪೂರ್ಣವನ್ನು ತೆರೆದು ಇಡಬೇಕು.

ಮನೆಯ ಉತ್ತರ ಭಾಗದಲ್ಲಿ ದೇವರ ಮೂರ್ತಿ:
ಕುಬೇರನು ಉತ್ತರ ಭಾಗದಲ್ಲಿ ನೆಲೆಸುತ್ತಾನೆ. ಆದ್ದರಿಂದ ಲಕ್ಷ್ಮಿಯ ಮೂರ್ತಿಯನ್ನು ಮನೆಯ ಉತ್ತರ ಭಾಗದಲ್ಲಿ ಇಡಬೇಕು. ಲಕ್ಷ್ಮಿಯ ಬಲ ಭಾಗದಲ್ಲಿ ಗಣಪನ ಮೂರ್ತಿ ಹಾಗೂ ಎಡ ಭಾಗದಲ್ಲಿ ಸರಸ್ವತಿ ದೇವತೆಯ ಮೂರ್ತಿಯನ್ನು ಇಡಬೇಕು.

ಹರಿಯುವ ನೀರು:
ಹರಿಯುವ ನೀರು ಮನೆಗೆ ಸೌಭಾಗ್ಯವನ್ನು ತರುತ್ತದೆ. ಆದ್ದರಿಂದ ಮನೆಯಲ್ಲಿ ಉತ್ತರ-ಪೂರ್ವದ ಕಡೆಗೆ ಚಿಕ್ಕ ನೀರಿನ ಕಾರಂಜಿ ಅಥವಾ ನೀರು ಹರಿಯಲು ವ್ಯವಸ್ಥೆ ಮಾಡಬೇಕು.



Click it and Unblock the Notifications
