Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಶಿರೋಧರ: ಈ ಆಯುರ್ವೇದ ಚಿಕಿತ್ಸೆಯಿಂದ ದೊರೆಯುವ ಪ್ರಯೋಜನಗಳು
ಶಿರೋಧರ ಆಯುರ್ವೇದ ಚಿಕಿತ್ಸೆಯ ಒಂದು ವಿಧಾನವಾಗಿದೆ. ಶಿರೋ ಧರ ಎಂಬುವುದು ಸಂಸ್ಕೃತ ಪದವಾಗಿದ್ದು ಶಿರೋ ಅಂದರೆ ತಲೆ ಧರ ಅಂದ್ರೆ ಹರೆಯುವುದು. ಆಯುರ್ವೇದದಲ್ಲಿ ಹಣೆಯ ಮೇಲೆ ಎಣ್ಣೆ, ಹಾಲು, ಮೊಸರು ಅಥವಾ ನೀರು ಹಾಕಿ ಮಾಡುವ ಚಿಕಿತ್ಸಾ ವಿಧಾನವಾಗಿದೆ.
ಇದನ್ನು ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದಲೂ ಮಾಡುತ್ತಿದ್ದು ದೇಹದಲ್ಲಿನ ದೋಷ ನಿವಾರಣೆಗೆ ಸಹಕಾರಿಯಾಗಿದೆ.
ಶಿರೋಧರಾ ಚಿಕಿತ್ಸೆಯಲ್ಲಿ ಒಂದು ನಿರ್ಧಿಷ್ಟ ಎತ್ತರದಿಂದ ಎಣ್ಣೆ, ಹಾಲು, ಮೊಸರು ಅಥವಾ ತುಪ್ಪ ಇವುಗಳನ್ನು ಹಣೆಯ ಮೇಲೆ ಬೀಳುವಂತೆ ಮಾಡಲಾಗುವುದು. ನೆತ್ತಿಯ ನಡುಭಾಗ ( ಮೂರನೇಯ ಕಣ್ಣಿನ ಭಾಗದಲ್ಲಿ) ಬಿದ್ದು ತಲೆಗೆ ಹರಿಯಬೇಕು.

ಈ ಚಿಕಿತ್ಸೆ ಪಡೆಯುವುದರಿಂದ ದೊರೆಯುವ ಪ್ರಯೋಜನಗಳು ಅನೇಕ
* ಶಿರೋಧರ ಚಿಕಿತ್ಸೆ ಪಡೆದರೆ ತುಂಬಾ ಆರಾಮ ಅನಿಸುವುದು, ಮನಸ್ಸು ಹಾಗೂ ದೇಹಕ್ಕೆ ಆರಾಮ ಅನಿಸುವುದು, ದೇಹದಲ್ಲಿ ಲವಲವಿಕೆ ಮೂಡುವುದು. ಜೊತೆಗೆ ಈ ಪ್ರಯೋಜನಗಳು ದೊರೆಯುವುದು
* ಜ್ಞಾಪಕ ಶಕ್ತಿ ಹೆಚ್ಚುವುದು
* ದೇಹಕ್ಕೆ ಶಕ್ತಿ ದೊರೆಯುವುದು
* ಏಕಾಗ್ರತೆ ಹೆಚ್ಚುವುದು
* ಅನೇಕ ಕಣ್ಣಿನ ಸಮಸ್ಯೆಕ್ಕೆ ಉತ್ತಮ ಪರಿಹಾರ
* ತಲೆ ಹಾಗೂ ಮೆದುಳಿನಲ್ಲಿ ಉತ್ತಮ ರಕ್ತ ಸಂಚಾರಕ್ಕೆ ಸಹಕಾರಿ
* ಕಿವಿ ಚೆನ್ನಾಗಿ ಕೇಳುವುದು, ಮೂಗಿನ ಸಮಸ್ಯೆ ದೂರವಾಗುವುದು
* ತುಂಬಾ ಸಮಯದಿಂದ ಕಾಡುತ್ತಿರುವ ತಲೆನೋವು, ಮೈಗ್ರೇನ್ ದೂರವಾಗುವುದು
* ಮಾನಸಿಕ ಒತ್ತಡ ಕಡಿಮೆಯಾಗುವುದು

ಇದನ್ನು ಹೇಗೆ ಮಾಡಲಾಗುವುದು?
* ಇದನ್ನು ಆಯುರ್ವೇದ ಪರಿಣಿತರು ಮಾಡುತ್ತಾರೆ. ಈ ಚಿಕಿತ್ಸೆ ಮಾಡುವಾಗ ಬೆನ್ನಿನ ಮೇಲೆ ಮಲಗಿಸಿ ನಿಮಗೆ ಆರಾಮವಾಗಿ ಕಣ್ಣುಚ್ಚಿ ಮಲಗಿ ಎಂದು ಹೇಳುತ್ತಾರೆ.
* ನಂತರ ತಜ್ಞರು ಶಿರೋಧರಕ್ಕೆ ಬಳಸುವ ದ್ರವವನ್ನು ನಿಮ್ಮ ದೇಹದ ಉಷ್ಣತೆಗೆ ಹೊಂದುವಂತೆ ಬಿಸಿ ಮಾಡಿ ನಂತರ ಹಣೆಗೆ ಆ ದ್ರವನ್ನು ಮೆಲ್ಲನೆ ಬಿಡಲಾಗುವುದು. ಇದಕ್ಕೆ ಶಿರೋಧರ ಪಾತ್ರೆ ಬಳಸಲಾಗುವುದು (ಇದರಲ್ಲಿ ಕೆಳಗಡೆ ಒಂದು ರಂಧ್ರವಿರುತ್ತದೆ).ಕಣ್ಣುಗಳ ಮೇಲೆ ಏನಾದರೂ ಚಿಕ್ಕ ಟವಲ್ ಹಾಕುತ್ತಾರೆ. ಈ ಚಿಕಿತ್ಸೆ 30 ರಿಂದ 90 ನಿಮಿಷ ಇರುತ್ತದೆ. ಶಿರೋಧರ ಮೊದಲಿಗೆ ಅಥವಾ ನಂತರ ಮಸಾಜ್ ಕೂಡ ಮಾಡಲಾಗುವುದು.

ಶಿರೋಧರಕ್ಕೆ ಬಳಸುವ ದ್ರವಗಳು
* ಸಾಸಿವೆಯೆಣ್ಣೆ
* ತೆಂಗಿನೆಣ್ಣೆ
* ತುಪ್ಪ ಕೆಲವರು ಇವುಗಳನ್ನು ಕೂಡ ಬಳಸುತ್ತಾರೆ
* ನೀರು
* ಎಳನೀರು
* ಹಸುವಿನ ಹಾಲು
* ಮೊಸರು

ಈ ಚಿಕಿತ್ಸೆ ಸುರಕ್ಷತೆವೇ?
* ಶಿರೋಧರ ಸುಕ್ಷಿತವಾದ ಚಿಕಿತ್ಸೆ ವಿಧಾನವಾಗಿದೆ.
* ಇದರಿಂದ ಯಾವುದೇ ಕಿರಕಿರಿ ಅಥವಾ ಅಡ್ಡಪರಿಣಾಮ ಉಂಟಾಗುವುದಿಲ್ಲ
* ದ್ರವವನ್ನು ಹಣೆಗೆ ಸುರಿಯುವ ಮೊದಲಿಗೆ ಪ್ಯಾಚ್ ಟೆಸ್ಟ್ ಮಾಡಲಾಗುವುದು.
* ಇದನ್ನು ಪರಿಣಿತರ ಬಳಿಯಿಂದಷ್ಟೇ ತೆಗೆಯಬೇಕು.

ಕೊನೆಯದಾಗಿ:
ಈ ರೀತಿಯ ಆಯುರ್ವೇದ ಚಿಕಿತ್ಸೆ ನಿಮ್ಮ ಮನಸ್ಸು ಹಾಗೂ ದೇಹದ ಒಟ್ಟು ಮೊತ್ತದ ಆರೋಗ್ಯಕ್ಕೆ ತುಂಬಾನೇ ಸಹಕಾರಿ. ನುರಿತ ಪರಿಣಿತರಿಂದ ಈ ಚಿಕಿತ್ಸೆ ಪಡೆಯಿರಿ.



Click it and Unblock the Notifications