Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶೀತ ,ಕೆಮ್ಮು, ಗಂಟಲು ಕೆರೆತ ಸಮಸ್ಯೆ ಹೋಗಲಾಡಿಸುವ 'ಕಷಾಯ'
ಬೇಸಿಗೆ ಕಾಲ ಮುಗಿದಿದ್ದೇ ತಡ ಮಳೆಗಾಲ ಬಂದಾಗಿದೆ .ಚುಮು ಚುಮು ಮಳೆಗೆ ನೆನೆಯಲು ಹೆಚ್ಚಿನವರು ಇಷ್ಟ ಪಡುತ್ತಾರೆ. ಜೋರಾಗಿ ಸುರಿಯುವ ಮಳೆಗೆ ಏನಾದರೂ ಬಿಸಿ ಬಿಸಿ ಕರುಂಕುರುಂ ತಿನ್ನಬೇಕೆಂದು ಅನಿಸುತ್ತಿರ ಬೇಕಲ್ಲವೇ? ಮಳೆಗಾಲ ಬಂತೆಂದರೆ ಸಾಕು ಕಾಯಿಲೆಗಳು ಶುರು ಗಾಳಿ ಹಾಗೂ ನೀರಿನಿಂದ ಹೆಚ್ಚಿನ ಕಾಯಿಲೆಗಳು ಹರಡುತ್ತವೆ.
ಮಳೆಯಿಂದ ಒಳ್ಳೆಯದು ಹಾಗೂ ಕೆಟ್ಟದು ಇದ್ದೇ ಇದೆ ಅದಕ್ಕೆ ನಾವು ಸದಾ ತಯಾರಿರಬೇಕು. ರಸ್ತೆ ಬದಿ ,ಚರಂಡಿ ಗುಂಡಿಗಳಲ್ಲಿ ಕೊಚ್ಚೆ ನೀರುಗಳು ಹರಿದು ಹೋಗದೆ ಶೇಕರಣೆಯಾಗಿ ಆ ನೀರಿನಲ್ಲಿ ಸೊಳ್ಳೆ, ಸೂಕ್ಷ್ಮ ಜೀವಿಗಳು ಉತ್ಪತಿಯಾಗಿ ಗಾಳಿಯಿಂದ, ನೀರಿನಿಂದ ಹರಡುವ ಕಾಯಿಲೆಗಳು ಆರಂಭವಾಗುವವು.

ಸಾಮಾನ್ಯವಾಗಿ ಜನರಿಗೆ ಈ ಸಮಯದಲ್ಲಿ ಫ್ಲೂ ಜ್ವರ, ಶೀತ, ಗಂಟಲು ನೋವು ಇತ್ಯಾದಿಯಿಂದ ಪ್ರಮುಖವಾಗಿ ಅಸ್ವಸ್ಥಗೊಳ್ಳುವರು. ಆದರೆ ಜನರಲ್ಲಿ ಹೆಚ್ಚಾಗಿ ಈ ರೋಗಗಳು ವರ್ಷ ಪೂರ್ತಿ ಕಂಡು ಬಂದರೂ ಮಳೆಗಾಲದಲ್ಲಿ ಜಾಸ್ತಿಯೇ ಸರಿ. ಸ್ತ್ರೀ ಪುರುಷರೆನ್ನದೆ ಯಾವುದೇ ಋತುಮಾನಗಳಿಗೆ ಅನುಗುಣವಾಗದೆ ಶೀತ ,ಗಂಟಲು ನೋವು ಇತ್ಯಾದಿ ಭಾದಿಸಿದಾಗ ಜನರಿಗೆ ನೋವು ಕಿರಿಕಿರಿ ಇತ್ಯಾದಿ ತನ್ನ ದಿನ ನಿತ್ಯದ ಚಟುವಟಿಕೆಗಳಿಗೆ ಅಡ್ಡಿಯಾಗುತ್ತವೆ.
ಸಹಜವಾಗಿ ನಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸಾಮಾನ್ಯ ಶೀತ ,ಕೆಮ್ಮು, ಜ್ವರ, ಗಂಟಲು ನೋವುಗಳನ್ನು ನೀಡುವ ಬ್ಯಾಕ್ಟೀರಿಯಾಗಳು ನಮ್ಮ ರೋಗಕ್ಕೆ ಗುರಿ ಪಡಿಸುತ್ತದೆ.ನಮ್ಮ ಶರೀರದಲ್ಲಿ ರೋಗ ನಿರೋಧಕ ಷಕ್ತಿ ಹೆಚ್ಚಿಸಿ ಕಾಯಿಲೆಗಳಿಂದ ದೂರವಿರಬಹುದು. ಈ ರೀತಿ ರೋಗಕ್ಕೆ ಒಳಗಾದಾಗ ವೈದ್ಯರು ರೋಗನಿರೋಧಕ (antibiotics)ಔಷಧಿಗಳನ್ನು ಸೇವಿಸಲು ಶಿಫಾರಸ್ಸು ಮಾಡುತ್ತಾರೆ.ಆದರೆ ನಮಗೆ ಇದರ ವಿರುದ್ಧ ಹೋರಾಡಲು ಮನೆಯಲ್ಲೇ ಸುಲಭವಾಗಿ ಕೆಲವೊಂದು ಔಷಧಿಗಳನ್ನು ತಯಾರಿಹಬಹುದು.
ಬೇಕಾಗುವ ಪದಾರ್ಥಗಳು
ಕಂದು ಸಕ್ಕರೆ - 1 ಟೇಬಲ್ ಸ್ಪೂನ್
ಲವಂಗ - 4 -5
ತುಳಸಿ -5-6
ಅರಿಶಿನ- 1 ಟೇಬಲ್ ಸ್ಪೂನ್
ಇವುಗಳನ್ನು ಸರಿಯಾದ ಕ್ರಮಗಳಲ್ಲಿ ಇವುಗಳನ್ನು ಸೇವನೆ ಮಾಡಿದ್ದಲ್ಲಿ ಗಂಟಲು ಕೆರೆತ ,ಶೀತದಿಂದ ದೂರವಿರಬಹುದು. ಇದರ ಜೊತೆಯಲ್ಲಿ ಕೆಲವೊಂದು ಪಥ್ಯಗಳಾದ ಎಣ್ಣೆ ತಿಂಡಿ ತಿನ್ನದೇ ಇರುವುದು ,ಬೆಚ್ಚಗಿನ ಕೋಣೆಯಲ್ಲಿರುವುದು, ಸುತ್ತ ಮುತ್ತ ಶುಚಿತ್ವ ಕಾಪಾಡುವುದರಿಂದ ಗಂಟಲು ಕೆರೆತ ,ಇತ್ಯಾದಿಯಿಂದ ರಕ್ಷಣೆ ಪಡೆಯಬಹುದು.
ತೀವ್ರತರವಾಗಿ ನಮಗೆ ಜ್ವರ ,ಗಂಟು ನೋವು ಕಾಣಿಸಿಕೊಂಡಲ್ಲಿ ತಕ್ಷಣ ನಾವು ವೈದ್ಯರನ್ನು ಸಂಪರ್ಕಿಸಿಕೊಳ್ಳಬೇಕು. ಸಾಮಾನ್ಯವಾಗಿ ನೆಗಡಿ ಗಂಟಲು ಕೆರೆತಕ್ಕೆ ತುಳಸಿ, ಅರಿಶಿಣ, ಲವಂಗ ಕಂದು ಸಕ್ಕರೆಗಳಲ್ಲಿರುವ ಔಷಧೀಯ ಗುಣಗಳು ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡಲು ಉಪಯುಕ್ತವಾಗಿವೆ.
ಮಾಡುವ ವಿಧಾನ
ಮೇಲೆ ತಿಳಿಸಿದಂತಹ ಎಲ್ಲಾ ಪದಾರ್ಥಗಳನ್ನು ಕುದಿಸಿ
ಸರಿಯಾಗಿ ಮಿಶ್ರಣ ಮಾಡಿರಿ
ನಂತರ ಅದನ್ನು ಒಂದು ಕಪ್ಗೆ ಹಾಕಿರಿ
ಬಿಸಿಯಿರುವಾಗಲೇ ಇದನ್ನು ಕುಡಿಯಿರಿ
ಶೀತ ಹಾಗೂ ಗಂಟಲು ಕೆರೆತವಿದ್ದಾಗ ದಿನಕೊಮ್ಮೆ ಒಂದೆರಡು ಬಾರಿ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

