Latest Updates
-
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ
ಶೀತ ,ಕೆಮ್ಮು, ಗಂಟಲು ಕೆರೆತ ಸಮಸ್ಯೆ ಹೋಗಲಾಡಿಸುವ 'ಕಷಾಯ'
ಬೇಸಿಗೆ ಕಾಲ ಮುಗಿದಿದ್ದೇ ತಡ ಮಳೆಗಾಲ ಬಂದಾಗಿದೆ .ಚುಮು ಚುಮು ಮಳೆಗೆ ನೆನೆಯಲು ಹೆಚ್ಚಿನವರು ಇಷ್ಟ ಪಡುತ್ತಾರೆ. ಜೋರಾಗಿ ಸುರಿಯುವ ಮಳೆಗೆ ಏನಾದರೂ ಬಿಸಿ ಬಿಸಿ ಕರುಂಕುರುಂ ತಿನ್ನಬೇಕೆಂದು ಅನಿಸುತ್ತಿರ ಬೇಕಲ್ಲವೇ? ಮಳೆಗಾಲ ಬಂತೆಂದರೆ ಸಾಕು ಕಾಯಿಲೆಗಳು ಶುರು ಗಾಳಿ ಹಾಗೂ ನೀರಿನಿಂದ ಹೆಚ್ಚಿನ ಕಾಯಿಲೆಗಳು ಹರಡುತ್ತವೆ.
ಮಳೆಯಿಂದ ಒಳ್ಳೆಯದು ಹಾಗೂ ಕೆಟ್ಟದು ಇದ್ದೇ ಇದೆ ಅದಕ್ಕೆ ನಾವು ಸದಾ ತಯಾರಿರಬೇಕು. ರಸ್ತೆ ಬದಿ ,ಚರಂಡಿ ಗುಂಡಿಗಳಲ್ಲಿ ಕೊಚ್ಚೆ ನೀರುಗಳು ಹರಿದು ಹೋಗದೆ ಶೇಕರಣೆಯಾಗಿ ಆ ನೀರಿನಲ್ಲಿ ಸೊಳ್ಳೆ, ಸೂಕ್ಷ್ಮ ಜೀವಿಗಳು ಉತ್ಪತಿಯಾಗಿ ಗಾಳಿಯಿಂದ, ನೀರಿನಿಂದ ಹರಡುವ ಕಾಯಿಲೆಗಳು ಆರಂಭವಾಗುವವು.

ಸಾಮಾನ್ಯವಾಗಿ ಜನರಿಗೆ ಈ ಸಮಯದಲ್ಲಿ ಫ್ಲೂ ಜ್ವರ, ಶೀತ, ಗಂಟಲು ನೋವು ಇತ್ಯಾದಿಯಿಂದ ಪ್ರಮುಖವಾಗಿ ಅಸ್ವಸ್ಥಗೊಳ್ಳುವರು. ಆದರೆ ಜನರಲ್ಲಿ ಹೆಚ್ಚಾಗಿ ಈ ರೋಗಗಳು ವರ್ಷ ಪೂರ್ತಿ ಕಂಡು ಬಂದರೂ ಮಳೆಗಾಲದಲ್ಲಿ ಜಾಸ್ತಿಯೇ ಸರಿ. ಸ್ತ್ರೀ ಪುರುಷರೆನ್ನದೆ ಯಾವುದೇ ಋತುಮಾನಗಳಿಗೆ ಅನುಗುಣವಾಗದೆ ಶೀತ ,ಗಂಟಲು ನೋವು ಇತ್ಯಾದಿ ಭಾದಿಸಿದಾಗ ಜನರಿಗೆ ನೋವು ಕಿರಿಕಿರಿ ಇತ್ಯಾದಿ ತನ್ನ ದಿನ ನಿತ್ಯದ ಚಟುವಟಿಕೆಗಳಿಗೆ ಅಡ್ಡಿಯಾಗುತ್ತವೆ.
ಸಹಜವಾಗಿ ನಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸಾಮಾನ್ಯ ಶೀತ ,ಕೆಮ್ಮು, ಜ್ವರ, ಗಂಟಲು ನೋವುಗಳನ್ನು ನೀಡುವ ಬ್ಯಾಕ್ಟೀರಿಯಾಗಳು ನಮ್ಮ ರೋಗಕ್ಕೆ ಗುರಿ ಪಡಿಸುತ್ತದೆ.ನಮ್ಮ ಶರೀರದಲ್ಲಿ ರೋಗ ನಿರೋಧಕ ಷಕ್ತಿ ಹೆಚ್ಚಿಸಿ ಕಾಯಿಲೆಗಳಿಂದ ದೂರವಿರಬಹುದು. ಈ ರೀತಿ ರೋಗಕ್ಕೆ ಒಳಗಾದಾಗ ವೈದ್ಯರು ರೋಗನಿರೋಧಕ (antibiotics)ಔಷಧಿಗಳನ್ನು ಸೇವಿಸಲು ಶಿಫಾರಸ್ಸು ಮಾಡುತ್ತಾರೆ.ಆದರೆ ನಮಗೆ ಇದರ ವಿರುದ್ಧ ಹೋರಾಡಲು ಮನೆಯಲ್ಲೇ ಸುಲಭವಾಗಿ ಕೆಲವೊಂದು ಔಷಧಿಗಳನ್ನು ತಯಾರಿಹಬಹುದು.
ಬೇಕಾಗುವ ಪದಾರ್ಥಗಳು
ಕಂದು ಸಕ್ಕರೆ - 1 ಟೇಬಲ್ ಸ್ಪೂನ್
ಲವಂಗ - 4 -5
ತುಳಸಿ -5-6
ಅರಿಶಿನ- 1 ಟೇಬಲ್ ಸ್ಪೂನ್
ಇವುಗಳನ್ನು ಸರಿಯಾದ ಕ್ರಮಗಳಲ್ಲಿ ಇವುಗಳನ್ನು ಸೇವನೆ ಮಾಡಿದ್ದಲ್ಲಿ ಗಂಟಲು ಕೆರೆತ ,ಶೀತದಿಂದ ದೂರವಿರಬಹುದು. ಇದರ ಜೊತೆಯಲ್ಲಿ ಕೆಲವೊಂದು ಪಥ್ಯಗಳಾದ ಎಣ್ಣೆ ತಿಂಡಿ ತಿನ್ನದೇ ಇರುವುದು ,ಬೆಚ್ಚಗಿನ ಕೋಣೆಯಲ್ಲಿರುವುದು, ಸುತ್ತ ಮುತ್ತ ಶುಚಿತ್ವ ಕಾಪಾಡುವುದರಿಂದ ಗಂಟಲು ಕೆರೆತ ,ಇತ್ಯಾದಿಯಿಂದ ರಕ್ಷಣೆ ಪಡೆಯಬಹುದು.
ತೀವ್ರತರವಾಗಿ ನಮಗೆ ಜ್ವರ ,ಗಂಟು ನೋವು ಕಾಣಿಸಿಕೊಂಡಲ್ಲಿ ತಕ್ಷಣ ನಾವು ವೈದ್ಯರನ್ನು ಸಂಪರ್ಕಿಸಿಕೊಳ್ಳಬೇಕು. ಸಾಮಾನ್ಯವಾಗಿ ನೆಗಡಿ ಗಂಟಲು ಕೆರೆತಕ್ಕೆ ತುಳಸಿ, ಅರಿಶಿಣ, ಲವಂಗ ಕಂದು ಸಕ್ಕರೆಗಳಲ್ಲಿರುವ ಔಷಧೀಯ ಗುಣಗಳು ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡಲು ಉಪಯುಕ್ತವಾಗಿವೆ.
ಮಾಡುವ ವಿಧಾನ
ಮೇಲೆ ತಿಳಿಸಿದಂತಹ ಎಲ್ಲಾ ಪದಾರ್ಥಗಳನ್ನು ಕುದಿಸಿ
ಸರಿಯಾಗಿ ಮಿಶ್ರಣ ಮಾಡಿರಿ
ನಂತರ ಅದನ್ನು ಒಂದು ಕಪ್ಗೆ ಹಾಕಿರಿ
ಬಿಸಿಯಿರುವಾಗಲೇ ಇದನ್ನು ಕುಡಿಯಿರಿ
ಶೀತ ಹಾಗೂ ಗಂಟಲು ಕೆರೆತವಿದ್ದಾಗ ದಿನಕೊಮ್ಮೆ ಒಂದೆರಡು ಬಾರಿ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications













