Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಮುಟ್ಟಿನ ದಿನಗಳಲ್ಲಿ ಹೀಗೆಲ್ಲಾ ಮಾಡಬೇಡಿ! ಆದಷ್ಟು ಎಚ್ಚರದಿಂದಿರಿ...
ಗೃಹಿಣಿಯರಿಗೆ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಕೆಲಸವಿಲ್ಲದ ದಿನಗಳೇ ಇಲ್ಲ. ಆದರೆ ಅನಿವಾರ್ಯ ವಾದರೂ ಸರಿ, ಕೆಲವು ಕೆಲಸಗಳನ್ನು ಮುಟ್ಟಿನ ದಿನಗಳ ಬಳಿಕ ನಿರ್ವಹಿಸುವಂತೆ ಮುಂದೂಡುವುದು ಅಥವಾ ಬೇರೆಯವರಿಂದ ಮಾಡಿಸುವುದು ಅಗತ್ಯ.
ಹಿಂದಿನ ದಿನಗಳಲ್ಲಿ ಮಾಸಿಕ ದಿನಗಳಲ್ಲಿ ಮಹಿಳೆಯರನ್ನು ಒಂದು ಕೋಣೆಯಲ್ಲಿ ಪ್ರತ್ಯೇಕವಾಗಿರಿಸಲಾಗುತ್ತಿತ್ತು. ಆ ದಿನಗಳಲ್ಲಿ ಮನೆಕೆಲಸದಿಂದ ವಿಶ್ರಾಂತಿ ಪಡೆಯಲು ಸಾಧ್ಯವಾಗುವಂತೆ ಈ ವ್ಯವಸ್ಥೆ ಮಾಡಲಾಗಿತ್ತು. ಇಂದು ಆ ಪದ್ಧತಿ ಇಲ್ಲವಾದರೂ ವಿಶ್ರಾಂತಿ ಮಾತ್ರ ಅಗತ್ಯವಾಗಿದೆ. ಗೃಹಿಣಿಯರಿಗೆ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಕೆಲಸವಿಲ್ಲದ ದಿನಗಳೇ ಇಲ್ಲ. ಈ ದಿನಗಳಲ್ಲಿಯೂ ನಿತ್ಯದ ಕೆಲಸವನ್ನು ನಿರ್ವಹಿಸಲೇಬೇಕಾದ ಅನಿವಾರ್ಯತೆ ಇಂದಿನ ಮಹಿಳೆಯರಿಗಿದೆ. ಮನೆ ಔಷಧ: ಒಂದೇ ಗಂಟೆಯಲ್ಲಿ ಮುಟ್ಟಿನ ನೋವು ನಿಯಂತ್ರಣಕ್ಕೆ
ಆದರೆ ಅನಿವಾರ್ಯವಾದರೂ ಸರಿ, ಕೆಲವು ಕೆಲಸಗಳನ್ನು ಈ ದಿನಗಳ ಬಳಿಕ ನಿರ್ವಹಿಸುವಂತೆ ಮುಂದೂಡುವುದು ಅಥವಾ ಬೇರೆಯವರಿಂದ ಮಾಡಿಸುವುದು ಅಗತ್ಯ. ಏಕೆಂದರೆ ಈ ಕೆಲಸಗಳು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಕೆಳಹೊಟ್ಟೆಯ ನೋವಿಗೆ ದೇಹದೊಳಗೆ ನಡೆಯುತ್ತಿರುವ ಕೆಲವಾರು ಕಾರ್ಯಗಳೇ ಕಾರಣವಾಗಿದೆ. ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?
ನಿಮ್ಮ ದೇಹದಲ್ಲಿ ಎಲ್ಲೆಲ್ಲಿ ನೋವಾಗುತ್ತಿದೆ ಎಂದು ನಿಮಗೆ ಅರಿವಾಗುತ್ತದೆ ಅಲ್ಲವೇ? ಹೊಟ್ಟೆ ಕಿವುಚಿದಂತೆ, ಒಂದು ಕಡೆಯಿಂದ ಎಳೆದಂತೆ ನೋವಾಗುತ್ತದೆ. ಇವೆಲ್ಲವೂ ನಿಸರ್ಗನಿಯಮವಾಗಿದ್ದು ಕೊಂಚ ನೋವನ್ನು ಅನುಭವಿಸುವುದು ಅನಿವಾರ್ಯ. ಆದರೆ ಈ ನೋವನ್ನು ಕಡಿಮೆಯಾಗಿಸಲು ಮತ್ತು ಕಡಿಮೆ ಅವಧಿಗೆ ಮೀಸಲಿರಿಸಲು ನಿಮ್ಮ ಆಹಾರಕ್ರಮ ಮುಖ್ಯಪಾತ್ರ ವಹಿಸುತ್ತದೆ. ಅಲ್ಲದೇ ಕೆಲವು ಕೆಲಸಗಳೂ ಈ ನೋವನ್ನು ಹೆಚ್ಚಿಸುತ್ತವೆ. ವಿಳಂಬವಾಗುತ್ತಿರುವ ಮುಟ್ಟಿನ ಸಮಸ್ಯೆಗೆ ಆಯುರ್ವೇದದ ಪರಿಹಾರ
ಒಂದು ವೇಳೆ ಅರಿವಿಲ್ಲದೇ ಈ ಕೆಲಸಗಳನ್ನು ನಿರ್ವಹಿಸುತ್ತಿದ್ದರೆ ನಿಮ್ಮ ನೋವು ಹೆಚ್ಚಾಗಿರಲು ಇವೇ ಕಾರಣವಾಗಿರಬಹುದು. ಇಂದಿನ ಲೇಖನದಲ್ಲಿ ವಿವರಿಸಿರುವ ಯಾವುದೇ ಕಾರ್ಯವನ್ನು ನೀವು ಮಾಡುತ್ತಿದ್ದೀರೇ ಆಗಿದ್ದಲ್ಲಿ ತಕ್ಷಣ ಇದನ್ನು ನಿಲ್ಲಿಸಿಬಿಡಿ. ಬನ್ನಿ, ಈ ಕೆಲಸಗಳು ಯಾವುವು ಎಂಬುದನ್ನು ನೋಡೋಣ....

ಅಸುರಕ್ಷಿತ ಸಮಾಗಮ
ಸಾಮಾನ್ಯವಾಗಿ ಈ ದಿನಗಳಲ್ಲಿ ಸಮಾಗಮಗೊಂಡರೆ ಸುರಕ್ಷಿತ ಎಂಬ ಭಾವನೆಯನ್ನು ಹಲವು ದಂಪತಿಗಳು ಹೊಂದಿದ್ದಾರೆ. ಆದರೆ ಈ ದಿನಗಳ ಸಮಾಗಮವೂ ಫಲ ನೀಡಬಲ್ಲುದು. ಆದರೆ ವಾಸ್ತವವಾಗಿ ಈ ದಿನಗಳಲ್ಲಿ ಯಾವುದೇ ಸೋಂಕು ತಗಲುವ ಸಾಧ್ಯತೆ ಇತರ ದಿನಗಳಿಗಿಂತ ಅತಿ ಹೆಚ್ಚೇ ಇರುವ ಕಾರಣ ಅಸುರಕ್ಷತೆಯ ಸಮಾಗಮ ಸಲ್ಲದು. ಇನ್ನೂ ಉತ್ತಮವೆಂದರೆ ಈ ದಿನಗಳು ಮುಗಿಯುವವರೆಗೂ ಸಮಾಗಮವನ್ನು ಮುಂದೂಡುವುದು.

ಊಟವನ್ನು ಬಿಡುವುದು
ಹೊಟ್ಟೆನೋವು, ಈ ಸಮಯದಲ್ಲಿ ಊಟ ಮಾಡಿದರೆ ಇನ್ನಷ್ಟು ಹೆಚ್ಚುತ್ತದೆ ಎಂಬ ಕಾರಣ ನೀಡಿ ಕೆಲವರು ಊಟವನ್ನೇ ಮಾಡುವುದಿಲ್ಲ. ಆದರೆ ವಾಸ್ತವದಲ್ಲಿ ಈ ದಿನಗಳಲ್ಲಿ ದೇಹ ಹೆಚ್ಚಿನ ರಕ್ತವನ್ನೂ, ಈ ರಕ್ತವನ್ನು ದೂಡಲು ಶಕ್ತಿಯನ್ನೂ ಕಳೆದುಕೊಂಡಿರುವುದರಿಂದ ಇವುಗಳನ್ನು ಮರುಪೂರೈಸಲು ನಿಮಗೆ ಇತರ ದಿನಕ್ಕಿಂತಲೂ ಕೊಂಚ ಹೆಚ್ಚಿನ ಮತ್ತು ಪೌಷ್ಟಿಕ ಆಹಾರ ಬೇಕಾಗಿರುತ್ತದೆ. ಆದ್ದರಿಂದ ಊಟ ಬಿಡಲೇಬಾರದು.

ಹೆಚ್ಚಿನ ಶಕ್ತಿ ವ್ಯಯಿಸುವ ವ್ಯಾಯಾಮಗಳು
ಒಂದು ವೇಳೆ ನೀವು ನಿತ್ಯವೂ ವ್ಯಾಯಾಮ ಮಾಡುವ ವ್ಯಕ್ತಿಯಾಗಿದ್ದರೆ ಈ ದಿನಗಳಲ್ಲಿ ನಿಮ್ಮ ವ್ಯಾಯಾಮವನ್ನು ಕೇವಲ ಕೈ ಕಾಲುಗಳಿಗೆ ಮಾತ್ರ ಸೀಮಿತವಾಗಿರಿಸಬೇಕು. ಏಕೆಂದರೆ ಈ ದಿನಗಳಲ್ಲಿ ಬೆನ್ನು ಮತ್ತು ಹೊಟ್ಟೆಯ ಭಾಗಗಳಲ್ಲಿ ಹೆಚ್ಚಿನ ನೋವಿದ್ದು ತೀರಾ ಸೂಕ್ಷ್ಮಸಂವೇದಿಯಾಗಿರುತ್ತದೆ. ಆದ್ದರಿಂದ ಸೊಂಟ ಬಗ್ಗಿಸುವ ಯಾವುದೇ ವ್ಯಾಯಾಮ ಬೇಡ.

ಸಿದ್ಧ ಆಹಾರವೂ ಬೇಡ
ಆರ್ಡರ್ ಮಾಡಿದ ತಕ್ಷಣ ಬರುತ್ತದೆ ಎಂಬ ಕಾರಣ ನೀಡಿ ಈ ದಿನಗಳಲ್ಲಿ ಸಿದ್ಧ ಆಹಾರಗಳನ್ನು ಕೊಳ್ಳಬೇಡಿ. ಏಕೆಂದರೆ ಈ ಆಹಾರಗಳು ಅನಾರೋಗ್ಯಕರವಾಗಿದ್ದು ವಿಶೇಷವಾಗಿ ಈ ದಿನಗಳಲ್ಲಿ ಅನಗತ್ಯ ಮತ್ತು ವಿಷಕಾರಿ ಅಂಶಗಳನ್ನು ದೇಹಕ್ಕೆ ಸೇರಿಸುವ ಮೂಲಕ ಆರೋಗ್ಯವನ್ನು ಕೆಡಿಸಬಹುದು.

ರಾತ್ರಿ ನಿದ್ದೆಗೆಡಬೇಡಿ
ನಿಮ್ಮ ಉದ್ಯೋಗ ಅಥವಾ ಬೇರಾವುದೋ ಕಾರಣದಿಂದ ರಾತ್ರಿ ಎಚ್ಚರಿರಬೇಕಾದ ಅನಿವಾರ್ಯತೆ ಇದ್ದರೂ ನಿದ್ದೆಗೆಡಬಾರದು. ವಾಸ್ತವದಲ್ಲಿ ಈ ದಿನಗಳಲ್ಲಿ ಒಂಬತ್ತು, ಅತಿ ತಡವೆಂದರೆ ಹತ್ತು ಘಂಟೆಗೇ ಮಲಗಿಬಿಡಬೇಕು. ಇದರಿಂದ ರಾತ್ರಿ ಹೊತ್ತಿನಲ್ಲಿ ದೇಹಕ್ಕೆ ಉಳಿದ ಕೆಲಸಗಳನ್ನು ಪೂರೈಸಿಕೊಳ್ಳಲು ಹೆಚ್ಚಿನ ಸಮಯಾವಕಾಶ ದೊರಕುತ್ತದೆ.

ಸೌತೆಕಾಯಿ ತಿನ್ನಬೇಡಿ
ಈ ಸಮಯದಲ್ಲಿ ಸೌತೆಕಾಯಿಯ ಸೇವನೆ ಸಲ್ಲದು. ಏಕೆಂದರೆ ಇದರಲ್ಲಿರುವ ಪೋಷಕಾಂಶಗಳು ಮತ್ತು ವಿಶೇಷವಾಗಿ ಹೆಚ್ಚಿನ ಪ್ರಮಾಣದ ನೀರು, ಗರ್ಭಕೋಶದ ಗೋಡೆಯಲ್ಲಿ ನೀರು ನಿಲ್ಲಲು ಕಾರಣವಾಗುತ್ತವೆ ಹಾಗೂ ಇದು ಸ್ರಾವವನ್ನು ಇನ್ನೂ ಹೆಚ್ಚಿನ ಕಾಲ ಮುಂದುವರೆಸಲು ಕಾರಣವಾಗುತ್ತದೆ.

ಐಸ್ ನೀರು/ಸೋಡಾ ಕುಡಿಯದಿರಿ
ಐಸ್ ಸೇರಿಸಿದ, ಸೋಡಾ ಅಥವಾ ಬುರುಗುಬರುವ ಯಾವುದೇ ಪಾನೀಯವನ್ನು ಈ ದಿನಗಳಲ್ಲಿ ಕುಡಿಯದಿರಿ. ಇವೂ ಗರ್ಭಕೋಶದ ಗೋಡೆಯಲ್ಲಿ ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಳ್ಳಲು ನೆರವಾಗುವ ಕಾರಣ ಸ್ರಾವ ಹಚ್ಚು ಕಾಲ ಮುಂದುವರೆಯುತ್ತದೆ. ಅಲ್ಲದೇ ಸತತವಾಗಿ ಕುಡಿಯುತ್ತಿರುವವರಲ್ಲಿ ಐದರಿಂದ ಹತ್ತು ವರ್ಷದ ಬಳಿಕ ಗರ್ಭಗೋಶದ ಗೋಡೆಯಲ್ಲಿ ಗಡ್ಡೆ, ಕ್ಯಾನ್ಸರ್ ಅಥವಾ ದುರ್ಮಾಂಸ ಬೆಳೆಯಲು ಕಾರಣವಾಗಬಹುದು. ಆ ದಿನಗಳಲ್ಲಿ ಕಾಡುವ ಅತೀವ ರಕ್ತಸ್ರಾವ! ಕಾರಣವೇನು?



Click it and Unblock the Notifications











