Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಈರುಳ್ಳಿ ನೋಡಲು ಚಿಕ್ಕದಾದರೂ ಮಾಡುವ ಕಾರುಬಾರು ದೊಡ್ಡದು
ನಮ್ಮ ಅಡುಗೆಯಲ್ಲಿ ಅತಿ ಸಾಮಾನ್ಯವಾದ ತರಕಾರಿ ಎಂದರೆ ಈರುಳ್ಳಿ ಮತ್ತು ಆಲುಗಡ್ಡೆ. ಅತಿ ಹೆಚ್ಚು ಕಾಲ ಕೆಡದಂತೆ ಕಾಪಾಡ ಬಹುದಾದ ಇವುಗಳ ಗುಣವೇ ಇದರ ವೈಶಿಷ್ಟ್ಯತೆ, ಕಡಿಮೆ ಬೆಲೆ ಮತ್ತು ವರ್ಷದ ಎಲ್ಲಾ ಕಾಲ ಸುಲಭವಾಗಿ ಲಭ್ಯವಾಗುವ ಈ ಎರಡು ತರಕಾರಿಗಳು ಪ್ರತಿ ಮನೆಯ ಅಡುಗೆ ಮನೆಯಲ್ಲಿ ಸದಾ ಇರುತ್ತವೆ. ಅದರಲ್ಲೂ ಈರುಳ್ಳಿ ಕತ್ತರಿಸಿದಾದ ಕಣ್ಣೀರು ಬರುತ್ತದೆ ಎಂಬ ಒಂದೇ ಅವಗುಣವನ್ನು ಬಿಟ್ಟರೆ ಬೇರೆಲ್ಲಾ ರೀತಿಯಲ್ಲಿ ಆಹಾರಕ್ಕಿಂತಲೂ ಔಷಧೀಯ ರೂಪದಲ್ಲಿಯೇ ಆರೋಗ್ಯಕ್ಕೆ ಪೂರಕವಾಗಿದೆ.
ಈರುಳ್ಳಿಯನ್ನು ಕತ್ತರಿಸುವಾಗ ನಮ್ಮ ಕಣ್ಣಲ್ಲಿ ನೀರು ಬರುತ್ತದೆಯಾದರೂ, ಹಾನಿಕಾರಕ ಗಾಳಿ ನಮಗೆ ತಗುಲದಂತೆ ನೋಡಿಕೊಳ್ಳುತ್ತದೆ. ನಾವು ತಯಾರಿಸುವ ಅಡುಗೆಯ ರುಚಿ ಮತ್ತು ಪರಿಮಳವನ್ನು ಕಾಪಾಡುವ ಈ ಈರುಳ್ಳಿಯ ಆರೋಗ್ಯ ಮಹಿಮೆ ಅಪಾರ. ಇದು ಕೇವಲ ಅಡುಗೆ ತಯಾರಿಸಲಷ್ಟೇ ಸೀಮಿತವಾಗಿಲ್ಲ. ಇದನ್ನು ಗಾಳಿಯಲ್ಲಿ ತೆರೆದಿಟ್ಟರೂ ಆರೋಗ್ಯ ಹೆಚ್ಚುವುದು. ಹಾಗಾದರೆ ಅದು ಹೇಗೆ ಎನ್ನುವ ನೂತನ ಮಾಹಿತಿ ಇಲ್ಲಿದೆ ನೋಡಿ...

ಸಲ್ಫ್ಯೂರಿಕ್ ಸಂಯುಕ್ತ
ಈರುಳ್ಳಿಯಲ್ಲಿ ಕೆಲವು ಸಲ್ಫ್ಯೂರಿಕ್ ಸಂಯುಕ್ತಗಳಿವೆ. ಇವು ಗಾಳಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಎದುರಿಸಲು ಸಹಾಯ ಮಾಡುತ್ತವೆ. ಅಡುಗೆಯಲ್ಲಿ ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಸಹ ಸಲ್ಫ್ಯೂರಿಕ್ ಸಂಯುಕ್ತಗಳೇ ಕಾರಣ.

ಕಾಲಲ್ಲಿ ಈರುಳ್ಳಿ
ಮಲಗುವಾಗ ಸಾಕ್ಸ್ ಧರಿಸಿ. ಅದರಲ್ಲಿ ಈರುಳ್ಳಿ ಚೂರನ್ನು ಹಾಕಿಕೊಂಡು ಮಲಗಬೇಕು ಅಥವಾ ಅಂಗಾಲಿಗೆ ಈರುಳ್ಳಿಯ ಸ್ಲೈಸ್ಅನ್ನು ಇಟ್ಟು ಬಟ್ಟೆ ಕಟ್ಟಿಕೊಂಡು ಮಲಗಿ. ಬೆಳಗ್ಗೆ ಇದನ್ನು ತೆಗೆಯಿರಿ. ಈ ಅಭ್ಯಾಸದಿಂದ ಗಾಳಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ದೇಹಕ್ಕೆ ಯಾವುದೇ ಸೋಂಕು ತಗಲದಂತೆ ನೋಡಿಕೊಳ್ಳುತ್ತದೆ.

ಈರುಳ್ಳಿ ಸೂಪ್
ಈರುಳ್ಳಿ ಸೂಪ್ ಮಾಡಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದು. ಇದರಲ್ಲಿ ಕ್ವೆರ್ಸೆಟಿನ್ ಗುಣ ಇರುವುದರಿಂದ ಪ್ರತಿರಕ್ಷಣಾ(ಆಂಟಿಆಕ್ಸಿಡೆಂಟ್)ಶಕ್ತಿಯನ್ನು ಹೆಚ್ಚಿಸುವುದು. ಜೊತೆಗೆ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಬಲಪಡಿಸುವುದು.

ಸೂಪ್ ತಯಾರಿಗೆ ಸಲಕರಣೆ
* ಒಂದು ಚಮಚ ಹಿಮಾಲಯನ್ ಉಪ್ಪು
* 4 ಕಪ್ ನೀರು
* 3 ಈರುಳ್ಳಿ
* 3 ಬೆಳ್ಳುಳ್ಳಿ ಎಸಳು

ಸೂಪ್ ತಯಾರಿಸುವ ವಿಧಾನ
* ಮೊದಲು ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಕತ್ತರಿಸಿಕೊಳ್ಳಿ.
* ನಂತರ ಒಂದು ಪಾತ್ರೆಯಲ್ಲಿ ನೀರು ಮತ್ತು ಎಲ್ಲಾ ಸಲಕರಣೆಯನ್ನು ಸೇರಿಸಿ, ಕುದಿಸಿರಿ.
* 20 ನಿಮಿಷ ಕುದಿಸಿ. ಬಳಿಕ ಸೋಸಿ. ಬೆಚ್ಚಗಿರುವಾಗಲೇ ಸೇವಿಸಿ.
* ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು.



Click it and Unblock the Notifications