Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಬಗೆ ಬಗೆಯ ಬೇಳೆಕಾಳುಗಳು, ಇದುವೇ ಆರೋಗ್ಯದ ಬೇರು
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂದು ತಿಳಿದ ನಮ್ಮ ಹಿರಿಯರು ಹೇಳಿದ್ದು "ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ" ಎಂಬ ಗಾದೆ ಮಾತು. ನಿಜವೇ ನೋಡಿ, ಊಟ ಎನ್ನುವುದು ನಮ್ಮ ಆರೋಗ್ಯ ಪಾಲನೆಯಲ್ಲಿ ಬಹು ಮುಖ್ಯವಾದ ಪಾತ್ರ ವಹಿಸುತ್ತದೆ. ಇದನ್ನು ಅರಿತ ನಮ್ಮ ಭಾರತೀಯರು ಊಟಕ್ಕೆ ಬಹಳಷ್ಟು ಪ್ರಾಮುಖ್ಯತೆ ನೀಡಿದರು.
ನಮ್ಮ ಸಾಂಪ್ರದಾಯಿಕ ಅಡಿಗೆ ನಮ್ಮ ಆರೋಗ್ಯಕ್ಕೆ ಒಂದು ದೊಡ್ಡ ಬಲ. ನಾವು ನಮ್ಮ ಭಾರತೀಯ ಶೈಲಿಯ ಅಡಿಗೆಗೆ ಬಳಸುವ ಎಲ್ಲ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿ ಹೊಟ್ಟೆಗೆ ಹಾಗೂ ನಮ್ಮ ದೇಹಕ್ಕೆ ಹಿತವಾದುವು. ನಾವು ನಮ್ಮ ಅಡಿಗೆಯಲ್ಲಿ ಬಹು ಮುಖ್ಯವಾಗಿ ಹಾಗೂ ಸಾಮಾನ್ಯವಾಗಿ ಬಳಸುವ ಬೇಳೆಕಾಳುಗಳ ಬಗ್ಗೆ ಈ ದಿನ ನಾವು ತಿಳಿದುಕೊಳ್ಳೋಣ....

ತೊಗರಿ ಬೇಳೆ - Toor Dal
ತೊಗರಿ ಬೇಳೆಯು ನಾವು ದಿನನಿತ್ಯ ಬಳಸುವ ಮುಖ್ಯವಾದ ಪದಾರ್ಥ. ನಾವು ವಿಧ ವಿಧವಾದ ತರಕಾರಿಗಳನ್ನು ಹಾಕಿ ಮಾಡುವ ಸಾಂಬಾರ್ / ಬೇಳೆಸಾರು ನಮ್ಮ ದೇಹಕ್ಕೆ ಬಹು ಮುಖ್ಯವಾದ "ಪ್ರೊಟೀನ್ಸ್" ಅನ್ನು ನೀಡುತ್ತದೆ. ತೊಗರಿ ಬೇಳೆಯಲ್ಲಿ ಇರುವ "ಫಾಲಿಕ್ ಆಸಿಡ್ " ಎನ್ನುವ ಒಂದು ಪೋಷಕಾಂಶವು ಗರ್ಭಿಣಿಯರಿಗೆ ಬಹಳ ಮುಖ್ಯ. ಇದರಿಂದ ಮಗುವಿನ ಬೌದ್ಧಿಕ ಬೆಳವಣಿಗೆ ಚೆನ್ನಾಗಿರುತ್ತದೆ. ಮಕ್ಕಳ ಆರೋಗ್ಯಕ್ಕಾಗಿ ತೊಗರಿಬೇಳೆ ಸೂಪ್

ಉದ್ದಿನ ಬೇಳೆ - Urad Dal / Black Gram
ಉದ್ದಿನ ಬೇಳೆ ಎನ್ನುವುದು ದೋಸೆ ಹಾಗೂ ಇಡ್ಲಿ ಪ್ರಿಯರಿಗೆ ಇಷ್ಟವಾದ ಬೇಳೆ. ಹಾಗೆಯೇ ಉದ್ದಿನ ವಡೆಯನ್ನು ಮರೆಯುವಂತೆ ಇಲ್ಲ. ಉದ್ದಿನ ಬೇಳೆಯು ಕಪ್ಪಗೆ ಗುಂಡಗೆ ಹಾಗೂ ಅರ್ಧಕ್ಕೆ ಸೀಳಿಯೂ ಮಾರುತ್ತಾರೆ. ಇದು ಜೀರ್ಣಿಸಿಕೊಳಲ್ಲು ಅಷ್ಟು ಸುಲಭವಲ್ಲದೆ ಇದ್ದರೂ, ಹೊಟ್ಟೆಯ ಮೇಲೆ ಹೆಚ್ಚೇನೂ ಒತ್ತಡ ಹಾಕುವುದಿಲ್ಲ. ಉದ್ದಿನ ಬೇಳೆಯು "ವಿಟಮಿನ್ಸ್", "ಮಿನರಲ್ಸ್" ಹಾಗೂ "ಪೊಟಾಸಿಯುಂ" ನ ಬಹು ದೊಡ್ಡ ಆಗರವಾಗಿದೆ. ಇದು ದೇಹದ ಶಕ್ತಿವರ್ಧಕವಾಗಿ, ಹೃದಯದ ಆರೋಗ್ಯಕ್ಕೆ ಪೂರಕವಾಗಿ, ಮಾಂಸಖಂಡ ಬೆಳವಣಿಗೆಗೆ ಹಾಗೂ ಪುರುಷರ ಲೈಂಗಿಕ ಆರೋಗ್ಯಕ್ಕೆ ಬಹಳ ಸಹಕಾರಿ. ಉದ್ದಿನ ಬೇಳೆಯಲ್ಲಿರುವ ಅದ್ಭುತ ಗುಣಗಳು!

ಮಧುಮೇಹ ನಿಯಂತ್ರಿಸುವ ಕಡಲೇ ಬೇಳೆ
ಕಡಲೆ ಬೇಳೆಯು ಉತ್ತಮ ನಾರಿನಂಶ ಹೊಂದಿದ್ದು "ಪ್ರೋಟಿನ್ಸ್" ಹಾಗೂ "ವಿಟಮಿನ್ ಬಿ", "ಮಂಗನೀಸ್", "ಪೊಟಸ್ಸಿಯುಂ", "ಪಾಸ್ಪರಸ್", "ಜ಼ಿಂಕ್ ", "ಕಾಲ್ಸಿಯುಂ" ಹಾಗೂ ಇತರ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಹುರಿದು ಪುಡಿ ಮಾಡಿದಾಗ ಬಹಳ ಸುವಾಸನೆಯುಕ್ತವಾಗಿ ಎಷ್ಟೋ ಸಿಹಿ ತಿಂಡಿಗಳ ಬಳಕೆಯಲ್ಲಿ ಹಾಗೂ ಇತರ ಅನೇಕ ಪದಾರ್ಥಗಳಲ್ಲಿ ಬಳಸಲ್ಪಡುತ್ತದೆ. ಇದರ ಬಳಕೆ ಇಂದ ನಾವು ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು.ಮಳೆಯಲಿ ಜೊತೆಯಲಿ : ಕಡಲೆ ಬೇಳೆ ಅಂಬೊಡೆ

ಹೆಸರು ಕಾಳು / ಹೆಸರು ಬೇಳೆ
ಹೆಸರು ಕಾಳು ಹಸಿರು ಬಣ್ಣದಲ್ಲಿ ಗುಂಡಗೆ ಇದ್ದು, ಇದನ್ನು ಒಡೆದು ಸಿಪ್ಪೆ ತೆಗೆದಾಗ ಹೊಳೆಯುವ ಹಳದಿ ಮಿಶ್ರಿತ ಬಂಗಾರದ ಬಣ್ಣದ ಬೆಳೆಯಾಗುತ್ತದೆ. ಹೆಸರು ಕಾಳಿನಲ್ಲಿ ಕೊಬ್ಬು ಹಾಗೂ ಕ್ಯಾಲೋರಿಗಳು ಕಮ್ಮಿ ಇದ್ದು, ಆರೋಗ್ಯಕ್ಕೆ ಉತ್ತಮವಾದ ಪ್ರೋಟೀನ್ ಹಾಗೂ ನಾರಿನಂಶ ಹೆಚ್ಚಿದೆ.

ಹೆಸರು ಕಾಳು / ಹೆಸರು ಬೇಳೆ
ಇದರಲ್ಲಿ ವಿವಿಧ ರೀತಿಯ ವಿಟಮಿನ್, ಮಿನರಲ್ ಗಳು ಇದ್ದಾವೆ. ಇದು ದೇಹಕ್ಕೆ ಹಾಗೂ ಹೊಟ್ಟೆಗೆ ಬಹಳ ತಂಪಾಗಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಇದರಲ್ಲಿ ಒಳ್ಳೆಯ "ಆಂಟಿ ಆಕ್ಸಿಡೆಂಟ್" ಇದ್ದು ಇದು ಚರ್ಮಕ್ಕೆ ಹೊಳಪು ಹಾಗೂ ಆರೋಗ್ಯ ನೀಡುತ್ತದೆ. ಹೆಸರುಕಾಳಿನಿಂದ ಹೆಚ್ಚಾಗುತ್ತೆ ಕೂದಲು ಮತ್ತು ಚರ್ಮದ ಆರೋಗ್ಯ

ಹುರಳಿ ಕಾಳು - Horse Gram
ಹುರಳಿ ಕಾಳು ದೇಹಕ್ಕೆ ಉಷ್ಣವಾಗಿದ್ದು ಇದನ್ನು ಶೀತ, ಕೆಮ್ಮು, ನೆಗಡಿ ಹಾಗೂ ಇತರ ಸಣ್ಣ ಪುಟ್ಟ ಕಾಯಿಲೆಗಳನ್ನು ಹಿಡಿತದಲ್ಲಿ ಇಡಲು ಬಳಸುತ್ತಾರೆ. ಆಯುರ್ವೇದ ಚಿಕಿತ್ಸೆಯಲ್ಲಿ ಮೂತ್ರಕೋಶದ ಕಲ್ಲಿನ ಸಮಸ್ಯೆ ನಿವಾರಣೆಗೆ ಹುರಳಿ ಒಳ್ಳೆಯದು ಎಂದು ಕೂಡ ಉಲ್ಲೇಖಿಸಿದೆ ಎಂದು ಒಂದು ವಾದ. ಹುರಳಿಯು ಬಹಳ ಶಕ್ತಿವರ್ಧಕ ಎಂದು ಕುದುರೆಗಳಿಗೂ ಆಹಾರವಾಗಿ ನೀಡಲಾಗುತ್ತದೆ. ಇದು ದೇಹದ ತೂಕ ಹಿಡಿತದಲ್ಲಿ ಇಟ್ಟು ದೇಹಕ್ಕೆ ಶಕ್ತಿ ಹಾಗೂ ಆರೋಗ್ಯ ನೀಡುತ್ತದೆ. ಹುರಳಿಯು ಹೊಟ್ಟೆಯಲ್ಲಿನ ಕ್ರಿಮಿ ಹಾಗೂ ಹುಳುವಿನ ನಿವಾರಣೆಗೆ ಒಳ್ಳೆಯದು.



Click it and Unblock the Notifications