Latest Updates
-
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್!
ಸುಟ್ಟಗಾಯ ನಿವಾರಣೆಗೆ ಈ ವಿಧಾನಗಳನ್ನು ಅನುಸರಿಸದಿರಿ!
ನೀವು ಯಾವುದಾದರೂ ಸಂದರ್ಭದಲ್ಲಿ ಅಡುಗೆ ಮಾಡುವಾಗ, ಬಿಸಿ ನೀರು ಕಾಯಿಸುವಾಗ, ಒಲೆಯನ್ನು ಉಪಯೋಗಿಸುವಾಗ, ಇಸ್ತ್ರಿ ಮಾಡುವಾಗ ಒಮ್ಮೆಯಾದರೂ ನಿಮ್ಮ ಕೈಗಳು ಅಥವಾ ದೇಹದ ಭಾಗವನ್ನು ಸುಟ್ಟುಕೊಂಡಿರುತ್ತೀರ. ಇದೊಂದು ಸಾಮಾನ್ಯ ಪ್ರಕ್ರಿಯೆ. ಇದರಲ್ಲಿ ಆಶ್ಚರ್ಯಪಡುವಂತದ್ದು ಏನೂ ಇಲ್ಲ. ಆಯಾ ಸಂದರ್ಭಗಳಿಗೆ ಅನುಗುಣವಾಗಿ ಸಣ್ಣ ಕಣ್ತಪ್ಪಿನಿಂದ ಈ ಅಚಾತುರ್ಯ ನಡೆದಿರುತ್ತದೆ. ಇದಕ್ಕೆ ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ. ಸರಿಯಾದ ಪರಿಹಾರವನ್ನು ಹುಡುಕಿ ಬಳಸಿದರೆ ಸಾಕು. ಸುಟ್ಟಗಾಯ ವಾಸಿಯಾಗುತ್ತದೆ. ಚರ್ಮ ಸುಟ್ಟ ಸಂದರ್ಭದಲ್ಲಿ ಕೆಲವರು ಕೂಡಲೇ ಮಂಜುಗಡ್ಡೆಯನ್ನು ಇಟ್ಟು ಒತ್ತುತ್ತಾರೆ. ಇದೊಂದು ಸಂಪೂರ್ಣವಾದ ತಪ್ಪು ಭಾವನೆ. ಸುಟ್ಟ ಗಾಯಗಳಿಗೆ ಕೆಲವು ಮನೆಮದ್ದು
ಆದರೆ ಮಂಜುಗಡ್ಡೆಯಿಂದ ಸುಟ್ಟಗಾಯ ವಾಸಿಯಾಗುವ ಬದಲು ನಿಮ್ಮ ಚರ್ಮದ ಟಿಶ್ಯೂ ಅನ್ನು ಹೆಚ್ಚು ಹಾನಿಮಾಡುತ್ತದೆ. ಇದು ಅನೇಕರಿಗೆ ತಿಳಿಯದ ಸಂಗತಿ. ಆದ್ದರಿಂದ ಸುಟ್ಟಗಾಯವನ್ನು ಶೀಘ್ರವಾಗಿ ನಿವಾರಿಸುವ ಆತುರದಲ್ಲಿ ಅನುಸರಿಸುವ ಕೆಲ ತಪ್ಪು ಅಭ್ಯಾಸಗಳ ಸಂಗತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಇವುಗಳನ್ನು ಬಳಸಿ ನಿಮ್ಮ ಗಾಯವನ್ನು ಇನ್ನೂ ಹೆಚ್ಚು ಉಲ್ಬಣಗೊಳಿಸಿಕೊಳ್ಳದಿರಿ, ಎಚ್ಚರ...

ಮಂಜುಗಡ್ಡೆ
ಸುಟ್ಟ ಗಾಯದ ಮೇಲೆ ಮಂಜುಗಡ್ಡೆಯನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳದಿರಿ. ಮಂಜುಗಡ್ಡೆಯು ರಕ್ತಸಂಚಾರವನ್ನು ನಿಲ್ಲಿಸಿ ನಿಮ್ಮ ಚರ್ಮದ ಟಿಶ್ಯೂವನ್ನು ಹಾನಿಮಾಡುತ್ತದೆ. ಇದರ ಬದಲು ತಂಪಾದ ಹರಿಯುವ ನೀರಿಗೆ ನಿಮ್ಮ ಗಾಯವನ್ನು ಒಡ್ಡಿ.

ಬೆಣ್ಣೆ
ಕೆಲವರು ಬೆಣ್ಣೆಯನ್ನು ಸುಟ್ಟಗಾಯಕ್ಕೆ ಉಪಯೋಗಿಸುತ್ತಾರೆ. ಇದೂ ಸಹ ತಪ್ಪು ಕಲ್ಪನೆ. ಬೆಣ್ಣೆ ಹಚ್ಚುವುದರಿಂದ ನಿಮ್ಮ ಗಾಯದ ಮೇಲೆ ಬ್ಯಾಕ್ಟೀರಿಯಾಗಳು ಉಂಟಾಗಿ ಸೋಂಕು ಇನ್ನೂ ಹೆಚ್ಚಾಗುತ್ತದೆ.

ಟೂತ್ ಪೇಸ್ಟ್
ಟೂತ್ ಪೇಸ್ಟ್ ಬಳಸುವುದೂ ಸಹ ಒಳ್ಳೆಯ ಅಭ್ಯಾಸವಲ್ಲ. ಇದರಿಂದ ಕೇವಲ ಹಿತಕರ ಅನುಭವವುಂಟಾಗುವುದೇ ಹೊರತು ಗಾಯವನ್ನು ವಾಸಿ ಮಾಡುವ ಶಕ್ತಿ ಇದರಲ್ಲಿ ಅಡಗಿಲ್ಲ. ಇದರಲ್ಲಿನ ಕ್ಯಾಲ್ಷಿಯಂ ಸತ್ವದಿಂದ ನಿಮ್ಮ ಗಾಯದ ಸೋಂಕು ಹೆಚ್ಚಾಗಲು ಕಾರಣವಾಗುತ್ತದೆ.

ಹೈಡ್ರೋಜೆನ್ ಪೆರಾಕ್ಸೈಡ್
ಸೌಮ್ಯವಾದ ನಂಜುನಿರೋಧಕವಾದ ಹೈಡ್ರೋಜೆನ್ ಪೆರಾಕ್ಸೈಡ್ ಅನ್ನು ಸಾಮಾನ್ಯವಾಗಿ ಸುಟ್ಟ ಗಾಯಕ್ಕೆ ಬಳಸಲಾಗುತ್ತದೆ. ಇದು ಸ್ವಾಭಾವಿಕವಾಗಿ ವಿನಾಶಕಾರಿಯಾಗಿದ್ದರೂ ಸಹ ಇದರ ಬಳಕೆಯಿಂದ ನೋವು ಮತ್ತು ಉರಿಯೂತ ಹೆಚ್ಚಾಗುತ್ತದೆ.

ಲಿಂಬೆ
ಸುಟ್ಟಗಾಯವನ್ನು ಹಿತಗೊಳಿಸಲು ಲಿಂಬೆಯನ್ನು ಕೆಲವರು ಬಳಸುತ್ತಾರೆ. ಲಿಂಬೆಯನ್ನು ನೇರವಾಗಿ ಚರ್ಮಕ್ಕೆ ಬಳಸುವುದರಿಂದ ನಿಮ್ಮ ಗಾಯವು ಉಲ್ಪಣಗೊಳ್ಳುವುದಲ್ಲದೇ ನಿಮ್ಮ ಚರ್ಮಕ್ಕೆ ಹಾನಿಯುಂಟಾಗುವ ಸಂಭವ ಜಾಸ್ತಿ ಇರುತ್ತದೆ.



Click it and Unblock the Notifications