Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಸಾಮಾಜಿಕ ಜಾಲತಾಣಗಳು ಮತ್ತು ಸ್ತನ ಕ್ಯಾನ್ಸರ್!
ಜೀವನದಲಿ ಸಂಕಷ್ಟಗಳು ಬಯಸದೆಯೆ ಬರುತ್ತವೆ. ಬಂದುದನ್ನು ಎದುರಿಸುವುದರಲ್ಲೇ ಅರ್ಧ ಗೆಲುವು ಅಡಗಿದೆ. ಆದರೆ ಇದರ ಕಾರ್ಯರೂಪ ಹೇಳಿದಷ್ಟು ಸರಳವಾಗಿಲ್ಲ! ಸಾಮಾಜಿಕ ಜಾಲತಾಣದಲ್ಲಿ ಚಟುವಟಿಕೆಯಿಂದಿರುವ, ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವ ಮಹಿಳೆಯರು ಚಿಕಿತ್ಸೆಗೆ ಹೆಚ್ಚು ಗುಣತ್ಮಕವಾಗಿ ಸ್ಪಂದಿಸಿರುವುದು ಕಂಡುಬಂದಿದೆ, ಎಂದು ಅಧ್ಯಯನ ವರದಿ ಮಾಡಿದೆ
ಇಂದು ಬಹಳಷ್ಟು ರೀತಿಯ ಸಾಮಾಜಿಕ ಜಾಲತಾಣಗಳು ಚಾಲ್ತಿಯಲ್ಲಿವೆ. ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪ್ ಗಳು ಸರ್ವೇ ಸಮಾನ್ಯ. ಸುಮಾರು ಶೇ.12 ರಷ್ಟು ಮಹಿಳೆಯರು ನಿತ್ಯವೂ ಫೇಸ್ ಬುಕ್ ಪಾರಾಯಣ ಮಾಡುತ್ತಾರೆಂಬ ದಾಖಲೆ ಇದೆ! ಅಷ್ಟೇ ಅಲ್ಲ, ಶೇ. 41 ರಷ್ಟು ಮಹಿಳೆಯರು ವಾಟ್ಸಪ್ನಂತಹ ಸಾಮಾಜಿಕ ತಾಣಗಳಲ್ಲಿ ಹರಟುತ್ತಾರೆಂಬುದು ಕಂಡುಬಂದಿದೆ. ಮದ್ಯಪಾನದಿಂದ ಸ್ತನ ಕ್ಯಾನ್ಸರ್ ಬರುವುದು ನಿಶ್ಚಿತ...

ಸ್ತನಕ್ಯಾನ್ಸರ್ಗೆ ತುತ್ತಾದ ಹಲವಾರು ಮಹಿಳೆಯರು ಇಂತಹ ಜಾಲತಾಣಗಳಲ್ಲಿರುವ ತಮ್ಮ ಆಪ್ತರೊಂದಿಗೆ ತಮ್ಮ ಸಮಸ್ಯೆಗಳನ್ನು ಬಿತ್ತರಿಸಿ,ಸಲಹೆ ಪಡೆದುಕೊಳ್ಳುತ್ತಾರೆ. ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ, ಮನಸ್ಸನ್ನು ಹಗುರಾಗಿಸಿಕೊಂಡು ಸಕಾಲದಲ್ಲಿ ಸೂಕ್ತ ಚಿಕಿತ್ಸೆಗೆ ಒಳಗಾಗಿ ಸ್ತನಕ್ಯಾನ್ಸರ್ ನಂತಹ ಗಂಭೀರವಾದ ಕಾಯಿಲೆಯನ್ನು ಹತೋಟಿಯಲ್ಲಿ ಇಡುವಲ್ಲಿ ಯಶಸ್ವಿಯಾಗಿದ್ದಾರೆಂದು ಅಮೇರಿಕಾದ ಮಿಶಿಗನ್ ವಿದ್ಯಾಲಯದ ಪ್ರೊಫೆಸರ್ ಲಾರೆನ್ ಪಿ. ವಾಲ್ನರ್, ತಮ್ಮ ಸಂಶೋಧನಾ ಸಮೀಕ್ಷೆಯಲ್ಲಿ ಉಲ್ಲೇಖಿಸಿದ್ದಾರೆ. ಸ್ತನ ಕ್ಯಾನ್ಸರ್ನ ಹೆಡೆಮುರಿ ಕಟ್ಟಿ ಹಾಕುವ ಸೂಪರ್ ಫುಡ್!
ಇವರು ತಮ್ಮ ಸಂಶೋಧನೆಗಾಗಿ ಸ್ತನ ಕ್ಯಾನ್ಸರ್ ಪತ್ತೆಯಾದ ಸುಮಾರು 2460 ಮಹಿಳೆಯರನ್ನು ಆಯ್ದುಕೊಂಡರೆನ್ನಲಾಗಿದೆ." ಸಾಮಾಜಿಕ ಜಾಲ ತಾಣಗಳು ಬಿತ್ತರಿಸುವ ಸುದ್ದಿ-ಸಲಹೆಗಳಿಂದ ಗುಣಾತ್ಮಕ ಪರಿಣಾಮ ಇರುವಂತೆಯೇ ಋಣಾತ್ಮಕ( ಭಯಾನಕ..) ಪರಿಣಾಮಗಳೂ ಬಂದಾವು.
ಈ ಮಾಧ್ಯಮಗಳನ್ನು ಸಂಪೂರ್ಣವಾಗಿ ಅವಲಂಬಿಸದೇ, ಪ್ರಜ್ಞಾಪೂರ್ವಕವಾಗಿ ಚಿಂತಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ" ಎನ್ನುತ್ತಾರೆ ಪ್ರೊ/ ವಾಲ್ನರ್. ನಿಜ. ನಮ್ಮ ಅಳಲನ್ನು ಆಪ್ತರೊಂದಿಗೆ ಹಂಚಿಕೊಂಡಾಗ ಹಗುರಾಗುತ್ತೇವೆ. ಸಜ್ಜನರು ಧೈರ್ಯ ತುಂಬಿ, ಸಲಹೆ ನೀಡುತ್ತಾರೆ. ಅಂತೆಯೇ ಮೋಸಗಾರರ ಜಾಲದಲ್ಲಿ ಬೀಳದಂತಹ ಎಚ್ಚರಿಕೆ ನಮಗಿರಬೇಕು, ಅಷ್ಟೆ. ಕ್ಲಪ್ತ ಸಮಯದಲ್ಲಿ ವೈದ್ಯರನ್ನು ಕಂಡು ಚಿಕಿತ್ಸೆಗೆಳಗಾಗುವುದು ಅಷ್ಟೇ ಮುಖ್ಯ, ಅಲ್ಲವೆ?
(ಐಎಎನ್ಎಸ್ ವರದಿ)
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











