Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಅಲಕ್ಷ್ಯ ಮಾಡಬೇಡಿ, ಕಣ್ಣುಗಳೇ ನಮ್ಮ ಅಮೂಲ್ಯ ಸಂಪತ್ತು
ಕಣ್ಣು ತುಂಬಾ ಸೂಕ್ಷ್ಮ ಮತ್ತು ಪ್ರಮುಖ ಅಂಗವಾದ್ದರಿಂದ ಇದರೆಡೆಗಿನ ನಿರ್ಲಕ್ಷ್ಯ ಸಲ್ಲದು. ಕಣ್ಣಿನ ಮೇಲಿನ ಅತಿಯಾದ ಒತ್ತಡ ಕಣ್ಣು ನೋವಿಗೆ ಕಾರಣವಾಗಬಹುದು. ಆದ್ದರಿಂದ ಕಣ್ಣಿಗೂ ಸ್ಪೆಷಲ್ ಕೇರ್ ಅಗತ್ಯವಿದೆ...
ದೇಹದಲ್ಲಿ ಕಣ್ಣುಗಳು ಸೂರ್ಯ-ಚಂದ್ರರು ಇದ್ದಂತೆ. ಆಕಾಶದಲ್ಲಿ ಸೂರ್ಯ ಚಂದ್ರರು ಇಲ್ಲದೆ ಭೂಮಿಯ ಮೇಲೆ ಯಾವ ಪರಿಣಾಮ ಬೀರಬಹುದೋ ಅದೇ ಕಣ್ಣುಗಳು ಇಲ್ಲದೆ ದೇಹದ ಮೇಲೆ ಅದೇ ಪರಿಣಾಮ ಉಂಟಾಗಬಹುದು. ಕಣ್ಣುಗಳ ಆರೋಗ್ಯ ಹಾಗೂ ಅವುಗಳ ಆರೈಕೆ ತುಂಬಾ ಮುಖ್ಯವಾಗಿದೆ. ಕಣ್ಣುಗಳಿಗೆ ತೊಂದರೆಯಾದರೆ ಅದರಿಂದ ದೇಹಕ್ಕೆ ದೊಡ್ಡ ಅಡ್ಡಪರಿಣಾಮ ಬೀರಲಿದೆ. ಕಣ್ಣುಗಳೇ ನಮ್ಮ ಅಮೂಲ್ಯ ಸಂಪತ್ತು- ನಿರ್ಲಕ್ಷ್ಯ ಮಾಡದಿರಿ....
ದೃಷ್ಟಿ ಸರಿಯಿಲ್ಲದೆ ಇದ್ದಾಗ ನಮಗೆ ಸುತ್ತಮುತ್ತಲಿನಲ್ಲಿರುವ ವಸ್ತುಗಳನ್ನು ನೋಡಲು ಸಾಧ್ಯವಾಗುತ್ತದೆ. ಇಲ್ಲವೆಂದಾದರೆ ನಮ್ಮ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವೇ ಇಲ್ಲ. ಇಂದಿನ ದಿನಗಳಲ್ಲಿ ಅತಿಯಾಗಿ ಕಂಪ್ಯೂಟರ್ ಮತ್ತು ಮೊಬೈಲ್ ಅನ್ನು ಬಳಸುವುದರಿಂದ ಕಣ್ಣಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.

ಹಲವಾರು ಸಮಸ್ಯೆಗಳು ಕಣ್ಣುಗಳನ್ನು ಕಾಡುವುದರಲ್ಲಿ ಸಂಶಯವೇ ಇಲ್ಲ. ಕಣ್ಣು ಒಣಗುವುದು, ಕಣ್ಣು ನೋವು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಕೆಲವೊಂದು ಮನೆಮದ್ದನ್ನು ಬಳಸಬಹುದು. ಇದು ಯಾವುದೆಂದು ಈ ಲೇಖನದ ಮೂಲಕ ನೀವು ತಿಳಿಯಿರಿ. ಇಂತಹ ಲಕ್ಷಣಗಳು ಕಂಡುಬಂದರೆ 'ಓದುವ ಕನ್ನಡಕ' ಅತ್ಯವಶ್ಯಕ...
ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು
ಕ್ಯಾಮೊಮೈಲ್ ಟೀ ಬ್ಯಾಗ್ -2
ರೋಸ್ ವಾಟರ್ -2 ಚಮಚ
ಕಂಪ್ಯೂಟರ್ ಹಾಗೂ ಮೊಬೈಲ್ನಲ್ಲಿ ಕಡಿಮೆ ಸಮಯ ವ್ಯಯ ಮಾಡಿ, ಕಲುಷಿತ ವಾತಾವರಣಕ್ಕೆ ಕಣ್ಣುಗಳನ್ನು ಬಿಟ್ಟುಕೊಡಬಾರದು. ಹೀಗೆ ಮಾಡಿದಲ್ಲಿ ಈ ನೈಸರ್ಗಿಕ ಮನೆಮದ್ದು ಕಣ್ಣಿನ ಒತ್ತಡ ಕಡಿಮೆ ಮಾಡಿ ಆರೋಗ್ಯ ನೀಡುವಲ್ಲಿ ತುಂಬಾ ಪರಿಣಾಮಕಾರಿಯಾಗಲಿದೆ.
ಕ್ಯಾಮೊಮೈಲ್ ಮತ್ತು ರೋಸ್ ವಾಟರ್ ಕಣ್ಣಿಗೆ ಶಮನ ನೀಡಿ ಒತ್ತಡ ಕಡಿಮೆ ಮಾಡುವುದು. ಇದು ಉರಿಯೂತವನ್ನು ಕಡಿಮೆ ಮಾಡುವುದರಿಂದ ಕಣ್ಣು ಕೆಂಪಾಗುವುದು ಮತ್ತು ಕಣ್ಣು ಒಣಗುವುದನ್ನು ಇದು ತಡೆಯುವುದು. ಈ ಮನೆಮದ್ದನ್ನು ಕೋಶಗಳು ಹೀರಿಕೊಂಡಾಗ ಇದು ದೃಷ್ಟಿಯ ನರಗಳನ್ನು ಬಲಗೊಳಿಸಿ ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ.
ಮನೆಮದ್ದು ತಯಾರಿಸುವ ಮತ್ತು ಬಳಸುವ ವಿಧಾನ
*ಕ್ಯಾಮೊಮೈಲ್ ಟೀ ಬ್ಯಾಗ್ ಗಳನ್ನು ಬಿಸಿ ನೀರಿನಲ್ಲಿ ಮುಳುಗಿಸಿ.
ಸ್ವಲ್ಪ ಸಮಯ ಹಾಗೆ ಇರಲಿ.
*ಹತ್ತಿಯ ಉಂಡೆಯನ್ನು ರೋಸ್ ವಾಟರ್ನಲ್ಲಿ ಅದ್ದಿ ಅದನ್ನು ಕಣ್ಣಿನ ರೆಪ್ಪೆಗಳ ಒಳಭಾಗಕ್ಕೆ ಹಚ್ಚಿಕೊಳ್ಳಿ.
*ಎರಡು ಟೀ ಬ್ಯಾಗ್ಗಳನ್ನು ಕಣ್ಣಿನ ಮೇಲಿಡಿ.
*30 ನಿಮಿಷಗಳ ಕಾಲ ಹಾಗೆ ಇರಲಿ. ಕಣ್ಣುಗಳು ಮುಚ್ಚಿರಲಿ. ಒಂದು ತಿಂಗಳ ಕಾಲ ಪ್ರತೀ ದಿನ ಹೀಗೆ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


