Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಬಾಳೆಹಣ್ಣಿನ ಸಿಪ್ಪೆಯ ಪವರ್ಗೆ 'ತಲೆನೋವು' ಮಂಗಮಾಯ!
ಪ್ರತೀ ಸಲ ತಲೆನೋವು ಕಾಣಿಸಿಕೊಂಡಾಗ ಮಾತ್ರೆ ತೆಗೆದುಕೊಳ್ಳುವುದು ದೇಹಕ್ಕೆ ಒಳ್ಳೆಯದಲ್ಲ. ತಲೆನೋವು ಬಂದಾಗ ಮನೆಮದ್ದನ್ನು ಬಳಸಿದರೆ ಯಾವುದೇ ಅಡ್ಡಪರಿಣಾಮಗಳಿಲ್ಲ. ತಲೆನೋವನ್ನು ನಿವಾರಣೆಗೆ ಬಾಳೆಹಣ್ಣಿನ ಸಿಪ್ಪೆಯ ಔಷಧಿಯನ್ನು ಬಳಸಬಹುದು.
ದೈನಂದಿನ ಚಟುವಟಿಕೆಗಳು ಸರಾಗವಾಗಿ ಸಾಗಬೇಕಾದರೆ ದೇಹದ ಪ್ರತಿಯೊಂದು ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ದೇಹದ ಯಾವುದೇ ಅಂಗದಲ್ಲಿ ನೋವು ಕಾಣಿಸಿಕೊಂಡರೆ ಕೆಲಸ ಮಾಡಲು ಆಸಕ್ತಿಯೇ ಇರುವುದಿಲ್ಲ. ಅದರಲ್ಲೂ ತಲೆನೋವು ಕಾಣಿಸಿಕೊಂಡರೆ ಊಟತಿಂಡಿ ಏನೂ ಬೇಡ ಎನ್ನುವಂತೆ ಆಗುತ್ತದೆ. ತಲೆನೋವು ಕಾಣಿಸಿಕೊಂಡಾಗ ತಕ್ಷಣಗೆ ಹೋಗಿ ಮೆಡಿಕಲ್ ನಿಂದ ಮಾತ್ರೆ ತಂದು ನುಂಗುತ್ತೇವೆ. ಬಾಳೆಹಣ್ಣಿನ ಸಿಪ್ಪೆಯ ಚಮತ್ಕಾರಿಕ ಪ್ರಯೋಜನ ಅರಿಯಿರಿ!
ಆದರೆ ಪ್ರತೀ ಸಲ ತಲೆನೋವು ಕಾಣಿಸಿಕೊಂಡಾಗ ಮಾತ್ರೆ ತೆಗೆದುಕೊಳ್ಳುವುದು ದೇಹಕ್ಕೆ ಒಳ್ಳೆಯದಲ್ಲ. ಇದಕ್ಕಾಗಿ ತಲೆನೋವು ಬಂದಾಗ ಮನೆಮದ್ದನ್ನು ಬಳಸಿದರೆ ಅದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗಲ್ಲ. ತಲೆನೋವನ್ನು ನಿವಾರಣೆ ಮಾಡಬೇಕಾದರೆ ಬಾಳೆಹಣ್ಣಿನ ಸಿಪ್ಪೆಯ ಔಷಧಿಯನ್ನು ಬಳಸಬಹುದು. ಇದನ್ನು ಯಾವ ರೀತಿ ಬಳಸಿದರೆ ತಲೆನೋವು ನಿವಾರಣೆ ಆಗಬಹುದು ಎಂದು ಈ ಲೇಖನದ ಮೂಲಕ ತಿಳಿಯಿರಿ. ತಲೆನೋವು ಓಡಿಸುವ ಮನೆ ಮದ್ದು: ಪ್ರಯತ್ನಿಸಿ ನೋಡಿ

ಬೇಕಾಗುವ ಸಾಮಗ್ರಿಗಳು
*ಒಂದು ಬಾಳೆಹಣ್ಣಿನ ಸಿಪ್ಪೆ
*ನೀಲಗಿರಿ ಎಣ್ಣೆ- ಕೆಲವು ಹನಿ

ಬೇಕಾಗುವ ಸಾಮಗ್ರಿಗಳು
ತಲೆನೋವನ್ನು ನಿವಾರಣೆ ಮಾಡಲು ಈ ಮನೆಮದ್ದು ಹೇಳಿಮಾಡಿಸಿದಂತಿದೆ. ಒತ್ತಡ, ನಿಶ್ಯಕ್ತಿ ಮತ್ತು ಸೈನಸ್ ನಿಂದ ಬರುವಂತಹ ತಲೆನೋವಿಗೆ ಇದು ರಾಮಬಾಣ. ಈ ಮದ್ದಿನಿಂದ ತಲೆನೋವು ನಿವಾರಣೆ ಆಗದೆ ಇದ್ದಾಗ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಯಾಕೆಂದರೆ ಇದು ಬೇರೆ ಯಾವುದೋ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು.

ಬಾಳೆಹಣ್ಣಿನ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆಯಲ್ಲಿ ನೈಸರ್ಗಿಕವಾಗಿ ತಂಪು ಪ್ರಭಾವ ಬೀರುವಂತಹ ಗುಣಗಳು ಇವೆ. ಇದರಲ್ಲಿ ಪೊಟಾಶಿಯಂ ಅಂಶವು ಅಡಗಿರುವುದರಿಂದ ತಲೆಯ ಭಾಗದಲ್ಲಿ ಉಂಟಾಗಿರುವಂತಹ ಉರಿಯೂತವನ್ನು ಶಮನ ಮಾಡುತ್ತದೆ. ಇದರಿಂದ ತಲೆನೋವು ಕಡಿಮೆಯಾಗುವುದು.

ನೀಲಗಿರಿ ಎಣ್ಣೆ
ನೀಲಗಿರಿ ಎಣ್ಣೆಯಲ್ಲಿ ಕೂಡ ಉರಿಯೂತ ಶಮನಕಾರಿ ಗುಣಗಳು ಇರುವುದರಿಂದ ಇದು ನೋವನ್ನು ನಿವಾರಿಸಿ ನರಗಳನ್ನು ಶಮನಗೊಳಿಸುತ್ತದೆ.

ಈ ಮನೆಮದ್ದನ್ನು ಬಳಸುವ ವಿಧಾನ
ಹಣೆಯ ಭಾಗಕ್ಕೆ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಹಚ್ಚಿಕೊಳ್ಳಿ. ಈ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಇಡಿ.

ಈ ಮನೆಮದ್ದನ್ನು ಬಳಸುವ ವಿಧಾನ
ಬಾಳೆಹಣ್ಣಿನ ಸಿಪ್ಪೆಯ ಒಳಭಾಗವು ಹಣೆಗೆ ತಾಗುತ್ತಿರಬೇಕು. 20-30 ನಿಮಿಷ ಕಾಲ ಹಾಗೆ ಬಿಡಿ.

ಈ ಮನೆಮದ್ದನ್ನು ಬಳಸುವ ವಿಧಾನ
ಮಲಗಿಕೊಂಡು ನಿಧಾನವಾಗಿ 30 ನಿಮಿಷ ಕಾಲ ಉಸಿರಾಡಿ. ಈ ಮನೆಮದ್ದನ್ನು ಪ್ರಯತ್ನಿಸಿ ನೋಡಿ ಅದರ ಫಲಿತಾಂಶ ಹೇಗಿತ್ತು ಎಂದು ನಮಗೆ ತಿಳಿಸಿ.



Click it and Unblock the Notifications