Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಧಿವಾತಕ್ಕೆ ಮನೆಮದ್ದು ಇರುವಾಗ, ವೈದ್ಯರ ಹಂಗೇಕೆ?
ಸಾಮಾನ್ಯವಾಗಿ ಮೂಳೆಗಳು ಕೂಡುವ ಸಂಧಿಯಲ್ಲಿ ಸೋಂಕು ಉಂಟಾದರೆ ಇಲ್ಲಿ ಅಪಾರ ನೋವು, ಚರ್ಮ ಕೆಂಪಗಾಗುವುದು ಮತ್ತು ಊದಿಕೊಳ್ಳುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಪ್ರಾರಂಭದಲ್ಲಿ ನಿಧಾನವಾಗಿ ನೋವು ಪ್ರಾರಂಭವಾಗುತ್ತದೆ. ಇದನ್ನು ಕಡೆಗಣಿಸಿದರೆ ಭೀಕರ ರೂಪ ಪಡೆಯಬಹುದು. ಬೆರಳುಗಳನ್ನು ಮುಟ್ಟಲೂ ಆಗದಷ್ಟು ನೋವು ಆವರಿಸಬಹುದು. ವಿಶೇಷವಾಗಿ ಕಾಲುಬೆರಳು, ಕೈಬೆರಳು, ಹಿಮ್ಮಡಿ, ಮಂಡಿಯ ಸಂಧಿಗಳಲ್ಲಿ ಈ ತೊಂದರೆ ಅತಿ ಹೆಚ್ಚಾಗಿ ಕಾಣಬರುತ್ತದೆ, ಇವೆಲ್ಲವೂ ಸಂಧಿವಾತದ ಲಕ್ಷಣವಾಗಿದೆ.

ಸಂಧಿವಾತಕ್ಕೆ ರಕ್ತದಲ್ಲಿ ಯೂರಿಕ್ ಆಮ್ಲದ ಹೆಚ್ಚಳ ಪ್ರಮುಖ ಕಾರಣವಾಗಿದೆ. ಮೂಳೆಗಳ ಸಂಧಿಯಲ್ಲಿ ಎರಡು ಮೂಳೆಗಳು ಕೀಲಿನ ರೂಪದಲ್ಲಿ ಚಲಿಸಲು ಜಾರುಕದಂತಹ ದ್ರವವಿದೆ. ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದರೆ ಇದು ಚಿಕ್ಕ ಹರಳುಗಳ ರೂಪ ಪಡೆಯುತ್ತದೆ. ಈ ಹರಳುಗಳು ಮೂಳೆಗಳ ಸಂದುಗಳಲ್ಲಿ ಸೇರಿಕೊಂಡು ನಯವಾದ ಮೂಳೆಗಳ ಮೇಲ್ಮೈಯನ್ನು ಸವೆಸುತ್ತವೆ. ಅಲ್ಲದೇ ಸೋಂಕು ಉಂಟಾಗಿ ಜಾರುಕದ ಪ್ರಮಾಣವೂ ಕಡಿಮೆಯಾಗುತ್ತದೆ. ಆಗ ನರಾಗ್ರಗಳಿಗೆ ತೀವ್ರ ಸಂವೇದನೆ ದೊರೆತು ಅಪಾರ ನೋವು ಪ್ರಾರಂಭವಾಗುತ್ತದೆ. ಸಂಧಿವಾತ ಸಮಸ್ಯೆಯ ಲಕ್ಷಣ ಮತ್ತು ಕಾರಣ
ಆದರೆ ಈ ಸ್ಥಿತಿಯಿಂದ ರಕ್ಷಿಸಲು ನಿಸರ್ಗ ಕೆಲವು ಸಾಮಾಗ್ರಿಗಳನ್ನು ಔಷಧಿಯ ರೂಪದಲ್ಲಿ ನೀಡಿದೆ. ಪಪ್ಪಾಯಿ ಕಾಯಿ, ಹಸಿರು ಟೀ ಎಲೆಗಳನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಈ ಪೇಯವನ್ನು ಕುಡಿಯುತ್ತಾ ಬಂದರೆ ಸಂಧಿವಾತ ನಿಧಾನವಾಗಿ ಇಲ್ಲವಾಗುತ್ತದೆ. ಪಪ್ಪಾಯಿ ಕಾಯಿಯಲ್ಲಿ ವಿಟಮಿನ್ನುಗಳು, ಪೊಟ್ಯಾಶಿಯಂ, ಮೆಗ್ನೀಶಿಯಂ, ವಿವಿಧ ಕಿಣ್ವಗಳು ಮತ್ತು ಫೈಟೋ ನ್ಯೂಟ್ರಿಯೆಂಟ್ ಮೊದಲಾದ ಪೋಷಕಾಂಶಗಳಿದ್ದು ಜೀರ್ಣಕ್ರಿಯೆಗೆ ನೆರವಾಗುತ್ತವೆ. ಇದಕ್ಕೂ ಮಿಗಿಲಾಗಿ ಪೊಪ್ಪಾಯಿಯಲ್ಲಿರುವ ಪಪಾಯಿನ್ ಎಂಬ ಪೋಷಕಾಂಶ ಉರಿಯೂತ ನಿವಾರಕ ಗುಣ ಹೊಂದಿದ್ದು ವಿಶೇಷವಾಗಿ ಸಂಧಿವಾತ ನಿವಾರಿಸಲು ಸಮರ್ಥವಾಗಿದೆ. ಕೀಲು ನೋವಿನ ಪರಿಹಾರಕ್ಕೆ ಪೂರಕ ಔಷಧಿ ಯಾವುದು?
ಈ ಅದ್ಭುತ ಪೇಯವನ್ನು ಕುಡಿಯುವುದರಿಂದ ಸಂಧಿವಾತ ಮಾತ್ರವಲ್ಲ, ಕೆಲವು ವಿಧದ ಅಸ್ತಮಾವನ್ನೂ ಗುಣಪಡಿಸುತ್ತದೆ. ಅಲ್ಲದೇ ಕರುಳಿನ ಕಲ್ಮಶಗಳನ್ನು ಹೊರಹಾಕಲು, ವಾಕರಿಕೆ ತಡೆಯಲು, ಮಲಬದ್ಧತೆಯಿಂದಲೂ ರಕ್ಷಿಸುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಎದುರಾಗುವ ಮೂತ್ರನಾಳದ ಸೋಂಕನ್ನೂ ನಿವಾರಿಸುತ್ತದೆ ಹಾಗೂ ನಿಯಮಿತವಾಗಿ ಸೇವಿಸುವ ಮೂಲಕ ಮತ್ತೆ ಬರದಂತೆ ರಕ್ಷಿಸುತ್ತದೆ.
ಇದರೊಂದಿಗೆ ಬಳಸಲಾಗುವ ಹಸಿರು ಟೀ ಯಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿವೆ. ಇದರಲ್ಲಿ ಪ್ರಮುಖವಾಗಿರುವ ಪಾಲಿಫೆನಾಲ್ಗಳು ಸಂಧಿವಾತ ನಿವಾರಿಸುವ ಗುಣ ಹೊಂದಿದ್ದು ನೋವು ನಿವಾರಕವೂ ಆಗಿವೆ. ಈ ಎರಡೂ ಸಾಮಾಗ್ರಿಗಳನ್ನು ಬಳಸಿ ತಯಾರಿಸಿದ ಪೇಯ ಅತ್ಯಂತ ಸುರಕ್ಷಿತವಾಗಿದ್ದು ಇದರಲ್ಲಿ ಯಾವುದೇ ಅಡ್ಡಪರಿಣಾಮವಿರುವುದಿಲ್ಲ. ಸಂಧಿವಾತ, ಉರಿಯೂತ ನಿವಾರಿಸುವ ಪವರ್ ಫುಲ್ ಜ್ಯೂಸ್
ಈ ಪೇಯವನ್ನು ತಯಾರಿಸುವ ಬಗೆ
1. ಸುಮಾರು ಎರಡು ಲೀಟರ್ ಸ್ವಚ್ಛ ಕುಡಿಯುವ ನೀರನ್ನು ಒಂದು ಪಾತ್ರೆಯಲ್ಲಿ ಕುದಿಸಿ
2. ಒಂದು ಮಧ್ಯಮಗಾತ್ರದ ಹಸಿ ಪಪ್ಪಾಯಿ (ಕಾಯಿ)ಯನ್ನು ಚೆನ್ನಾಗಿ ತೊಳೆದು ಸಿಪ್ಪೆ ಸುಲಿಯಿರಿ.
3. ಪಪ್ಪಾಯಿಯನ್ನು ಕೊಯ್ದು ಬೀಜಗಳನ್ನು ನಿವಾರಿಸಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ
4. ಈ ತುಂಡುಗಳನ್ನು ನೀರು ಕುದಿಯಲು ಪ್ರಾರಂಭಿಸಿದ ಬಳಿಕ ನೀರಿನಲ್ಲಿ ಹಾಕಿ ಐದು ನಿಮಿಷ ಕುದಿಸಿ. ಉರಿ ಮಧ್ಯಮವಾಗಿರಲಿ.
5. ಬಳಿಕ ಈ ನೀರಿಗೆ ಎರಡು ಚಿಕ್ಕಚಮಚ ಹಸಿರು ಟೀ ಸೇರಿಸಿ ಇನ್ನೂ ನಾಲ್ಕೈದು ನಿಮಿಷ ಕುದಿಸಿ.
6. ಬಳಿಕ ಈ ನೀರನ್ನು ಸೋಸಿ ಇನ್ನೊಂದು ಪಾತ್ರೆಯಲ್ಲಿ ಸಂಗ್ರಹಿಸಿ. ಈ ನೀರನ್ನು ತಣಿಯಲು ಬಿಡಿ.
7. ಈ ನೀರನ್ನು ದಿನವಿಡೀ ಕೊಂಚಕೊಂಚವಾಗಿ ಕುಡಿಯುತ್ತಾ ಬನ್ನಿ. ಅಷ್ಟೂ ನೀರನ್ನು ದಿನದಲ್ಲಿ ಪೂರ್ತಿ ಕುಡಿದು ಖಾಲಿಮಾಡಬೇಕು.
ಕೆಲವು ದಿನಗಳಲ್ಲಿಯೇ ಇದರ ಪರಿಣಾಮ ಕಂಡುಬರುತ್ತದೆ. ನೋವು ಪೂರ್ಣವಾಗಿ ಕಡಿಮೆಯಾಗಿದೆ ಅನ್ನಿಸಿದ ಬಳಿಕವೂ ಒಂದೆರಡು ದಿನ ಮುಂದುವರೆಸಿ ಬಳಿಕ ನಿಲ್ಲಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


