Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರೋಗ್ಯದ ದೃಷ್ಟಿಯಿಂದ ದಿನಂಪ್ರತಿ ಇಂತಹ ಆಹಾರಗಳನ್ನು ಸೇವಿಸಿ
ಇಂದಿನ ಗಡಿಬಿಡಿಯ ಜೀವನದಲ್ಲಿ ನಾವುಗಳು ಯಾವ ಆಹಾರವನ್ನು ಸೇವಿಸುತ್ತಿದ್ದೇವೆ ಎಂದು ಯೋಚಿಸುವುದನ್ನೇ ಮರೆತುಬಿಟ್ಟಿದ್ದೇವೆ. ಯಾವುದು ಸುಲಭವಾಗಿ ಸಿಗುತ್ತದೋ ಧೀರ್ಘಕಾಲದಲ್ಲಿ ಅದರಿಂದ ಆಗುವ ದುಷ್ಪರಿಣಾಮದ ಬಗ್ಗೆಯೂ ಯೋಚಿಸದೇ ತಿಂದುಬಿಡುತ್ತೇವೆ.
ಕೆಲವೊಮ್ಮೆ ದಿನದ ಬಹು ಮುಖ್ಯವಾದ ಆಹಾರ ಸೇವನೆಯಾದ ಬೆಳಗಿನ ತಿಂಡಿಯನ್ನೇ ಕೆಲಸಗಳ ಒತ್ತಡದಲ್ಲಿ ಮರೆತುಬಿಡುತ್ತೇವೆ. ಹೀಗೆ ಮಾಡುವುದರಿಂದ ನಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ ರೋಗಗಳು ಬರುವ ಸಾಧ್ಯತೆ ಇರುತ್ತದೆ.
ಅನಾರೋಗ್ಯಕರ ಅನಿಯಮಿತ ಆಹಾರ ಸೇವನೆಯಿಂದ ಬೊಜ್ಜು, ಸೋಮಾರಿತನ ಬರುತ್ತದೆ. ಮೊದಲೇ ಇದಕ್ಕೆ ಸೂಕ್ತ ಪರಿಹಾರ ತೆಗೆದುಕೊಳ್ಳದಿದ್ದರೆ, ಮುಂದೆ, ಎಡಿಎಚ್ ಡಿ, ಆಲ್ಜೈಮರ್ಸ್, ಸಕ್ಕರೆ ಕಾಯಿಲೆ, ಹೈ ಬಿಪಿ, ಹೃದಯಕ್ಕೆ ಸಂಬಂಧಪಟ್ಟ ರೋಗಗಳು ಬರಬಹುದು. ಮಧುಮೇಹ ರೋಗ- ಆಹಾರಗಳ ಸೇವನೆಯಲ್ಲಿ ನಿಗಾ ವಹಿಸಿ...
ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದಿದ್ದರೆ, ಉತ್ತಮವಾದ ಆಹಾರವನ್ನು ಸೇವಿಸಬೇಕೆಂದಿದ್ದರೆ, ಇಲ್ಲಿ ಕೆಲವು ಆಹಾರಪದಾರ್ಥಗಳನ್ನು ಪಟ್ಟಿಯನ್ನು ನೀಡಲಾಗಿದೆ. ಇದನ್ನು ದಿನಂಪ್ರತಿ ಸೇವಿಸಿದರೆ ಆರೋಗ್ಯವಂತರಾಗಿ ರೋಗಮುಕ್ತರಾಗುತ್ತೀರಿ.

ದಿನಂಪ್ರತಿ ಮೀನನ್ನು ತಿನ್ನಬೇಕು. ಆಯ್ಲಿ ಫಿಶ್ಗಳಾದ ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೈನ್ಸ್ ಡಿಎಚ್ಎ, ವಿಟಮಿನ್ ಡಿ ಹಾಗು ಸೆಲೀನಿಯಮ್ಯಿಂದ ಸಮೃದ್ಧವಾಗಿರುತ್ತದೆ. ಇವು ನೆನೆಪಿನ ಶಕ್ತಿಯನ್ನು ವೃದ್ಧಿಸಿ, ಅತಿಯಾದ ಫ್ರುಕ್ಟೋಸ್ಯಿಂದ ಹಾನಿಯಾದ ಮೆದುಳಿನ ಅಂಗಾಶವನ್ನು ಗುಣಪಡಿಸಿ ಉರಿಯೂತದಿಂದಾಗುವ ಹಾನಿಯನ್ನು ತಪ್ಪಿಸುತ್ತದೆ. ದೇಹದೊಳಗಿನ ಕಲ್ಮಶ ಹೊರಹಾಕುವ ಮನೆಮದ್ದುಗಳು
ನೀವು ಶಾಕಾಹಾರಿಗಳಾದರೆ, ದಿನ ನಿತ್ಯದ ಆಹಾರದಲ್ಲಿ ಮೀನನ್ನು ಸೇವಿಸಲಾಗದಿದ್ದಲ್ಲಿ ಅಗಸೆ ಬೀಜ, ಚಿಯಾ ಬೀಜವನ್ನು ಸೇವಿಸಬೇಕು. ಇವು ಕ್ಯಾಲ್ಸಿಯಮ್, ಪ್ರೋಟೀನ್ ಮತ್ತು ಉತ್ಕರ್ಷಣ ದಿಂದ ಸಮೃದ್ಧವಾಗಿರುತ್ತದೆ. ಅತಿ ಹೆಚ್ಚು ನಾರಿನಾಂಶವಿದ್ದು ಒಮೇಗ3 ಯಿಂದ ಕೂಡಿರುತ್ತದೆ.
ನಾರಿನಾಂಶವು ದೇಹದಲ್ಲಿನ ಟಾಕ್ಸಿನ್ಸ್ ತೆಗೆದು ಹಾಕಿ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಇವುಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸುವುದು ಅತೀ ಮುಖ್ಯ. ಆಲೋವೀರವನ್ನು ಕ್ಲೆನ್ಸರ್ ಎಂದೇ ಹೇಳುತ್ತಾರೆ. ಇಡೀ ದಿನ ಅನಾರೋಗ್ಯಕರ ಆಹಾರವನ್ನು ಸೇವಿಸಿದ ಮೇಲೆ, ಆಲೋವೀರದ ತಿರುಳು ಅಥವಾ ಅದರ ರಸವನ್ನು ತೆಗೆದುಕೊಳ್ಳಬೇಕು. ಇದು ಕರುಳನ್ನು ಸ್ವಚ್ಛ ಮಾಡಿ, ಉರಿಊತಗಳನ್ನು ಶಮನ ಮಾಡುತ್ತದೆ. ಇದರಲ್ಲಿ ಅಮೀನೋ ಆಸಿಡ್, ವಿಟಮಿನ್ಸ್ ಹಾಗು ಮಿನರಲ್ಸ್ಗಳೂ ಹೇರಳವಾಗಿರುತ್ತದೆ.
ದಿನ ಪೂರ್ತಿ ಅನಾರೋಗ್ಯಕರ, ವಿಪರೀತವಾಗಿ ಆಹಾರವನ್ನು ಸೇವಿಸಿದರೆ, ರಾತ್ರಿ ಹೊತ್ತು ಲಗು ಉಪಹಾರ ಮಾಡಬೇಕು. ಇದಕ್ಕೆ ನೀವು ಚಿಕನ್ ಮತ್ತು ಫಿಶ್ಗಳ ಮೂಳೆಗಳಿಂದ ಮಾಡಿದ ಸಾರನ್ನು ತೆಗೆದುಕೊಳ್ಳಬೇಕು. ಇದು ದೇಹಕ್ಕೆ ಬೇಕಾಗಿರುವ ಮಿನರಲ್ಸ್ ಮತ್ತು ಪೌಷ್ಠಿಕಾಂಶವನ್ನು ಕೊಡುತ್ತದೆ ಹಾಗು ಸುಲಭವಾಗಿ ಪಚನವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications













