Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಆರೋಗ್ಯದ ದೃಷ್ಟಿಯಿಂದ ದಿನಂಪ್ರತಿ ಇಂತಹ ಆಹಾರಗಳನ್ನು ಸೇವಿಸಿ
ಇಂದಿನ ಗಡಿಬಿಡಿಯ ಜೀವನದಲ್ಲಿ ನಾವುಗಳು ಯಾವ ಆಹಾರವನ್ನು ಸೇವಿಸುತ್ತಿದ್ದೇವೆ ಎಂದು ಯೋಚಿಸುವುದನ್ನೇ ಮರೆತುಬಿಟ್ಟಿದ್ದೇವೆ. ಯಾವುದು ಸುಲಭವಾಗಿ ಸಿಗುತ್ತದೋ ಧೀರ್ಘಕಾಲದಲ್ಲಿ ಅದರಿಂದ ಆಗುವ ದುಷ್ಪರಿಣಾಮದ ಬಗ್ಗೆಯೂ ಯೋಚಿಸದೇ ತಿಂದುಬಿಡುತ್ತೇವೆ.
ಕೆಲವೊಮ್ಮೆ ದಿನದ ಬಹು ಮುಖ್ಯವಾದ ಆಹಾರ ಸೇವನೆಯಾದ ಬೆಳಗಿನ ತಿಂಡಿಯನ್ನೇ ಕೆಲಸಗಳ ಒತ್ತಡದಲ್ಲಿ ಮರೆತುಬಿಡುತ್ತೇವೆ. ಹೀಗೆ ಮಾಡುವುದರಿಂದ ನಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ ರೋಗಗಳು ಬರುವ ಸಾಧ್ಯತೆ ಇರುತ್ತದೆ.
ಅನಾರೋಗ್ಯಕರ ಅನಿಯಮಿತ ಆಹಾರ ಸೇವನೆಯಿಂದ ಬೊಜ್ಜು, ಸೋಮಾರಿತನ ಬರುತ್ತದೆ. ಮೊದಲೇ ಇದಕ್ಕೆ ಸೂಕ್ತ ಪರಿಹಾರ ತೆಗೆದುಕೊಳ್ಳದಿದ್ದರೆ, ಮುಂದೆ, ಎಡಿಎಚ್ ಡಿ, ಆಲ್ಜೈಮರ್ಸ್, ಸಕ್ಕರೆ ಕಾಯಿಲೆ, ಹೈ ಬಿಪಿ, ಹೃದಯಕ್ಕೆ ಸಂಬಂಧಪಟ್ಟ ರೋಗಗಳು ಬರಬಹುದು. ಮಧುಮೇಹ ರೋಗ- ಆಹಾರಗಳ ಸೇವನೆಯಲ್ಲಿ ನಿಗಾ ವಹಿಸಿ...
ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದಿದ್ದರೆ, ಉತ್ತಮವಾದ ಆಹಾರವನ್ನು ಸೇವಿಸಬೇಕೆಂದಿದ್ದರೆ, ಇಲ್ಲಿ ಕೆಲವು ಆಹಾರಪದಾರ್ಥಗಳನ್ನು ಪಟ್ಟಿಯನ್ನು ನೀಡಲಾಗಿದೆ. ಇದನ್ನು ದಿನಂಪ್ರತಿ ಸೇವಿಸಿದರೆ ಆರೋಗ್ಯವಂತರಾಗಿ ರೋಗಮುಕ್ತರಾಗುತ್ತೀರಿ.

ದಿನಂಪ್ರತಿ ಮೀನನ್ನು ತಿನ್ನಬೇಕು. ಆಯ್ಲಿ ಫಿಶ್ಗಳಾದ ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೈನ್ಸ್ ಡಿಎಚ್ಎ, ವಿಟಮಿನ್ ಡಿ ಹಾಗು ಸೆಲೀನಿಯಮ್ಯಿಂದ ಸಮೃದ್ಧವಾಗಿರುತ್ತದೆ. ಇವು ನೆನೆಪಿನ ಶಕ್ತಿಯನ್ನು ವೃದ್ಧಿಸಿ, ಅತಿಯಾದ ಫ್ರುಕ್ಟೋಸ್ಯಿಂದ ಹಾನಿಯಾದ ಮೆದುಳಿನ ಅಂಗಾಶವನ್ನು ಗುಣಪಡಿಸಿ ಉರಿಯೂತದಿಂದಾಗುವ ಹಾನಿಯನ್ನು ತಪ್ಪಿಸುತ್ತದೆ. ದೇಹದೊಳಗಿನ ಕಲ್ಮಶ ಹೊರಹಾಕುವ ಮನೆಮದ್ದುಗಳು
ನೀವು ಶಾಕಾಹಾರಿಗಳಾದರೆ, ದಿನ ನಿತ್ಯದ ಆಹಾರದಲ್ಲಿ ಮೀನನ್ನು ಸೇವಿಸಲಾಗದಿದ್ದಲ್ಲಿ ಅಗಸೆ ಬೀಜ, ಚಿಯಾ ಬೀಜವನ್ನು ಸೇವಿಸಬೇಕು. ಇವು ಕ್ಯಾಲ್ಸಿಯಮ್, ಪ್ರೋಟೀನ್ ಮತ್ತು ಉತ್ಕರ್ಷಣ ದಿಂದ ಸಮೃದ್ಧವಾಗಿರುತ್ತದೆ. ಅತಿ ಹೆಚ್ಚು ನಾರಿನಾಂಶವಿದ್ದು ಒಮೇಗ3 ಯಿಂದ ಕೂಡಿರುತ್ತದೆ.
ನಾರಿನಾಂಶವು ದೇಹದಲ್ಲಿನ ಟಾಕ್ಸಿನ್ಸ್ ತೆಗೆದು ಹಾಕಿ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಇವುಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸುವುದು ಅತೀ ಮುಖ್ಯ. ಆಲೋವೀರವನ್ನು ಕ್ಲೆನ್ಸರ್ ಎಂದೇ ಹೇಳುತ್ತಾರೆ. ಇಡೀ ದಿನ ಅನಾರೋಗ್ಯಕರ ಆಹಾರವನ್ನು ಸೇವಿಸಿದ ಮೇಲೆ, ಆಲೋವೀರದ ತಿರುಳು ಅಥವಾ ಅದರ ರಸವನ್ನು ತೆಗೆದುಕೊಳ್ಳಬೇಕು. ಇದು ಕರುಳನ್ನು ಸ್ವಚ್ಛ ಮಾಡಿ, ಉರಿಊತಗಳನ್ನು ಶಮನ ಮಾಡುತ್ತದೆ. ಇದರಲ್ಲಿ ಅಮೀನೋ ಆಸಿಡ್, ವಿಟಮಿನ್ಸ್ ಹಾಗು ಮಿನರಲ್ಸ್ಗಳೂ ಹೇರಳವಾಗಿರುತ್ತದೆ.
ದಿನ ಪೂರ್ತಿ ಅನಾರೋಗ್ಯಕರ, ವಿಪರೀತವಾಗಿ ಆಹಾರವನ್ನು ಸೇವಿಸಿದರೆ, ರಾತ್ರಿ ಹೊತ್ತು ಲಗು ಉಪಹಾರ ಮಾಡಬೇಕು. ಇದಕ್ಕೆ ನೀವು ಚಿಕನ್ ಮತ್ತು ಫಿಶ್ಗಳ ಮೂಳೆಗಳಿಂದ ಮಾಡಿದ ಸಾರನ್ನು ತೆಗೆದುಕೊಳ್ಳಬೇಕು. ಇದು ದೇಹಕ್ಕೆ ಬೇಕಾಗಿರುವ ಮಿನರಲ್ಸ್ ಮತ್ತು ಪೌಷ್ಠಿಕಾಂಶವನ್ನು ಕೊಡುತ್ತದೆ ಹಾಗು ಸುಲಭವಾಗಿ ಪಚನವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


