Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮಧುಮೇಹ ರೋಗ- ಆಹಾರಗಳ ಸೇವನೆಯಲ್ಲಿ ನಿಗಾ ವಹಿಸಿ...
ಒಂದು ಬಾರಿ ನಿಮ್ಮ ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶ ಇದೆ ಎಂದು ನಿಮಗೆ ಗೊತ್ತಾದರೆ, ನಿಮ್ಮ ಆಹಾರಪದ್ಧತಿ ಹಾಗು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲೇಬೇಕು. ನಿಮ್ಮ ವೈದ್ಯರ ಬಳಿ ಹೋಗಿ ಅವರು ಕೊಡುವ ಸಲಹೆ-ಸೂಚನೆಗಳ ಪ್ರಕಾರ ನಡೆದುಕೊಳ್ಳಬೇಕು. ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವುದನ್ನು ಬಿಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಆಗಾಗ ರಕ್ತದಲ್ಲಿ ಸಕ್ಕರೆ ಅಂಶ ಎಷ್ಟಿದೆ ಎಂಬುದನ್ನು ರಕ್ತ ಪರೀಕ್ಷೆ ಮಾಡಿಸಿಕೊಂಡು ತಿಳಿದುಕೊಳ್ಳಬೇಕು.

ನೀವು ಮಧುಮೇಹಿ ರೋಗಿಗಳಾಗಿದ್ದರೆ, ರಿಫೈನ್ಡ್ ಸಕ್ಕರೆ, ಡೆಸೆರ್ಟ್ಸ್, ಸಿರಪ್, ಗ್ಲೂಕೋಸ್, ಜಾಮ್, ಹಣ್ಣಿನಲ್ಲಿರುವ ಸಕ್ಕರೆ ಅಂಶ, ಐಸ್ಕ್ರೀಮ್, ಕೇಕ್ಸ್, ಪೇಸ್ಟ್ರಿ, ಸಿಹಿ ತಿನಿಸುಗಳು, ಬಿಸ್ಕೆಟ್ಗಳು , ಚಾಕ್ಲೆಟ್ಗಳು, ಕಾರ್ಬೋನೇಟೆಡ್ ಡ್ರಿಂಕ್ಸ್ಗಳು , ಕೆನೆ, ಮಂದಗೊಳಿಸಿದ ಹಾಲು, ಕರಿದ ಪದಾರ್ಥಗಳು ಹಾಗು ಇನ್ನಿತರ ಪೂರ್ವಸಿದ್ಧತೆಗೊಳಿಸಿರುವ ಮತ್ತು ಸಂರಕ್ಷಕಗಳನ್ನು ಬಳಸಿ ತಯಾರಿಸಿದ ಆಹಾರ ಪದಾರ್ಥಗಳಿಂದ ದೂರವಿರಬೇಕು. ಮಧುಮೇಹ ರೋಗಿಗಳ ಆಹಾರ ಕ್ರಮ ಹೇಗಿರಬೇಕು?
ಗಿಡಮೂಲಿಕೆಗಳಿಂದ ತಯಾರಿಸಿದ ಪಾರ್ಸ್ಲಿ ಟೀ, ಗ್ರೀನ್ ಟೀ, ಬ್ಲೂಬೆರ್ರಿ ಎಲೆಗಳಿಂದ ತಯಾರಿಸಿದ ಟೀ, ಅಕ್ರೋಡ್ ಮರದ ಎಳೆ ಎಲೆಗಳಿಂದ ತಯಾರಿಸಿದ ಟೀಯನ್ನು ಕುಡಿಯಬೇಕು. ಸಂಶೋಧನೆಯ ಪ್ರಕಾರ ಕಿಡ್ನಿಬೀನ್ ಬೀಜಗಳನ್ನು ಬೇಯಿಸಿದ ನೀರು ಸಹ ಮಧುಮೇಹಿಗಳಿಗೆ ಒಳ್ಳೆಯದು ಎಂದು ತಿಳಿದು ಬಂದಿದೆ.
ಮಿತವಾಗಿ ಬಳಸಬೇಕಾಗಿರುವ ಆಹಾರವೆಂದರೆ, ಜೇನು, ಪಾಮ್ ಸಕ್ಕರೆ, ಖರ್ಜೂರವನ್ನು ಬಿಳಿಯ ಸಕ್ಕರೆ ಬದಲಾಗಿ ಬಳಸಬಹುದು. ಕಡಿಮೆ ಕೊಬ್ಬಿನ ಅಂಶವಿರುವ ಆಹಾರವಾದ ಕೆನೆತೆಗೆದ ಹಾಲು(ಸ್ಕಿಮ್ಡ್ ಮಿಲ್ಕ್), ಮನೆಯಲ್ಲೇ ತಯಾರಿಸಿದ ಗಿಣ್ಣು ಮೊದಲಾದವುಗಳನ್ನು ಮಿತವಾಗಿ ಸೇವಿಸಬಹುದು.
ಧಾನ್ಯಗಳು, ಹಣ್ಣುಗಳು, ಬೀಜಗಳು,ತರಕಾರಿಗಳು, ಹಾಲಿನ ಉತ್ಪನ್ನಗಳು..ಇವು ಮಧುಮೇಹಿಗಳಿಗೆ ಒಳ್ಳೆಯ ಆಹಾರವಾಗಿರುತ್ತದೆ. ಹಾಗೆಯೇ ಸೌತೆಕಾಯಿ, ಲೆಟ್ಯೂಸ್, ಈರುಳ್ಳಿ, ಬೆಳ್ಳುಳ್ಳಿ, ನಾರಿಲ್ಲದ ಹುರಳೀಕಾಯಿ, ಮೂಲಂಗಿ, ಟೊಮೇಟೊ, ಪಾಲಕ್, ಎಲೆಕೋಸು, ಟರ್ನಿಪ್ ಮುಂತಾದವುಗಳು ಮಧುಮೇಹಿ ರೋಗಿಗಳಿಗೆ ಉತ್ತಮ ಆಹಾರವಾಗಿದೆ. ಟೈಪ್-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ
ಬಣ್ಣದ ತರಕಾರಿಗಳು ಪ್ಯಾನ್ಕ್ರಿಯಾಸ್ ಕೆಲಸ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಮೊಳಕೆ ಬರಿಸಿದ ಹೆಸರು ಕಾಳು ಮತ್ತು ಬ್ರಿವರ್ಸ್ ಯೀಸ್ಟ್(ಬುರುಗು)ದೇಹದ ಆರೋಗ್ಯ ಕಾಪಾಡುವಲ್ಲಿ ಲಾಭದಾಯಕವಾಗಿದೆ. ಹೆಚ್ಚು ನಾರಿನಂಶವಿರುವ ಆಹಾರವನ್ನು ಸೇವಿಸಿದರೆ, ಇನ್ಸುಲಿನ್ ಅವಶ್ಯಕತೆಯನ್ನು ಕಡಿಮೆ ಮಾಡುತ್ತದೆ.
ಯಾರು ಹೆಚ್ಚು ನಾರಿನಾಂಶ ಇರುವ ಪದಾರ್ಥಗಳನ್ನು ಅಥವಾ ಧಾನ್ಯಗಳೊಳಗೊಂಡ ಆಹಾರವನ್ನು ನಿಯಮಿತವಾಗಿ ಸೇವಿಸುತ್ತಾರೋ ಅವರಲ್ಲಿ ಡೈಯಾಬಿಟಿಸ್ ಮೆಲ್ಲಿಟಸ್ ತಗ್ಗುತ್ತದೆ ಅಥವಾ ಸಂಪೂರ್ಣವಾಗಿ ಹೊರಟು ಹೋಗುತ್ತದೆ. ಹೆಚ್ಚು ನಾರಿನಂಶವಿರುವ ಆಹಾರದಲ್ಲಿ ಕ್ರೋಮಿಯಮ್ ಇರುತ್ತದೆ. ಇದು ಮಧುಮೇಹ ರೋಗಿಗಳಿಗೆ ಉತ್ತಮವಾದದ್ದು.
ಪೊಟಾಶಿಯಮ್ಯಿಂದ ಸಮೃದ್ಧವಾದ ಆಹಾರವಾದ ಹಸಿ ಬೀಜ, ಟೊಮೇಟೊ, ಬಾಳೆಹಣ್ಣು, ಕರ್ಬೂಜ, ಒಣ ಬಟಾಣಿ, ಆಲೂಗಡ್ಡೆ, ಸೇಬು, ಗೋಧಿ, ಸ್ಕಿಮ್ಡ್ ಪೌಡರ್ಡ್ ಮಿಲ್ಕ್ ಹೆಚ್ಚಾಗಿ ಬಳಸಬೇಕು. ಆದರೆ ಪೊಟಾಶಿಯಮ್ ಪೂರಕಗಳನ್ನು ತೆಗೆದುಕೊಳ್ಳಬೇಡಿ. ಮಧುಮೇಹಕ್ಕೆ ತಡೆ ಹಾಕುವ ಆರೋಗ್ಯಕರ ಜೀವನಶೈಲಿ
ನಿಮ್ಮ ನಿತ್ಯದ ಆಹಾರದಲ್ಲಿ ಬಾರ್ಲಿ, ಓಟ್ಸ್, ಬಾದಾಮಿ, ಒಣ ಹುರುಳಿಕಾಳು, ಕಿಡ್ನಿ ಕಾಳು, ಬಟಾಣಿ, ಬೇಯಿಸಿದ ಕಪ್ಪು ಹುರಳಿ ಕಾಳು, ಧಾನ್ಯಗಳು ಹಾಗು ಗಾರ್ಬಾನ್ಸೊ ಕಾಳುಗಳನ್ನು ಕೂಡ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



