Just In
- 2 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 11 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 12 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 12 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- News Karnataka Lok Sabha: 28 ಕ್ಷೇತ್ರಗಳ ಜಾತಿವಾರು ಅಭ್ಯರ್ಥಿಗಳ ಯಾರು? ಮಾಹಿತಿ ಇಲ್ಲಿದೆ
- Automobiles ಎಲೆಕ್ಟ್ರಿಕ್ ಲೋಕಕ್ಕೆ ಎಸ್ಯುವಿ ದೈತ್ಯನ ಎಂಟ್ರಿ: ಇನ್ನು ಉಳಿದ ಕಾರುಗಳನ್ನು ದೇವರೇ ಕಾಪಾಡಬೇಕು!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಸಿಡಿಟಿ ಸಮಸ್ಯೆಗೆ 8 ಉತ್ತಮ ಪರಿಹಾರ
ಅಸಿಡಿಟಿ ಮುಖ್ಯವಾಗಿ ಕಡಿಮೆ ನಾರಿನಂಶವಿರುವ ಆಹಾರಗಳ ಸೇವನೆ, ಮಾನಸಿಕ ಮತ್ತು ಕೆಲಸದ ಒತ್ತಡ, ಮದ್ಯಪಾನ ಮತ್ತು ಧೂಮಪಾನದಿಂದ ಅಥವಾ ಖಾರಪದಾರ್ಥಗಳನ್ನು ತಿನ್ನುವುದು, ಕುರುಕಲು ತಿಂಡಿಗಳು, ಅಧಿಕ ಎಣ್ಣೆ ಪದಾರ್ಥ, ಬೆಳಗಿನ ತಿಂಡಿ ಬಿಡುವುದು ಅಥವಾ ಊಟ ಬಿಡುವುದು ಈ ಎಲ್ಲಾ ಕಾರಣಗಳಿಂದ ಉಂಟಾಗುತ್ತದೆ.
ಅಸಿಡಿಟಿ ಸಮಸ್ಯೆ ಕಾಣಿಸಿಕೊಂಡರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಉತ್ತಮವಾದ ಪ್ರಯೋಜನ ದೊರೆಯುತ್ತದೆ.
1. ಈ ಅಸಿಡಿಟಿ ಕಾಯಿಲೆಗೆ ಆರ್ಯುವೇದದಲ್ಲಿ ನೀಡುವ ಔಷಧಿ ಅಂದರೆ ಗುಲ್ಕಾನ್. ಇದನ್ನು ನಾಡ ಔಷಧಿ ಎಂದು ಕೂಡ ಹೇಳಬಹುದು. ಇದನ್ನು ತಿಂದರೆ ರಕ್ತ ಶುದ್ಧವಾಗುತ್ತದೆ, ಸ್ನಾಯುಗಳ ನೋವು ಕಡಿಮೆಯಾಗುತ್ತೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು antioxidant ಪ್ರಮಾಣ ಅಧಿಕವಿರುವುದರಿಂದ ಸಂಧಿವಾತ ಮತ್ತು ಪಿತ್ತಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
2. ಅಸಿಡಿಟಿ ಹೆಚ್ಚಾದರೆ ಮಲದಲ್ಲಿ ರಕ್ತ ಬರುವುದು, ಆದ್ದರಿಂದ ಅಸಿಡಿಟಿ ಕಾಣಿಸಿದರೆ ಮೊಸರನ್ನ ಊಟ ಮತ್ತು ಬಾಳೆಹಣ್ಣು ಸೇವನೆ ಒಳ್ಳೆಯದು.
3. ಅಸಿಡಿಟಿ ಮತ್ತು ಹೃದಯದ ಉರಿ ಕಡಿಮೆಯಾಗಲು ಖರ್ಜೂರ ಸಹಾಯಮಾಡುತ್ತದೆ
4. ಆಲೀವ್ ಎಲೆಯಲ್ಲಿ anti-inflammatory ಗುಣವಿರುವುದರಿಂದ ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್, ಹೊಟ್ಟೆ ಉರಿ ಹಾಗೂ ಹೊಟ್ಟೆ ನೋವಿನಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.
5. ಅಸಿಡಿಟಿ ಕಾಣಿಸಿಕೊಂಡರೆ ಸ್ವಲ್ಪ ಜೀರಿಗೆ ಬಾಯಿಗೆ ಹಾಕಿಕೊಂಡರೆ ಸಾಕು ಗುಣಮುಖವಾಗುವುದು.
6. ಅಸಿಡಿಟಿ ಇದ್ದವರು ಒಂದು ಲೋಟ ನೀರಿಗೆ ಒಂದು ತುಂಡು ಬೆಲ್ಲ ಹಾಕಿ ಕರಗಿಸಿ ಊಟವಾದ ಮೇಲೆ ಕುಡಿಯುವುದು ಒಳ್ಳೆಯದು.
7. ಗ್ಯಾಸ್ಟ್ರಿಕ್, ಅಸಿಡಿಟಿ, ಅಜೀರ್ಣ ಮುಂತಾದ ಕಾರಣದಿಂದ ಹೊಟ್ಟೆ ನೋವು ಬಂದಾಗ ಬಿಸಿ ನೀರಿನೊಂದಿಗೆ ಓಮು ಕಾಳನ್ನು ತಿನ್ನುವುದರಿಂದ ಉಪಶಮನಗೊಳ್ಳುತ್ತದೆ.
8. ಒಂದು ಹಿಡಿ ಪಾಲಕ್ ಸೊಪ್ಪು, ಸಣ್ಣ ಹಸಿ ಶುಂಠಿ, ಒಂದು ಹಿಡಿ ಕೊತ್ತಂಬರಿ, ಜೀರಿಗೆ 1 ಚಮಚ ಈ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ಎರಡು ಗ್ಲಾಸ್ ನೀರು ಹಾಕಿ ಚೆನ್ನಾಗಿ ಜ್ಯೂಸ್ ಮಾಡಬೇಕು. ಒಂದು ಬಿಳಿ ಬಟ್ಟೆಯಲ್ಲಿ ಜ್ಯೂಸ್ ಅನ್ನು ಸೋಸಿ, ಲಿಂಬೆ ಹಣ್ಣಿನ ರಸ ಸೇರಿಸಿ ಕುಡಿದರೆ ಅಸಿಡಿಟಿ ಕಡಿಮೆಯಾಗುವುದು. ಸಿದ್ಧಪಡಿಸಿದ ಗ್ರೀನ್ ಜ್ಯೂಸ್ ಅನ್ನು ಬಹಳ ಹೊತ್ತು ಇಡಬಾರದು.