Suicide Prevention: ಹೀಗೆ ಮಾಡಿ ಆತ್ಮಹತ್ಯೆಯ ಯೋಚನೆ ತಡೆಗಟ್ಟಬಹುದು

ಸೆಪ್ಟೆಂಬರ್ 10ನ್ನು ವಿಶ್ವ ಆತ್ಮಹತ್ಯೆ ನಿಯಂತ್ರಣ ದಿನವನ್ನಾಗಿ ಆಚರಿಸಲಾಗುವುದು. ಆತ್ಮಹತ್ಯೆ ಎಂಬ ಅಪಾಯಕರಿ ಯೋಚನೆ ತಡೆಗಟ್ಟಲು, ಜನರಲ್ಲಿ ಮತ್ತೆ ದುಕುವ ಛಲ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಆತ್ಮಹತ್ಯೆ ಎಂಬುವುದು ಸಮಸ್ಯೆಗೆ ಪರಿಹಾರವಲ್ಲ, ಆತ್ಮಹತ್ಯೆ ಎಂಬುವುದು ಒಂದು ಕ್ಷಣ ಬರುವ ಆಲೋಚನೆ. ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕಿಳಿದವರ ಬಳಿ ಮಾತನಾಡಿ ಆಗ ಅವರು ಛೇ ನಾನು ಎಂಥ ತಪ್ಪು ಆಲೋಚನೆ ಮಾಡಿದ್ದೆ, ನಾನು ಆತ್ಮಹತ್ಯೆಗೆ ಪ್ರಯತ್ನಿಸಬಾರದಿತ್ತು, ನನ್ನಿಂದ ತಪ್ಪಾಗಿದೆ ಎಂದು ಪಶ್ಚಾತಾಪ ಪಡುತ್ತಾರೆ.

Suicide Prevention

ಆತ್ಮಹತ್ಯೆ ಯೋಚನೆ ಅನೇಕ ಕಾರಣಗಳಿಂದ ಬರಬಹುದು. ಸೋಲು, ಹತಾಶೆ, ಖಿನ್ನತೆ ಇವೆಲ್ಲಾ ಆತ್ಮಹತ್ಯೆಗೆ ಪ್ರೇರೇಪಿಸಬಹುದು, ಆದರೆ ಒಂದು ಕ್ಷನ ಆತ್ಮಹತ್ಯೆಯ ಆಲೋಚನೆ ಬಿಟ್ಟು ಬೇರೆ ಯೋಚಿಸಿದರೆ ಮತ್ತೆ ತಪ್ಪು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಇನ್ನು ನಮ್ಮಮನೆಯವರು ಅಥವಾ ಆತ್ಮೀಯರು ಏಕೋ ವಿಚಿತ್ರವಾಗಿ ವರ್ತಿಸುತ್ತಿದ್ದರೆ ಎಂದನಿಸಿದರೆ ಅವರತ್ತ ಗಮನ ನೀಡಿ, ಅವರ ಮಾತುಗಳನ್ನು ಆಲಿಸಿ, ಅವರಲ್ಲಿರುವ ಆತ್ಮಹತ್ಯೆಯ ಆಲೋಚನೆಯನ್ನು ದೂರ ಮಾಡಿ.

ಆತ್ಮಹತ್ಯೆ ಆಲೋಚನೆ ಬಂದಾಗ ಈ ಕೆಳಗೆ ಹೇಳಿರುವ ಅಂಶಗಳಂತೆ ನಡೆದುಕೊಂಡರೆ ಕೆಟ್ಟ ಆಲೋಚನೆ ದೂರಾಗಿ ಬದುಕಿನ ಬಗ್ಗೆ ಭರವಸೆ ಮೂಡುವುದು:

 1. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ:

1. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ:

ಸಮಸ್ಯೆಗೆ ಸಾವು ಪರಿಹಾರವಲ್ಲ, ಎಲ್ಲರ ಬದುಕಿನಲ್ಲೂ ಸಮಸ್ಯೆಗಳಿರುತ್ತೆ, ಆದ್ದರಿಂದ ಸಮಸ್ಯೆ ಎದುರಾದಾಗ ಅದರಿಂದ ಪಾರಾಗುವುದು ಹೇಗೆ, ಪರಿಹಾರಗಳೇನು ಎಂದು ಯೋಚಿಸಿ, ಪಲಾಯನ ಮಾಡಲು ಆತ್ಮಹತ್ಯೆಯ ಆಲೋಚನೆ ಬೇಡ್ವೆ ಬೇಡ. ಅವಶ್ಯಕತೆ ಬಿದ್ದರೆ ಖಿನ್ನತೆಗೆ ಚಿಕಿತ್ಸೆ ಕೂಡ ಪಡೆಯಿರಿ.

ಬದುಕಲು ಒಂದು ಕಾರಣ ಹುಡುಕಿ: ಸಾಯಲು ಕಾರಣ ಹುಡುಕುವ ಬದಲಿಗೆ ಬದುಕಲು ಕಾರಣ ಹುಡುಕಬೇಕು, ಈಗ ಏನೇ ಆಗಿರಲಿ ಎಲ್ಲವನ್ನು ಸಮರ್ಥವಾಗಿ ಎದುರಿಸಿ ಬಾಳಿ ತೋರಿಸುತ್ತೇನೆ ಎಂದು ನಿರ್ಧರಿಸಿ, ಸುಂದರ ಬದುಕು ನಿಮಗೆ ಸಿಕ್ಕೇ ಸಿಗುವುದು.

 ಬದುಕಲು ಒಂದು ಕಾರಣ ಹುಡುಕಿ:

ಬದುಕಲು ಒಂದು ಕಾರಣ ಹುಡುಕಿ:

ಸಾಯಲು ಕಾರಣ ಹುಡುಕುವ ಬದಲಿಗೆ ಬದುಕಲು ಕಾರಣ ಹುಡುಕಬೇಕು, ಈಗ ಏನೇ ಆಗಿರಲಿ ಎಲ್ಲವನ್ನು ಸಮರ್ಥವಾಗಿ ಎದುರಿಸಿ ಬಾಳಿ ತೋರಿಸುತ್ತೇನೆ ಎಂದು ನಿರ್ಧರಿಸಿ, ಸುಂದರ ಬದುಕು ನಿಮಗೆ ಸಿಕ್ಕೇ ಸಿಗುವುದು.

 ಸ್ನೇಹಿತರು, ಕುಟುಂಬದವರ ಜೊತೆ ನಿಮ್ಮ ಬಾವನೆಗಳನ್ನು ಹಂಚಿಕೊಳ್ಳಿ

ಸ್ನೇಹಿತರು, ಕುಟುಂಬದವರ ಜೊತೆ ನಿಮ್ಮ ಬಾವನೆಗಳನ್ನು ಹಂಚಿಕೊಳ್ಳಿ

ಎಲ್ಲಾ ನೋವು ನೀವೇ ಅನುಭವಿಸಬೇಡಿ. ನಿಮ್ಮ ನೋವು, ಹತಾಶೆ ಎಲ್ಲವನ್ನೂ ಮನೆಯವರು ಅಥವಾ ಆಪ್ತರ ಬಳಿ ಹೇಳಿಕೊಳ್ಳಿ, ಮನಸ್ಸು ಹಗುರವಾಗುತ್ತದೆ, ನಿಮಗೂ ನೀವು ಒಂಟಿ ಅಂತ ಅನಿಸಲ್ಲ, ಮನಸ್ಸಿಗೆ ದೈರ್ಯ ಸಿಗುವುದು.

 ನಿಮ್ಮ ಆಲೋಚನೆಗೆ ವಿರುದ್ಧ ಮಾಡಿ

ನಿಮ್ಮ ಆಲೋಚನೆಗೆ ವಿರುದ್ಧ ಮಾಡಿ

ನಿಮಗೆ ಒಂಟಿಯಾಗಿರಬೇಕೆಂದು ಅನಿಸಿದಾಗ ಒಂಟಿಯಾಗಿ ಇರಬೇಡಿ, ಬದಲಿಗೆ ಫ್ರೆಂಡ್ಸ್‌ ಜೊತೆ ಇರಿ, ಆಗ ನಿಮಗೆ ನಿಮ್ಮ ಮನಸ್ಸಿನ ತುಮುಲ ಗೆಲ್ಲಲು ಸಾಧ್ಯವಾಗುವುದು.

 ಆತ್ಮಹತ್ಯೆ ತಡೆಗಟ್ಟಲು ಹೀಗೆ ಮಾಡಿ

ಆತ್ಮಹತ್ಯೆ ತಡೆಗಟ್ಟಲು ಹೀಗೆ ಮಾಡಿ

* ಖಿನ್ನತೆಗೆ ಚಿಕಿತ್ಸೆ ಪಡೆಯಿರಿ: ಎಷ್ಟೋ ಜನರು ಖಿನ್ನತೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಖಿನ್ನತೆಯ ಲಕ್ಷಣಗಳು ಅಂದರೆ ಯಾರ ಸಂಪರ್ಕ ಬೇಡ, ಒಂಟಿಯಾಗಿರಬೇಕು ಎಂದೆಲ್ಲಾ ಅನಿಸಲಾರಂಭಿಸಿದರೆ ಖಿನ್ನತೆಗೆ ಚಿಕಿತ್ಸೆ ಪಡೆಯಿರಿ

ಯಾವ ಕಾರಣಕ್ಕೆ ಹಾಗೆ ಅನಿಸುತ್ತಿದೆಯೋ ಅದರಿಂದ ದೂರವಿರಿ

ಯಾವ ಕಾರಣಕ್ಕೆ ಹಾಗೆ ಅನಿಸುತ್ತಿದೆಯೋ ಅದರಿಂದ ದೂರವಿರಿ

ಆತ್ಮಹತ್ಯೆ ಆಲೋಚನೆ ಬರಲು ಕಾರಣವಾಗಿರುವ ಅಂಶಗಳಿಂದ ದೂರವಿರಿ. ಪ್ರೀತಿಯಲ್ಲಿ ಮೋಸ, ಬ್ಯುಸ್‌ನೆಸ್‌ ಲಾಸ್‌ ಹೀಗೆ ಏನೇ ಸಮಸ್ಯೆಯಾಗಿದ್ದರೂ ಸಾವೇ ಪರಿಹಾರವಲ್ಲ ಎಂದು ಪದೇ-ಪದೇ ನಿಮ್ಮ ಮನಸ್ಸಿಗೆ ಹೇಳಿಕೊಳ್ಳಿ.

* ನಿಮ್ಮ ಬಗ್ಗೆ ಹೆಚ್ಚಿನ ಆರೈಕೆ ಮಾಡಿ

* ಚೆನ್ನಾಗಿ ತಿನ್ನಿ

* ಪ್ರತಿದಿನ ಸ್ವಲ್ಪ ವ್ಯಾಯಾಮ ಮಾಡಿ

* ಚೆನ್ನಾಗಿ ನಿದ್ದೆ ಮಾಡಿ

* ಒಳ್ಳೆಯ ಆಲೋಚನೆಗಳನ್ನು ಮಾಡಿ.

 ನಿಮಗೆ ಇಷ್ಟವಾಗಿದ್ದನ್ನು ಮಾಡಿ

ನಿಮಗೆ ಇಷ್ಟವಾಗಿದ್ದನ್ನು ಮಾಡಿ

ಎಲ್ಲಾ ಕೈ ಬಿಟ್ಟು ಹೋಯ್ತು ಎಂದನಿಸಿದಾಗ ನಿಮ್ಮ ಮನಸ್ಸಿಗೆ ಖುಷಿ ಕೊಡುವ ವಿಷಯಗಳತ್ತ ಗಮನಹರಿಸಿ. ಒಂದು ಟ್ರಿಪ್ ಹೋಗುವುದು ಅಥವಾ ಏನಾದರೂ ಒಳ್ಳೆಯ ಹವ್ಯಾಸಗಳತ್ತ ಗಮನ ಹರಿಸುವುದು ಇವೆಲ್ಲಾ ಆತ್ಮಹತ್ಯೆ ಆಲೋಚನೆ ತಡೆಗಟ್ಟಲು ಸಹಕಾರಿ.

ಕೊನೆಯದಾಗಿ: ಸಾವು ಯಾವುದಕ್ಕೂ ಪರ್ಯಾಯವಲ್ಲ, ಒಂದು ಆತ್ಮಹತ್ಯೆ ಇಡೀ ಕುಟುಂಬದ ಸಂತೋಷವನ್ನೇ ಕಿತ್ತುಕೊಳ್ಳುತ್ತೆ. ಕಷ್ಟ, ಸವಾಲುಗಳು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ, ನಿಮಗೆ ಈಗ ಬಂದಿರುವ ಕಷ್ಟ, ಸವಾಲುಗಳು ಯಾವುದೂ ಶಾಶ್ವತವಲ್ಲ ಎಂಬುವುದು ನೆನಪಿರಲಿ, ನಿಮ್ಮ ಮನಸ್ಸಿಗಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ, ಎಲ್ಲಾ ಸವಾಲು ನಾನು ಸಮರ್ಥವಾಗಿ ಎದುರಿಸುತ್ತೇನೆ ಎಂದು ನಿಮ್ಮ ಮನಸ್ಸಿಗೆ ದೃಢವಾಗಿ ಹೇಳಿಕೊಳ್ಳಿ. ಖಂಡಿತ, ಮುಂದೆ ಒಳ್ಳೆಯ ಬದಲಾವಣೆ ಕಾಣುವಿರಿ.

English summary

Suicide Prevention: How To Help Someone Who Has Suicidal Tendencies in kannada

Suicide Prevention: Here is tips to avoid someone has suicidal tendencies in kannada, read on...
Story first published: Saturday, September 10, 2022, 18:00 [IST]
X
Desktop Bottom Promotion