Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಬೇಸಿಗೆಯಲ್ಲಿ ಸುಖ ನಿದ್ದೆಗೆ ಆಯುರ್ವೇದ ಟಿಪ್ಸ್, ಮಲಗಿದ ತಕ್ಷಣ ಕಣ್ಣಿಗೆ ನಿದ್ದೆ ಹತ್ತುವುದು ನೋಡಿ
ಹಾಸಿಗೆ ಕಂಡ ತಕ್ಷಣ ನಿದ್ದೆ ಮಾಡುತ್ತಾರಲ್ಲಾ ಅವರು ನಿಜವಾಗಲೂ ಪುಣ್ಯವಂತರು. ತಲೆದಿಂಬಿನಲ್ಲಿ ತಲೆ ಇಟ್ಟ 5 ನಿಮಿಷಕ್ಕೆಲ್ಲಾ ಗಾಢ ನಿದ್ದೆಗೆ ಜಾರಿ ಬಿಡುತ್ತಾರೆ.
ಆದರೆ ಇನ್ನು ಕೆಲವರು ಮಾತ್ರ ನಿದ್ದೆಯಿಲ್ಲದೆ ಒದ್ದಾಡುತ್ತಾರೆ. ಮಧ್ಯರಾತ್ರಿ ಕಳೆದರೂ ನಿದ್ದೆ ಬರುವುದಿಲ್ಲ ಹೀಗೆ ಒದ್ದಾಡಿ ಒದ್ದಾಡಿ ಮುಂಜಾನೆ ಹೊತ್ತಿಗೆ ಸ್ವಲ್ಪ ನಿದ್ದೆ ಬರುತ್ತದೆ.

ಇದರಿಂದಾಗಿ ಸಾಕಷ್ಟು ನಿದ್ದೆ ಸಾಕಾಗುವುದಿಲ್ಲ. ಅದರಲ್ಲೂ ಸೆಕೆಯಲ್ಲಿ ನಿದ್ದೆ ಸುಲಭವಾಗಿ ಬರುವುದಿಲ್ಲ.
ನಿದ್ದೆ ಕಡಿಮೆಯಾದಾಗ ಆರೋಗ್ಯ ಸಮಸ್ಯೆ ಕೂಡ ಹೆಚ್ಚಾಗುವುದು. ನಿದ್ದೆ ಕಡಿಮೆಯಾದಾಗ ನಮಗೆ ಸುಸ್ತು ಹೆಚ್ಚಾಗುವುದು, ಕೆಲಸ ಕಾರ್ಯಗಳಲ್ಲಿ ಗಮನ ಕೊಡಲು ಸಾಧ್ಯವಾಗುವುದಿಲ್ಲ. ದೇಹದಲ್ಲಿ ಹಾರ್ಮೋನ್ಗಳ ಬದಲಾವಣೆಯಾಗುತ್ತದೆ. ಇದರಿಂದಾಗಿ ನಿದ್ದೆ ತುಂಬಾನೇ ಅವಶ್ಯ. ಅದರಲ್ಲೂ ದಿನದಲ್ಲಿ 8 ಗಂಟೆ ನಿದ್ದೆ ತುಂಬಾನೇ ಅವಶ್ಯಕ.
ನಿಮಗೆ ರಾತ್ರಿ ಸರಿಯಾಗಿ ನಿದ್ದೆ ಬರದಿದ್ದರೆ ಈ ಎಣ್ಣೆಯ ಮಸಾಜ್ ನಿಮಗೆ ಸುಖ ನಿದ್ದೆಗೆ ಸಹಾಯ ಮಾಡುತ್ತೆ:
ನಾಲ್ಪಾಮಾರ್ದಿ ಥೈಲ (Nalpamaradi Thailam)
ಇದು ನಿಮಗೆ ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ.
ಈ ಎಣ್ಣೆಯನ್ನು ಸ್ನಾನಕ್ಕೆ ಮೊದಲು ಹಚ್ಚಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ
ಈ ಎಣ್ಣೆಯ ಸ್ನಾನದಿಂದ ದೊರೆಯುವ ಪ್ರಯೋಜನಗಳು
* ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡುತ್ತದೆ
* ತ್ವಚೆಯನ್ನು ಮೃದುವಾಗಿಸುತ್ತದೆ
* ಸನ್ ಟ್ಯಾನ್ ಹೋಗಲಾಡಿಸಬಹುದು.
ನೀಲಾಭೃಂಗಾದಿ ತೈಲ
ನೀಲಾಭೃಂಗಾದಿ ತೈಲ ತಲೆಗೆ ಹಚ್ಚಿ ಮಸಾಜ್ ಮಾಡಿ ಇದರಿಂದ ತಲೆಗೆ ತಂಪು ಸಿಗುವುದು.
ಈ ಎಣ್ಣೆಯನ್ನು ಹಚ್ಚುವುದರಿಂದ ದೊರೆಯುವ ಪ್ರಯೋಜನಗಳು
* ತಲೆ ಬುಡದಲ್ಲಿ ಮಾಯಿಶ್ಚರೈಸರ್ ಕಾಪಾಡುತ್ತದೆ
* ತಲೆಹೊಟ್ಟು ತಡೆಗಟ್ಟುತ್ತದೆ.
* ಕೂದಲು ಉರುವುದು ಕಡಿಮೆಯಾಗುತ್ತದೆ
* ಕೂದಲಿನ ಬುಡ ಬಲಪಡಿಸುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು.
ಈ ಎಣ್ಣೆಯ ಮಸಾಜ್ ಕೂಡ ನಿಮಗೆ ಸುಖ ನಿದ್ದೆಯನ್ನು ನೀಡುತ್ತದೆ.
ಲ್ಯಾವೆಂಡರ್ ಎಣ್ಣೆ
ಲ್ಯಾವಂಡರ್ ಎಣ್ಣೆ ನಿದ್ರಾಹೀನತೆ ಸಮಸ್ಯೆ ತಡೆಗಟ್ಟುತ್ತದೆ. ನೀವು ಕಾಟನ್ಗೆ ಎರಡು ಹನಿ ಲ್ಯಾವೆಂಡರ್ ಎಣ್ಣೆ ಹಾಕಿ ಮಲಗುವ ತಲೆ ದಿಂಬಿನ ಬಳಿ ಇಡಿ, ಇದರ ಸುವಾಸನೆಗೆ ಬೇಗನೆ ನಿದ್ದೆ ಬರುವುದು.
ಶ್ರೀಗಂಧದ ಎಣ್ಣೆ
ಇದು ಕೂಡ ನಿಮಗೆ ಸುಖ ನಿದ್ದೆಯನ್ನು ತಂದು ಕೊಡುತ್ತದೆ. ಶ್ರೀಗಂಧದ ಎಣ್ಣೆಯ ಒಂದು ಹನಿ ನಿಮ್ಮ ಅಂಗೈ ಅಥವಾ ಬಟ್ಟೆಗೆ ಹಾಕಿ ಇದರ ಸುವಾಸನೆಗೆ ಕಣ್ಣಿಗೆ ಬೇಗನೆ ನಿದ್ದೆ ಹತ್ತುವುದು.
ನೀಲಗಿರಿ ಎಣ್ಣೆ
ನೀಲಗಿರಿ ಎಣ್ಣೆ ಕೂಡ ನಿದ್ರಾಹೀನತೆ ಹೋಗಲಾಡಿಸಲು ತುಂಬಾನೇ ಸಹಕಾರಿ. 2 ಹನಿ ನೀಲಗಿರಿ ಎಣ್ಣೆಯನ್ನು ಕಾಟನ್ಗೆ ಹಾಕಿ ತಲೆದಿಂಬಿನ ಬಳಿ ಇಟ್ಟರೆ ಇದರ ಸುವಾಸನೆಗೆ ಒಳ್ಳೆಯ ನಿದ್ದೆ ಬರುವುದು.
ಹರಳೆಣ್ಣೆ
ಬೇಸಿಗೆಯಲ್ಲಿ ನೀವು ತಲೆಗೆ ಹಚ್ಚಿವ ಎಣ್ಣೆ ಜೊತೆ ಹರಳೆಣ್ಣೆ ಮಿಕ್ಸ್ ಮಾಡಿ ಹಚ್ಚಿ, ಇದರಿಂದ ತಲೆಗೆ ತಂಪಾಗುವುದು, ಇದರಿಂದ ಕೂಡ ಬೇಗ ನಿದ್ದೆ ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
