Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಡಿತಕ್ಕೆ ವಯಸ್ಸಿನ ಮಿತಿ ನಿಮ್ಮ ಅಭಿಪ್ರಾಯವೇನು?

ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ ಗುಂಡು ಹಾಕಲು ವಯಸ್ಸಿನ ಮಿತಿ ಹಾಕಲಾಗಿದೆ. 25 ವಯಸ್ಸು ಆಗದವರು ಮದ್ಯ ಖರೀದಿ ಅಥವಾ ಸೇವನೆ ಮಾಡುವಂತಿಲ್ಲ. ಕರ್ನಾಟಕದಲ್ಲಿ ಯಾವಾಗ? ಯಾವ ಮಂತ್ರಿ? ಯಾವ ಪಕ್ಷ? ಇಂತಹ ಒಂದು ಶಾಸನ ಜಾರಿ ತರಬಹುದು ಗೊತ್ತಿಲ್ಲ. ಆದರೆ ಈ ಕುರಿತು ಸಾಧಕ ಬಾಧಕಗಳ ಚರ್ಚೆಯೂ ಆಗುತ್ತಿದೆ.
"ಇಂತಹ ಕಾನೂನಿನಿಂದ ಕಡಿದು ರಾಶಿ ಹಾಕುವಂತದ್ದು ಏನಿಲ್ಲ. ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಾನೂನು ಬಂತಲ್ವ. ಅದರ ಅನುಷ್ಠಾನ ಆಗಿಲ್ಲ. ರಾಜಾರೋಷವಾಗಿ ಎಲ್ಲರೂ ಧೂಮಪಾನ ಮಾಡುತ್ತಾರೆ. ಈ ಮದ್ಯದ ಕಥೆಯೂ ಹಾಗೆಯೇ ಆಗುತ್ತದೆ" ಇದು ಶಾಂತಿನಗರದ ಸುದರ್ಶನ್ ಎಂಬವರ ಅಭಿಪ್ರಾಯ.
"25ರೊಳಗಿನವರು ಮದ್ಯ ಖರೀದಿ ಮತ್ತು ಸೇವನೆ ಮಾಡಬಾರದು ಎಂಬುದು ಒಳ್ಳೆಯ ಕಾನೂನೇ. ಆದರೆ 25 ವಯಸ್ಸು ದಾಟಿದವರಿಂದ ಪಾರ್ಸೆಲ್ ತರಿಸಿ ಎಲ್ಲಾದರೂ ಕೂತು ಸಿಕ್ಕಿ ಬೀಳದಂತೆ ಕುಡಿಯುವ ಅಪಾಯವಿದೆ. ಹೀಗಾಗಿ ಈ ಶಾಸನ ಪ್ರಯೋಜನವಿಲ್ಲ" ಹೀಗಂತ ಹೇಳಿದ್ದು ಜಯನಗರದ "ನಲ್ಲಿ ಸಿಲ್ಕ್" ಉದ್ಯೋಗಿ ಎಸ್ . ಬಿ. ನವೀನ.
"ಕುಡಿಯಬೇಕೆಂದು ತೀರ್ಮಾನಿಸಿದವರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸಂವಿಧಾನ ಬಾಹಿರವಾಗಿ ಕುಡಿಯುವಂತೆ ಪ್ರೇರೆಪಿಸಲಿದೆ. ನಾವು ಈಗಲೂ ಪಾರ್ಸೆಲ್ ತಂದು ಕುಡಿತೀವಿ. ಇಂತಹ ಕಾನೂನು ಬಂದ್ರು ಹೇಗೆ ಕುಡಿಬೇಕು ಅಂತ ನಂಗೊತ್ತು" ಹಾಗಂತ ಕಾಲೇಜೊಂದರ ಪಕ್ಕ ಸಿಕ್ಕ ಹುಡುಗ ಹೇಳಿದರೂ ಯಾಕೋ ಆತ ಹೆಸರು ಹೇಳಲು ಇಚ್ಛಿಸಲಿಲ್ಲ.
"ವೈನ್ ಸೇವನೆಗೆ ಯಾವುದೇ ವಯಸ್ಸಿನ ಮಿತಿಗಳಿಲ್ಲ. ಬಿಯರ್ ಕುಡಿಯಲು 21 ವರ್ಷವಾದರೆ ಸಾಕು. ಆದರೆ ಬರೀ ರಮ್, ವಿಸ್ಕಿಗೆ ವಯಸ್ಸಿನ ಮಿತಿ ಒಡ್ಡಿರುವುದು ಸರಿಯಲ್ಲ. ಎಲ್ಲಾ ರೀತಿಯ ಹಾಟ್ ಡ್ರಿಂಕ್ಸ್ ಗಳಲ್ಲೂ ಆಲ್ಕೋಹಾಲ್ ಇದೆ" ಎಂದು ಮದ್ಯ ಮದ್ಯದ ನಡುವಿನ ತಾರತಮ್ಯ ಬಿಚ್ಚಿಟ್ಟವರು ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿ ಕಿರಣ್ ಎಸ್ ಕೆ. ಅವರು ವಾರಕ್ಕೊಮ್ಮೆ ಮಾತ್ರ ಪಾನಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಾರಂತೆ!
;



Click it and Unblock the Notifications