Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಕುಡಿತಕ್ಕೆ ವಯಸ್ಸಿನ ಮಿತಿ ನಿಮ್ಮ ಅಭಿಪ್ರಾಯವೇನು?

ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ ಗುಂಡು ಹಾಕಲು ವಯಸ್ಸಿನ ಮಿತಿ ಹಾಕಲಾಗಿದೆ. 25 ವಯಸ್ಸು ಆಗದವರು ಮದ್ಯ ಖರೀದಿ ಅಥವಾ ಸೇವನೆ ಮಾಡುವಂತಿಲ್ಲ. ಕರ್ನಾಟಕದಲ್ಲಿ ಯಾವಾಗ? ಯಾವ ಮಂತ್ರಿ? ಯಾವ ಪಕ್ಷ? ಇಂತಹ ಒಂದು ಶಾಸನ ಜಾರಿ ತರಬಹುದು ಗೊತ್ತಿಲ್ಲ. ಆದರೆ ಈ ಕುರಿತು ಸಾಧಕ ಬಾಧಕಗಳ ಚರ್ಚೆಯೂ ಆಗುತ್ತಿದೆ.
"ಇಂತಹ ಕಾನೂನಿನಿಂದ ಕಡಿದು ರಾಶಿ ಹಾಕುವಂತದ್ದು ಏನಿಲ್ಲ. ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಾನೂನು ಬಂತಲ್ವ. ಅದರ ಅನುಷ್ಠಾನ ಆಗಿಲ್ಲ. ರಾಜಾರೋಷವಾಗಿ ಎಲ್ಲರೂ ಧೂಮಪಾನ ಮಾಡುತ್ತಾರೆ. ಈ ಮದ್ಯದ ಕಥೆಯೂ ಹಾಗೆಯೇ ಆಗುತ್ತದೆ" ಇದು ಶಾಂತಿನಗರದ ಸುದರ್ಶನ್ ಎಂಬವರ ಅಭಿಪ್ರಾಯ.
"25ರೊಳಗಿನವರು ಮದ್ಯ ಖರೀದಿ ಮತ್ತು ಸೇವನೆ ಮಾಡಬಾರದು ಎಂಬುದು ಒಳ್ಳೆಯ ಕಾನೂನೇ. ಆದರೆ 25 ವಯಸ್ಸು ದಾಟಿದವರಿಂದ ಪಾರ್ಸೆಲ್ ತರಿಸಿ ಎಲ್ಲಾದರೂ ಕೂತು ಸಿಕ್ಕಿ ಬೀಳದಂತೆ ಕುಡಿಯುವ ಅಪಾಯವಿದೆ. ಹೀಗಾಗಿ ಈ ಶಾಸನ ಪ್ರಯೋಜನವಿಲ್ಲ" ಹೀಗಂತ ಹೇಳಿದ್ದು ಜಯನಗರದ "ನಲ್ಲಿ ಸಿಲ್ಕ್" ಉದ್ಯೋಗಿ ಎಸ್ . ಬಿ. ನವೀನ.
"ಕುಡಿಯಬೇಕೆಂದು ತೀರ್ಮಾನಿಸಿದವರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸಂವಿಧಾನ ಬಾಹಿರವಾಗಿ ಕುಡಿಯುವಂತೆ ಪ್ರೇರೆಪಿಸಲಿದೆ. ನಾವು ಈಗಲೂ ಪಾರ್ಸೆಲ್ ತಂದು ಕುಡಿತೀವಿ. ಇಂತಹ ಕಾನೂನು ಬಂದ್ರು ಹೇಗೆ ಕುಡಿಬೇಕು ಅಂತ ನಂಗೊತ್ತು" ಹಾಗಂತ ಕಾಲೇಜೊಂದರ ಪಕ್ಕ ಸಿಕ್ಕ ಹುಡುಗ ಹೇಳಿದರೂ ಯಾಕೋ ಆತ ಹೆಸರು ಹೇಳಲು ಇಚ್ಛಿಸಲಿಲ್ಲ.
"ವೈನ್ ಸೇವನೆಗೆ ಯಾವುದೇ ವಯಸ್ಸಿನ ಮಿತಿಗಳಿಲ್ಲ. ಬಿಯರ್ ಕುಡಿಯಲು 21 ವರ್ಷವಾದರೆ ಸಾಕು. ಆದರೆ ಬರೀ ರಮ್, ವಿಸ್ಕಿಗೆ ವಯಸ್ಸಿನ ಮಿತಿ ಒಡ್ಡಿರುವುದು ಸರಿಯಲ್ಲ. ಎಲ್ಲಾ ರೀತಿಯ ಹಾಟ್ ಡ್ರಿಂಕ್ಸ್ ಗಳಲ್ಲೂ ಆಲ್ಕೋಹಾಲ್ ಇದೆ" ಎಂದು ಮದ್ಯ ಮದ್ಯದ ನಡುವಿನ ತಾರತಮ್ಯ ಬಿಚ್ಚಿಟ್ಟವರು ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿ ಕಿರಣ್ ಎಸ್ ಕೆ. ಅವರು ವಾರಕ್ಕೊಮ್ಮೆ ಮಾತ್ರ ಪಾನಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಾರಂತೆ!
;



Click it and Unblock the Notifications