Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕುಡಿತಕ್ಕೆ ವಯಸ್ಸಿನ ಮಿತಿ ನಿಮ್ಮ ಅಭಿಪ್ರಾಯವೇನು?

ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ ಗುಂಡು ಹಾಕಲು ವಯಸ್ಸಿನ ಮಿತಿ ಹಾಕಲಾಗಿದೆ. 25 ವಯಸ್ಸು ಆಗದವರು ಮದ್ಯ ಖರೀದಿ ಅಥವಾ ಸೇವನೆ ಮಾಡುವಂತಿಲ್ಲ. ಕರ್ನಾಟಕದಲ್ಲಿ ಯಾವಾಗ? ಯಾವ ಮಂತ್ರಿ? ಯಾವ ಪಕ್ಷ? ಇಂತಹ ಒಂದು ಶಾಸನ ಜಾರಿ ತರಬಹುದು ಗೊತ್ತಿಲ್ಲ. ಆದರೆ ಈ ಕುರಿತು ಸಾಧಕ ಬಾಧಕಗಳ ಚರ್ಚೆಯೂ ಆಗುತ್ತಿದೆ.
"ಇಂತಹ ಕಾನೂನಿನಿಂದ ಕಡಿದು ರಾಶಿ ಹಾಕುವಂತದ್ದು ಏನಿಲ್ಲ. ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಾನೂನು ಬಂತಲ್ವ. ಅದರ ಅನುಷ್ಠಾನ ಆಗಿಲ್ಲ. ರಾಜಾರೋಷವಾಗಿ ಎಲ್ಲರೂ ಧೂಮಪಾನ ಮಾಡುತ್ತಾರೆ. ಈ ಮದ್ಯದ ಕಥೆಯೂ ಹಾಗೆಯೇ ಆಗುತ್ತದೆ" ಇದು ಶಾಂತಿನಗರದ ಸುದರ್ಶನ್ ಎಂಬವರ ಅಭಿಪ್ರಾಯ.
"25ರೊಳಗಿನವರು ಮದ್ಯ ಖರೀದಿ ಮತ್ತು ಸೇವನೆ ಮಾಡಬಾರದು ಎಂಬುದು ಒಳ್ಳೆಯ ಕಾನೂನೇ. ಆದರೆ 25 ವಯಸ್ಸು ದಾಟಿದವರಿಂದ ಪಾರ್ಸೆಲ್ ತರಿಸಿ ಎಲ್ಲಾದರೂ ಕೂತು ಸಿಕ್ಕಿ ಬೀಳದಂತೆ ಕುಡಿಯುವ ಅಪಾಯವಿದೆ. ಹೀಗಾಗಿ ಈ ಶಾಸನ ಪ್ರಯೋಜನವಿಲ್ಲ" ಹೀಗಂತ ಹೇಳಿದ್ದು ಜಯನಗರದ "ನಲ್ಲಿ ಸಿಲ್ಕ್" ಉದ್ಯೋಗಿ ಎಸ್ . ಬಿ. ನವೀನ.
"ಕುಡಿಯಬೇಕೆಂದು ತೀರ್ಮಾನಿಸಿದವರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸಂವಿಧಾನ ಬಾಹಿರವಾಗಿ ಕುಡಿಯುವಂತೆ ಪ್ರೇರೆಪಿಸಲಿದೆ. ನಾವು ಈಗಲೂ ಪಾರ್ಸೆಲ್ ತಂದು ಕುಡಿತೀವಿ. ಇಂತಹ ಕಾನೂನು ಬಂದ್ರು ಹೇಗೆ ಕುಡಿಬೇಕು ಅಂತ ನಂಗೊತ್ತು" ಹಾಗಂತ ಕಾಲೇಜೊಂದರ ಪಕ್ಕ ಸಿಕ್ಕ ಹುಡುಗ ಹೇಳಿದರೂ ಯಾಕೋ ಆತ ಹೆಸರು ಹೇಳಲು ಇಚ್ಛಿಸಲಿಲ್ಲ.
"ವೈನ್ ಸೇವನೆಗೆ ಯಾವುದೇ ವಯಸ್ಸಿನ ಮಿತಿಗಳಿಲ್ಲ. ಬಿಯರ್ ಕುಡಿಯಲು 21 ವರ್ಷವಾದರೆ ಸಾಕು. ಆದರೆ ಬರೀ ರಮ್, ವಿಸ್ಕಿಗೆ ವಯಸ್ಸಿನ ಮಿತಿ ಒಡ್ಡಿರುವುದು ಸರಿಯಲ್ಲ. ಎಲ್ಲಾ ರೀತಿಯ ಹಾಟ್ ಡ್ರಿಂಕ್ಸ್ ಗಳಲ್ಲೂ ಆಲ್ಕೋಹಾಲ್ ಇದೆ" ಎಂದು ಮದ್ಯ ಮದ್ಯದ ನಡುವಿನ ತಾರತಮ್ಯ ಬಿಚ್ಚಿಟ್ಟವರು ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿ ಕಿರಣ್ ಎಸ್ ಕೆ. ಅವರು ವಾರಕ್ಕೊಮ್ಮೆ ಮಾತ್ರ ಪಾನಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಾರಂತೆ!
;



Click it and Unblock the Notifications











