Latest Updates
-
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ! -
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಮುಂಬೈ ಮಳೆ ಅಬ್ಬರ: ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ
ಕುಡಿತಕ್ಕೆ ವಯಸ್ಸಿನ ಮಿತಿ ನಿಮ್ಮ ಅಭಿಪ್ರಾಯವೇನು?

ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ ಗುಂಡು ಹಾಕಲು ವಯಸ್ಸಿನ ಮಿತಿ ಹಾಕಲಾಗಿದೆ. 25 ವಯಸ್ಸು ಆಗದವರು ಮದ್ಯ ಖರೀದಿ ಅಥವಾ ಸೇವನೆ ಮಾಡುವಂತಿಲ್ಲ. ಕರ್ನಾಟಕದಲ್ಲಿ ಯಾವಾಗ? ಯಾವ ಮಂತ್ರಿ? ಯಾವ ಪಕ್ಷ? ಇಂತಹ ಒಂದು ಶಾಸನ ಜಾರಿ ತರಬಹುದು ಗೊತ್ತಿಲ್ಲ. ಆದರೆ ಈ ಕುರಿತು ಸಾಧಕ ಬಾಧಕಗಳ ಚರ್ಚೆಯೂ ಆಗುತ್ತಿದೆ.
"ಇಂತಹ ಕಾನೂನಿನಿಂದ ಕಡಿದು ರಾಶಿ ಹಾಕುವಂತದ್ದು ಏನಿಲ್ಲ. ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಾನೂನು ಬಂತಲ್ವ. ಅದರ ಅನುಷ್ಠಾನ ಆಗಿಲ್ಲ. ರಾಜಾರೋಷವಾಗಿ ಎಲ್ಲರೂ ಧೂಮಪಾನ ಮಾಡುತ್ತಾರೆ. ಈ ಮದ್ಯದ ಕಥೆಯೂ ಹಾಗೆಯೇ ಆಗುತ್ತದೆ" ಇದು ಶಾಂತಿನಗರದ ಸುದರ್ಶನ್ ಎಂಬವರ ಅಭಿಪ್ರಾಯ.
"25ರೊಳಗಿನವರು ಮದ್ಯ ಖರೀದಿ ಮತ್ತು ಸೇವನೆ ಮಾಡಬಾರದು ಎಂಬುದು ಒಳ್ಳೆಯ ಕಾನೂನೇ. ಆದರೆ 25 ವಯಸ್ಸು ದಾಟಿದವರಿಂದ ಪಾರ್ಸೆಲ್ ತರಿಸಿ ಎಲ್ಲಾದರೂ ಕೂತು ಸಿಕ್ಕಿ ಬೀಳದಂತೆ ಕುಡಿಯುವ ಅಪಾಯವಿದೆ. ಹೀಗಾಗಿ ಈ ಶಾಸನ ಪ್ರಯೋಜನವಿಲ್ಲ" ಹೀಗಂತ ಹೇಳಿದ್ದು ಜಯನಗರದ "ನಲ್ಲಿ ಸಿಲ್ಕ್" ಉದ್ಯೋಗಿ ಎಸ್ . ಬಿ. ನವೀನ.
"ಕುಡಿಯಬೇಕೆಂದು ತೀರ್ಮಾನಿಸಿದವರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸಂವಿಧಾನ ಬಾಹಿರವಾಗಿ ಕುಡಿಯುವಂತೆ ಪ್ರೇರೆಪಿಸಲಿದೆ. ನಾವು ಈಗಲೂ ಪಾರ್ಸೆಲ್ ತಂದು ಕುಡಿತೀವಿ. ಇಂತಹ ಕಾನೂನು ಬಂದ್ರು ಹೇಗೆ ಕುಡಿಬೇಕು ಅಂತ ನಂಗೊತ್ತು" ಹಾಗಂತ ಕಾಲೇಜೊಂದರ ಪಕ್ಕ ಸಿಕ್ಕ ಹುಡುಗ ಹೇಳಿದರೂ ಯಾಕೋ ಆತ ಹೆಸರು ಹೇಳಲು ಇಚ್ಛಿಸಲಿಲ್ಲ.
"ವೈನ್ ಸೇವನೆಗೆ ಯಾವುದೇ ವಯಸ್ಸಿನ ಮಿತಿಗಳಿಲ್ಲ. ಬಿಯರ್ ಕುಡಿಯಲು 21 ವರ್ಷವಾದರೆ ಸಾಕು. ಆದರೆ ಬರೀ ರಮ್, ವಿಸ್ಕಿಗೆ ವಯಸ್ಸಿನ ಮಿತಿ ಒಡ್ಡಿರುವುದು ಸರಿಯಲ್ಲ. ಎಲ್ಲಾ ರೀತಿಯ ಹಾಟ್ ಡ್ರಿಂಕ್ಸ್ ಗಳಲ್ಲೂ ಆಲ್ಕೋಹಾಲ್ ಇದೆ" ಎಂದು ಮದ್ಯ ಮದ್ಯದ ನಡುವಿನ ತಾರತಮ್ಯ ಬಿಚ್ಚಿಟ್ಟವರು ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿ ಕಿರಣ್ ಎಸ್ ಕೆ. ಅವರು ವಾರಕ್ಕೊಮ್ಮೆ ಮಾತ್ರ ಪಾನಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಾರಂತೆ!
;



Click it and Unblock the Notifications