Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಫೇಸ್ ಬುಕ್ಕಲ್ಲಿ ಗೋವುಪ್ರಿಯ ರಾಘವೇಶ್ವರ ಸ್ವಾಮೀಜಿ

ಅಲ್ಲಿ ಆಧ್ಯಾತ್ಮಿಕತೆ ಎಂದರೇನು? ದೇವರು ಯಾರು, ಎಲ್ಲಿದ್ದಾನೆ? ಎಲ್ಲಿ ಯಾವ ದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ? ಇತ್ಯಾದಿಯಾಗಿ ಹಿಡಿದು ಸದಸ್ಯರಾದವರ ನಡುವೆಯೇ 'ಏನೇ ಕಮಲ, ಎಲ್ಲಿದ್ದಿಯೇ? ಎಷ್ಟು ದಿನವಾಯಿತು ನಿನ್ನ ನೋಡಿ? ಫೇಸ್ ಬುಕ್ಕಲ್ಲಿ ಫೇಸ್ಟುಫೇಸ್ ಆಗಿದ್ದು ತುಂಬಾ ಸಂತೋಷವಾಯಿತು' ಎನ್ನುವಂತಹ ಉಭಯ ಕುಶಲೋಪರಿಗಳೂ ನಡೆಯುತ್ತವೆ.
ಇಂತಹ ಸ್ವಾಮೀಜಿಗಳಿರುವ ಫೇಸ್ ಬುಕ್ ತಾಣಗಳಲ್ಲಿ ಪ್ರಮುಖವಾದುದು ಗೋಕರ್ಣದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳ ತಾಣ. ಸುಮಾರು 900 ನೆಟ್ಟಿಗರು ಈ ಫೇಸ್ ಬುಕ್ ತಾಣದ ಸದಸ್ಯರಾಗಿದ್ದಾರೆ. ತಮ್ಮ ಸಾಮಾಜಿಕ ಸೇವೆಯಿಂದಾಗಿ ಜನಾನುರಾಗಿಯಾಗಿರುವ ರಾಘವೇಶ್ವರ ಸ್ವಾಮೀಜಿಗಳ ಕುರಿತು ಅನೇಕ ಸಂಗತಿಗಳು ಇಲ್ಲಿ ಲಭ್ಯ.
ಶ್ರೀ ರಾಘವೇಶ್ವರ ಸ್ವಾಮೀಜಿಗಳು ಗೋವಿನ ಉಳಿವಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಅವರನ್ನು ಆರಾಧಿಸುವವರು ಕರ್ನಾಟಕದವರು ಮಾತ್ರವಲ್ಲ, ಹೊರರಾಜ್ಯದವರು ಮತ್ತು ಕನ್ನಡೇತರರು ಕೂಡ ಇಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಕಾರಣದಿಂದ ಇಲ್ಲಿ ಕನ್ನಡ ಸಿಗುವುದು ಸ್ವಲ್ಪ ದುರ್ಲಭವೆ.



Click it and Unblock the Notifications