Latest Updates
-
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ! -
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ!
ದಾಂಪತ್ಯ ವಿಷಯದಲ್ಲಿ ಮಾತೇ ಬದುಕು ಬಂಗಾರವಾಗಿಸುವುದು, ಮೌನವಲ್ಲ!
ಎಷ್ಟೋ ದಾಂಪತ್ಯದ ಕಲಹಗಳಿಗೆ ಮುಖ್ಯ ಕಾರಣ ಏನು ಗೊತ್ತೇ, ಅವರ ಭಾವನೆಗಳನ್ನು ವ್ಯಕ್ತಪಡಿಸದೇ ಇರುವುದು, ಇವನು ಅವಳಿಗೆ ಏನೂ ಬಾಯೊಬಿಟ್ಟು ಹೇಳಲ್ಲ, ಅವಳು ಇವನಿಗೆ ಏನೂ ಹೇಳಲ್ಲ, ನಂತರ ನನ್ನ Expectation ರೀತಿ ನನ್ನ ಜೀವನ ಇಲ್ಲ ಎಂದು ಕೊರಗುವುದು, ಆ ಕೊರಗನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ನಂತರ ಚಿಕ್ಕ-ಪುಟ್ಟ ವಿಷಯಕ್ಕೆ ಸಿಡಿ ಸಿಡಿ ಅಂತ ಸಿಡುಕುತ್ತಾ ಇರುವುದು... ಇದು ಎಷ್ಟೋ ಸಂಸಾರಗಳಲ್ಲಿ ನಡೆಯುತ್ತಿರುವ ನಿತ್ಯದ ಗೋಳಾಗಿದೆ.

ಏನೂ ಬಾಯಿಬಿಟ್ಟು ಹೇಳಲ್ಲ, ನಾನು ಏಕೆ ಹೇಳಬೇಕು ನನ್ನನ್ನು
ಅವನು ಅರ್ಥ ಮಾಡಿಕೊಳ್ಳಬೇಕು ಎಂದು ಇವಳು ಭಾವಿಸಿದರೆ, ನನ್ನನ್ನು ನನ್ನ ಹೆಂಡತಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಗಂಡ ಬಯಸುತ್ತಾನೆ, ಆದರೆ ನಿಮಗೊಂದು ಕಹಿ ಸತ್ಯ ಗೊತ್ತೇ? ಈ ಪ್ರಪಂಚದಲ್ಲಿ ನಮ್ಮಷ್ಟು ನಮ್ಮನ್ನು ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ, ನಮ್ಮನ್ನು ಸಾಕಿ ಬೆಳೆಸ ಅಪ್ಪ-ಅಮ್ಮನಿಗೆ ಕೆಲವೊಮ್ಮೆ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಹೋಗುವಾಗ ಸಂಗಾತಿಯಿಂದ ಇದನ್ನು ಬಯಸುವುದು ಸರಿಯೇ?
ಸಂಬಂಧದಲ್ಲಿ ಸಂವಹನ ಮುಖ್ಯ
ಆದ್ದರಿಂದ ಸಂಬಂಧದಲ್ಲಿ ಮಾತುಕತೆ ತುಂಬಾನೇ ಮುಖ್ಯ, ಇಬ್ಬರು ಮನಸ್ಸು ಬಿಚ್ಚಿ ಮಾತನಾಡಬೇಕು, ನೀವು ಹೇಳುವ ಎಲ್ಲಾ ವಿಚಾರಗಳನ್ನು ಅವರು ಒಪ್ಪ ಬೇಕಾಗಿಲ್ಲ, ಆದರೆ ಮಾತನಾಡಬೇಕು, ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು.
ಲೈಂಗಿಕ ಆಸಕ್ತಿ ಹೇಳಿದರೆ ನನ್ನ ಬಗ್ಗೆ ತಪ್ಪಾಗಿ ಭಾವಿಸಬಹುದೇ?
ಈ ರೀತಿಯ ಅಳುಕಿನಿಂದಲೇ ಎಷ್ಟೋ ಜನ ತಮ್ಮ ಆಸೆ, ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ, ದಾಂಪತ್ಯದಲ್ಲಿ ಲೈಂಗಿಕ ತೃಪ್ತಿ ತುಂಬಾನೇ ಮುಖ್ಯವಾಗುತ್ತೆ. ನಿಮಗೆ ನಿಮ್ಮ ಸಂಗಾತಿಯಿಂದ ನೀವು ಬಯಸಿದ ರೀತಿಯ ಸ್ಪಂದನೆ ಸಿಗದೇ ಹೋದರೆ ಬೇಸರ ಮೂಡುವುದು, ನಿಮ್ಮ ಈ ಅತೃಪ್ತಿ ಅವರ ಮೇಲೆ ಚಿಕ್ಕ ವಿಷಯಕ್ಕೆ ಕೋಪಗೊಳ್ಳುವುದು, ಅವರಿಂದ ಅಂತರ ಕಾಯ್ದುಕೊಳ್ಳುವುದು ಈ ರೀತಿಯೆಲ್ಲಾ ಹೊರಹೊಮ್ಮಬಹುದು.
ಅನೈತಿಕ ಸಂಬಂಧದ ಅಪಾಯ ಹೆಚ್ಚುವುದು
ಇನ್ನು ಪರಸ್ಪರ ಮನಸ್ಸು ಬಿಚ್ಚಿ ಮಾತನಾಡದೇ ಹೋದರೆ ಅವರು ಬಯಸಿದ ಸ್ಪಂದನೆ, ಸುಖ ನಿಮ್ಮಲ್ಲಿ ಸಿಗದೇ ಹೋದಾಗ ಅವರ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿ ಸಿಕ್ಕಾಗ ಅವರತ್ತ ಆಕರ್ಷಿತರಾಗುವ ಅಪಾಯ, ಇದರಿಂದ ದಾಂಪತ್ಯ ಮುರಿದು
ಭಾವನಾತ್ಮಕವಾಗಿ ದೂರ ಇದ್ದಂತೆ ಅನಿಸುವುದು
ನಿಮ್ಮಿಬ್ಬರ ನಡುವೆ ಸಂವಹನ ಇಲ್ಲ ಅಂದರೆ ಒಂದೇ ಮನೆಯಲ್ಲಿ ಇದ್ದರೂ ಭಾವನಾತ್ಮಕವಾಗಿ ದೂರ ಇದ್ದಂತೆ ಅನಿಸುವುದು. ಸಂಸಾರದ ಬಗ್ಗೆ ಜಿಗುಪ್ಸೆ ಮೂಡಬಹುದು, ನನ್ನನ್ನು ಅರ್ಥ ಮಾಡಿಕೊಳ್ಳದ ಈ ವ್ಯಕ್ತಿ ಜೊತೆ ಏಕೆ ಬಾಳಬೇಕು ಎಂದು ಕೂಡ ಅನಿಸಬಹುದು, ಆದ್ದರಿಂದ ಸಂಸಾರದ ವಿಷಯದಲ್ಲಿ ಮೌನಗಿಂತ ಮಾತೇ ನಿಮ್ಮ ಬದುಕನ್ನು ಬಂಗಾರವಾಗಿಸುವುದು.



Click it and Unblock the Notifications












