Latest Updates
-
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು?
ಪತ್ನಿ ದಿನಾ ಮ್ಯಾಗಿ ಕೊಡ್ತಾಳೆ ಅಂತ ವಿಚ್ಚೇದನ ಪಡೆದ ಪತಿ! ನಮ್ಮ ಕರ್ನಾಟಕದಲ್ಲಿ ನಡೆದಿರುವ ಪ್ರಕರಣವಿದು
ಏನೆಲ್ಲಾ ಕಾರಣಕ್ಕೆ ವಿಚ್ಛೇದನ ಪಡೆದವರನ್ನು ನೋಡಿರುತ್ತಿರಿ, ಆದರೆ ಮ್ಯಾಗಿ ಕಾರಣದಿಂದಾಗಿ ವಿಚ್ಚೇದನ ನಡೆದಿರುವುದನ್ನು ನೋಡಿದ್ದೀರಾ, ಕೇಳಿದ್ದೀರಾ? ಹೌದು ಅಂಥದ್ದೊಂದು ಪ್ರಕರಣ ನಡೆದಿದ್ದು ಈ ಸುದ್ದಿ ಸಕತ್ ವೈರಲ್ ಆಗುತ್ತಿದೆ.

ಅಡುಗೆ ಮಾಡಲು ಬೇಸರವೆಂದು ಹೆಚ್ಚಾಗಿ ಮ್ಯಾಗಿ ಮಾಡುವ ಪತ್ನಿಯರೇ ಹಾಗೆ ಮಾಡಲೇಬೇಡಿ ... ಸಂಸಾರಕ್ಕೆ ಕುತ್ತು ಉಂಟಾಗಬಹುದು ಹುಷಾರ್!

ಹಾಗಂತ ಈ ಪ್ರಕರಣ ಬೇರೆಲ್ಲೋ ದೂರ ನಡೆದಿಲ್ಲ
ಹೌದು ಮ್ಯಾಗಿ ಮಾಡಿ ಕೊಟ್ಟ ಕಾರಣಕ್ಕೆ ವಿಚ್ಛೇದನ ನಡೆದಿರುವುದು ಬೇರೆ ಯಾವುದೋ ರಾಜ್ಯದಲ್ಲಿ ಅಲ್ಲ, ನಮ್ಮ ಕರ್ನಾಟಕದಲ್ಲಿಯೇ ಅದೂ ಬಳ್ಳಾರಿಯಲ್ಲಿ. ಕೌಟಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಎಂ ಎಲ್ ರಘುನಾಥ್ ಈ ಕುರಿತು ತಿಳಿಸಿದ್ದಾರೆ.

ಪಾಪ ಬ್ರೇಕ್ಫಾಸ್ಟ್, ಲಂಚ್, ಡಿನ್ನರ್ ಎಲ್ಲಾ ಮ್ಯಾಗಿನೇ ತಿನ್ನಬೇಕಿತ್ತು
ಈತನ ಹೆಂಡತಿ ಬೆಳಗ್ಗೆ ಬ್ರೇಕ್ಫಾಸ್ಟ್ಗೆ ಮ್ಯಾಗಿ ನೂಡಲ್ಸ್, ಮಧ್ಯಾಹ್ನ ಲಂಚ್ಗೆ ಬಂದಾಗ ಮ್ಯಾಗಿ ಅಥವಾ ನೂಡಲ್ಸ್, ರಾತ್ರಿಯೂಟದಲ್ಲಿ ಪುನಃ ಅದನ್ನೇ ಮಾಡಿ ಬಡಿಸುತ್ತಿದ್ದಳಂತೆ ಈ ಕಾರಣಕ್ಕೆ ಬೇಸತ್ತು ಆಕೆಯಿಂದಲೇ ವಿಚ್ಚೇದನ ಪಡೆದಿದ್ದಾನೆ.

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ
ಪರಸ್ಪರ ಒಪ್ಪಿ ವಿಚ್ಛೇದನ ಪಡೆದು ಈ ಜೋಡಿ ದೂರಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ವಿಚ್ಚೇದನ ಕೇಸ್ಗಳು ಹೆಚ್ಚಾಗುತ್ತಿವೆ. ಕೆಲವು ಜೋಡಿಗಳನ್ನು ಮತ್ತೆ ಒಂದು ಮಾಡಲು ಸಾಧ್ಯವಾಗುವುದು ಆದರೆ ಇನ್ನು ಕೆಲವರು ಮಾನಸಿಕವಾಗಿ ತುಂಬಾ ಅಗಲಿರುತ್ತಾರೆ. ವಿಚ್ಛೇದನಕ್ಕೆ ಅರ್ಜಿ ಹಾಕುವ ಮುನ್ನ ಜೋಡಿ ಕೊನೇಪಕ್ಷ ಒಂದು ವರ್ಷವಾದರೂ ಜೊತೆಗೆ ಬಾಳಿರಬೇಕು ಎಂಬ ಕಾನೂನು ಇದೆ, ಇಲ್ಲದಿದ್ದರೆ ಕೆಲವರೇ ಮದುವೆ ಮುಗಿದ ಮರುಕ್ಷಣ ಮಂಟಪದಿಂದಲೇ ಅರ್ಜಿ ಹಾಕುವ ಪ್ರಕರಣವೂ ಇರ್ತಾ ಇತ್ತು ಎಂದು ಹೇಳಿದ್ದಾರೆ.

ಚಿಕ್ಕ ಕಾರಣಕ್ಕೆ ಒಡೆಯುತ್ತಿದೆ ಸಂಸಾರ
ಈ ಮ್ಯಾಗಿ ಕತೆಯಂತೆ ವಿಚ್ಛೇದನ ಪಡೆಯುತ್ತಿರುವ ಎಷ್ಟೋ ಜೋಡಿಗಳು ತುಂಬಾ ಸಿಲ್ಲಿ ಕಾರಣಕ್ಕೆ ಬೇರೆಯಾಗುತ್ತಿದ್ದಾರೆ. ಈ ಕೇಸ್ನಲ್ಲಿಯೇ ನೋಡಿ ಅವಳಿಗೆ ಅಡುಗೆ ಬರಲ್ಲ ಎಂದು ಮ್ಯಾಗಿ ಮಾಡಿದ್ದರೆ ಯಾವತ್ತೂ ಅದನ್ನೇ ಮಾಡ್ತಾ ಇರ್ತಾ ಇರಲಿಲ್ಲ, ಬೇರೆ ಅಡುಗೆ ಕಲಿಯುವ ಪ್ರಯತ್ನ ಮಾಡುತ್ತಿದ್ದಳು.
ಹೆಂಡತಿ ಎಂದರೆ ಏನು ಅಡುಗೆ ಮಾಡಿ ಹಾಕುವುದಕ್ಕಾ ಎಂದು ಪ್ರಶ್ನಿಸುವವರೂ ಇದ್ದಾರೆ, ಆದರೆ ಈ ಸಮಾಜದಲ್ಲಿ ಕೆಲವೊಂದು ಕರ್ತವ್ಯಗಳು ಹೆಣ್ಣು-ಗಂಡಿಗೆ ಪ್ರತ್ಯೇಕವಾಗಿಯೇ ಇದೆ, ಅದು ರೂಲ್ಸ್ ಅಲ್ಲ ಕರ್ತವ್ಯ ಅಂತ ಭಾವಿಸಬೇಕು, ಅವಳಿಗೆ ಅವನ ಮೇಲೆ ಪ್ರೀತಿ ಇದ್ದಿದ್ದರೆ ಗಂಡನಿಗೆ ಇಷ್ಟವಾಗುತ್ತಿಲ್ಲ ಎಂದು ಬದಲಾಗಲು ಪ್ರಯತ್ನಿಸುತ್ತಿದ್ದಳು. ಪ್ರೀತಿಯೇ ಇಲ್ಲದ ಮೇಲೆ ಏನೂ ಮಾತನಾಡಿ ಪ್ರಯೋಜನವಿಲ್ಲ, ಅಲ್ವಾ?



Click it and Unblock the Notifications











