Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಸಂಗಾತಿಯ ಮೋಸ ನೆನೆದು ನೋವು ಪಡುವುದಕ್ಕಿಂತ ಹೀಗೆ ಮಾಡುವುದೇ ವಾಸಿ
ನಾವು ನಿಂತಿರುವ ನೆಲ ಇದ್ದಕ್ಕಿದ್ದಂತೆ ನಡುಗಲಾರಂಭಿಸಿದರೆ ಎಲ್ಲಿಗೆ ಓಡುವುದು, ಏನು ಮಾಡುವುದು ಎಂದು ದಿಕ್ಕೇ ತೋಚುವುದಿಲ್ಲ ಅಲ್ವಾ? ಅದೇ ರೀತಿ ವೈವಾಹಿಕ ಜೀವನದಲ್ಲಿ ಸಂಗಾತಿ ಮೋಸ ಮಾಡಿದರೆ ದಿಕ್ಕೇ ತೋಚಲ್ಲ.

ಅಷ್ಟೊಂದು ನಂಬಿದ, ನಾನು ಅಷ್ಟೊಂದು ಪ್ರೀತಿಸುತ್ತಿರುವ ವ್ಯಕ್ತಿ ನನಗೆ ಮೋಸ ಮಾಡುತ್ತಾರಾ? ಎಂದು ಒಂದು ಕ್ಷಣ ಅನಿಸಿ ನಾನು ಕೇಳಿದ್ದು, ಕಂಡದ್ದು ಎಲ್ಲಾ ಸುಳ್ಳಾಗಲಿ ದೇವರೇ ಎಂದು ಪ್ರಾರ್ಥಿಸುತ್ತೇವೆ.
ಆದರೆ ಕಟು ಸತ್ಯ ಒಪ್ಪಿಕೊಳ್ಳಲೇಬೇಕಾಗುತ್ತದೆ, ನನ್ನವನು/ನನ್ನವಳು ನನಗೆ ಮೋಸ ಮಾಡಿ ಬೇರೆ ಕಡೆ ಆಕರ್ಷಿತರಾಗಿದ್ದಾನೆ/ಳೆ ಎಂದು ತಿಳಿದಾಗ ಮನಸ್ಸಿಗೆ ನೋವು ಎನ್ನುವುದಕ್ಕಿಂತ ದೊಡ್ಡ ಆಘಾತವೇ ಉಂಟಾಗುವುದು. ಬೇರೆ ವ್ಯಕ್ತಿಗಾಗಿ ನನ್ನ ಬಿಟ್ಟು ಹೋಗುತ್ತಾರಾ?
ನನ್ನ ಸಂಸಾರದಿಂದ ಆ ವ್ಯಕ್ತಿ ದೂರಾಗುತ್ತಾರಾ ಎಂದು ನೆನಸಿಕೊಂಡಷ್ಟು ತುಂಬಾನೇ ಭಯಾನಕ ಅನಿಸುವುದು. ಇನ್ನು ಯಾರಿಗೋಸ್ಕರ ಬದುಕಬೇಕು? ಹೇಗೆ ಬದುಕಬೇಕು? ನನ್ನ ಬದುಕಿಗೆ ಅರ್ಥವೇನು ಎಂದೆಲ್ಲಾ ಅನಿಸಲಾರಂಭಿಸುತ್ತದೆ. ಕೆಲವರು ಈ ಕಾರಣಕ್ಕೆ ಖಿನ್ನತೆಗೆ ಜಾರುತ್ತಾರೆ.
ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ ನೀವು ಕುಗ್ಗಿದಷ್ಟೂ ನಿಮ್ಮನ್ನು ಬಿಟ್ಟು ಹೋದ, ನಿಮಗೆ ಮೋಸ ಮಾಡಿದ ವ್ಯಕ್ತಿ ಅವರು ಮಾಡಿದ್ದು ಎಂದು ಸರಿ ಅನಿಸುವುದು.
ಅದರ ಬದಲಿಗೆ ನಿಮ್ಮತ್ತ ನೀವು ಗಮನ ನೀಡಿ, ಈ ಟಿಪ್ಸ್ ನಿಮ್ಮ ನೋವು ಮರೆಯಲು ಹಾಗೂ ಆತ್ಮವಿಶ್ವಾಸ ಹೆಚ್ಚಲು ಸಹಕಾರಿಯಾದೀತು ನೋಡಿ:

ನಿಮ್ಮನ್ನು ಪ್ರೀತಿಸಿ
ನಿಮ್ಮನ್ನು ನೀವು ಪ್ರೀತಿಸಿ, ಕಳೆದ ಹೋದ ಬಗ್ಗೆ ಚಿಂತೆ ಮಾಡದೆ ಭವಿಷ್ಯ ಬಗ್ಗೆ ಚಿಂತಿಸಿ, ಏನು ಮಾಡಬೇಕೆಂದು ಆಲೋಚಿಸಿ, ನಿಮ್ಮಲ್ಲಿ ಒಂದು ಬಗೆಯ ಆತ್ಮವಿಶ್ವಾಸ ಮೂಡುತ್ತದೆ. ಇಷ್ಟು ಆ ವ್ಯಕ್ತಿಗಾಗಿ ನಿಮ್ಮ ಎಷ್ಟೋ ಖುಷಿಗಳನ್ನು ಮರೆತಿರುತ್ತೀರಿ. ಈಗ ಅವುಗಳನ್ನು ನೆನಪಿಸಿಕೊಂಡು ನಿಮ್ಮ ಖುಷಿಯಾಗುವಂತೆ ಬದುಕಿ.
ಯಾರು ಏನು ಹೇಳುತ್ತಾರೆ ಎಂಬ ಚಿಂತೆ ಬಿಡಿ, ನಿಮಗೆ ಖುಷಿಯಾಗುವಂತೆ ಬದುಕಿ.

ನಿಮ್ಮ ಆರೈಕೆ ಕಡೆ ಗಮನ ನೀಡಿ
ನಿಮ್ಮ ಶರೀರ ಹಾಗೂ ಮನಸ್ಸು ಎರಡೂ ಕಹಿ ಘಟನೆಗಳಿಂದ ಬಳಲಿರುತ್ತದೆ. ಆದ್ದರಿಂದ ನಿಮ್ಮ ಆರೈಕೆಯತ್ತ ಗಮನ ನೀಡಿ. ಧ್ಯಾನ ಮಾಡಿ. ಅಲ್ಲದೆ ಸುಮ್ಮನಿದ್ದರೆ ಚಿಂತೆ ಬರುತ್ತದೆ, ನಿಮ್ಮನ್ನು ನೀವು ಮರೆಯುವಷ್ಟು ಬ್ಯುಸಿಯಾಗಿ, ಇದರಿಂದ ಆರ್ಥಿಕವಾಗಿ ಬೆಳೆಯುವಿರಿ ಜೊತೆಗೆ ನಿಮ್ಮ ಆತ್ಮವಿಶ್ವಾಸ ತುಂಬಾ ಹೆಚ್ಚಾಗುವುದು.

ಅಗ್ಯತ ಬಿದ್ದರೆ ಮ್ಯಾರೇಜ್ ಕೌನ್ಸಿಲರ್ ಸಲಹೆ ಪಡೆಯಿರಿ
ನಿಮ್ಮ ಮನಸ್ಸಿಗಾದ ಅಘಾತ, ನೋವಿನಿಂದ ಹೊರಬರಲು ಸಾಧ್ಯವಿಲ್ಲ ಎಂದಾದರೆ ನೀವು ಮ್ಯಾರೇಜ್ ಕೌನ್ಸಿಲರ್ ಭೇಟಿಯಾಗಿ, ಅವರು ನಿಮಗೆ ಸರಿಯಾದ ಸಲಹೆ ನೀಡುತ್ತಾರೆ.

ಮೋಸ ಮಾಡಿವರು ತಿರುಗಿ ಬಂದರೆ?
ಕೆಲವರು ಮೋಸ ಮಾಡುವಾಗ ಏನೂ ಯೋಚಿಸುವುದಿಲ್ಲ ಆ ಕ್ಷಣದ ಆಕರ್ಷಣೆಗೆ ಒಳಗಾಗಿ ಹೋಗಿ ಬಿಡುತ್ತಾರೆ, ನಂತರ ಅವರಿಗೆ ಅಲ್ಲಿ ಜೀವನ ನರಕವಾದಾಗ ನಿಮ್ಮ ನೆನಪಾಗುವುದು, ಆ ರೀತಿ ಬಂದರೆ ಅವರನ್ನು ನಿಮ್ಮ ಜೀವನದಲ್ಲಿ ಮತ್ತೆ ಸೇರಿಸಿಕೊಂಡರೆ ನೀವು ಕಟ್ಟಿಕೊಂಡ ಸುಂದರ ಜೀವನವನ್ನು ನಿಮ್ಮ ಕೈಯಾರೆ ಹಾಳು ಮಾಡಿದಂತೆ ನೆನಪಿರಲಿ.



Click it and Unblock the Notifications