Latest Updates
-
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು?
ಸಂಗಾತಿಯ ಮೋಸ ನೆನೆದು ನೋವು ಪಡುವುದಕ್ಕಿಂತ ಹೀಗೆ ಮಾಡುವುದೇ ವಾಸಿ
ನಾವು ನಿಂತಿರುವ ನೆಲ ಇದ್ದಕ್ಕಿದ್ದಂತೆ ನಡುಗಲಾರಂಭಿಸಿದರೆ ಎಲ್ಲಿಗೆ ಓಡುವುದು, ಏನು ಮಾಡುವುದು ಎಂದು ದಿಕ್ಕೇ ತೋಚುವುದಿಲ್ಲ ಅಲ್ವಾ? ಅದೇ ರೀತಿ ವೈವಾಹಿಕ ಜೀವನದಲ್ಲಿ ಸಂಗಾತಿ ಮೋಸ ಮಾಡಿದರೆ ದಿಕ್ಕೇ ತೋಚಲ್ಲ.

ಅಷ್ಟೊಂದು ನಂಬಿದ, ನಾನು ಅಷ್ಟೊಂದು ಪ್ರೀತಿಸುತ್ತಿರುವ ವ್ಯಕ್ತಿ ನನಗೆ ಮೋಸ ಮಾಡುತ್ತಾರಾ? ಎಂದು ಒಂದು ಕ್ಷಣ ಅನಿಸಿ ನಾನು ಕೇಳಿದ್ದು, ಕಂಡದ್ದು ಎಲ್ಲಾ ಸುಳ್ಳಾಗಲಿ ದೇವರೇ ಎಂದು ಪ್ರಾರ್ಥಿಸುತ್ತೇವೆ.
ಆದರೆ ಕಟು ಸತ್ಯ ಒಪ್ಪಿಕೊಳ್ಳಲೇಬೇಕಾಗುತ್ತದೆ, ನನ್ನವನು/ನನ್ನವಳು ನನಗೆ ಮೋಸ ಮಾಡಿ ಬೇರೆ ಕಡೆ ಆಕರ್ಷಿತರಾಗಿದ್ದಾನೆ/ಳೆ ಎಂದು ತಿಳಿದಾಗ ಮನಸ್ಸಿಗೆ ನೋವು ಎನ್ನುವುದಕ್ಕಿಂತ ದೊಡ್ಡ ಆಘಾತವೇ ಉಂಟಾಗುವುದು. ಬೇರೆ ವ್ಯಕ್ತಿಗಾಗಿ ನನ್ನ ಬಿಟ್ಟು ಹೋಗುತ್ತಾರಾ?
ನನ್ನ ಸಂಸಾರದಿಂದ ಆ ವ್ಯಕ್ತಿ ದೂರಾಗುತ್ತಾರಾ ಎಂದು ನೆನಸಿಕೊಂಡಷ್ಟು ತುಂಬಾನೇ ಭಯಾನಕ ಅನಿಸುವುದು. ಇನ್ನು ಯಾರಿಗೋಸ್ಕರ ಬದುಕಬೇಕು? ಹೇಗೆ ಬದುಕಬೇಕು? ನನ್ನ ಬದುಕಿಗೆ ಅರ್ಥವೇನು ಎಂದೆಲ್ಲಾ ಅನಿಸಲಾರಂಭಿಸುತ್ತದೆ. ಕೆಲವರು ಈ ಕಾರಣಕ್ಕೆ ಖಿನ್ನತೆಗೆ ಜಾರುತ್ತಾರೆ.
ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ ನೀವು ಕುಗ್ಗಿದಷ್ಟೂ ನಿಮ್ಮನ್ನು ಬಿಟ್ಟು ಹೋದ, ನಿಮಗೆ ಮೋಸ ಮಾಡಿದ ವ್ಯಕ್ತಿ ಅವರು ಮಾಡಿದ್ದು ಎಂದು ಸರಿ ಅನಿಸುವುದು.
ಅದರ ಬದಲಿಗೆ ನಿಮ್ಮತ್ತ ನೀವು ಗಮನ ನೀಡಿ, ಈ ಟಿಪ್ಸ್ ನಿಮ್ಮ ನೋವು ಮರೆಯಲು ಹಾಗೂ ಆತ್ಮವಿಶ್ವಾಸ ಹೆಚ್ಚಲು ಸಹಕಾರಿಯಾದೀತು ನೋಡಿ:

ನಿಮ್ಮನ್ನು ಪ್ರೀತಿಸಿ
ನಿಮ್ಮನ್ನು ನೀವು ಪ್ರೀತಿಸಿ, ಕಳೆದ ಹೋದ ಬಗ್ಗೆ ಚಿಂತೆ ಮಾಡದೆ ಭವಿಷ್ಯ ಬಗ್ಗೆ ಚಿಂತಿಸಿ, ಏನು ಮಾಡಬೇಕೆಂದು ಆಲೋಚಿಸಿ, ನಿಮ್ಮಲ್ಲಿ ಒಂದು ಬಗೆಯ ಆತ್ಮವಿಶ್ವಾಸ ಮೂಡುತ್ತದೆ. ಇಷ್ಟು ಆ ವ್ಯಕ್ತಿಗಾಗಿ ನಿಮ್ಮ ಎಷ್ಟೋ ಖುಷಿಗಳನ್ನು ಮರೆತಿರುತ್ತೀರಿ. ಈಗ ಅವುಗಳನ್ನು ನೆನಪಿಸಿಕೊಂಡು ನಿಮ್ಮ ಖುಷಿಯಾಗುವಂತೆ ಬದುಕಿ.
ಯಾರು ಏನು ಹೇಳುತ್ತಾರೆ ಎಂಬ ಚಿಂತೆ ಬಿಡಿ, ನಿಮಗೆ ಖುಷಿಯಾಗುವಂತೆ ಬದುಕಿ.

ನಿಮ್ಮ ಆರೈಕೆ ಕಡೆ ಗಮನ ನೀಡಿ
ನಿಮ್ಮ ಶರೀರ ಹಾಗೂ ಮನಸ್ಸು ಎರಡೂ ಕಹಿ ಘಟನೆಗಳಿಂದ ಬಳಲಿರುತ್ತದೆ. ಆದ್ದರಿಂದ ನಿಮ್ಮ ಆರೈಕೆಯತ್ತ ಗಮನ ನೀಡಿ. ಧ್ಯಾನ ಮಾಡಿ. ಅಲ್ಲದೆ ಸುಮ್ಮನಿದ್ದರೆ ಚಿಂತೆ ಬರುತ್ತದೆ, ನಿಮ್ಮನ್ನು ನೀವು ಮರೆಯುವಷ್ಟು ಬ್ಯುಸಿಯಾಗಿ, ಇದರಿಂದ ಆರ್ಥಿಕವಾಗಿ ಬೆಳೆಯುವಿರಿ ಜೊತೆಗೆ ನಿಮ್ಮ ಆತ್ಮವಿಶ್ವಾಸ ತುಂಬಾ ಹೆಚ್ಚಾಗುವುದು.

ಅಗ್ಯತ ಬಿದ್ದರೆ ಮ್ಯಾರೇಜ್ ಕೌನ್ಸಿಲರ್ ಸಲಹೆ ಪಡೆಯಿರಿ
ನಿಮ್ಮ ಮನಸ್ಸಿಗಾದ ಅಘಾತ, ನೋವಿನಿಂದ ಹೊರಬರಲು ಸಾಧ್ಯವಿಲ್ಲ ಎಂದಾದರೆ ನೀವು ಮ್ಯಾರೇಜ್ ಕೌನ್ಸಿಲರ್ ಭೇಟಿಯಾಗಿ, ಅವರು ನಿಮಗೆ ಸರಿಯಾದ ಸಲಹೆ ನೀಡುತ್ತಾರೆ.

ಮೋಸ ಮಾಡಿವರು ತಿರುಗಿ ಬಂದರೆ?
ಕೆಲವರು ಮೋಸ ಮಾಡುವಾಗ ಏನೂ ಯೋಚಿಸುವುದಿಲ್ಲ ಆ ಕ್ಷಣದ ಆಕರ್ಷಣೆಗೆ ಒಳಗಾಗಿ ಹೋಗಿ ಬಿಡುತ್ತಾರೆ, ನಂತರ ಅವರಿಗೆ ಅಲ್ಲಿ ಜೀವನ ನರಕವಾದಾಗ ನಿಮ್ಮ ನೆನಪಾಗುವುದು, ಆ ರೀತಿ ಬಂದರೆ ಅವರನ್ನು ನಿಮ್ಮ ಜೀವನದಲ್ಲಿ ಮತ್ತೆ ಸೇರಿಸಿಕೊಂಡರೆ ನೀವು ಕಟ್ಟಿಕೊಂಡ ಸುಂದರ ಜೀವನವನ್ನು ನಿಮ್ಮ ಕೈಯಾರೆ ಹಾಳು ಮಾಡಿದಂತೆ ನೆನಪಿರಲಿ.



Click it and Unblock the Notifications
