Latest Updates
-
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು!
ಸಂಗಾತಿಯ ಮೋಸ ನೆನೆದು ನೋವು ಪಡುವುದಕ್ಕಿಂತ ಹೀಗೆ ಮಾಡುವುದೇ ವಾಸಿ
ನಾವು ನಿಂತಿರುವ ನೆಲ ಇದ್ದಕ್ಕಿದ್ದಂತೆ ನಡುಗಲಾರಂಭಿಸಿದರೆ ಎಲ್ಲಿಗೆ ಓಡುವುದು, ಏನು ಮಾಡುವುದು ಎಂದು ದಿಕ್ಕೇ ತೋಚುವುದಿಲ್ಲ ಅಲ್ವಾ? ಅದೇ ರೀತಿ ವೈವಾಹಿಕ ಜೀವನದಲ್ಲಿ ಸಂಗಾತಿ ಮೋಸ ಮಾಡಿದರೆ ದಿಕ್ಕೇ ತೋಚಲ್ಲ.

ಅಷ್ಟೊಂದು ನಂಬಿದ, ನಾನು ಅಷ್ಟೊಂದು ಪ್ರೀತಿಸುತ್ತಿರುವ ವ್ಯಕ್ತಿ ನನಗೆ ಮೋಸ ಮಾಡುತ್ತಾರಾ? ಎಂದು ಒಂದು ಕ್ಷಣ ಅನಿಸಿ ನಾನು ಕೇಳಿದ್ದು, ಕಂಡದ್ದು ಎಲ್ಲಾ ಸುಳ್ಳಾಗಲಿ ದೇವರೇ ಎಂದು ಪ್ರಾರ್ಥಿಸುತ್ತೇವೆ.
ಆದರೆ ಕಟು ಸತ್ಯ ಒಪ್ಪಿಕೊಳ್ಳಲೇಬೇಕಾಗುತ್ತದೆ, ನನ್ನವನು/ನನ್ನವಳು ನನಗೆ ಮೋಸ ಮಾಡಿ ಬೇರೆ ಕಡೆ ಆಕರ್ಷಿತರಾಗಿದ್ದಾನೆ/ಳೆ ಎಂದು ತಿಳಿದಾಗ ಮನಸ್ಸಿಗೆ ನೋವು ಎನ್ನುವುದಕ್ಕಿಂತ ದೊಡ್ಡ ಆಘಾತವೇ ಉಂಟಾಗುವುದು. ಬೇರೆ ವ್ಯಕ್ತಿಗಾಗಿ ನನ್ನ ಬಿಟ್ಟು ಹೋಗುತ್ತಾರಾ?
ನನ್ನ ಸಂಸಾರದಿಂದ ಆ ವ್ಯಕ್ತಿ ದೂರಾಗುತ್ತಾರಾ ಎಂದು ನೆನಸಿಕೊಂಡಷ್ಟು ತುಂಬಾನೇ ಭಯಾನಕ ಅನಿಸುವುದು. ಇನ್ನು ಯಾರಿಗೋಸ್ಕರ ಬದುಕಬೇಕು? ಹೇಗೆ ಬದುಕಬೇಕು? ನನ್ನ ಬದುಕಿಗೆ ಅರ್ಥವೇನು ಎಂದೆಲ್ಲಾ ಅನಿಸಲಾರಂಭಿಸುತ್ತದೆ. ಕೆಲವರು ಈ ಕಾರಣಕ್ಕೆ ಖಿನ್ನತೆಗೆ ಜಾರುತ್ತಾರೆ.
ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ ನೀವು ಕುಗ್ಗಿದಷ್ಟೂ ನಿಮ್ಮನ್ನು ಬಿಟ್ಟು ಹೋದ, ನಿಮಗೆ ಮೋಸ ಮಾಡಿದ ವ್ಯಕ್ತಿ ಅವರು ಮಾಡಿದ್ದು ಎಂದು ಸರಿ ಅನಿಸುವುದು.
ಅದರ ಬದಲಿಗೆ ನಿಮ್ಮತ್ತ ನೀವು ಗಮನ ನೀಡಿ, ಈ ಟಿಪ್ಸ್ ನಿಮ್ಮ ನೋವು ಮರೆಯಲು ಹಾಗೂ ಆತ್ಮವಿಶ್ವಾಸ ಹೆಚ್ಚಲು ಸಹಕಾರಿಯಾದೀತು ನೋಡಿ:

ನಿಮ್ಮನ್ನು ಪ್ರೀತಿಸಿ
ನಿಮ್ಮನ್ನು ನೀವು ಪ್ರೀತಿಸಿ, ಕಳೆದ ಹೋದ ಬಗ್ಗೆ ಚಿಂತೆ ಮಾಡದೆ ಭವಿಷ್ಯ ಬಗ್ಗೆ ಚಿಂತಿಸಿ, ಏನು ಮಾಡಬೇಕೆಂದು ಆಲೋಚಿಸಿ, ನಿಮ್ಮಲ್ಲಿ ಒಂದು ಬಗೆಯ ಆತ್ಮವಿಶ್ವಾಸ ಮೂಡುತ್ತದೆ. ಇಷ್ಟು ಆ ವ್ಯಕ್ತಿಗಾಗಿ ನಿಮ್ಮ ಎಷ್ಟೋ ಖುಷಿಗಳನ್ನು ಮರೆತಿರುತ್ತೀರಿ. ಈಗ ಅವುಗಳನ್ನು ನೆನಪಿಸಿಕೊಂಡು ನಿಮ್ಮ ಖುಷಿಯಾಗುವಂತೆ ಬದುಕಿ.
ಯಾರು ಏನು ಹೇಳುತ್ತಾರೆ ಎಂಬ ಚಿಂತೆ ಬಿಡಿ, ನಿಮಗೆ ಖುಷಿಯಾಗುವಂತೆ ಬದುಕಿ.

ನಿಮ್ಮ ಆರೈಕೆ ಕಡೆ ಗಮನ ನೀಡಿ
ನಿಮ್ಮ ಶರೀರ ಹಾಗೂ ಮನಸ್ಸು ಎರಡೂ ಕಹಿ ಘಟನೆಗಳಿಂದ ಬಳಲಿರುತ್ತದೆ. ಆದ್ದರಿಂದ ನಿಮ್ಮ ಆರೈಕೆಯತ್ತ ಗಮನ ನೀಡಿ. ಧ್ಯಾನ ಮಾಡಿ. ಅಲ್ಲದೆ ಸುಮ್ಮನಿದ್ದರೆ ಚಿಂತೆ ಬರುತ್ತದೆ, ನಿಮ್ಮನ್ನು ನೀವು ಮರೆಯುವಷ್ಟು ಬ್ಯುಸಿಯಾಗಿ, ಇದರಿಂದ ಆರ್ಥಿಕವಾಗಿ ಬೆಳೆಯುವಿರಿ ಜೊತೆಗೆ ನಿಮ್ಮ ಆತ್ಮವಿಶ್ವಾಸ ತುಂಬಾ ಹೆಚ್ಚಾಗುವುದು.

ಅಗ್ಯತ ಬಿದ್ದರೆ ಮ್ಯಾರೇಜ್ ಕೌನ್ಸಿಲರ್ ಸಲಹೆ ಪಡೆಯಿರಿ
ನಿಮ್ಮ ಮನಸ್ಸಿಗಾದ ಅಘಾತ, ನೋವಿನಿಂದ ಹೊರಬರಲು ಸಾಧ್ಯವಿಲ್ಲ ಎಂದಾದರೆ ನೀವು ಮ್ಯಾರೇಜ್ ಕೌನ್ಸಿಲರ್ ಭೇಟಿಯಾಗಿ, ಅವರು ನಿಮಗೆ ಸರಿಯಾದ ಸಲಹೆ ನೀಡುತ್ತಾರೆ.

ಮೋಸ ಮಾಡಿವರು ತಿರುಗಿ ಬಂದರೆ?
ಕೆಲವರು ಮೋಸ ಮಾಡುವಾಗ ಏನೂ ಯೋಚಿಸುವುದಿಲ್ಲ ಆ ಕ್ಷಣದ ಆಕರ್ಷಣೆಗೆ ಒಳಗಾಗಿ ಹೋಗಿ ಬಿಡುತ್ತಾರೆ, ನಂತರ ಅವರಿಗೆ ಅಲ್ಲಿ ಜೀವನ ನರಕವಾದಾಗ ನಿಮ್ಮ ನೆನಪಾಗುವುದು, ಆ ರೀತಿ ಬಂದರೆ ಅವರನ್ನು ನಿಮ್ಮ ಜೀವನದಲ್ಲಿ ಮತ್ತೆ ಸೇರಿಸಿಕೊಂಡರೆ ನೀವು ಕಟ್ಟಿಕೊಂಡ ಸುಂದರ ಜೀವನವನ್ನು ನಿಮ್ಮ ಕೈಯಾರೆ ಹಾಳು ಮಾಡಿದಂತೆ ನೆನಪಿರಲಿ.



Click it and Unblock the Notifications











