Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಸಂಗಾತಿಯ ಮೋಸ ನೆನೆದು ನೋವು ಪಡುವುದಕ್ಕಿಂತ ಹೀಗೆ ಮಾಡುವುದೇ ವಾಸಿ
ನಾವು ನಿಂತಿರುವ ನೆಲ ಇದ್ದಕ್ಕಿದ್ದಂತೆ ನಡುಗಲಾರಂಭಿಸಿದರೆ ಎಲ್ಲಿಗೆ ಓಡುವುದು, ಏನು ಮಾಡುವುದು ಎಂದು ದಿಕ್ಕೇ ತೋಚುವುದಿಲ್ಲ ಅಲ್ವಾ? ಅದೇ ರೀತಿ ವೈವಾಹಿಕ ಜೀವನದಲ್ಲಿ ಸಂಗಾತಿ ಮೋಸ ಮಾಡಿದರೆ ದಿಕ್ಕೇ ತೋಚಲ್ಲ.

ಅಷ್ಟೊಂದು ನಂಬಿದ, ನಾನು ಅಷ್ಟೊಂದು ಪ್ರೀತಿಸುತ್ತಿರುವ ವ್ಯಕ್ತಿ ನನಗೆ ಮೋಸ ಮಾಡುತ್ತಾರಾ? ಎಂದು ಒಂದು ಕ್ಷಣ ಅನಿಸಿ ನಾನು ಕೇಳಿದ್ದು, ಕಂಡದ್ದು ಎಲ್ಲಾ ಸುಳ್ಳಾಗಲಿ ದೇವರೇ ಎಂದು ಪ್ರಾರ್ಥಿಸುತ್ತೇವೆ.
ಆದರೆ ಕಟು ಸತ್ಯ ಒಪ್ಪಿಕೊಳ್ಳಲೇಬೇಕಾಗುತ್ತದೆ, ನನ್ನವನು/ನನ್ನವಳು ನನಗೆ ಮೋಸ ಮಾಡಿ ಬೇರೆ ಕಡೆ ಆಕರ್ಷಿತರಾಗಿದ್ದಾನೆ/ಳೆ ಎಂದು ತಿಳಿದಾಗ ಮನಸ್ಸಿಗೆ ನೋವು ಎನ್ನುವುದಕ್ಕಿಂತ ದೊಡ್ಡ ಆಘಾತವೇ ಉಂಟಾಗುವುದು. ಬೇರೆ ವ್ಯಕ್ತಿಗಾಗಿ ನನ್ನ ಬಿಟ್ಟು ಹೋಗುತ್ತಾರಾ?
ನನ್ನ ಸಂಸಾರದಿಂದ ಆ ವ್ಯಕ್ತಿ ದೂರಾಗುತ್ತಾರಾ ಎಂದು ನೆನಸಿಕೊಂಡಷ್ಟು ತುಂಬಾನೇ ಭಯಾನಕ ಅನಿಸುವುದು. ಇನ್ನು ಯಾರಿಗೋಸ್ಕರ ಬದುಕಬೇಕು? ಹೇಗೆ ಬದುಕಬೇಕು? ನನ್ನ ಬದುಕಿಗೆ ಅರ್ಥವೇನು ಎಂದೆಲ್ಲಾ ಅನಿಸಲಾರಂಭಿಸುತ್ತದೆ. ಕೆಲವರು ಈ ಕಾರಣಕ್ಕೆ ಖಿನ್ನತೆಗೆ ಜಾರುತ್ತಾರೆ.
ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ ನೀವು ಕುಗ್ಗಿದಷ್ಟೂ ನಿಮ್ಮನ್ನು ಬಿಟ್ಟು ಹೋದ, ನಿಮಗೆ ಮೋಸ ಮಾಡಿದ ವ್ಯಕ್ತಿ ಅವರು ಮಾಡಿದ್ದು ಎಂದು ಸರಿ ಅನಿಸುವುದು.
ಅದರ ಬದಲಿಗೆ ನಿಮ್ಮತ್ತ ನೀವು ಗಮನ ನೀಡಿ, ಈ ಟಿಪ್ಸ್ ನಿಮ್ಮ ನೋವು ಮರೆಯಲು ಹಾಗೂ ಆತ್ಮವಿಶ್ವಾಸ ಹೆಚ್ಚಲು ಸಹಕಾರಿಯಾದೀತು ನೋಡಿ:

ನಿಮ್ಮನ್ನು ಪ್ರೀತಿಸಿ
ನಿಮ್ಮನ್ನು ನೀವು ಪ್ರೀತಿಸಿ, ಕಳೆದ ಹೋದ ಬಗ್ಗೆ ಚಿಂತೆ ಮಾಡದೆ ಭವಿಷ್ಯ ಬಗ್ಗೆ ಚಿಂತಿಸಿ, ಏನು ಮಾಡಬೇಕೆಂದು ಆಲೋಚಿಸಿ, ನಿಮ್ಮಲ್ಲಿ ಒಂದು ಬಗೆಯ ಆತ್ಮವಿಶ್ವಾಸ ಮೂಡುತ್ತದೆ. ಇಷ್ಟು ಆ ವ್ಯಕ್ತಿಗಾಗಿ ನಿಮ್ಮ ಎಷ್ಟೋ ಖುಷಿಗಳನ್ನು ಮರೆತಿರುತ್ತೀರಿ. ಈಗ ಅವುಗಳನ್ನು ನೆನಪಿಸಿಕೊಂಡು ನಿಮ್ಮ ಖುಷಿಯಾಗುವಂತೆ ಬದುಕಿ.
ಯಾರು ಏನು ಹೇಳುತ್ತಾರೆ ಎಂಬ ಚಿಂತೆ ಬಿಡಿ, ನಿಮಗೆ ಖುಷಿಯಾಗುವಂತೆ ಬದುಕಿ.

ನಿಮ್ಮ ಆರೈಕೆ ಕಡೆ ಗಮನ ನೀಡಿ
ನಿಮ್ಮ ಶರೀರ ಹಾಗೂ ಮನಸ್ಸು ಎರಡೂ ಕಹಿ ಘಟನೆಗಳಿಂದ ಬಳಲಿರುತ್ತದೆ. ಆದ್ದರಿಂದ ನಿಮ್ಮ ಆರೈಕೆಯತ್ತ ಗಮನ ನೀಡಿ. ಧ್ಯಾನ ಮಾಡಿ. ಅಲ್ಲದೆ ಸುಮ್ಮನಿದ್ದರೆ ಚಿಂತೆ ಬರುತ್ತದೆ, ನಿಮ್ಮನ್ನು ನೀವು ಮರೆಯುವಷ್ಟು ಬ್ಯುಸಿಯಾಗಿ, ಇದರಿಂದ ಆರ್ಥಿಕವಾಗಿ ಬೆಳೆಯುವಿರಿ ಜೊತೆಗೆ ನಿಮ್ಮ ಆತ್ಮವಿಶ್ವಾಸ ತುಂಬಾ ಹೆಚ್ಚಾಗುವುದು.

ಅಗ್ಯತ ಬಿದ್ದರೆ ಮ್ಯಾರೇಜ್ ಕೌನ್ಸಿಲರ್ ಸಲಹೆ ಪಡೆಯಿರಿ
ನಿಮ್ಮ ಮನಸ್ಸಿಗಾದ ಅಘಾತ, ನೋವಿನಿಂದ ಹೊರಬರಲು ಸಾಧ್ಯವಿಲ್ಲ ಎಂದಾದರೆ ನೀವು ಮ್ಯಾರೇಜ್ ಕೌನ್ಸಿಲರ್ ಭೇಟಿಯಾಗಿ, ಅವರು ನಿಮಗೆ ಸರಿಯಾದ ಸಲಹೆ ನೀಡುತ್ತಾರೆ.

ಮೋಸ ಮಾಡಿವರು ತಿರುಗಿ ಬಂದರೆ?
ಕೆಲವರು ಮೋಸ ಮಾಡುವಾಗ ಏನೂ ಯೋಚಿಸುವುದಿಲ್ಲ ಆ ಕ್ಷಣದ ಆಕರ್ಷಣೆಗೆ ಒಳಗಾಗಿ ಹೋಗಿ ಬಿಡುತ್ತಾರೆ, ನಂತರ ಅವರಿಗೆ ಅಲ್ಲಿ ಜೀವನ ನರಕವಾದಾಗ ನಿಮ್ಮ ನೆನಪಾಗುವುದು, ಆ ರೀತಿ ಬಂದರೆ ಅವರನ್ನು ನಿಮ್ಮ ಜೀವನದಲ್ಲಿ ಮತ್ತೆ ಸೇರಿಸಿಕೊಂಡರೆ ನೀವು ಕಟ್ಟಿಕೊಂಡ ಸುಂದರ ಜೀವನವನ್ನು ನಿಮ್ಮ ಕೈಯಾರೆ ಹಾಳು ಮಾಡಿದಂತೆ ನೆನಪಿರಲಿ.



Click it and Unblock the Notifications











