Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ದಾಂಪತ್ಯದಲ್ಲಿ ಅರಿತು ಬಾಳಿದರೆ, ಖಂಡಿತ ಬಾಳು ಬಂಗಾರ
ಸಣ್ಣಪುಟ್ಟ ಜಗಳಗಳು ಗಂಡ ಹೆಂಡತಿಯರ ನಡುವೆ ಇದ್ದೇ ಇರುತ್ತದೆ. ಆದರೆ ಇದೇ ಜಗಳವನ್ನು ದೊಡ್ಡದಾಗಿ ಮಾಡಿದರೆ ಅದು ಮುಂದೆ ಜೀವನದ ಮೇಲೆ ಪರಿಣಾಮ ಬೀರಬಹುದು....
ಸಂಬಂಧವೆನ್ನುವುದು ಎರಡು ಮನಸ್ಸುಗಳ ಬಂಧನ. ಎರಡು ಮನಸ್ಸುಗಳು ಒಂದಾದಾಗ ಮಾತ್ರ ಸಂಬಂಧವು ಚೆನ್ನಾಗಿರಲು ಸಾಧ್ಯ. ಆದರೆ ಪ್ರತಿಯೊಂದು ಸಂಬಂಧದಲ್ಲಿಯೂ ಏನಾದರೊಂದು ಸಮಸ್ಯೆಗಳು ಇದ್ದೇ ಇರುತ್ತದೆ.
ಸಣ್ಣಪುಟ್ಟ ಜಗಳಗಳು ಆಗುತ್ತಾ ಇದ್ದರೆ ಮಾತ್ರ ಸಂಗಾತಿಗಳ ನಡುವಿನ ಪ್ರೀತಿಯು ಮತ್ತಷ್ಟು ಹೆಚ್ಚುವುದು. ಇಲ್ಲವಾದಲ್ಲಿ ಆ ಸಂಬಂಧವು ಬೇಸರ ಮೂಡಿಸುತ್ತದೆ. ಗಂಡ ಹೆಂಡತಿಯ ಬಾಂಧವ್ಯ ಹಾವು-ಏಣಿ ಆಟದ ಹಾಗೆ....
ಸಂಗಾತಿಯು ಮುನಿಸಿಕೊಳ್ಳುವುದು, ಆಕೆಯನ್ನು ಸಮಾಧಾನಪಡಿಸುವುದು ಹೀಗೆ ಪ್ರತಿಯೊಂದು ಕೂಡ ಸಂಬಂಧದಲ್ಲಿ ತುಂಬಾ ಮುಖ್ಯ. ಆದರೆ ಇಂದಿನ ದಂಪತಿಗಳು ಸಣ್ಣಪುಟ್ಟ ಜಗಳಗಳಾದರೂ ತಮ್ಮ ಸಂಬಂಧದ ಗುಣಮಟ್ಟದ ಬಗ್ಗೆ ಸಂಶಯಪಡಲು ಆರಂಭಿಸುತ್ತಾರೆ. ಗಂಡ-ಹೆಂಡತಿಯ ನಡುವಿನ ಗುಟ್ಟು ಗುಟ್ಟಾಗಿಯೇ ಇರಲಿ!
ಆದರೆ ಪ್ರತಿಯೊಂದು ಸಂಬಂಧದಲ್ಲಿಯೂ ಇದು ಇರುತ್ತದೆ ಎನ್ನುವುದು ಅವರಿಗೆ ತಿಳಿದಿರುವುದಿಲ್ಲ. ತಮ್ಮ ಸಂಗಾತಿ ಒಂದು ದಿನ ಖುಷಿ ನೀಡದೆ ಇದ್ದರೆ ಏನೋ ಸಂಶಯಪಡಲು ಆರಂಭಿಸುತ್ತಾರೆ. ಇದೆಲ್ಲವೂ ಸಾಮಾನ್ಯವೆಂದು ಅರ್ಥ ಮಾಡಿಕೊಂಡು ಮುಂದೆ ಸಾಗಲು ಮುಂದಕ್ಕೆ ಓದಿಕೊಳ್ಳಿ.....

ಕಿರಿಕಿರಿಯ ಸಮಸ್ಯೆ!
ಪ್ರತಿಯೊಂದು ದಾಂಪತ್ಯದಲ್ಲೂ ಇದು ಸಾಮಾನ್ಯ. ಪ್ರತೀ ಕ್ಷಣವೂ ನಿಮ್ಮ ಸಂಗಾತಿ ಒಂದೇ ರೀತಿಯಲ್ಲಿರುವುದಿಲ್ಲ. ಕೆಲವೊಮ್ಮೆ ಅವರ ಮನಸ್ಥಿತಿಯು ಬದಲಾಗುತ್ತದೆ ಮತ್ತು ಕಿರಿಕಿರಿಯಾಗುವುದು ಸಹಜ.

ಲಘುವಾಗಿ ಪರಿಗಣಿಸುವುದು,,,,
ಕೆಲವು ಸಮಯ ಜತೆಯಾಗಿ ಕಳೆದ ಬಳಿಕ ಸಂಗಾತಿಗಳು ಪರಸ್ಪರರನ್ನು ಲಘುವಾಗಿ ಪರಿಗಣಿಸುವುದು ಸಾಮಾನ್ಯ. ಪರಸ್ಪರ ಮಾತನಾಡಿಕೊಂಡು ಈ ಸಮಸ್ಯೆ ನಿವಾರಿಸಬಹುದು.

ಸಂಗಾತಿಯಿಂದ ಕಡೆಗಣನೆ
ಜೀವನದ ಪ್ರತಿಯೊಂದು ಕ್ಷಣವೂ ನಿಮ್ಮ ಕಡೆ ಗಮನಹರಿಸುವುದು ಸಾಧ್ಯವಾಗಿರುವುದಿಲ್ಲ. ವೃತ್ತಿ ಜೀವನ ಹಾಗೂ ಮಕ್ಕಳ ಕಾರಣದಿಂದ ಹೀಗೆ ಆಗಬಹುದು. ಇದು ತುಂಬಾ ಸಾಮಾನ್ಯ ವಿಷಯ. ಇದನ್ನು ಬಗೆಹರಿಸುವ ಸಾಮರ್ಥ್ಯ ನಿಮ್ಮಲ್ಲಿದೆ.

ಆಸಕ್ತಿ ಕುಂದಿದೆ....
ಜೀವನದ ಪ್ರತೀ ದಿನವೂ ಸಂಗಾತಿಯು ಆಸಕ್ತಿಯಿಂದ ಹಾಸಿಗೆಯಲ್ಲಿ ವರ್ತಿಸಬೇಕೆಂದಿಲ್ಲ. ಕೆಲವು ಕಾರಣಗಳಿಂದ ಆಸಕ್ತಿ ಕಡಿಮೆ ಇರಬಹುದು.

ಆಸಕ್ತಿ ಕುಂದಿದೆ....
ಪ್ರೀತಿ ವ್ಯಕ್ತಪಡಿಸುವುದರಲ್ಲಿ ಏಳುಬೀಳುಗಳು ಇರಬಹುದು. ಇದು ಸಾಮಾನ್ಯ. ಇಂತಹ ಸಮಸ್ಯೆಗೆ ಸಂಗಾತಿಯಿಂದ ದೂರವಾಗಬೇಕಿಲ್ಲ. ಮಾತಿನ ಮೂಲಕ ಇದನ್ನು ಬಗೆಹರಿಸಿ.

ಆಕರ್ಷಣೆ ಹೋಗಿದೆ
ದಾಂಪತ್ಯದ ಆರಂಭದಲ್ಲಿ ಇದ್ದ ಆಕರ್ಷಣೆ ಮತ್ತು ರೋಚಕತೆ ಜೀವಮಾನವಿಡಿ ಉಳಿದುಕೊಳ್ಳುತ್ತದೆ ಎನ್ನುವ ತಪ್ಪು ಕಲ್ಪನೆ ಕೆಲವರಲ್ಲಿದೆ. ಕೆಲವು ವರ್ಷಗಳಲ್ಲಿಯೇ ಈ ಆಕರ್ಷಣೆ ಕಡಿಮೆಯಾಗುವುದು. ಆದರೆ ನೀವು ಒಳ್ಳೆಯ ಸಂಗಾತಿಗಳಾಗಿದ್ದರೆ ಪ್ರೀತಿ ಹಾಗೂ ಒಲವು ಹಾಗೆ ಉಳಿಯುತ್ತದೆ. ಪ್ರತೀ ಕ್ಷಣವನ್ನು ಆನಂದಿಸುತ್ತಾ ಇರಬೇಕು. ಆಕರ್ಷಣೆ ಎನ್ನುವುದು ತಾತ್ಕಾಲಿಕ. ಆದರೆ ಒಲವು ಶಾಶ್ವತ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು.



Click it and Unblock the Notifications