Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಕೆಲಸದ ವಿಷಯದಲ್ಲಿ ಗಂಡನಿಗೆ ಒತ್ತಾಯ ಮಾಡಬೇಡಿ!
ಯಾವುದೇ ಹೆಂಗಸು ತನ್ನ ಗಂಡನನ್ನು ಒತ್ತಾಯ ಮಾಡಲು ಇಷ್ಟಪಡುವುದಿಲ್ಲ. ಆದರೆ ಇದು ಸುಮ್ಮನೆ ನಡೆದು ಬಿಡುತ್ತದೆ. ವಿಷಯ ಏನಪ್ಪಾ ಎಂದರೆ, ಒತ್ತಾಯ ಮಾಡುವುದರಿಂದ ಕೆಲಸಗಳು ಸಾಗುತ್ತವೆಯೇ? ಮೊದಲಿಗೆ ಇದರರ್ಥ ಏನು? ಒತ್ತಾಯ ಮಾಡುವುದು ಎಂದರೆ ಒಬ್ಬರನ್ನು ಪದೇ ಪದೇ ಒಂದು ಕೆಲಸ ಮಾಡುವಂತೆ ಪೀಡಿಸುವುದಾಗಿರುತ್ತದೆ. ಒಂದು ಅಧ್ಯಯನದ ಪ್ರಕಾರ ಈ ಪೀಡಿಸುವುದು ಅಥವಾ ಒತ್ತಾಯ ಮಾಡುವುದು ಹಲವಾರು ಸಂಬಂಧಗಳು ಮುರಿದು ಬೀಳಲು ಕಾರಣವಾಗಿವೆಯಂತೆ, ಇದರಿಂದ ಕೆಲವೊಂದು ನಿರ್ದಿಷ್ಟ ಪರಿಣಾಮಗಳು ಎದುರಾಗುತ್ತವೆ.
ಒಬ್ಬ ವ್ಯಕ್ತಿಯನ್ನು ಪೀಡಿಸಲು ನಿಮಗೆ ನಾನಾ ಕಾರಣಗಳು ಇರಬಹುದು. ಆದರೆ ಈ ಪೀಡನೆಯಿಂದ ನಿಮ್ಮ ಕೆಲಸಗಳು ಆಗುತ್ತವೆಯೇ? ಮೊದಲಿಗೆ ನಿಮ್ಮ ಒತ್ತಾಯದಿಂದ ನಿಮ್ಮ ಸಂಗಾತಿಗೆ ಕಿರಿಕಿರಿಯುಂಟಾಗಬಹುದು. ಎರಡನೆಯದಾಗಿ ಆತ ಅಥವಾ ಆಕೆ ನಿಮ್ಮನ್ನು ಸಂಪೂರ್ಣವಾಗಿ ದ್ವೇಷಿಸಲು ಶುರು ಮಾಡಬಹುದು. ನಮ್ಮಲ್ಲಿ ಬಹುತೇಕ ಮಂದಿ ಮಹಿಳೆಯರು ಹೀಗೆ ಪೀಡಿಸುತ್ತಾರೆ ಎಂದು ಕೊಂಡಿರುತ್ತಾರೆ.
ಆದರೆ ಈ ವಿಚಾರದಲ್ಲಿ ಗಂಡಸರು ಸಹ ಹಿಂದೆ ಬಿದ್ದಿರುವುದಿಲ್ಲ. ಆರೋಗ್ಯಕರ ಸಂಬಂಧಗಳು ತಾಳ್ಮೆಯ ಮೇಲೆ ನಿರ್ಮಾಣಗೊಂಡಿರುತ್ತವೆ. ಬನ್ನಿ ಇಂದು ಈ ಒತ್ತಾಯ ಮಾಡುವಿಕೆ ಕುರಿತು ತಿಳಿದುಕೊಳ್ಳೋಣ. ಗಂಡಸರನ್ನು ಒತ್ತಾಯ ಮಾಡುವುದರಿಂದ ಏಕೆ ಪ್ರಯೋಜನವಾಗುವುದಿಲ್ಲ. ಮದುವೆಗೆ ಮುಂಚೆ ಮುಜುಗರ ತರುವ ಪ್ರಶ್ನೆಯನ್ನು ಕೇಳಬೇಡಿ

ಕಿರಿಕಿರಿ
ನಿಮ್ಮ ಒತ್ತಾಯವು ಆತ ಅಥವಾ ಆಕೆಗೆ ಕಿರಿಕಿರಿಯನ್ನುಂಟು ಮಾಡಲು ಆರಂಭಿಸಬಹುದು. ನೀವು ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೀರಿ ಎಂದು ಅವರು ಭಾವಿಸಬಹುದು. ಒಬ್ಬ ವ್ಯಕ್ತಿಗೆ ಕಿರಿಕಿರಿಯುಂಟು ಮಾಡುವುದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ.
ಬೇಸರ
ನೀವು ಒತ್ತಾಯ ಮಾಡಲು ಆರಂಭಿಸಿದರೆ, ಆ ವ್ಯಕ್ತಿಗೆ ಬೇಸರ ಬರಲು ಶುರುವಾಗುತ್ತದೆ. ನೀವು ಬದಲಾಗದಿದ್ದರೆ, ಜನರು ನಿಮ್ಮಿಂದ ದೂರ ಉಳಿಯಲು ಆರಂಭಿಸುತ್ತಾರೆ.
ವಾದಗಳು
ಬಹುತೇಕ ವ್ಯರ್ಥ ವಾದಗಳು ಈ ಒತ್ತಾಯ ಮಾಡುವಿಕೆಯಿಂದ ಶುರುವಾಗುತ್ತವೆ. ಇವು ಸಂಬಂಧದಲ್ಲಿ ಬಿರುಕನ್ನು ಉಂಟು ಅಮಡುತ್ತದೆ. ಆದ್ದರಿಂದ ಒತ್ತಾಯ ಮಾಡುವಿಕೆ ಎಂಬುದು ನಿಮ್ಮ ವರ್ತನೆಗೆ ಅಂಟಿದ ಕಪ್ಪು ಚುಕ್ಕೆ ಎಂದು ಅರ್ಥ ಮಾಡಿಕೊಳ್ಳಿ.
ಆನಂದ
ಸಂಬಂಧದಲ್ಲಿನ ಆನಂದವು ಅಡಗಿರುವುದೇ ನೀವಿಬ್ಬರೂ ಸಂತೋಷವಾಗಿರುವುದರಲ್ಲಿ, ಒತ್ತಾಯ ಮಾಡುವಿಕೆಯು ಯಾರಿಗೂ ಆನಂದವನ್ನು ತರುವುದಿಲ್ಲ. ಆಗ ನಿಮಗೆ ಸಂಬಂಧವೇ ಕಿರಿಕಿರಿಯನ್ನು ತರುವ ಒಂದು ಬಲೆಯಾಗಿ ಕಾಣಿಸುತ್ತದೆ.



Click it and Unblock the Notifications