Latest Updates
-
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಕ್ಷುಲ್ಲಕ ವಿಷಯಗಳಿಗೆ ಮುರಿಯದಿರಲಿ ಮಧುರ ಸಂಬಂಧ!
ಹೌದು, ನಿಮ್ಮ ದಾಂಪತ್ಯ ಕೆಲವೊಮ್ಮೆ ಸಮಸ್ಯೆಗೆ ಸಿಕ್ಕಿಕೊಂಡಾಗ ಕೆಲವೊಂದು ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ. ಏಕೆಂದರೆ ಇದು ನಾವು ಸಮಸ್ಯೆಯನ್ನು ಪರಿಪೂರ್ಣವಾಗಿ ನೋಡಬೇಕಾದ ಸಮಯವಾಗಿರುತ್ತದೆ. ದಾಂಪತ್ಯ ಎನ್ನುವುದು ಒಂದು ಭಾವನಾತ್ಮಕ ಬಂಡವಾಳವಾಗಿರುತ್ತದೆ. ಆದರೆ ಯಾವಾಗ ಇದು ಬಂಡವಾಳವನ್ನು ತಿರುಗಿ ನೀಡಲಿಲ್ಲವಾದರೆ, ಆಗ ಯಾರನ್ನು ನಿಂದಿಸಿ ಪ್ರಯೋಜನವಿಲ್ಲ.
ಅದರ ಜೊತೆಗೆ ಯಾವ ಸಂಬಂಧವು ಸಹ ಏರು-ಪೇರುಗಳಿಂದ ಮುಕ್ತವಾಗಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಒಂದು ಉತ್ತಮ ಸಂಬಂಧವು ಸಹ ಇದಕ್ಕೆ ಹೊರತಲ್ಲ. ನಿಮ್ಮ ಸಂಬಂಧ ಪರಿಪೂರ್ಣವಾಗಿರಬೇಕು ಎಂದು ಕೋರಿಕೊಳ್ಳುವುದು ಈ ನಿಟ್ಟಿನಲ್ಲಿ ಅತಿಯಾಸೆಯಾಗುತ್ತದೆ! ಆದರೆ ನಿಮ್ಮ ಸಂಬಂಧವನ್ನು ಕಾಲಕ್ರಮೇಣ ಒಳ್ಳೆಯ ದಾರಿಯಲ್ಲಿ ಸಾಗುವಂತೆ ಮಾಡಲು ನೀವು ಪ್ರಯತ್ನಿಸಬಹುದು. ಹಾಗಾದರೆ ನಿಮ್ಮ ದಾಂಪತ್ಯ ಸಮಸ್ಯೆಯಲ್ಲಿ ಸಿಕ್ಕಿಕೊಂಡಾಗ ನೀವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ? ಕಪಿ ಚೇಷ್ಟೆ ಮೂಲಕ ಮನದ ಕನ್ಯೆಗೆ ಭಯ ಹುಟ್ಟಿಸಬೇಡಿ!

ಹೌದು ನಿಮ್ಮ ಸಂಬಂಧದಲ್ಲಿ ಎಲ್ಲವೂ ಸರಿಯಾಗಿಲ್ಲವೆಂದಾದರೆ, ಆಗ ನೀವು ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಬೇಕು ಮತ್ತು ಅಲ್ಲಿರುವ ಕೊರತೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಎಲ್ಲಿ ನಿಮ್ಮ ಸಂಬಂಧ ಶಿಥಿಲವಾಗಿದೆಯೋ, ಆ ಭಾಗವನ್ನು ಸರಿಪಡಿಸಲು ನೀವು ತುರ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಆಗ ನಿಮ್ಮ ಮದುವೆ ದೀರ್ಘಾಯಸ್ಸನ್ನು ಹೊಂದುತ್ತದೆ. ಒಂದು ವಿಚಾರ ನೆನಪಿಡಿ ಪ್ರಪಂಚದಲ್ಲಿ ಪ್ರಯತ್ನ ಪಡದೆ ಯಾವುದೇ ಅಂಶಗಳು ಸರಿಹೋಗುವುದಿಲ್ಲ. ಅದಕ್ಕೆ ದಾಂಪತ್ಯವು ಸಹ ಹೊರತಲ್ಲ.
ನಿಮ್ಮ ದಾಂಪತ್ಯ ಸಮಸ್ಯೆಯಲ್ಲಿದ್ದಾಗ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಯಾವುವು?
ನಾನು ದಾಂಪತ್ಯಕ್ಕಾಗಿ ಅಗತ್ಯ ಸಮಯವನ್ನು ನೀಡುತ್ತಿದ್ದೀನಾ? ಇದು ಮದುವೆ ಆದ ಪ್ರತಿಯೊಬ್ಬರು ಕೇಳಿಕೊಳ್ಳಬೇಕಾದ ಒಂದು ಪ್ರಶ್ನೆಯಾಗಿರುತ್ತದೆ. ಹೌದು, ದಾಂಪತ್ಯದಲ್ಲಿ ಸಮಯಕ್ಕೆ ತುಂಬಾ ಮಹತ್ವವಿದೆ. ನೀವು ನಿಮ್ಮ ಸಂಗಾತಿಯ ಜೊತೆಗೆ ಅಗತ್ಯ ಸಮಯವನ್ನು ಕಳೆಯುತ್ತಿಲ್ಲ ಎಂದಾದಲ್ಲಿ, ನಿಮ್ಮ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚು ತಲೆದೋರುತ್ತವೆ. ಆಗ ನಿಮ್ಮ ನಡುವೆ ಅಂತರ ಹೆಚ್ಚಾಗುತ್ತ ಹೋಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಮಾತು ಬೆಳ್ಳಿ ಮೌನ ಬಂಗಾರ, ಇದು ಸುಖಿ ಸಂಸಾರಕ್ಕೆ ರಹದಾರಿ!
ನಾನು ಗಮನಹರಿಸುತ್ತಿದ್ದೇನೆಯೇ ಮತ್ತು ಆಸಕ್ತಿ ತೋರುತ್ತಿದ್ದೀನಾ?
ನೀವು ಅತ್ಯಂತ ಪ್ರಮುಖವಾದ ಘಟನೆಗಳನ್ನು ಮತ್ತು ದಿನಗಳನ್ನು ನೆನಪಿನಲ್ಲಿಟ್ಟುಕೊಂಡಿರುವಿರಾ? ವಿಶೇಷ ಸಂದರ್ಭಗಳಲ್ಲಿ ನಿಮ್ಮ ಸಂಗಾತಿಗಾಗಿ ನೀವು ಕೆಲವೊಂದು ಉಡುಗೊರೆಗಳನ್ನು ತಂದು ಕೊಟ್ಟಿರುವಿರಾ? ನಿಮ್ಮ ಸಂಗಾತಿಯ ಬಯಕೆಗಳ ಕುರಿತಾಗಿ ನೀವು ಆಸಕ್ತಿಯನ್ನು ತೋರಿಸುತ್ತಿರುವಿರಾ? ನಿಮ್ಮ ಸಂಗಾತಿಯ ಸಾಧನೆಗಗಳನ್ನು ನೀವು ಅಭಿನಂದಿಸುತ್ತಿದ್ದೀರಾ? ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಉತ್ತರ ಇಲ್ಲಾ ಎಂದಾದಲ್ಲಿ, ನಿಮ್ಮ ದಾಂಪತ್ಯವನ್ನು ನೀವೇ ನಿಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದೀರಾ ಎಂದು ಅರ್ಥ. ಇದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಅಂತರವನ್ನು ಹೆಚ್ಚಿಸುತ್ತದೆ ಎಚ್ಚರ. ವಿಚ್ಛೇದನದ ವಿಷಯ ಬಂದಾಗ ದಂಪತಿಗಳು ಅದೇಕೆ ಹಿಂಜರಿಯುತ್ತಾರೆ?
ನೀವು ನಿಮ್ಮ ಸಂಗಾತಿಯನ್ನು ಇತರರ ಜೊತೆ ಹೋಲಿಕೆ ಮಾಡುತ್ತಿದ್ದೀರಾ?
ಇದು ಸಹ ದಾಂಪತ್ಯದಲ್ಲಿರುವವರು ಕೇಳಿಕೊಳ್ಳಬೇಕಾದ ಪ್ರಶ್ನೆಗಳಲ್ಲಿ ಒಂದಾಗಿದೆ. ನೀವು ಅವರನ್ನು ಇತರರೊಂದಿಗೆ ಅಥವಾ ನಿಮ್ಮ ಮಾಜಿ... ಜೊತೆಗೆ ಹೋಲಿಕೆ ಮಾಡುತ್ತಿದ್ದಲ್ಲಿ ಖಂಡಿತ ಇದರಿಂದ ನಿಮ್ಮ ಸಂಗಾತಿ ನೊಂದು ಕೊಳ್ಳುತ್ತಾರೆ. ಅದು ಖಂಡಿತ ಅವರನ್ನು ಘಾಸಿಗೊಳಿಸುತ್ತದೆ. ಪ್ರತಿಯೊಬ್ಬರು ಜೀವನದಲ್ಲಿ ಅನನ್ಯ. ಅವರ ರೀತಿ ಇನ್ನೊಬ್ಬರಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಪ್ರತಿಯೊಬ್ಬರು ತಮ್ಮನ್ನು ಯಾರಾದರು ಹೊಗಳಲಿ ಎಂದು ಭಾವಿಸುತ್ತಾರೆ, ಟೀಕೆ ಮಾಡಲಿ ಎಂದು ಬಯಸುವುದಿಲ್ಲ. ಆದ್ದರಿಂದ ನೀವು ನಿಮ್ಮ ಸಂಗಾತಿಯನ್ನು ನೋಯಿಸಿದ್ದೀರಾ ಎಂದು ಒಮ್ಮೆ ನಿಮ್ಮನ್ನು ನೀವೇ ಕೇಳಿಕೊಳ್ಳಿ.



Click it and Unblock the Notifications

