Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು!
ಹೆಣ್ಣು ನನಗಿಂತ ಹೆಚ್ಚು ಓದಿದ್ದರೆ ಮದುವೆಗೆ ಒಲ್ಲೆ!
ಸುಂದರವಾದ ಹುಡುಗಿ, ತನಗಿಂತ ಉನ್ನತ ಸ್ಥಾನ, ಉತ್ತಮ ಸಂಬಳವಿರುವ ಹೆಣ್ಣನ್ನು ಮದುವೆಯಾಗಲು ಬಹುತೇಕ ಹುಡುಗರು ಭಯಪಡುತ್ತಾರೆ! ನೀವೆ ನಿಮ್ಮ ಅಕ್ಕಪಕ್ಕ ಗಮನಿಸಿ ಗಂಡು ಮದುವೆ ವಿಷಯಕ್ಕೆ ಬಂದಾಗ ತನಗಿಂತ ತುಂಬಾ ಓದಿದ ಹೆಣ್ಣನ್ನು ಮದುವೆಯಾಗ ಬಯಸುವುದು ತುಂಬಾ ವಿರಳ. ಆದ್ದರಿಂದಲೆ ಈಗ ತುಂಬಾ ಓದಿದ ಜಾಣೆಗೆ ಹುಡುಗ ಸಿಗುವುದು ಕಷ್ಟವಾಗಿ ಬಿಟ್ಟಿದೆ.
ಇತ್ತೀಚಿಕೆಗೆ ನನ್ನ ಗೆಳತಿಗೆ ಒಂದು ಮದುವೆ ಆಫರ್ ಬಂದಿತ್ತು. ಹುಡುಗ, ಅವನ ಮನೆತನ ಎಲ್ಲಾ ಇವಳ ಮನೆಯವರಿಗೆ ಇಷ್ಟವಾಯಿತು ಆದರೆ ಹುಡುಗ ಅವಳನ್ನು ಮದುವೆಯಾಗಲು ಇಷ್ಟ ಪಡಲಿಲ್ಲ! ನೋಡಲು ರೂಪವಂತೆ, ಬುದ್ದಿವಂತೆ ಹಾಗೂ ಒಳ್ಳೆಯ ಗುಣವಿರುವ ಅವಳನ್ನು ತಿರಸ್ಕರಿಸಿದ್ದು ಏಕೆ ಎಂದು ನಮಗೆ ಆಶ್ಚರ್ಯವಾಯಿತು.

ಇರಲಿ, ಅವನನ್ನೆ ಕೇಳೋಣ ಎಂದು ಫೋನು ಮಾಡಿದಾಗ ಆ ಪುಣ್ಯಾತ್ಮ 'ನಂದು ಬರೀ ಡಿಗ್ರಿ ಅವರು ಪಿ.ಎಚ್. ಡಿ ಮಾಡುತ್ತಿದ್ದಾರೆ, ನಾನು ಅವರಿಗೆ ಸೂಕ್ತವಲ್ಲ ಅನಿಸಿತು ಅದಕ್ಕೆ ಬೇಡ ಅಂದೆ, ಅವರಿಗೆ ನನಗಿಂತ ಒಳ್ಳೆಯ ಹುಡುಗ ಸಿಗುತ್ತಾರೆ' ಎಂದು ಹೇಳಿ ಪೋನಿಡಬೇಕೆ, ಅವನ ಉತ್ತರ ಕೇಳಿ ನಗಬೇಕೊ, ಅಳಬೇಕೊ ಅಂತ ಒಂದು ಕ್ಷಣ ಗೊತ್ತಾಗಲಿಲ್ಲ.
ತನಗಿಂತ ಹೆಚ್ಚು ಓದಿದ ಹೆಣ್ಣು, ತನಗಿಂತ ಹೆಚ್ಚು ವೇತನ ಪಡೆಯುವ ಹೆಂಡತಿ, ತನಗಿಂತ ಆಕೆ ಹೆಚ್ಚು ಎನ್ನುವುದೇ ಹೆಚ್ಚಿನ ಪುರುಷರಿಗೆ ಇಷ್ಟವಾಗುವುದಿಲ್ಲ. ಅದಕ್ಕೆ ಅವರ ಸಾಂಪ್ರದಾಯಿಕ, ಲಿಂಗತಾರತಮ್ಯ ಮನೋಭಾವವೂ ಕಾರಣವಿರಬಹುದು. ಗಂಡಸಿರಿಗೆ ಸುಂದರಿಯಾದ, ಬುದ್ಧಿವಂತೆ, ಸ್ವತಂತ್ರ ಮನೋಭಾವದ ಹೆಣ್ಣು ಅಂದರೆ ಭಯ. ಈ ರೀತಿ ಭಯಪಡಲು ಕಾರಣವೇನು ಎಂದು ತಿಳಿಯಲು ಮುಂದೆ ಓದಿ.
1. ಹೆಣ್ಣು ನನ್ನ ಬದಲಾಯಿಸಿ ಬಿಡುತ್ತಾಳೆ:
ಈ ಭಯದಿಂದಲೆ ಅನೇಕರು ನಿಧಾನಕ್ಕೆ ಮದುವೆಯಾಗುತ್ತೇನೆ ಅನ್ನುತ್ತಾರೆ. 'ನನಗೆ ಇಷ್ಟ ಬಂದಂತೆ ಇರಲು ಸಾಧ್ಯವಿರುವುದಿಲ್ಲ, ಫ್ರೆಂಡ್ಸ್ ಜೊತೆ ಅಡ್ಡಾಡಲು ಸಾಧ್ಯವಿಲ್ಲ, ನನ್ನ ಸ್ವಾತಂತ್ರ್ಯ ಹೋಗುತ್ತದೆ' ಎನ್ನುವುದು ಅವರು ಕೊಡುವ ಉತ್ತರ. ಅವೆಲ್ಲಕ್ಕಿಂತ ಮುಖ್ಯವಾಗಿ ಹೆಣ್ಣು ಎಮೋಷನಲ್ ಬ್ಲ್ಯಾಕ್ ಮೇಲ್ ( ಭಾವನಾತ್ಮಕವಾಗಿ ತನ್ನತ್ತ ಸೆಳೆದು ಬಿಡುತ್ತಾಳೆ) ಎಂದು ಭಯಪಡುತ್ತಾರೆ.
2. ಕಣ್ಣೀರೆಂದರೆ ಭಯ:
ಸ್ವಲ್ಪ ಏನಾದರೂ ಅಂದರೆ ಗಂಗಾ, ಕಾವೇರಿ ಉಕ್ಕಿ ಹರಿಯಲಾರಂಭಿಸುತ್ತದೆ. ಈ ಕಣ್ಣೀರಿಗೆ ಗಂಡಸರು ಭಯ ಪಡುತ್ತಾರೆ. ಉಕ್ಕಿನಂತೆ ಕಠಿಣವಾಗಿರುವ ಗಂಡಸರ ಮನಸ್ಸು ಹೆಣ್ಣಿನ ಕಣ್ಣೀರಿಗೆ ಕರುತ್ತದೆ!
3. ಜವಬ್ದಾರಿ ಅಂದರೆ ಭಯ:
ಪ್ರೀತಿ, ಮದುವೆಯೆಂದರೆ ಹುಡುಗರು ಬೆಚ್ಚಿ ಬೀಳಲು ಕಾರಣ ಜವಬ್ದಾರಿ. ಮೊನ್ನೆ ನನ್ನ ಫ್ರೆಂಡ್ ಫೋನ್ ಮಾಡಿ ಮಾತನಾಡುತ್ತಿದ್ದ, ಆಗ ಯಾರಾದರೂ ಗರ್ಲ್ ಫ್ರೆಂಡ್ ಸಿಕ್ಕಿದಳಾ ಎಂದು ಚುಡಾಯಿಸಿದೆ, ಅದಕ್ಕೆ ಅವನು 'ಗರ್ಲ್ ಫ್ರೆಂಡ್ ಸಹವಾಸ ಬೇಡ ಬೆಳಗ್ಗೆ ಎದ್ದ ತಕ್ಷಣ ಪೋನು ಮಾಡಬೇಕು, ತಿಂಡಿ ಆಯ್ತಾ, ಊಟ ಆಯ್ತಾ ಹೀಗೆ ಫೋನು ಮಾಡ್ತಾನೆಇರಬೇಕು, ನಾನು ನೋಡು ಫ್ರೀ ಬರ್ಡ್' ಅಂದ.
4. ಸ್ವತಂತ್ರ ಮನೋಭಾವ:
ಸ್ವತಂತ್ರ ಮನೋಭವದ ಹೆಣ್ಣಿಗಿಂತ ಅವನು ಹೇಳಿದ್ದನ್ನು ಕೇಳಿಕೊಂಡು ಇರುವ ಹೆಣ್ಣು ಗಂಡಸಿಗೆ ತುಂಬಾ ಇಷ್ಟವಾಗುತ್ತಾಳೆ. ಸ್ವತಂತ್ರ ಮನೋಭಾವದ ಹೆಣ್ಣನ್ನು ಕಂಡಾಗ ಭಯಪಡುತ್ತಾನೆ. ತನಗಿಂತ ಹೆಚ್ಚು ಓದಿದ ಹೆಣ್ಣು, ತನಗಿಂತ ಹೆಚ್ಚು ವೇತನ ಪಡೆಯುವ ಹೆಂಡತಿ, ತನಗಿಂತ ಆಕೆ ಹೆಚ್ಚು ಎನ್ನುವುದೇ ಹೆಚ್ಚಿನ ಪುರುಷರಿಗೆ ಇಷ್ಟವಾಗುವುದಿಲ್ಲ. ಅದಕ್ಕೆ ಅವರ ಸಾಂಪ್ರದಾಯಿಕ, ಲಿಂಗತಾರತಮ್ಯ ಮನೋಭಾವವೂ ಕಾರಣವಿರಬಹುದು.



Click it and Unblock the Notifications