Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ದೈನಂದಿನ ತರಕಾರಿ ಬಳಸುವ ಒಳಗುಟ್ಟುಗಳು

* ಸುಶೀಲಾ ಗೋಪಾಲ್, ಬೆಂಗಳೂರು
ತರಕಾರಿ ಹಾಗೂ ಆಹಾರ ಸಾಮಗ್ರಿಗಳನ್ನು ಬಳಸುವ ಸುಲಭ ವಿಧಾನಗಳನ್ನು ಮಹಿಳೆಯರು ತಿಳಿದುಕೊಂಡರೆ ಸಮಯವನ್ನು ಉಳಿಸಿಕೊಂಡು ಇನ್ನಿತರೇ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಅಂಥ ಕೆಲವು ಸುಲಭ ಉಪಾಯಗಳು ನಿಮಗೆ ಗೊತ್ತಾ ?
* ಸೀಮೆ ಬದನೆಕಾಯಿಯನ್ನು ಎರಡು ಭಾಗವಾಗಿ ಹೆಚ್ಚಿ, ಒಂದಕ್ಕೊಂದು ಉಜ್ಜಿ, ನೀರಿಗೆ ಹಾಕಿ ತೆಗೆದು ಉಪಯೋಗಿಸಿ. ಇದರಿಂದ ನಿಮ್ಮ ಕೈ ಅಂಟಾಗುವುದನ್ನು ತಡೆಯಬಹುದು.
* ಬೆಣ್ಣೆ ಕಾಯಿಸಿ ಇಳಿಸುವ ಮುನ್ನ ತೊಟ್ಟು ತೆಗೆದ ಒಂದೆರಡು ವೀಳ್ಯದೆಲೆಯನ್ನು ಅದರಲ್ಲಿ ಹಾಕಿ ತೆಗೆದರೆ ತುಪ್ಪ ಸುವಾಸನೆಯುಕ್ತವಾಗುವುದು.
* ದೊಣ್ಣೆ ಮೆಣಸಿನಕಾಯಿಯನ್ನು ಮಧ್ಯದಲ್ಲಿ ಕತ್ತರಿಸಿ, ಒಳಭಾಗವನ್ನು ಚಾಕುವಿನಿಂದ ಹೆರೆದು ಕೊಡವಿದರೆ ಬೀಜಗಳೆಲ್ಲ ಉದುರುತ್ತವೆ. ತಿನ್ನುವಾಗ ಹಲ್ಲಿನ ಮಧ್ಯೆ ಬೀಜ ಸಿಕ್ಕಿಕೊಂಡು ತೊಂದರೆಯಾಗದು.
* ಬದನೆಕಾಯಿ ಹೆಚ್ಚಿ ಕೂಡಲೇ ಉಪ್ಪು ನೀರಿಗೆ ಹಾಕಿದರೆ ಹೋಳುಗಳು ಕಪ್ಪಾಗುವುದಿಲ್ಲ.
* ಈರುಳ್ಳಿ ತುದಿಗಳನ್ನು ಕತ್ತರಿಸಿ, ಎರಡು ಭಾಗ ಮಾಡಿ ಒಂದು ಗಂಟೆ ನೀರಿನಲ್ಲಿ ಹಾಕಿಟ್ಟರೆ ಸಿಪ್ಪೆ ಸುಲಿಯುವುದು ಸುಲಭ. ಕಣ್ಣೂ ಉರಿಯುವುದಿಲ್ಲ.
* ಅನ್ನ ಮಾಡುವಾಗ ಅದಕ್ಕೆ ಒಂದು ಚಮಚ ಎಣ್ಣೆ ಅಥವಾ ಸ್ವಲ್ಪ ನಿಂಬೆರಸ ಹಾಕಿದರೆ, ಅನ್ನ ಉದುರುದುರಾಗುತ್ತದೆ.
* ಒಗ್ಗರಣೆ ಹಾಕುವ ಮೊದಲು ಕಡಲೆಕಾಯಿ ಬೀಜವನ್ನು ಮೊದಲು ಹುರಿದು ತೆಗೆದಿಡಿ. ನಂತರ ಸಾಸಿವೆ, ಕರಿಬೇವು ಇತ್ಯಾದಿಗಳನ್ನು ಹುರಿದು ಕಡಲೆಕಾಯಿ ಬೀಜ ಸೇರಿಸಿದರೆ ಹಸಿ ವಾಸನೆ ಇಲ್ಲದೆ ರುಚಿಯಾಗಿರುವುದು.
* ಹಾಗಲಕಾಯಿಯನ್ನು ಚಿಕ್ಕದಾಗಿ ಹೆಚ್ಚಿ ಅರಿಷಿಣ, ಉಪ್ಪು ಬೆರೆಸಿದ ನೀರಿನಲ್ಲಿ ಹಾಕಿ. ಸ್ವಲ್ಪ ಹೊತ್ತಿನ ನಂತರ ನೀರನ್ನು ಹಿಂಡಿ ತೆಗೆದರೆ ಕಹಿ ಅಂಶ ಇರುವುದಿಲ್ಲ.
* ಚಟ್ನಿ, ಗೊಜ್ಜಿಗೆ ಬಳಸುವ ಹುಣಸೆ ಹಣ್ಣನ್ನು ಮೊದಲು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ರುಬ್ಬಲು ಸುಲಭವಾಗುವುದು.
* ಕರಿಬೇವನ್ನು ಬೇಳೆಯ ಜತೆಯಲ್ಲೇ ಬೇಯಲು ಇಟ್ಟರೆ ಅದರ ಸಾರವೆಲ್ಲ ಸಾರಿಗೆ ಸೇರಿಕೊಳ್ಳುವುದಲ್ಲದೆ ಸುವಾಸನೆಯೂ ಹೆಚ್ಚುವುದು.
* ಹುರುಳಿಕಾಯಿ, ಗೋರಿಕಾಯಿಗಳನ್ನು ಮಾರುಕಟ್ಟೆಯಿಂದ ತಂದ ಕೂಡಲೇ ನಾರು ಬಿಡಿಸಿಟ್ಟರೆ ಕಾಯಿ ಬಲಿಯದು.
* ಹುರುಳಿಕಾಯಿ ಹಾಗೂ ಗೋರಿಕಾಯಿಗಳನ್ನು ಹುರಿಯುವಾಗ ಒಂದು ಚಿಟಿಕೆ ಉಪ್ಪು ಅಥವಾ ಸಕ್ಕರೆ ಹಾಕಿದರೆ ಅದರ ಹಸಿರು ಬಣ್ಣ ಹಾಗೆಯೇ ಉಳಿಯುವುದು.
* ತಾಜಾ ಹಸಿ ಮೆಣಸಿನಕಾಯಿಯ ತೊಟ್ಟು ಬಿಡಿಸಿಟ್ಟರೆ ಅದು ಬೇಗ ಹಣ್ಣಾಗುವುದಿಲ್ಲ.
* ಮಸಾಲೆ ತಯಾರಿಸುವಾಗ ರುಬ್ಬುವ ಖಾರಕ್ಕೆ ಒಂದೆರಡು ಹಸಿ ಟೊಮೇಟೊ ಹಾಕಿ. ಇದರಿಂದ ಸಾರು ಒಳ್ಳೆಯ ಬಣ್ಣ ಪಡೆಯುವುದಲ್ಲದೆ ರುಚಿ ಹೆಚ್ಚುವುದು.
* ಹಸಿ ಮೆಣಸಿನಕಾಯಿ ಖಾರಕ್ಕೆ ಉಪ್ಪಿನ ಜತೆ ಸ್ವಲ್ಪ ನಿಂಬೆರಸವನ್ನೂ ಹಾಕಿ ತಿರುವಿದರೆ ಬಹಳ ದಿನಗಳವರೆಗೂ ತಿನ್ನಲು ಬಳಸಬಹುದು.
* ಹುರುಳಿಕಾಯಿ, ಗೋರಿಕಾಯಿ, ಕ್ಯಾರೆಟ್ಗಳು ಬಾಡಿದ್ದರೆ ಸ್ವಲ್ಪ ಹೊತ್ತು ಉಪ್ಪು ನೀರಿನಲ್ಲಿ ಹಾಕಿಡಿ. ಮತ್ತೆ ಮೊದಲಿನ ತಾಜಾತನ ಮರಳುವುದು.
* ಕೈಗೆ ಸ್ವಲ್ಪ ಕೊಬ್ಬರಿ ಎಣ್ಣೆ ಸವರಿಕೊಂಡು ಬೀಟ್ರೂಟ್ ಹೆಚ್ಚಿದರೆ ಕೈ ಕೆಂಪಾಗದು.
* ಪರಂಗಿ ಹಣ್ಣು ಅಥವಾ ಕಾಯಿ ಹೆಚ್ಚುವಾಗ ಮೊದಲು ಸಿಪ್ಪೆ ತೆಗೆದು ಅನಂತರ ತೊಟ್ಟು ಹಾಗೂ ತುದಿ ತೆಗೆಯಿರಿ. ಇದರಿಂದ ಹಾಲು ಜಿನುಗಿ ಜಾರುವುದು ತಪ್ಪುತ್ತದೆ.
* ಪುದೀನಾ ಚಟ್ನಿ ರುಬ್ಬುವಾಗ ಸ್ವಲ್ಪ ನಿಂಬೆರಸ ಹಾಕಿದರೆ ಚಟ್ನಿಯ ಬಣ್ಣ ಹಸಿರಾಗಿಯೇ ಇರುವುದು.
* ಅಕ್ಕಿರೊಟ್ಟಿ ಮಾಡಲು ಹಿಟ್ಟನ್ನು ಬೇಯಿಸುವಾಗ ಒಂದು ಟೇಬಲ್ ಚಮಚ ಚಿರೋಟಿ ರವೆ ಹಾಕಿದರೆ ರೊಟ್ಟಿಯ ಅಂಚು ಸೀಳುವುದಿಲ್ಲ.



Click it and Unblock the Notifications