Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ದೈನಂದಿನ ತರಕಾರಿ ಬಳಸುವ ಒಳಗುಟ್ಟುಗಳು

* ಸುಶೀಲಾ ಗೋಪಾಲ್, ಬೆಂಗಳೂರು
ತರಕಾರಿ ಹಾಗೂ ಆಹಾರ ಸಾಮಗ್ರಿಗಳನ್ನು ಬಳಸುವ ಸುಲಭ ವಿಧಾನಗಳನ್ನು ಮಹಿಳೆಯರು ತಿಳಿದುಕೊಂಡರೆ ಸಮಯವನ್ನು ಉಳಿಸಿಕೊಂಡು ಇನ್ನಿತರೇ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಅಂಥ ಕೆಲವು ಸುಲಭ ಉಪಾಯಗಳು ನಿಮಗೆ ಗೊತ್ತಾ ?
* ಸೀಮೆ ಬದನೆಕಾಯಿಯನ್ನು ಎರಡು ಭಾಗವಾಗಿ ಹೆಚ್ಚಿ, ಒಂದಕ್ಕೊಂದು ಉಜ್ಜಿ, ನೀರಿಗೆ ಹಾಕಿ ತೆಗೆದು ಉಪಯೋಗಿಸಿ. ಇದರಿಂದ ನಿಮ್ಮ ಕೈ ಅಂಟಾಗುವುದನ್ನು ತಡೆಯಬಹುದು.
* ಬೆಣ್ಣೆ ಕಾಯಿಸಿ ಇಳಿಸುವ ಮುನ್ನ ತೊಟ್ಟು ತೆಗೆದ ಒಂದೆರಡು ವೀಳ್ಯದೆಲೆಯನ್ನು ಅದರಲ್ಲಿ ಹಾಕಿ ತೆಗೆದರೆ ತುಪ್ಪ ಸುವಾಸನೆಯುಕ್ತವಾಗುವುದು.
* ದೊಣ್ಣೆ ಮೆಣಸಿನಕಾಯಿಯನ್ನು ಮಧ್ಯದಲ್ಲಿ ಕತ್ತರಿಸಿ, ಒಳಭಾಗವನ್ನು ಚಾಕುವಿನಿಂದ ಹೆರೆದು ಕೊಡವಿದರೆ ಬೀಜಗಳೆಲ್ಲ ಉದುರುತ್ತವೆ. ತಿನ್ನುವಾಗ ಹಲ್ಲಿನ ಮಧ್ಯೆ ಬೀಜ ಸಿಕ್ಕಿಕೊಂಡು ತೊಂದರೆಯಾಗದು.
* ಬದನೆಕಾಯಿ ಹೆಚ್ಚಿ ಕೂಡಲೇ ಉಪ್ಪು ನೀರಿಗೆ ಹಾಕಿದರೆ ಹೋಳುಗಳು ಕಪ್ಪಾಗುವುದಿಲ್ಲ.
* ಈರುಳ್ಳಿ ತುದಿಗಳನ್ನು ಕತ್ತರಿಸಿ, ಎರಡು ಭಾಗ ಮಾಡಿ ಒಂದು ಗಂಟೆ ನೀರಿನಲ್ಲಿ ಹಾಕಿಟ್ಟರೆ ಸಿಪ್ಪೆ ಸುಲಿಯುವುದು ಸುಲಭ. ಕಣ್ಣೂ ಉರಿಯುವುದಿಲ್ಲ.
* ಅನ್ನ ಮಾಡುವಾಗ ಅದಕ್ಕೆ ಒಂದು ಚಮಚ ಎಣ್ಣೆ ಅಥವಾ ಸ್ವಲ್ಪ ನಿಂಬೆರಸ ಹಾಕಿದರೆ, ಅನ್ನ ಉದುರುದುರಾಗುತ್ತದೆ.
* ಒಗ್ಗರಣೆ ಹಾಕುವ ಮೊದಲು ಕಡಲೆಕಾಯಿ ಬೀಜವನ್ನು ಮೊದಲು ಹುರಿದು ತೆಗೆದಿಡಿ. ನಂತರ ಸಾಸಿವೆ, ಕರಿಬೇವು ಇತ್ಯಾದಿಗಳನ್ನು ಹುರಿದು ಕಡಲೆಕಾಯಿ ಬೀಜ ಸೇರಿಸಿದರೆ ಹಸಿ ವಾಸನೆ ಇಲ್ಲದೆ ರುಚಿಯಾಗಿರುವುದು.
* ಹಾಗಲಕಾಯಿಯನ್ನು ಚಿಕ್ಕದಾಗಿ ಹೆಚ್ಚಿ ಅರಿಷಿಣ, ಉಪ್ಪು ಬೆರೆಸಿದ ನೀರಿನಲ್ಲಿ ಹಾಕಿ. ಸ್ವಲ್ಪ ಹೊತ್ತಿನ ನಂತರ ನೀರನ್ನು ಹಿಂಡಿ ತೆಗೆದರೆ ಕಹಿ ಅಂಶ ಇರುವುದಿಲ್ಲ.
* ಚಟ್ನಿ, ಗೊಜ್ಜಿಗೆ ಬಳಸುವ ಹುಣಸೆ ಹಣ್ಣನ್ನು ಮೊದಲು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ರುಬ್ಬಲು ಸುಲಭವಾಗುವುದು.
* ಕರಿಬೇವನ್ನು ಬೇಳೆಯ ಜತೆಯಲ್ಲೇ ಬೇಯಲು ಇಟ್ಟರೆ ಅದರ ಸಾರವೆಲ್ಲ ಸಾರಿಗೆ ಸೇರಿಕೊಳ್ಳುವುದಲ್ಲದೆ ಸುವಾಸನೆಯೂ ಹೆಚ್ಚುವುದು.
* ಹುರುಳಿಕಾಯಿ, ಗೋರಿಕಾಯಿಗಳನ್ನು ಮಾರುಕಟ್ಟೆಯಿಂದ ತಂದ ಕೂಡಲೇ ನಾರು ಬಿಡಿಸಿಟ್ಟರೆ ಕಾಯಿ ಬಲಿಯದು.
* ಹುರುಳಿಕಾಯಿ ಹಾಗೂ ಗೋರಿಕಾಯಿಗಳನ್ನು ಹುರಿಯುವಾಗ ಒಂದು ಚಿಟಿಕೆ ಉಪ್ಪು ಅಥವಾ ಸಕ್ಕರೆ ಹಾಕಿದರೆ ಅದರ ಹಸಿರು ಬಣ್ಣ ಹಾಗೆಯೇ ಉಳಿಯುವುದು.
* ತಾಜಾ ಹಸಿ ಮೆಣಸಿನಕಾಯಿಯ ತೊಟ್ಟು ಬಿಡಿಸಿಟ್ಟರೆ ಅದು ಬೇಗ ಹಣ್ಣಾಗುವುದಿಲ್ಲ.
* ಮಸಾಲೆ ತಯಾರಿಸುವಾಗ ರುಬ್ಬುವ ಖಾರಕ್ಕೆ ಒಂದೆರಡು ಹಸಿ ಟೊಮೇಟೊ ಹಾಕಿ. ಇದರಿಂದ ಸಾರು ಒಳ್ಳೆಯ ಬಣ್ಣ ಪಡೆಯುವುದಲ್ಲದೆ ರುಚಿ ಹೆಚ್ಚುವುದು.
* ಹಸಿ ಮೆಣಸಿನಕಾಯಿ ಖಾರಕ್ಕೆ ಉಪ್ಪಿನ ಜತೆ ಸ್ವಲ್ಪ ನಿಂಬೆರಸವನ್ನೂ ಹಾಕಿ ತಿರುವಿದರೆ ಬಹಳ ದಿನಗಳವರೆಗೂ ತಿನ್ನಲು ಬಳಸಬಹುದು.
* ಹುರುಳಿಕಾಯಿ, ಗೋರಿಕಾಯಿ, ಕ್ಯಾರೆಟ್ಗಳು ಬಾಡಿದ್ದರೆ ಸ್ವಲ್ಪ ಹೊತ್ತು ಉಪ್ಪು ನೀರಿನಲ್ಲಿ ಹಾಕಿಡಿ. ಮತ್ತೆ ಮೊದಲಿನ ತಾಜಾತನ ಮರಳುವುದು.
* ಕೈಗೆ ಸ್ವಲ್ಪ ಕೊಬ್ಬರಿ ಎಣ್ಣೆ ಸವರಿಕೊಂಡು ಬೀಟ್ರೂಟ್ ಹೆಚ್ಚಿದರೆ ಕೈ ಕೆಂಪಾಗದು.
* ಪರಂಗಿ ಹಣ್ಣು ಅಥವಾ ಕಾಯಿ ಹೆಚ್ಚುವಾಗ ಮೊದಲು ಸಿಪ್ಪೆ ತೆಗೆದು ಅನಂತರ ತೊಟ್ಟು ಹಾಗೂ ತುದಿ ತೆಗೆಯಿರಿ. ಇದರಿಂದ ಹಾಲು ಜಿನುಗಿ ಜಾರುವುದು ತಪ್ಪುತ್ತದೆ.
* ಪುದೀನಾ ಚಟ್ನಿ ರುಬ್ಬುವಾಗ ಸ್ವಲ್ಪ ನಿಂಬೆರಸ ಹಾಕಿದರೆ ಚಟ್ನಿಯ ಬಣ್ಣ ಹಸಿರಾಗಿಯೇ ಇರುವುದು.
* ಅಕ್ಕಿರೊಟ್ಟಿ ಮಾಡಲು ಹಿಟ್ಟನ್ನು ಬೇಯಿಸುವಾಗ ಒಂದು ಟೇಬಲ್ ಚಮಚ ಚಿರೋಟಿ ರವೆ ಹಾಕಿದರೆ ರೊಟ್ಟಿಯ ಅಂಚು ಸೀಳುವುದಿಲ್ಲ.



Click it and Unblock the Notifications
