Just In
- 2 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 2 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 4 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 4 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವರಾತ್ರಿ ವಿಶೇಷ: ಅನಾನಸ್ ಕೇಸರಿಬಾತ್ ಬೊಂಬಾಟ್ ರುಚಿ!
ಈಗ ಎಲ್ಲಿ ನೋಡಿದರೂ ನವರಾತ್ರಿಯ ಸಂಭ್ರಮ. ಯಾವುದೇ ದೇವಸ್ಥಾನ, ಮಂದಿರಕ್ಕೆ ಹೋದರೂ ಹಲವಾರು ರೀತಿಯ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಅದರಲ್ಲೂ ಬಂಗಾಳೀಯರು ಈಗ ದುರ್ಗಾ ಪೂಜೆಯನ್ನು ಎದುರು ನೋಡುತ್ತಾ ಇದ್ದಾರೆ. ದುರ್ಗಾ ಪೂಜೆಯು ಮಹಾಸಪ್ತಮಿ ಬೋಧೋನ್ನಂದು ಆರಂಭವಾಗಲಿದೆ. ದುರ್ಗಾಪೂಜೆಯನ್ನು ದೇಶದ ವಿವಿಧೆಡೆಗಳಲ್ಲಿ ತುಂಬಾ ಸಂಭ್ರಮದಿಂದ ಆಚರಿಸಲಾಗುತ್ತದೆ.
ಅದರಲ್ಲೂ ಪಶ್ಚಿಮಬಂಗಾಳದಲ್ಲಿ ದುರ್ಗಾಪೂಜೆಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಲಾಗುತ್ತದೆ. ನವರಾತ್ರಿ ವೇಳೆ ವಿವಿಧ ರೀತಿಯ ಅಲಂಕಾರ, ಬಣ್ಣಬಣ್ಣದ ದೀಪಗಳು, ಹೀಗೆ ಹಲವಾರು ರೀತಿಯ ವಿಶೇಷಗಳನ್ನು ಕಾಣಬಹುದಾಗಿದೆ. ಬಂಗಾಳಿಗಳು ಎಲ್ಲೇ ಇದ್ದರೂ ದುರ್ಗಾ ಪೂಜೆಯನ್ನು ತಪ್ಪದೆ ಆಚರಿಸುತ್ತಾರೆ.
ಅಷ್ಟೇ
ಅಲ್ಲದೆ
ದುರ್ಗಾ
ಪೂಜೆಗೆ
ಅವರು
ವಿಶೇಷವಾದ
ಕೆಲವೊಂದು
ಅಡುಗೆಗಳನ್ನು
ಮಾಡಿಕೊಳ್ಳುತ್ತಾರೆ.
ಅದರಲ್ಲೂ
ವಿಜಯ
ದಶಮಿಯಂದು
ವಿವಿಧ
ರೀತಿಯ
ಸಿಹಿ
ತಿಂಡಿತಿನಿಸುಗಳೊಂದಿಗೆ
ಅತಿಥಿಗಳನ್ನು
ಸ್ವಾಗತಿಸುತ್ತೇವೆ....
ಹಾಗಾಗಿ
ಈ
ಬಾರಿ
ಬೋಲ್ಡ್
ಸ್ಕೈ
ತಂಡ
ಅನಾನಸು
ಕೇಸರಿಬಾತ್
ಮಾಡುವ
ವಿಧಾನವನ್ನು
ಪರಿಚಯಿಸುತ್ತಿದೆ,
ಮಾಡುವ
ವಿಧಾನಕ್ಕಾಗಿ
ಮುಂದೆ
ಓದಿ...
ನಾಲ್ಕು
ಜನರಿಗೆ
ಆಗುಷ್ಟು
ತಯಾರಿಸಲು
ಬೇಕಾಗುವ
ಸಮಯ-
5
ನಿಮಿಷ
ಅಡುಗೆಗೆ
ಸಮಯ-
20
ನಿಮಿಷ
ಸ್ವಾದದ
ಘಮಲನ್ನು
ಹೆಚ್ಚಿಸುವ
ಕೇಸರಿ
ಬಾತ್
ರೆಸಿಪಿ
ಬೇಕಾಗುವ
ಸಾಮಗ್ರಿಗಳು
*ಅನಾಸಿನ
ಪ್ಯೂರಿ-
ಒಂದು
ಕಪ್
*ಬೆಣ್ಣೆ-
ಒಂದು
ಚಮಚ
*ಸಕ್ಕರೆ-
ಒಂದು
ಚಮಚ
*ಕೊಬ್ಬು
ಕಡಿಮೆಯಿರುವ
ಹಾಲು-1
ಕಪ್
*ರವೆ-ಒಂದು
ಕಪ್
*ಸಕ್ಕರೆ
ಪರ್ಯಾಯ-3
ಚಮಚ
*ಏಲಕ್ಕಿ
ಹುಡಿ-½
ಚಮಚ
*ಕೇಸರಿ-ಕೆಲವು
ಎಸಲು(ಹಾಲಿನಲ್ಲಿ
ಮುಳುಗಿಸಿಡಬೇಕು)
ಹತ್ತೇ
ನಿಮಿಷದಲ್ಲಿ
ರೆಡಿ
ರವೆ
ಕೇಸರಿಬಾತ್
ಮಾಡುವ
ವಿಧಾನ
1.
ತಳ
ಆಳವಿರುವ
ತವಾ
ತೆಗೆದುಕೊಂಡು
ಅದಕ್ಕೆ
ಅನಾನಸು
ಪ್ಯೂರಿಯನ್ನು
ಹಾಕಿಕೊಳ್ಳಿ.
ಅದಕ್ಕೆ
ಸಕ್ಕರೆ
ಸೇರಿಸಿ.
2. ಇನ್ನು ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು 3-4 ನಿಮಿಷ ಕಾಲ ಕುದಿಸಿ.
3. ಈಗ ಇನ್ನೊಂದು ತವಾ ತೆಗೆದುಕೊಂಡು ಅದರಲ್ಲಿ ರವೆಯನ್ನು ಬೆಣ್ಣೆಯೊಂದಿಗೆ ಬಿಸಿ ಮಾಡಿ. ರವೆ ಗುಲಾಬಿ ಬಣ್ಣಕ್ಕೆ ಬರಲಿ. ಇದಕ್ಕೆ ಸಮಯ ಬೇಕಾಗುತ್ತದೆ. ತಾಳ್ಮೆಯಿರಲಿ.
4. ಈಗ ರವೆಗೆ ಕಡಿಮೆ ಕೊಬ್ಬು ಇರುವ ಹಾಲನ್ನು ಹಾಕಿ. ತಕ್ಷಣ ಇದಕ್ಕೆ ಸ್ವಲ್ಪ ನೀರನ್ನು ಹಾಕಿಕೊಂಡು ಸರಿಯಾಗಿ ಕಲಸಿ. ಇಲ್ಲವಾದರೆ ರವೆ ಗಟ್ಟಿಯಾಗುತ್ತದೆ.
5.ಕೆಲವು ನಿಮಿಷ ತಿರುಗಿಸುತ್ತಾ ಇರಬೇಕಾಗುತ್ತದೆ. ಇದು ದಪ್ಪಗೆ ಆದಾಗ ಸಕ್ಕರೆ ಬದಲಿಯನ್ನು ಹಾಕಿ. ಇದು ಸರಿಯಾಗಿ ಮಿಶ್ರಣವಾಗುವ ತನಕ ತಿರುಗಿಸಿ.
6.ಈಗ ಇದಕ್ಕೆ ಅನಾನಸು ಪ್ಯೂರಿಯನ್ನು ಹಾಕಿಕೊಳ್ಳಿ. ಮಧ್ಯಮ ಬೆಂಕಿಯೊಂದಿಗೆ ಇದನ್ನು ಕುದಿಸಿ.
7.ಈಗ ಕೇಸರಿ ಹಾಕಿದ ಹಾಲನ್ನು ಇದಕ್ಕೆ ಸೇರಿಸಿ. ಏಲಕ್ಕಿ ಹುಡಿಯನ್ನು ಮಿಶ್ರಣಕ್ಕೆ ಹಾಕಿ. ಸರಿಯಾಗಿ ಮಿಶ್ರಣವಾದ ಬಳಿಕ 1-2 ನಿಮಿಷ ಬೇಯಲು ಬಿಡಿ.
8.ಈಗ ಅನಾನಸು ಕೇಸರಿಬಾತ್ ತಯಾರಾಗಿದೆ. ಇದನ್ನು ಗಾಜಿನ ಪಿಂಗಾಣಿಗೆ ಹಾಕಿಡಿ. ಅದನ್ನು ಪ್ಲೇಟ್ನಿಂದ ಮುಚ್ಚಿಡಿ ಮತ್ತು ಪಿಂಗಾಣಿಯನ್ನು ತಿರುಗಿಸಿ.
9.ಈಗ ನಿಧಾನವಾಗಿ ಪಿಂಗಾಣಿಯನ್ನು ತೆಗೆಯಿರಿ. ಫಮಫಮಿಸುವ ಕೇಸರಿಬಾತ್ ರೆಡಿ! ಇನ್ನು ಬಾದಾಮಿ, ಗೋಡಂಬಿ ಮತ್ತು ದ್ರಾಕ್ಷಿಯನ್ನು ಹಾಕಿ ಇದನ್ನು ಅಲಂಕರಿಸಬಹುದು.